- Thursday
- April 23rd, 2026
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಆಶ್ರಯದಲ್ಲಿರುವ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನೂತನ ಪ್ರಾಂಶುಪಾಲರಾಗಿ ಕಾಲೇಜಿನಲ್ಲಿ ಆಡಳಿತಾಧಿಕಾರಿಯಾಗಿದ್ದ ಡಾ. ಲೀಲಾಧರ್ ಡಿ.ವಿ ಯವರನ್ನು ಆಡಳಿತ ಮಂಡಳಿ ನೇಮಕಮಾಡಿದ್ದು, ಅಧಿಕಾರ ವಹಿಸಿಕೊಂಡರು. ಪ್ರಾಂಶುಪಾಲ ಪ್ರೊ. ಎನ್.ಎಸ್.ಶೆಟ್ಟರ್ರವರ ನಿವೃತ್ತಿಯಿಂದ ತೆರವಾದ ಪ್ರಾಂಶುಪಾಲ ಹುದ್ದೆಗೆ ಡಾ.ಲೀಲಾಧರ್ ಡಿ.ವಿ.ಯವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರವರು ನೇಮಕಗೊಳಿಸಿದ್ದರು....
ಸುಳ್ಯದ ಪ್ರತಿಷ್ಠಿತ ಕೆವಿಜಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಡಾ.ಲೀಲಾಧರ್ ಡಿ.ವಿ ಪ್ರಾಂಶುಪಾಲರಾಗಿ ಇಂದು ನೇಮಕಗೊಂಡಿದ್ದಾರೆ.
ಶಾಲೆ ಪ್ರಾರಂಭ ಸದ್ಯಕ್ಕಿಲ್ಲ , ಹಂತ ಹಂತವಾಗಿ ತೆರೆಯಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಉಡುಪಿಗೆ ಆಗಮಿಸಿದ್ದ ಅವರು ಪತ್ರಿಕಾಗೋಷ್ಠಿ ನಡೆಸಿ ಈ ಮಾತನ್ನು ಹೇಳಿದರು.ಈಗಾಗಲೇ ಜುಲೈ ನಿಂದ ಶಾಲೆಗಳು ಪ್ರಾರಂಭಿಸುವ ಕುರಿತಾಗಿ ಪೋಷಕರ ಅಭಿಪ್ರಾಯ ಸಂಗ್ರಹಿಸಲಾಗುವುದು. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಮುಂದೂಡುವಂತೆ ಅಭಿಪ್ರಾಯಗಳು ಬಂದಿದ್ದವು. ಮಕ್ಕಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಷ್ಟಸಾಧ್ಯವಿದೆ....
ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಿದ ರಾಜ್ಯಮಟ್ಟದ ಪ್ರೇಮಪತ್ರ ಬರಹ ಸ್ಪರ್ಧೆಯು ಇತ್ತೀಚಿಗೆ ಸಾಮಾಜಿಕ ಜಾಲತಾಣವಾದ ವಾಟ್ಸಾಪಲ್ಲಿ ನಡೆಸಿತ್ತು . ಪ್ರೇಮಪತ್ರ ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ . ಅತ್ಯುತ್ತಮ ಪ್ರೇಮಪತ್ರ ಬಹುಮಾನವನ್ನು ಸುಕೃತಿ ಪೂಜಾರಿ ಈಶ್ವರಮಂಗಲ , ಪುತ್ತೂರು ಇವರು ಪಡೆದುಕೊಂಡರು. ಪ್ರಥಮ ಬಹುಮಾನಗಳನ್ನು ಗೋವಿಂದ ರಾಜು ಬಿ ವಿ ಚನ್ನರಾಯಪಟ್ಟಣ ,ವಿಜಯ...
ಕೊರೊನಾ ತಡೆಗಟ್ಟಲು ಇಲ್ಲಿನ ಆಡಳಿತ ವ್ಯವಸ್ಥೆ ಹರಸಾಹಸ ಪಡುತ್ತಿರುವಾಗ ಗಾಂಧಿನಗರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ, ಸುಳ್ಯದ ಇಕ್ಬಾಲ್ ಜಿ ಎ ರವರ ಪುತ್ರ ಮೊಹಮ್ಮದ್ ಶಿಬಿಲಿ ತನ್ನ ಕೈ ಚಳಕದ ಮೂಲಕ ಸ್ಯಾನಿಟೈಝರ್ ಸ್ಟ್ಯಾಂಡ್ ತಯಾರಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸ್ಟ್ಯಾಂಡ್ನ ಪ್ರಾತ್ಯಕ್ಷಿಕೆ - ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡುವುದು ಮತ್ತು...
ಸುಳ್ಯದ ಪ್ರತಿಷ್ಠಿತ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ನೂತನ ಪ್ರಾಂಶುಪಾಲರಾಗಿ ಅರುಣ್ ಕುಮಾರ್ ಎಸ್ . ಅಧಿಕಾರ ವಹಿಸಿಕೊಂಡರು . ಇಂಗ್ಲಿಷ್ ಎಂ.ಎ. , ಬಿ.ಎಡ್ ಪದವೀಧರರಾಗಿರುವ ಅವರು ಕರ್ನಾಟಕ , ಕೇರಳ ಹಾಗೂ ತಮಿಳುನಾಡು ರಾಜ್ಯಗಳ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ . ಮೈಸೂರಿನ ಪ್ರತಿಷ್ಠಿತ ಕೈಸ್ಟ್ ಶಾಲೆಯಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ ....
ಸುಂದರವಾದ ಜಗತ್ತಿಗೆ ಕಾಲಿಟ್ಟ ಆ ಘಳಿಗೆಯುಎಲ್ಲರ ಮೊಗದಲ್ಲಿ ಕಾಣಿಸಿತು ಸುಂದರ ನಗುವುಹೇಳದೆ, ಕೇಳದೆ ಲಭಿಸಿತು ಈ ಜನುಮವುದೇವರಿಗೆ ತಿಳಿಸುವೆನು ಮನದಾಳದ ನಮನವು… ನನ್ನ ಜಗತ್ತಿನಲ್ಲಿ ಕಂಡೆ ತಂದೆ- ತಾಯಿಯರ ಪ್ರೀತಿಯನ್ನುಪ್ರತಿನಿತ್ಯ ತಮ್ಮನ ತುಂಟಾಟಿಕೆಯಲ್ಲಿ ಮುಳುಗಿ ಏಳುವೆನುಪ್ರತಿಕ್ಷಣ ಅಜ್ಜನ ಪ್ರೀತಿಯಲ್ಲಿ ಮೆರೆದಾಡುವೆನುಪ್ರತಿಯೊಬ್ಬರಿಗೂ ನಾನು ಚಿರ ಋಣಿಯಾಗಿರುವೆನು… ನನ್ನ ಜಗತ್ತಿನಲ್ಲಿ ಕಾಣುವೆನು ಸುಂದರ ಕನಸನ್ನುಅದರಲ್ಲಿ ಗುರುಗಳಿಗೆ ನೀಡುವೆನು ಗೌರವವನ್ನುಗೆಳಯ-ಗೆಳತಿಯರನ್ನು...
ಜೂನ್ ಜುಲೈನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ನಡೆಸುವ ದೂರಶಿಕ್ಷಣ ಕಾರ್ಯದ ಮತ್ತು ಪದವಿ ಕೋರ್ಸ್ಗಳ ಪರೀಕ್ಷಾ ಪ್ರಕಟಣೆ ಮತ್ತು ಪರೀಕ್ಷಾ ವೇಳಾಪಟ್ಟಿಯನ್ನು ಅನಿವಾರ್ಯ ಕಾರಣಗಳಿಂದ ತಡೆಹಿಡಿಯಲಾಗಿದೆ. ಪರೀಕ್ಷಾ ಪ್ರಕಟಣೆ ಮತ್ತು ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
