Ad Widget

ಸಂಪಾಜೆ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಿದ ಮಳೆಕೊಯ್ಲು ಘಟಕ ಉದ್ಘಾಟನೆ

ಸಂಪಾಜೆ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಿದ ಮಳೆಕೊಯ್ಲು ಘಟಕವನ್ನು ಆ.21 ರಂದು ಉದ್ಘಾಟಿಸಲಾಯಿತು. ಕ್ಲಬ್ಬಿನ ಅಧ್ಯಕ್ಷರಾದ ಲ. ವಾಸುದೇವರವರ ಮನೆಯಲ್ಲಿ ನಿರ್ಮಿಸಿದ ಮಳೆ ಕೊಯ್ಲು ಘಟಕವನ್ನು ಲಯನ್ಸ್ ಕ್ಲಬ್ಬಿನ ಪ್ರಾಂತೀಯ ಅಧ್ಯಕ್ಷರಾದ ಲ.ಸಂದ್ಯಾ ಸಚಿತ್ ರೈ ರವರು ಉದ್ಘಾಟಿಸಿದರು. ಲ. ಪ್ರಶಾಂತ್ ಬಾಲನ್ ರವರು ಮಳೆ ಕೊಯ್ಲಿನ ಪ್ರಾಮುಖ್ಯತೆ ಮತ್ತು ಪ್ರಾತ್ಯಕ್ಷಿತೆಯನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಕ್ಲಬ್ಬಿನ...

*ದಅವಾ ಕಾನ್ಫರೆನ್ಸ್ : ಎಸ್ ಎಸ್ ಎಫ್ ಸುಳ್ಯ ಸೆಕ್ಟರ್ ಮುತಅಲ್ಲಿಂ ಸಂಗಮ*

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ ಎಸ್ ಎಫ್ ಸುಳ್ಯ ಸೆಕ್ಟರ್ ವತಿಯಿಂದ ದಅವಾ ಕಾನ್ಫರೆನ್ಸ್,  ಮುತಅಲ್ಲಿಂ ಸಂಗಮ ಆಗಸ್ಟ್ 21ರಂದು ಸುಳ್ಯ ಸುನ್ನಿ ಸೆಂಟರ್ ನಲ್ಲಿ ಜರಗಿತು. ಸಯ್ಯಿದ್ ತ್ವಾಹಿರ್ ಸಅದಿ ಬಾಅಲವಿ ದುಆ ನೆರೆವೇರಿಸಿದರು.   ಎಸ್ ಎಸ್ ಎಫ್ ಸುಳ್ಯ ಸೆಕ್ಟರ್ ದಅವಾ ಕನ್ವೀನರ್ ಸಿದ್ದೀಖ್ ಹಿಮಮಿ ಸಖಾಫಿ...
Ad Widget

ಆ.27,28 ರಂದು ಕಡಬದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ

ಆ.27,28 ರಂದು ಕಡಬದಲ್ಲಿ ಉಚಿತವಾಗಿ ಭಾರತ ಸರಕಾರದ ಆರೋಗ್ಯ ಇಲಾಖೆಯ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ ನಡೆಯಲಿದೆ. ಕಡಬದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಠಾರದಲ್ಲಿ ಬೆಳಿಗ್ಗೆ 8.30 ರಿಂದ ಸಂಜೆ 5.00ರ ತನಕ ನಡೆಯಲಿದ್ದು, ಕಾರ್ಯಕ್ರಮವನ್ನು ಶಾಸಕ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಆಸಕ್ತರು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತರಬೇಕಾಗಿ ಬಿಜೆಪಿ ಮಂಡಲ ಸಮಿತಿ...

ಆ. 25,26 ರಂದು ಸುಳ್ಯದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ

ಆ. 25,26 ರಂದು ಸುಳ್ಯದಲ್ಲಿ ಉಚಿತವಾಗಿ ಭಾರತ ಸರಕಾರದ ಆರೋಗ್ಯ ಇಲಾಖೆಯ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ ನಡೆಯಲಿದೆ. ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ಬೆಳಿಗ್ಗೆ 8.30 ರಿಂದ ಸಂಜೆ 5.00ರ ತನಕ ನಡೆಯಲಿದ್ದು,ಕಾರ್ಯಕ್ರಮವನ್ನು ಶಾಸಕ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಆಸಕ್ತರು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತರಬೇಕಾಗಿ ಬಿಜೆಪಿ ಮಂಡಲ ಸಮಿತಿ ಪ್ರಕಟಣೆ ಯಲ್ಲಿ ತಿಳಿಸಿದೆ.

ದಶಕಗಳ ಬೇಡಿಕೆಗೆ ಈಡೇರಿಕೆಯ ನಿರೀಕ್ಷೆ – ನಾರ್ಕೊಡು ಅಜ್ಜಾವರ ಸಡಕ್ ರಸ್ತೆಯನ್ನಾಗಿ ಅಭಿವೃದ್ಧಿಗೆ ಅನುದಾನ ಬಿಡುಗಡೆ

ಆಲೆಟ್ಟಿ ಮತ್ತು ಅಜ್ಜಾವರ ಗ್ರಾಮ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಆಗಬೇಕೆಂಬ ದಶಕಗಳ ಬೇಡಿಕೆಗೆ ಕಾಲಕೂಡಿಬಂದಿದೆ. ನಾರ್ಕೊಡು ಅಜ್ಜಾವರ ರಸ್ತೆಯ 6.75 ಕಿ.ಮೀ. ಸುಮಾರು 6.54 ಕೋಟಿ ರೂಗಳಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ‌ಗ್ರಾಮ ಸಡಕ್ ಯೋಜನೆಯಲ್ಲಿ ಅಭಿವೃದ್ಧಿಯಾಗಲಿದೆ.ಆ. 25 ರಂದು ಈ ರಸ್ತೆಯ ಗುದ್ದಲಿ ಪೂಜೆ ಸಮಾರಂಭವು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದರಾದ ನಳಿನ್ ಕುಮಾರ್...

ಭೂಮಿಕಾ ಕುಕ್ಕುಜೆ ಕೈಬರಹ ಸ್ಪರ್ಧೆಯಲ್ಲಿ ಪ್ರಥಮ

ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆ, ಮಂಗಳೂರು ಇಲ್ಲಿನ ವಿದ್ಯಾರ್ಥಿನಿ ಭೂಮಿಕಾ ಕುಕ್ಕುಜೆ ಸಮಾಜ ಕಲ್ಯಾಣ ಇಲಾಖೆ (KREIS) ವತಿಯಿಂದ ನಡೆದ ಜಿಲ್ಲಾ ಮಟ್ಟದ ಸ್ಪುಟವಾದ ಕೈ ಬರಹ ಸ್ಪರ್ಧೆಯಲ್ಲಿ ಹಿಂದಿ ವಿಭಾಗ ದಲ್ಲಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಈಕೆ ಕಳೆದ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡ 93%ಅಂಕಗಳನ್ನುಪಡೆದಿದ್ದಾಳೆ . ಈಕೆ ನಾಲ್ಕೂರು ಗ್ರಾಮದ ಕುಕ್ಕುಜೆ...

ವಿಖಾಯ ಕಾರ್ಯಕರ್ತರು ಸಂಚಾರಿ ರಕ್ತನಿಧಿ ಇದ್ದಂತೆ – ತಾಜುದ್ದೀನ್ ಟರ್ಲಿ

ಎಸ್ ಕೆ ಎಸ್ ಎಸ್ ಎಲ್ ವಿಖಾಯ ಕಾರ್ಯಕರ್ತರು ಸಂಚಾರಿ ರಕ್ತನಿಧಿ ಇದ್ದಂತೆ, ಯಾವ ಕ್ಷಣದಲ್ಲೂ ನಿಮಗೆ ರಕ್ತದ ಬೇಡಿಕೆ ಬರಬಹುದು, ರಕ್ತದಾನವು ಶಿಬಿರಗಳಿಗೆ ಮಾತ್ರ ಸೀಮಿತಗೊಳಿಸದೆ ತುರ್ತು ಬೇಡಿಕೆ ಬರುವ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿ ರಕ್ತದಾನಕ್ಕೆ ತಯಾರಾಗಬೇಕೆಂದು ದ.ಕ.ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿ ಬಳಗದ ಜಿಲ್ಲಾ ಉಸ್ತುವಾರಿ ತಾಜುದ್ದೀನ್...

ನವೀನ್ ಗೆ ತುರ್ತು ಚಿಕಿತ್ಸೆಗೆ ನೆರವಾಗುವಿರಾ

ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಪೊಳೆಂಜ ದಿ.ರಾಧಾಕೃಷ್ಣ ಹಾಗೂ ಶ್ರೀಮತಿ ಪುಷ್ಪಾವತಿ ದಂಪತಿಗಳ ದ್ವಿತೀಯ ಪುತ್ರನಾದ ನವೀನ್ ಕಾಣಿಯೂರು ಶಾಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು ಇದೀಗ ಮೆದುಳಿನಲ್ಲಿ ರಕ್ತಸ್ರಾವ ಆಗುವ ಪರಿಣಾಮ ಆಪರೇಷನ್ ಮಾಡುವ ಅವಶ್ಯಕತೆ ಇದ್ದು ತೀರ ಸಂಕಷ್ಟದ ಸ್ಥಿತಿಯಲ್ಲಿದ್ದಾನೆ. ಮಂಗಳೂರಿನ ಪಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸುಮಾರು 3 ರಿಂದ 4...

ಕ್ಯಾನ್ಸರ್ ಪೀಡಿತ ಸ್ನೇಹಿತೆಯ ಖುಷಿಗಾಗಿ ತಲೆಕೂದಲು ದಾನ ಮಾಡಿದ ಸುಳ್ಯದ ಹುಡುಗಿ ರೇಷ್ಮಾ- ಮಾನವೀಯ ಗುಣಕ್ಕೆ ಜಾಲತಾಣದಲ್ಲಿ ಮೆಚ್ಚುಗೆ

ನಾರಿ ಸುಂದರವಾಗಿ ಕಾಣಲು ಕೇಶರಾಶಿ ಕೂಡಾ ತುಂಬಾ ಮುಖ್ಯ. ಆದರೆ ಸೌಂದರ್ಯದ ಸಂಕೇತವಾದ ಕೂದಲನ್ನು ದಾನ ಮಾಡುವುದೆಂದರೆ, ಹೆಣ್ಮಕ್ಕಳಿಗೆ ಅದೊಂದು ಸಂಕಟವೇ ಸರಿ. ಅಂಥದ್ದರಲ್ಲಿ‌ ಇಲ್ಲೊಬ್ಬಾಕೆ ಹೆಣ್ಣುಮಗಳು ತನ್ನ ಸುಂದರ ಕೇಶವನ್ನು ಕ್ಯಾನ್ಸರ್ ಪೀಡಿತ ಸ್ನೇಹಿತೆಗೆ ದಾನವಿತ್ತಿದ್ದಾರೆ. ಸುಳ್ಯ ಮೂಲದ ಸದ್ಯ ಮಂಗಳೂರು‌ ನಿವಾಸಿಯಾಗಿರುವ ರೇಶ್ಮಾ ರಾಮದಾಸ್ ಈ ಮಹತ್ಕಾರ್ಯ ಮಾಡಿರುವವರು.ಈಗ ಮಂಗಳೂರಿನ ಶಕ್ತಿನಗರ ನಿವಾಸಿಯಾಗಿರುವ...

ಆ.22 ರಂದು ಗಾಂಧಿನಗರದಲ್ಲಿ ಶ್ರೀ ಟೆಕ್ನಾಲಜೀಸ್ ಶುಭಾರಂಭ

ಸುಳ್ಯ ಗಾಂಧಿನಗರದ ಶಶಿ ಕಾಂಪ್ಲೆಕ್ಸ್ ನಲ್ಲಿ ಶ್ರೀ ಟೆಕ್ನಾಲಜೀಸ್ ಆ.22 ರಂದು ಶುಭಾರಂಭಗೊಳ್ಳಲಿದೆ. ಎಲ್ಲಾ ಕಂಪನಿಯ ಇನ್ವರ್ಟರ್, ಬ್ಯಾಟರಿ, ಸೋಲಾರ್ ಇನ್ವರ್ಟರ್ , ಸೋಲಾರ್ ವಾಟಾರ್ ಹೀಟರ್ ಹಾಗೂ ಸಿಸಿ ಕ್ಯಾಮರಾ ಮಾರಾಟ ಮತ್ತು ಸೇವೆ ನೀಡಲಾಗುವುದು. ಶುಭಾರಂಭದ ಪ್ರಯುಕ್ತ ವಿಶೇಷ ಆಫರ್ ಕೂಡ ನೀಡಲಾಗುವುದು ಎಂದುಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.
Loading posts...

All posts loaded

No more posts

error: Content is protected !!