- Sunday
- September 13th, 2026
ಅಮರ ಸಂಘಟನಾ ಸಮಿತಿ ಅಮರ ಮುಡ್ನೂರು ಮತ್ತು ಪಡ್ನೂರು ಇದರ ಆಶ್ರಯದಲ್ಲಿ ಗೋವುಪ್ರೇಮಿಗಳ ಸಹಕಾರದೊಂದಿಗೆ, ಗೋವಿಗಾಗಿ ಮೇವು ಎಂಬ ವಿಶೇಷ ಕಾರ್ಯಕ್ರಮ ವನ್ನು ಶ್ರೀ ಕ್ಷೇತ್ರ ಹನುಮಗಿರಿ ಈಶ್ವರಮಂಗಲ ದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರ ಸಂಘಟನಾ ಸಮಿತಿ ಅಧ್ಯಕ್ಷರಾದ ಶ್ರೀ ಶಿವಪ್ರಸಾದ್ ದೊಡ್ಡಿಹಿತ್ಲು ವಹಿಸಿದ್ದರು.ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ ಇದರ...
ಸೆ.20 ಭಾರತೀಯ ಜನತಾ ಪಾರ್ಟಿ ನೆಲ್ಲೂರು ಕೆಮ್ರಾಜೆ ಮತ್ತು ದೇವಚಳ್ಳ ಗ್ರಾಮ ಸಮಿತಿಯ ವತಿಯಿಂದ ಅಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ವಿತರಣಾ ಶಿಬಿರವು ಜ್ಞಾನ ದೀಪ ವಿದ್ಯಾಸಂಸ್ಥೆ ಯಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ತಾಲೂಕು ಮಂಡಲ ಸಮಿತಿಯ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷರಾದ ಎ. ವಿ. ತೀರ್ಥರಾಮ...
ಹಿಂದೂ ಜಾಗರಣಾ ವೇದಿಕೆ ಸುಳ್ಯ ತಾಲೂಕು, ಜಾಲ್ಸೂರು ವಲಯ ಮಂಡೆಕೋಲು ಕನ್ಯಾನ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಶ್ರೀ ಗುರುರಾಘವೇಂದ್ರ ಭಜನಾ ಮಂದಿರ ಗುರುನಗರ ಕನ್ಯಾನ ಮಂಡೆಕೋಲು ಇಲ್ಲಿ ಇಂದು ನಡೆಯಿತು.ಹಿಂದೂ ಜಾಗರಣ ವೇಧಿಕೆ ಸುಳ್ಯ ತಾಲೂಕು ಇದರ ಅಧ್ಯಕ್ಷರಾದ ಮಹೇಶ್ ಉಗ್ರಾಣಿಮನೆ ಇವರು ಪಧಾಧಿಕಾರಿಗಳ ಜವಾಬ್ದಾರಿ ಘೋಷಣೆ ಮಾಡಿದರು.ಜನಜಾಗೃತಿ ವೇದಿಕೆ ಸುಳ್ಯ ವಲಯಾಧ್ಯಕ್ಷ ಸುರೇಶ್...
ಕೊಡಗು ಜಿಲ್ಲೆ ಸಂಪಾಜೆ ಗ್ರಾಮದ ಪಯಸ್ವಿನಿ ಸಹಕಾರಿ ಸಂಘದಲ್ಲಿ ಸೆ. 19 ರಂದು ಕನ್ನಡ ಸಾಹಿತ್ಯ ಪರಿಷತ್ ಸಂಪಾಜೆ ಹೋಬಳಿ ಘಟಕ ವತಿಯಿಂದ ಸಂಪಾಜೆ ಪಟೇಲ್ ದತ್ತಿ ನಿಧಿ ಹಾಗೂ 2019-2020ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯ ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಕಾರ್ಯಕ್ರಮ ನಡೆಯಿತು....
ಪ್ರಧಾನಿ ನರೇಂದ್ರ ಮೋದಿಯವರ 70 ನೇ ವರುಷದ ಹುಟ್ಟು ಹಬ್ಬದ ಪ್ರಯುಕ್ತ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಸಂಪಾಜೆ ಭಾರತೀಯ ಜನತಾ ಪಾರ್ಟಿ ವತಿಯಿಂದ ನಡೆಯಿತು. ಸೆ. 20 ರಂದು ರವಿವಾರ ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಶಾಲಾ ಬಳಿಯಿಂದ ಸಂಪಾಜೆ ಗೇಟಿನ ತನಕ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ನಿರಂತರ ಸುರಿಯುವ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಮಹಿಳಾ ಜ್ಞಾನ ವಿಕಾಸ ಸೃಜನಶೀಲ ಕಾರ್ಯಕ್ರಮದಡಿ ಸರಕಾರಿ ಸೌಲಭ್ಯಗಳಲ್ಲಿ ಒಂದಾದ ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ವಿತರಣಾ ಕಾರ್ಯಕ್ರಮವು ಕಾಂತಮಂಗಲ ಶಾಲಾ ಸಭಾಂಗಣದಲ್ಲಿ ಸೆ.20 ರಂದು ಜರುಗಿತು. ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಎನ್.ಎ.ರಾಮಚಂದ್ರ ಉದ್ಘಾಟಿಸಿದರು. ಆಯುಷ್ಮಾನ್ ಕಾರ್ಡ್ ನಿಂದ ಸಿಗುವ ಆರೋಗ್ಯ...
ಶ್ರೀಹರಿ ಚಾಲಕ ಮಾಲಕರ ಸಂಘ ಪುಣ್ಚತ್ತಾರು ಇದರ ನೂತನ ಆಟೋರಿಕ್ಷಾ ತಂಗುದಾಣದ ಉದ್ಘಾಟನೆ ಹಾಗೂ ನಾಮಫಲಕ ಅಳವಡಿಕೆಯು ಸೆಪ್ಟೆಂಬರ್ 20 ರ ಆದಿತ್ಯವಾರದಂದು ಜರುಗಿತು. ನೂತನ ಆಟೋರಿಕ್ಷಾ ತಂಗುದಾಣವನ್ನು ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ (ರಿ) ಪುಣ್ಚತ್ತಾರು ಇದರ ಅಧ್ಯಕ್ಷರಾದಹರೀಶ್ ಪೈಕ ಕಟೀಲ್ ದೀಪ ಬೆಳಗಿಸಿ ಉದ್ಘಾಟಿಸಿದರು.ನಾಮಫಲಕ ಅಳವಡಿಕೆಯ ಉದ್ಘಾಟನೆಯನ್ನುಸ್ಥಳೀಯಾರದ ಹುಕ್ರಪ್ಪ ಗೌಡ ಪುಣ್ಚತ್ತಾರು ಹಾಗೂ...
ಸುಳ್ಯ ಪೊಲೀಸ್ ಠಾಣೆ ಮುಂಭಾಗದ ಗೊಲ್ಡನ್ ಟವರ್ ನಲ್ಲಿ ಬಿ.ಎಸ್ ರಫೀಕ್ ಮಾಲಕತ್ವದ ಬೇಕ್ ಮಾರ್ಟ್ ಸೆ.21 ರಂದು ಶುಭಾರಂಭಗೊಳ್ಳಲಿದೆ. ನೂತನ ನಮ್ಮ ಸಂಸ್ಥೆಯಲ್ಲಿಎಲ್ಲಾ ತರಹದ ಕೇಕ್ ತಯಾರಿಸಲು ಬೇಕಾದ ಸಾಮಾಗ್ರಿಗಳು, ಪಾತ್ರೆಗಳು, ಕೇಕ್ ವಿನ್ಯಾಸ ಸಾಮಾಗ್ರಿಗಳು, ಕಲರ್ ಗಳು, ಬೇಕಿಂಗ್ ಪದಾರ್ಥಗಳು, ಮೇಕಿಂಗ್ ಐಟಂಗಳು, ಹಾಗೂ ಎಲ್ಲಾ ತರಹದ ಕೇಕ್ ಗಳು, ಮದುವೆ, ನಿಶ್ಚಿತಾರ್ಥ...
ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಮತ್ತು ನಾಗರಿಕ ಸೇವಾ ಸಮಿತಿ ಬಾಳಿಲ - ಮುಪ್ಪೇರ್ಯ ಇವುಗಳ ಜಂಟಿ ಆಶ್ರಯದಲ್ಲಿ, ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ 'ಭಾರತ್ ಆಯುಷ್ಮಾನ್ ಕಾರ್ಡ್' ನೋಂದಾವಣೆ ಹಾಗೂ ವಿತರಣೆ ಶಿಬಿರವು ಸೆ. 20 ರಂದು ಬಾಳಿಲ ಸೊಸೈಟಿಯ ಮಿನಿ ಸಭಾಂಗಣದಲ್ಲಿ...
ಇನೋವಾ, ಜೀಪು ಹಾಗೂ ಸ್ಕೂಟಿ ಮಧ್ಯೆ ಸರಣಿ ಅಪಘಾತ ಸಂಭವಿಸಿದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಸೆ.20 ರಂದು ಸಂಭವಿಸಿದೆ.ಮಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಇನೋವಾ ಕಾರು ಅಡ್ಕಾರು ಅಯ್ಯಪ್ಪ ಮಂದಿರದ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹಾಗೂ ಜೀಪಿಗೆ ಡಿಕ್ಕಿ ಹೊಡೆದು ಮೂರೂ ವಾಹನಗಳು ಜಖಂಗೊಂಡಿದೆ. ಇನೋವಾದಲ್ಲಿ ಒಟ್ಟು ನಾಲ್ವರು ಪ್ರಯಾಣಿಕರಿದ್ದು,...
Loading posts...
All posts loaded
No more posts
