ಸ.ಹಿ.ಪ್ರಾ ಶಾಲೆ ಕನ್ನಡ ಪೆರಾಜೆಯಲ್ಲಿ “ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ” ಬಗ್ಗೆ ಮಾಹಿತಿ ಕಾರ್ಯಾಗಾರ

ಸ.ಹಿ.ಪ್ರಾ ಶಾಲೆ ಕನ್ನಡ ಪೆರಾಜೆಯಲ್ಲಿ ಜು.19 ರಂದು “ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ” ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.ಸುಳ್ಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಲೋಕನಾಥ್ ಅಮೆಚೂರ್ ರವರು ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ರಫೀಕ್, ಉಪಾಧ್ಯಕ್ಷರಾದ ನಮಿತಾ.ಬಿ.ಜೆ, ಸದಸ್ಯರಾದ ನಾಗವೇಣಿ, ನೇತ್ರಾ, ಜಾನಕಿ.ಬಿ.ಸಿ, ಶಿಕ್ಷಕರಾದ ಜಯಲಕ್ಷ್ಮಿ.ಎನ್.ಬಿ, ಮು.ಶಿ, ಶ್ರೀನಿವಾಸ್.ಬಿ.ಎಂ, ಸಹ...

ಮಡಪ್ಪಾಡಿ : ಸೀತಮ್ಮ ಕಾಯರಕಟ್ಟೆ ನಿಧನ

ಮಡಪ್ಪಾಡಿ ಗ್ರಾಮದ ಕಾಯರಕಟ್ಟೆ ಮನೆ ದಿ| ಬಾಲಣ್ಣ ಗೌಡ ರವರ ಪತ್ನಿ ಸೀತಮ್ಮ ರವರು ಇಂದು ಸ್ವಗೃಹದಲ್ಲಿ ನಿಧನರಾದರು.ಇವರಿಗೆ 90 ವರ್ಷ ವಯಸ್ಸಾಗಿತ್ತು.ಮೃತರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
Ad Widget

ಸುಬ್ರಹ್ಮಣ್ಯ ರೋಟರಿ ಕ್ಲಬ್ ಪೂರ್ವಾಧ್ಯಕ್ಷರಾದ ವಿಶ್ವನಾಥ ನಡುತೋಟ ಅವರಿಗೆ ಪಿ.ಹೆಚ್.ಎಫ್ ಪದವಿ

ಅಂತಾರಾಷ್ಟ್ರೀಯ ರೋಟರಿ ಕ್ಲಬ್ ನ ಸ್ಥಾಪಕರಾದ ಪೌಲ್ ಹ್ಯಾರೀಸ್ ರವರ ನೆನಪಿನಲ್ಲಿ ನೀಡುವಂತಹ ಅತ್ಯುನ್ನತ ಪದವಿ ಪಿ.ಹೆಚ್.ಎಫ್ ಪದವಿಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರಾದ ಹಾಗೂ ಜೋನಲ್ ಲೆಫ್ಟಿನೆಂಟ್ ಆದ ವಿಶ್ವನಾಥ ನಡುತೋಟ ರವರಿಗೆ ನೀಡಲಾಗಿದೆ. ಇವರು ರೋಟರಿ ಸಂಸ್ಥೆಯಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.ವಿಶ್ವನಾಥ ನಡುತೋಟ ಅವರು ಜೆ.ಸಿ.ಐ ಸುಬ್ರಹ್ಮಣ್ಯ...

ಸುಬ್ರಹ್ಮಣ್ಯ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವಾರ್ಷಿಕ ಮಹಾಸಭೆ ; ನೂತನ ಪದಾಧಿಕಾರಿಗಳ ಆಯ್ಕೆ

55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕಲಾವಿದರಾದ ಕೆ.ಯಜ್ಞೇಶ್ ಆಚಾರ್

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ 55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕಲಾವಿದರಾದ ಕೆ.ಯಜ್ಞೇಶ್ ಆಚಾರ್ ರವರು ಆಯ್ಕೆಗೊಂಡಿದ್ದಾರೆ.54ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ದಿನೇಶ್ ಮೊಗ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು.ನೂತನ ಸಮಿತಿಯ ಉಪಾಧ್ಯಕ್ಷರಾಗಿ ದಿನೇಶ್ ಸಂಪ್ಯಾಡಿ,...

ಪೆರಾಜೆ : ಅನಾರೋಗ್ಯದಿಂದ ಯುವಕ ಮೃತ್ಯು

ಪೆರಾಜೆ ಗ್ರಾಮದ ಪೀಚೆ ಮನೆ ಪುರುಷೋತ್ತಮ ಗೌಡರ ಮಗ ದೀಕ್ಷಿತ್(30) ಅನಾರೋಗ್ಯದಿಂದ ನಿಧನರಾದ ಘಟನೆ ಜು.18ರಂದು ನಡೆದಿದೆ.ಹಠಾತ್ ಅಸೌಖ್ಯಕ್ಕೊಳಗಾದ ದೀಕ್ಷಿತ್ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು.‌ ಅದರಂತೆ ಆಂಬ್ಯುಲೆನ್ಸ್‌ ನಲ್ಲಿ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.ಮೃತರು ತಾಯಿ...

ಸುಬ್ರಹ್ಮಣ್ಯದಲ್ಲಿ ಸೀನಿಯರ್ ಚೇಂಬರ್ ವತಿಯಿಂದ ವೃಕ್ಷಾರೋಪಣ ಅಭಿಯಾನ

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಕುಕ್ಕೆಶ್ರೀ ಸೀನಿಯರ್ ಚೇಂಬರ್ ವತಿಯಿಂದ ಸ್ಥಳೀಯ  ಸದಾನಂದ ಆಸ್ಪತ್ರೆಯ ವಠಾರ ಹಾಗೂ ಪರಿಸರದಲ್ಲಿ  ವೃಕ್ಷಾರೋಪಣ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ನಿಟ್ಟೆ ಕೆ.ಎಸ್ ಹೆಗ್ಡೆ ಯುನಿವರ್ಸಿಟಿಯ ವೈಸ್ ಚಾನ್ಸಲರ್ ಡಾl ಸತೀಶ್ ಭಂಡಾರಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ, ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನಿಕಟಪೂರ್ವಾಧ್ಯಕ್ಷರಾದ...

ಸುಬ್ರಹ್ಮಣ್ಯದಲ್ಲಿ ಮಾದಕ ವಸ್ತು ನಿಯಂತ್ರಣ ಕಾರ್ಯಾಗಾರ

“ಯುವ ಜನಾಂಗ ಮಾದಕ ವಸ್ತುಗಳ ವಿರುದ್ದ ಜಾಗೃತರಾಗುವುದು ಅತ್ಯವಶ್ಯಕ” : ಹೇಮಚಂದ್ರ

ಸುಬ್ರಹ್ಮಣ್ಯ : “ಯುವ ಜನಾಂಗವು ಮಾದಕ ವಸ್ತು ಸೇವನೆ ವಿರುದ್ದ ಜಾಗೃತರಾಗುವುದು ಅತ್ಯಗತ್ಯ. ವಿದ್ಯಾರ್ಥಿಗಳು ಇಂತಹ ಚಟಗಳಿಗೆ ದಾಸರಾಗಬಾರದು, ಇದು ಆರೋಗ್ಯಕ್ಕೆ ಹಾನಿಕರ.ಮಾದಕ ವಸ್ತು ಸೇವನೆ ನಿಯಂತ್ರಣಕ್ಕೆ ಶಾಸನ ಮಾಡಲಾಗಿದೆ. ಮಾದಕ ವಸ್ತು ವಿತರಣೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾದವಾಗಿದೆ. ಇದಕ್ಕೆ ಜೈಲು ಶಿಕ್ಷೆ ಮತ್ತು ದಂಡ ವಿದಿಸಲಾಗುತ್ತದೆ” ಎಂದು ಸುಬ್ರಹ್ಮಣ್ಯ ಪೋಲಿಸ್ ಠಾಣೆಯ ಸಿಬ್ಬಂದಿ...

ಕಿರುಕಥೆ – ಕನಸು ನನಸು

ನಯನ ಸುಮಧುರ ಜೀವನದಲ್ಲಿರುವ ಹುಡುಗಿ.ಮಾತಾಪಿತರಿಗೆ ಒಬ್ಬಳೇ ಮಗಳು.ಬಹಳ ಮುದ್ದಿಸಿ ಬೆಳೆಸಿದ್ದರು ತಂದೆ ತಾಯಿ.ಆಕರ್ಷಕ ತಾರೆಯಾಗಿ ಬೆಳಗುತ್ತಿದ್ದಳು ನಯನ.ಕಡು ಬಡತನವಿಲ್ಲದೆ ಜೀವಿಸಲು ಬೇಕಾದ ಶೈಲಿಯನ್ನು ಹೊಂದಿತ್ತು ಅವಳ ಕುಟುಂಬ.ಪಿ.ಯು ಸಿ ಓದುತ್ತಿದ್ದ ನಯನಾಳಿಗೆ ತಂದೆ ತಾಯಿಯರಲ್ಲಿ ಅಪಾರ ಪ್ರೀತಿ ಗೌರವ.ಒಂದು ಕೂಡಾ ಅಪ್ಪಿ ತಪ್ಪಿ ಮಾತನಾಡದೆ ಮಾತಾಪಿತರ ಬಗ್ಗೆ ಪೂರ್ಣ ಸಂಯಮ ತೋರುತ್ತಿದ್ದಳು ನಯನ.ಖುಷಿ ತುಂಬಿ ಇವರ...

ಸುಳ್ಯ : ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ  ವತಿಯಿಂದ ಗಿಡ ನೆಡುವ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಸುಳ್ಯ ಮಂಡಲದ ವತಿಯಿಂದ ಇಂದು “ತಾಯಿಯ ಹೆಸರಿನಲ್ಲೊಂದು ಗಿಡ ನೆಡುವ ಕಾರ್ಯಕ್ರಮ” ವು ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಶಾಂತಿನಗರ ರಾಧಾಕೃಷ್ಣ ನಾಯಕ್ ಅವರ ಮನೆಯಲ್ಲಿ ನಡೆಯಿತು.ಜಿಲ್ಲಾಧ್ಯಕ್ಷರಾದ ಮಹೇಶ್ ಜೋಗಿ, ಮಂಡಲದ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಜಿಲ್ಲಾ ಬಿಜೆಪಿ ಒಬಿಸಿ ಪ್ರಧಾನ ಕಾರ್ಯದರ್ಶಿ...

ಸುಳ್ಯ ರೈತ ಉತ್ಪಾದಕ ಕಂಪೆನಿಯಿಂದ ಹಡಿಲು ಗದ್ದೆಯಲ್ಲಿ ಭತ್ತ ಬೇಸಾಯ

“ಎಫ್.ಪಿ.ಒ ಕಾರ್ಯ ಶ್ಲಾಘನೀಯ” : ಭಾಗೀರಥಿ ಮುರುಳ್ಯ

“19 ಗ್ರಾಮಗಳಲ್ಲಿಯೂ ಹಡಿಲು ಗದ್ದೆ ಉಳುಮೆ” : ವೀರಪ್ಪ ಗೌಡ ಕಣ್ಕಲ್

ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಯಡಿ ರಚನೆಗೊಂಡ ರಾಜ್ಯ ರೈತ ಉತ್ಪಾದಕ ಕಂಪೆನಿ ಸುಳ್ಯ ಹಡಿಲು ಗದ್ದೆ ಬೇಸಾಯ ಕಾರ್ಯಕ್ರಮವನ್ನು ಕೃಷಿ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದು, ಜು.13ರಂದು ಕಳಂಜ ಗ್ರಾಮದ ಮಣಿಮಜಲು ಎಂಬಲ್ಲಿ ಚಾಲನೆ ನೀಡಲಾಯಿತು. 2 ಎಕ್ರೆ ಹಡಿಲು ಗದ್ದೆಯಲ್ಲಿ ಬೇಸಾಯ ಮಾಡಲಾಗಿದ್ದು, ಈ ಕಾರ್ಯಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ...
Loading posts...

All posts loaded

No more posts

error: Content is protected !!