- Monday
- September 14th, 2026
ಅಟಲ್ ಅಭಿಮಾನಿ ಬಳಗ ಹರಿಹರ ಪಳ್ಳತ್ತಡ್ಕ-ಬಾಳುಗೋಡು ಇದರ ಆಶ್ರಯದಲ್ಲಿ ಅಟಲ್ ಜನ್ಮಶತಾಬ್ಧಿ ಪ್ರಯುಕ್ತ ಫೆ.28ರಂದು ಶ್ರೀ ಹರಿಹರೇಶ್ವರ ದೇವಸ್ಥಾನದ ಮೈದಾನದಲ್ಲಿ ನಡೆಯಲಿರುವ ಲೀಗ್ ಮಾದರಿಯ 8 ತಂಡಗಳ ಸೂರ್ಯ ಬೆಳಕಿನ ವಾಲಿಬಾಲ್ ಪಂದ್ಯಾಟದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ.19ರಂದು ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ...
ಅಡ್ಕಾರು ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನ ಬಳಿಯಲ್ಲಿ ಬಿದ್ದಿದ್ದ 3 ಪವನ್ ಚಿನ್ನದ ಸರ ರವಿಪ್ರಕಾಶ್ ಬೆಳ್ಳಿಪ್ಪಾಡಿ, ಅಮ್ಮಾಜಿಮೂಲೆ ಎಂಬುವವರಿಗೆ ಸಿಕ್ಕಿದ್ದು, ಅವರು ಅದನ್ನು ವಾರಸುದಾರರಾದ ಬಾಲಕೃಷ್ಣ ಮಡ್ತಿಲ ರವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಅದೊಂದು ಕಾಲವಿತ್ತು ಬಡವರು, ಮಧ್ಯಮವರ್ಗದವರು ಸೇರಿದಂತೆ ಜನಸಾಮಾನ್ಯರಾದ ಪ್ರತಿಯೊಬ್ಬರೂ ಸಹ ಪ್ರತೀವರ್ಷವೂ ಕೂಡ ತಾವು ವರ್ಷಪೂರ್ತಿ ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಲ್ಲಿ ಅಷ್ಟೋ-ಇಷ್ಟೋ ಉಳಿಸಿ ಕೂಡಿಟ್ಟು ಆ ಕೂಡಿಟ್ಟ ಹಣದಲ್ಲಿ ತಮ್ಮ ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ವರ್ಷಕ್ಕೊಮ್ಮೆಯಾದರೂ ತಮ್ಮಿಂದಾದಷ್ಟರ ಮಟ್ಟಿಗೆ ಚಿನ್ನವನ್ನು ಖರೀದಿ ಮಾಡುತ್ತಾ “ಇಂದು ನಾವು ಅನುಭವಿಸುತ್ತಿರುವ ಕಷ್ಟಗಳನ್ನು, ನೋವುಗಳನ್ನು ಮುಂದೆ ನಮ್ಮ...
ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನಾಗನ ಕಟ್ಟೆಗೆ ಭೂಮಿ ಪೂಜೆಯನ್ನು ಫೆ.19ರಂದು ಪುರೋಹಿತರಾದ ಶಂಕರ್ ಹೆಬ್ಬಾರ್ ರವರ ನೇತೃತ್ವದಲ್ಲಿ ಆಡಳಿತ ಮೊಕ್ತೇಸರ ಹಾಗೂ ಜೀರ್ಣೋದ್ಧಾರದ ಅಧ್ಯಕ್ಷರಾದ ಎಂ.ಬಿ ಸದಾಶಿವರವರು ನೆರವೇರಿಸಿದರು. ಈ ಸಂಧರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರು ಕಾರ್ಯದರ್ಶಿ ಹಾಗೂ ಭಕ್ತ ವೃಂದದವರು ಉಪಸ್ಥಿತರಿದ್ದರು.
ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ ಫೆ.22 ರವರೆಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವವು ನಡೆಯಲಿದ್ದು, ಇಂದು ಹಸಿರು ಕಾಣಿಕೆ ಸಮರ್ಪಣೆ ನಡೆಯಿತು. ಬಾಳುಗೋಡು, ಐನೆಕಿದು ಹಾಗೂ ಹರಿಹರ ಪಳ್ಳತ್ತಡ್ಕ ಭಾಗಗಳಿಂದ ಹರಿಹರ ಪಳ್ಳತ್ತಡ್ಕ ಪೇಟೆಗೆ ಹಸಿರುವಾಣಿ ಬಂದು ಅಲ್ಲಿಂದ ಶ್ರೀ ದೇವಳಕ್ಕೆ ಮೆರವಣಿಗೆಯ ಮುಖಾಂತರ ಹಸಿರು...
ಹರಿಹರ ಪಳ್ಳತ್ತಡ್ಕ ಪೇಟೆಯಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯ ಲೋಕಾರ್ಪಣೆಯು ಫೆ.20 ರಂದು ನೆರವೇರಿತು. ನಾಲ್ಕು ವರ್ಷಗಳ ಹಿಂದೆ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ ಹಳೆಯ ಕಾಣಿಕೆ ಹುಂಡಿ ಕೊಚ್ಚಿ ಹೋಗಿದ್ದು, ಇದೀಗ ಭಕ್ತಾದಿಗಳ ಸಹಕಾರದಿಂದ ಹೊಸ ಕಾಣಿಕೆ ಹುಂಡಿ ನಿರ್ಮಾಣಗೊಂಡಿದ್ದು, ಇಂದು(ಫೆ.20) ಲೋಕಾರ್ಪಣೆಗೊಂಡಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು...
ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿಯವರನ್ನು ಸುಪ್ರೀತ್ ಮೋoಟಡ್ಕ ರವರು ಸಚಿವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಹಳದಿ ರೋಗ ಹಾಗೂ ಚುಕ್ಕಿರೋಗ ಬಾಧೆ ಕುರಿತು ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ವಿನಂತಿಸಿದರು. ಈ ಬಾರಿ ರಾಜ್ಯ ಬಜೆಟ್ನಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಸುಳ್ಯ ಕ್ಷೇತ್ರದಲ್ಲಿ ಅಡಿಕೆ ಬೆಳೆಗೆ...
ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಸಮೀಪ ಚಂದ್ರಶೇಖರ ನಾಯ್ಕ ಅವರ ಮನೆ ಬಳಿ ಕುಂಬಾರಕೇರಿ - ಪೈಕ ಕಾಂಕ್ರೀಟ್ ರಸ್ತೆಯನ್ನು ಹಿರಿಯ ಫಲಾನುಭವಿ ಮೋಹನ ಗೌಡ ನೂಜೇಲು ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಸದಸ್ಯರಾದ ಸುಲೋಚನಾ ದೇವ, ರಮೇಶ್ ಪಡ್ಪು, ಕಿಶೋರ್ ಅಂಬೆಕಲ್ಲು, ಲಿಂಗಪ್ಪ ಗೌಡ ಚಿತ್ತಡ್ಕ, ಜೋರ್ಜ್ ಅನಿಕಟ್ಟು,...
ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ - ಕುಂಬಾರಕೇರಿ ಕಾಂಕ್ರೀಟ್ ರಸ್ತೆಯನ್ನು ಹಿರಿಯ ಫಲಾನುಭವಿ ಮಹಾಬಲ ಗೌಡ ಪೆರುಮುಂಡ ರವರು ರಿಬ್ಬನ್ ಎಳೆಯುವ ಮೂಲಕ ಹಾಗೂ ಲಿಂಗಪ್ಪ ಗೌಡ ಚಿತ್ತಡ್ಕರವರು ತೆಂಗಿನಕಾಯಿ ಒಡೆಯುವುದರ ಮೂಲಕ ಈ ಸಂದರ್ಭದಲ್ಲಿ ಗ್ರಾಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಸದಸ್ಯರಾದ ಸುಲೋಚನಾ ದೇವ, ರಮೇಶ್ ಪಡ್ಪು, ರಸ್ತೆಯ ಫಲಾನುಭವಿಗಳಾದ...
ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ ಫೆ.22 ರವರೆಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನಾಳೆ(ಫೆ.20) ಬಾಳುಗೋಡು, ಐನೆಕಿದು ಹಾಗೂ ಹರಿಹರ ಪಳ್ಳತ್ತಡ್ಕ ಗ್ರಾಮಗಳ ಗ್ರಾಮಸ್ಥರಿಂದ ಶ್ರೀ ದೇವರಿಗೆ “ಹಸಿರು ಕಾಣಿಕೆ ಸಮರ್ಪಣೆ” ನೆರವೇರಲಿದ್ದು, ಬಾಳುಗೋಡು ಗ್ರಾಮದಿಂದ ಬೆಳಿಗ್ಗೆ...
Loading posts...
All posts loaded
No more posts
