ಕಟ್ಟೆಕಾರ್ ಬಳಿ ಸಂಜೆವರೆಗೆ ತೆರೆದಿದ್ದ ಅಂಗಡಿ

ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸುಳ್ಯದಲ್ಲಿಯೂ ಸಹ ಇಂದು ಲಾಕ್ ಡೌನ್ ಹೇರಲಾಗಿತ್ತು. 11 ಗಂಟೆ ತನಕ ಅಗತ್ಯ ವಸ್ತುಗಳಿಗ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಸುಳ್ಯ ಪೊಲೀಸ್ ಠಾಣೆ ಸಮೀಪದ ಅಂಗಡಿಯೊಂದು ಸಂಜೆ ಸುಮಾರು 6.30 ರ ತನಕ ಅರ್ಧ ಬಾಗಿಲು ತೆರೆದಿದ್ದು, ವ್ಯಾಪಾರ ವಹಿವಾಟು...

ಕೊರೊನ ಸೋಂಕಿಗೆ ತಾಲೂಕಿನಲ್ಲಿ ಮೂರನೇ ಬಲಿ – ಐವರ್ನಾಡಿನ ವ್ಯಕ್ತಿ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಸಾವು- ಇಂದು ಜಿಲ್ಲೆಯಲ್ಲಿ 6 ಬಲಿ

ಐವರ್ನಾಡು ಪರ್ಲಿಕಜೆಯ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿತರಾಗಿ ಮೃತಪಟ್ಟಿದ್ದಾರೆ . 54 ವರ್ಷದ ಈ ವ್ಯಕ್ತಿಯು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು . ಮೃತದೇಹವನ್ನು ಆಸ್ಪತ್ರೆಯಲ್ಲೇ ಇರಿಸಿ ಗಂಟಲದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು . ಇದೀಗ ವರದಿ ಬಂದಿದ್ದು ಕೊರೊನಾ ಪಾಸಿಟಿವ್ ಆಗಿರುವುದಾಗಿ ತಿಳಿದುಬಂದಿದೆ . ಇದರೊಂದಿಗೆ ಸುಳ್ಯದಲ್ಲಿ ಕೊರೋನಾ ಕಾರಣದಿಂದ ಮೂರನೇ ಸಾವು ಸಂಭವಿಸಿದಂತಾಗಿದೆ. ದಕ್ಷಿಣ...
Ad Widget

ಪೆರುವಾಜೆ : ಪರಿಸರ ಜಾಗೃತಿ ಕಾರ್ಯಕ್ರಮ, ಗಿಡ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಸುಳ್ಯ ತಾಲೂಕು ಬೆಳ್ಳಾರೆ ವಲಯದ ಪೆರುವಾಜೆ ಗ್ರಾಮದ ಕುಂಡಡ್ಕ ಸ್ವಾಮಿ ಕೊರಗಜ್ಜ ದೈವ ಸ್ಥಾನದ ಆವರಣದಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ವಿತರಣೆ ಕಾರ್ಯಕ್ರಮ ನಡೆಸಲಾಯಿತು .ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀ ಸಂತೋಷ್ ಕುಮಾರ್ ರೈ ಆಗಮಿಸಿ...

ಬ್ರಾಹ್ಮಣ ಸಮುದಾಯವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಆದೇಶ

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಶಿಕ್ಷಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿ, ಸ್ವಯಂ ಉದ್ಯೋಗ ಹಾಗೂ ಇತರೇ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ನೀಡಲು ಸರ್ಕಾರಿ ಆದೇಶ ಹೊರಡಿಸುವ ಮೂಲಕ ನಮ್ಮ...

ನಡುಗಲ್ಲು ಮಾತೃ ನರ್ಸರಿ ಶುಭಾರಂಭ

ನಡುಗಲ್ಲು ಮಾತೃ ನರ್ಸರಿ ಶುಭಾರಂಭನಡುಗಲ್ಲಿನಲ್ಲಿ ವಿನೂಪ್ ಪಾಲ್ತಾಡು ಮಾಲಕತ್ವದ ಮಾತೃ ನರ್ಸರಿ ಜು.16 ರಂದು ನಡುಗಲ್ಲಿನಲ್ಲಿ ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ.ಸದಸ್ಯ ವಿಜಯಕುಮಾರ್ ಚಾರ್ಮಾತ ,ವಸಂತ ಉತ್ರಂಬೆ, ಲೋಕನಾಥ ಗೌಡ ಕಲ್ಲಾಜೆ, ದಿನೇಶ್ ನಡುಗಲ್ಲು, ಕುಶಾಲಪ್ಪ ಗೌಡ ಅಂಬೆಕಲ್ಲು ಮತ್ತಿತರರು ಉಪಸ್ಥಿತರಿದ್ದರು.

ನಿರ್ಜನ ಪ್ರದೇಶದಲ್ಲಿ ವಾಹನ ಕೆಟ್ಟುನಿಂತು ಸಂಕಷ್ಟದಲ್ಲಿದ್ದವರ ನೆರವಿಗೆ ಬಂದ ಅಬ್ದುಲ್ ಹಮೀದ್ ಸುಣ್ಣಮೂಲೆ

ನಿರ್ಜನ ಪ್ರದೇಶದಲ್ಲಿ ವಾಹನ ಕೆಟ್ಟುನಿಂತು ಸಂಕಷ್ಟದಲ್ಲಿದ್ದವರ ನೆರವಿಗೆ ಬಂದ ಅಬ್ದುಲ್ ಹಮೀದ್ ಸುಣ್ಣಮೂಲೆಎಸ್ ಇ ಡಿ ಸಿ ಸುನ್ನಿ ಎಜುಕೇಶನಲ್ ಡೆವಲಪ್ಮೆಂಟ್ ಆಫ್ ಕಮಿಟಿ ಇದರ ರಾಜ್ಯಧ್ಯಕ್ಷ ಎಂಎಂ ಕಾಮಿಲ್ ಸಖಾಫಿ ರವರು ಕೊಡಗು ಎಮ್ಮೆಮಾಡು ದರ್ಗಾ ಶರೀಫ್ ಯಾತ್ರೆ ಮುಗಿಸಿ ಮರಳಿ ಮಂಗಳೂರಿನತ್ತ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಸುಳ್ಯ ಅನೆಗುಂಡಿ ಸಮೀಪ ಬರುತ್ತಿದ್ದಂತೆ ಅವರ...

ಪಿಯುಸಿ ಫಲಿತಾಂಶ: ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ತಸ್ರೀಫ

ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಕಾಲೇಜ್ ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತಸ್ರೀಫ 535 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದಾಳೆ. ವ್ಯವಹಾರ ಅಧ್ಯಯನದಲ್ಲಿ 100,ಎಕೌಂಟೆನ್ಸ್ ನಲ್ಲಿ 97, ಎಕಾನಮಿಕ್ಸ್ ನಲ್ಲಿ 96,ಸ್ಟಾಟಿಸ್ಟಿಕ್ಸ್ ಲ್ಲಿ 92 ಅಂಕಗಳನ್ನು ಪಡೆದಿರುತ್ತಾಳೆ.ಈಕೆ ಮುರುಳ್ಯ ಗ್ರಾಮದ ರಾಗಿಪೇಟೆ ಉಮ್ಮರ್ ಮತ್ತು ಮೈಮುನಾ ದಂಪತಿಗಳ ಪುತ್ರಿ

ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಶಶಿಧರ ಎಂ ಜೆ ಕೊಯಿಕುಳಿ

ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ರಾಗಿ ಶಶಿಧರ ಎಂ ಜೆ ಕೊಯಿಕುಳಿ ಆಯ್ಕೆಯಾಗಿದ್ದಾರೆ. ಇಂದು ಸುಳ್ಯ ದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆದ ಸು‌ಳ್ಯ ನಗರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಶ್ರೀ ಜಯಪ್ರಕಾಶ್ ರೈ ಎನ್ ರವರು ನಾಮನಿರ್ದೇಶನ ಗೊಳಿಸಿ ಆಯ್ಕೆ ಮಾಡಿದ್ದಾರೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ...

ಸುಳ್ಯದ ಮಹಿಳೆ ಕೊರೋನಾ ಸೋಂಕಿಗೆ ಬಲಿ

ಪುತ್ತೂರು: ಸುಳ್ಯ ಮೂಲದ ಸುಮಾರು 62 ವರ್ಷದ ಮಹಿಳೆಯೊಬ್ಬರು ಕೊರೋನಾ ಸೋಂಕಿನಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುಳ್ಯ ಬೆಳ್ಳಾರೆ ನೆಟ್ಟಾರು ನಿವಾಸಿ ಮಹಿಳೆಯನ್ನು ಜು.14ರ ಮಧ್ಯಾಹ್ನ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ಬಿಪಿ, ಶುಗರ್, ಲಂಗ್ಸ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವೇಳೆ ಅವರ ಕೋವಿಡ್...

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(15.07.2020 ಬುಧವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 340ಹಳೆ ಅಡಿಕೆ 275 - 350ಡಬಲ್ ಚೋಲ್ 285 - 350 ಫಠೋರ 220 - 275ಉಳ್ಳಿಗಡ್ಡೆ 110 - 180ಕರಿಗೋಟು 110 - 165 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175...
Loading posts...

All posts loaded

No more posts

error: Content is protected !!