ಪೆರುವಾಜೆ ಶಾಲಾ ಶಿಕ್ಷಕಿ ಕವಿತಾ ಸಿ.ಕೆ.ಯವರಿಗೆ ಪದೋನ್ನತಿ

ಪೆರುವಾಜೆ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಕವಿತಾ ಸಿ.ಕೆ.ಯವರು ಪದೋನ್ನತರಾಗಿದ್ದು , ಇದೀಗ ಸರ್ಕಾರಿ ಪದವಿಪೂರ್ವ ಕಾಲೇಜು ಸವಣೂರು ಇಲ್ಲಿನ ಪ್ರೌಢಶಾಲಾ ವಿಭಾಗಕ್ಕೆ ಇಂಗ್ಲಿಷ್ ಶಿಕ್ಷಕಿಯಾಗಿ ನಿಯೋಜನೆಗೊಂಡಿರುತ್ತಾರೆ. ಇವರು ಸ.ಹಿ.ಪ್ರಾಥಮಿಕ ಶಾಲೆ ಉಬರಡ್ಕ - ಮಿತ್ತೂರಿನಲ್ಲಿ 9 ವರ್ಷ ಹಾಗೂ ಸ.ಹಿ.ಪ್ರಾಥಮಿಕ ಶಾಲೆ ಪೆರುವಾಜೆಯಲ್ಲಿ 9 ವರ್ಷಗಳ ಸೇವೆಯನ್ನು ಸಲ್ಲಿಸಿರುತ್ತಾರೆ. ಇವರು ಐವರ್ನಾಡು...

ಕಳೆದೊಂದು ವರ್ಷದಿಂದ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿ ಪಡಿಸಿಕೊಡುವಂತೆ ಆಗ್ರಹಿಸಿ ಸ್ಥಳೀಯರಿಂದ ಸಾಂಕೇತಿಕ ಪ್ರತಿಭಟನೆ

ಸುಳ್ಯ ಪೈಚಾರು ಭಾಗವಾಗಿ ಸುಬ್ರಮಣ್ಯ , ಬೆಳ್ಳಾರೆಗೆ ಸಂಪರ್ಕ ಕಲ್ಪಿಸುವ ಸೋಣಂಗೇರಿ ಸಮೀಪದ ರಸ್ತೆಯೊಂದು ಭಾರಿ ದೊಡ್ಡ ಕಂದಕಕ್ಕೆ ಕುಸಿದುಬಿದ್ದಿದ್ದು ಕಳೆದ ಒಂದು ವರ್ಷಗಳಿಂದ ಆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ. ಈ ವರ್ಷದ ಮಳೆಯು ಇದೀಗ ಕೊನೆಯ ಹಂತದಲ್ಲಿದೆ. ಸಂಬಂಧಪಟ್ಟ ಅಧಿಕಾರಿಗಳು ಇಲಾಖೆಯ ಹಿರಿಯರು ಸ್ಥಳ ಪರಿಶೀಲನೆಯನ್ನು ನಡೆಸಿ ಈಗಾಗಲೇ ರಸ್ತೆಯ...
Ad Widget

ಬೆಳ್ಳಾರೆ : ಜಗದೀಶ್ ಪಿ.ಎಲ್. ಸಾಧನಾಶ್ರೀ ಪ್ರಶಸ್ತಿಗೆ ಆಯ್ಕೆ

ಜೇಸಿಐ ಬೆಳ್ಳಾರೆಯ ಪೂರ್ವಾಧ್ಯಕ್ಷ,ಪ್ರಸ್ತುತ ಕಾರ್ಯದರ್ಶಿಯಾಗಿರುವ ಯುವ ಉದ್ಯಮಿ, ಬೆಳ್ಳಾರೆ ಅಜಂತಾ ಮೊಬೈಲ್ ಪಾಲುದಾರ,ಏರ್ ಟೆಲ್ ಸೇಲ್ಸ್ ಮತ್ತು ಎಕ್ಸಿಕ್ಯೂಟಿವ್ ಮೆನೇಜರ್ , ಜೇಸೀ ಹೆಚ್ ಜಿ ಎಫ್ ಜಗದೀಶ್ ಪಿ.ಎಲ್. ಜೇಸಿಐ ಭಾರತದ ವಲಯ 15 ರ ವಿಭಾಗದ ಅಭಿವೃದ್ಧಿ ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ನೀಡುವ ಸಾಧನಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವ್ಯವಹಾರ ಅಥವಾ ವೃತ್ತಿ...

ತುರ್ತು ಚಿಕಿತ್ಸೆಗೆ ಮತ್ತೊಂದು ರೋಗಿಯನ್ನು ಮಡಿಕೇರಿಯಿಂದ ಮಂಗಳೂರಿಗೆ ಸಾಗಿಸಿದ ಅಂಬ್ಯುಲೆನ್ಸ್ ಗೆ ಸುಳ್ಯದಲ್ಲಿ ಝಿರೋ ಟ್ರಾಫಿಕ್

ಮಡಿಕೇರಿಯ ಐಲ್ಯಾಂಡ್ ಹಾಸ್ಪಿಟಲ್ ನಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯನ್ನು ತುರ್ತಾಗಿ ಮಂಗಳೂರಿಗೆ ಕರೆದೊಯ್ಯುಲು ಅಂಬ್ಯುಲೆನ್ಸ್ ಸುಳ್ಯದಲ್ಲಿ ಝೀರೋ ಟ್ರಾಫಿಕ್ ಮಾಡಿಕೊಡಲಾಯಿತು. ಸುಳ್ಯದ ಹೈವೇ ಪೆಟ್ರೋಲ್ ಪೋಲೀಸರು ನೆರವಾದರು.

ಮಡಪ್ಪಾಡಿ : ಸೆ.8 ರಂದು ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಾವಣೆ ಶಿಬಿರ

ಮಡಪ್ಪಾಡಿ ಗ್ರಾಮ ಪಂಚಾಯತ್ ಹಾಗೂ ಮಡಪ್ಪಾಡಿ ಯುವಕ ಮಂಡಲದ ವತಿಯಿಂದ ಕೇಂದ್ರ ಸರಕಾರದ ಮಹತ್ವಾಂಕ್ಷಿ ಯೋಜನೆಗಳಲ್ಲೊಂದಾದ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಾವಣೆ ಶಿಬಿರ ಸೆ.8 ರಂದು ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ನಡೆಯಲಿದೆ. ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಕಡ್ಡಾಯವಾಗಿ ತರಬೇಕೆಂದು ಮಡಪ್ಪಾಡಿ ಯುವಕ ಮಂಡಲದ ಅಧ್ಯಕ್ಷ ಲೋಹಿತ್ ಬಾಳಿಕಳ ತಿಳಿಸಿದ್ದಾರೆ.

ಸೆ.8 ಮಡಪ್ಪಾಡಿಯಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಾವಣೆ ಶಿಬಿರ

ಮಡಪ್ಪಾಡಿ ಗ್ರಾಮ ಪಂಚಾಯತ್ ಹಾಗೂ ಮಡಪ್ಪಾಡಿ ಯುವಕ ಮಂಡಲದ ವತಿಯಿಂದ ಕೇಂದ್ರ ಸರಕಾರದ ಮಹತ್ವಾಂಕ್ಷಿ ಯೋಜನೆಗಳಲ್ಲೊಂದಾದ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಾವಣೆ ಶಿಬಿರ ಸೆ.8 ರಂದು ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ನಡೆಯಲಿದೆ. ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಕಡ್ಡಾಯವಾಗಿ ತರಬೇಕೆಂದು ಮಡಪ್ಪಾಡಿ ಯುವಕ ಮಂಡಲದ ಅಧ್ಯಕ್ಷ ಲೋಹಿತ್ ಬಾಳಿಕಳ ತಿಳಿಸಿದ್ದಾರೆ.

ಯುವ ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿಯವರಿಗೆ ಸಾಧನಾಶ್ರೀ ಪ್ರಶಸ್ತಿ

ಪಂಜ ಪಂಚಶ್ರೀ ಜೇಸಿಐ ನ ಕಾರ್ಯದರ್ಶಿ , ಯುವ ಉದ್ಯಮಿ , ಗುತ್ತಿಗಾರಿನ ದೇವಿ ಸಿಟಿ ಕಾಂಪ್ಲೆಕ್ಸ್‌ನ ಮಾಲಕ ಜೇಸೀ ಜೆಎಫ್‌ಎಂ ದೇವಿಪ್ರಸಾದ್ ಚಿಕ್ಮುಳಿಯವರಿಗೆ ಜೇಸಿಐ ಭಾರತದ ವಲಯ 15 ರ ವಿಭಾಗದ ಅಭಿವೃದ್ಧಿ ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ನೀಡುವ ಸಾಧನಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವ್ಯವಹಾರ ಅಥವಾ ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿ...

ಕ್ಯಾಂಪ್ಕೋ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(04.09.2020 ಶುಕ್ರವಾರ ) ಅಡಿಕೆ ಧಾರಣೆಹೊಸ ಅಡಿಕೆ 300 - 360ಹಳೆ ಅಡಿಕೆ 300 - 395ಡಬಲ್ ಚೋಲ್ 300 - 395 ಫಠೋರ 220 - 290ಉಳ್ಳಿಗಡ್ಡೆ 110 - 200ಕರಿಗೋಟು 110 - 190 ಕಾಳುಮೆಣಸುಕಾಳುಮೆಣಸು 250 - 325 ಕೊಕ್ಕೋಒಣ ಕೊಕ್ಕೋ :- 150 -...

“ತುಪ್ಪದ ರಾಣಿ” ನಟಿ ರಾಗಿಣಿ ದ್ವಿವೇದಿ ಪೋಲೀಸ್ ವಶಕ್ಕೆ

ಕೆಲವು ದಿನಗಳಿಂದ ಗೊಂದಲಕ್ಕೆ ಈಡಾಗಿರುವ ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾದಿಂದ ನಟಿ ರಾಗಿಣಿಯವರ ಆಪ್ತ ಅರೆಸ್ಟ್ ಆಗಿರುವ ಹಿನ್ನಲೆ ರಾಗಿಣಿಯವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಅನಾರೋಗ್ಯದ ಕಾರಣ ಹೇಳಿ ತಪ್ಪಿಸಿ ಕೊಳ್ಳಲು ಯತ್ನಿಸಿದ ರಾಗಿಣಿ ಮನೆಗೆ ಇಂದು ಬೆಳಗ್ಗೆ ಸಿಸಿಬಿ ಅಧಿಕಾರಿಗಳು ಎಂಟ್ರಿ ಕೊಟ್ಟು ಮೊಬೈಲ್ ಹಾಗೂ ಲ್ಯಾಪ್ಟಾಪ್ ನ್ನು ವಶಪಡಿಸಿಕೊಂಡು ವಿಚಾರಣೆ...

ನ.ಪಂ.ನಲ್ಲಿ ಕಾರು ಚಾಲಕರಾಗಿದ್ದ ಖಾಲಿದ್ ಮೊಗರ್ಪಣೆ ನಿಧನ

ಸುಳ್ಯ ಮೊಗರ್ಪಣೆ ನಿವಾಸಿ ಅಬೂಬಕ್ಕರ್ ಮುಕ್ರಿ ಯವರ ಪುತ್ರ ಖಾಲಿದ್ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು . ಇವರು ಕಳೆದ ಕೆಲವು ವರ್ಷಗಳಿಂದ ಸುಳ್ಯ ನಗರ ಪಂಚಾಯತ್ ನ ಕಾರು ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಪ್ರಸ್ತುತ ಬೀಜಕೊಚ್ಚಿಯಲ್ಲಿ ನೆಲೆಸಿದ್ದರು.
Loading posts...

All posts loaded

No more posts

error: Content is protected !!