ಜಯರಾಮ ಗೌಡ ಕಟ್ರಮನೆ ನಿಧನ

ಐನೆಕಿದು ಗ್ರಾಮದ ಕಟ್ರಮನೆ ನಿವಾಸಿ ಜಯರಾಮ ಗೌಡ ಕಟ್ರಮನೆಯವರು ಇಂದು ಮುಂಜಾನೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 52ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಚಂದ್ರಕಲಾ ಮಕ್ಕಳಾದ ಸಿಂಚನ, ಸ್ನೇಹಿತ್ ಮತ್ತು ಸಹೋದರ, ಸಹೋದರಿಯರು ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ಮಡಪ್ಪಾಡಿ : ಒಡಿಯೂರು ಶ್ರೀಗಳ ಜನ್ಮದಿನದ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮ

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಮಡಪ್ಪಾಡಿ ಘಟಕ ಸಮಿತಿ, ಆಯುಷ್ಮಾನ್ ಆರೋಗ್ಯ ಕೇಂದ್ರ ಬಲ್ಕಜೆ, ಮಡಪ್ಪಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ, ಮಡಪ್ಪಾಡಿ ಅಕ್ಷಯ ಸಂಜೀವಿನಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟ ಇವುಗಳ ಸಂಯುಕ್ತಾಶ್ರಯದಲ್ಲಿ ಒಡಿಯೂರು ಶ್ರೀಗಳ ಜನ್ಮದಿನದ ಅಂಗವಾಗಿ ಬಲ್ಕಜೆ ಬಸ್ ನಿಲ್ದಾಣದ ಬಳಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.
Ad Widget

ಓಡಿಯೂರು ಶ್ರೀಗಳ ಜನ್ಮದಿನೊತ್ಸವ ಮತ್ತು ಗ್ರಾಮೋತ್ಸವದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ

ಓಡಿಯೂರು ಶ್ರೀಗಳ ಜನ್ಮದಿನೊತ್ಸವ ಮತ್ತು ಗ್ರಾಮೋತ್ಸವದ ಅಂಗವಾಗಿ  ಓಡಿಯೂರು ವಿವಿದ್ದೋದೇಶ ಸೌಹಾರ್ದ ಸಹಕಾರಿ ಸಂಘ ಸುಳ್ಯ ಶಾಖೆ, ಜೈ ಗುರುದೇವ ಸೇವಾ ಬಳಗ ಸುಳ್ಯ, ಎಂ.ಸಿ.ಸಿ ಕ್ಲಬ್ ಸುಳ್ಯ ಇದರ ವತಿಯಿಂದ ಸ್ವಚ್ಛತೆ ಕಾರ್ಯಕ್ರಮ ಜೂನಿಯರ್ ಕಾಲೇಜ್ ಮೈದಾನದ ಪರಿಸರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಹಕಾರಿಯ ನಿರ್ದೇಶಕರಾದ ಶ್ರೀಮತಿ ಶಾರದಾ ಮಣಿ ಎಸ್ ರೈ, ಸೇವಾ...

ಎಸ್.ಕೆ.ಎಸ್.ಎಸ್.ಎಫ್. ಕಲ್ಲುಗುಂಡಿ ಶಾಖೆಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಎಸ್.ಕೆ.ಎಸ್.ಎಸ್.ಎಫ್. ಕಲ್ಲುಗುಂಡಿ ಶಾಖೆಯ ವತಿಯಿಂದ ಕಲ್ಲುಗುಂಡಿ ಪೇಟೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ.ಶಹಿದ್ ತೆಕ್ಕಿಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಕೆ ಹನೀಫ್ ಮಾಜಿ ಅಧ್ಯಕ್ಷರಾದ ಜಿ ಕೆ. ಹಮೀದ್ ಗೂನಡ್ಕ, ಜಗದೀಶ್ ರೈ,...

ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರಿಗೆ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ರವರಿಗೆ ಉಲ್ಲಾಸ್ ಕಜ್ಜೋಡಿ ರವರ ಚೊಚ್ಚಲ ಕೃತಿ “ಜೀವನಯಾನ” ಕವನ ಸಂಕಲನದ ಗೌರವ ಪ್ರತಿ ಹಸ್ತಾಂತರ

ಗೌರವ ಪ್ರತಿ ಹಸ್ತಾಂತರಿಸಿದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ರವರು

ಬರಹಗಾರರು ಹಾಗೂ ಅಮರ ಸುದ್ದಿ ವಾರಪತ್ರಿಕೆಯ ವರದಿಗಾರರಾದ ಉಲ್ಲಾಸ್ ಕಜ್ಜೋಡಿ ರವರ ಚೊಚ್ಚಲ ಕೃತಿ “ಜೀವನಯಾನ” ಕವನ ಸಂಕಲನದ ಗೌರವ ಪ್ರತಿಯನ್ನು ಆಗಸ್ಟ್ 02 ರಂದು ಸುಳ್ಯದ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ “ಸಿಂಧೂರ ವಿಜಯ” ಸಂವಾದ ಕಾರ್ಯಕ್ರಮದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರಿಗೆ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ...

ಸುಬ್ರಹ್ಮಣ್ಯ: ವರಮಹಾಲಕ್ಷ್ಮೀ ಪೂಜಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಶೀಲಾ ಗಣೇಶ್ ಆಯ್ಕೆ

ಸುಬ್ರಹ್ಮಣ್ಯ : ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಸುಬ್ರಹ್ಮಣ್ಯ ಇದರ 2025ನೇ ಸಾಲಿನ ನೂತನ ಅಧ್ಯಕ್ಷರಾಗಿ ಶೀಲಾ ಗಣೇಶ್ ಆಯ್ಕೆಯಾಗಿದ್ದಾರೆ.  ಕಾರ್ಯದರ್ಶಿಯಾಗಿ ಸುಭಾಷಿಣಿ ಶಿವರಾಮ್ ಮತ್ತು ಕೋಶಾಧಿಕಾರಿಯಾಗಿ ತ್ರಿವೇಣಿ ದಾಮ್ಲೆ ನೇಮಕಗೊಂಡಿದ್ದಾರೆ. 2024ನೇ ಸಾಲಿನ ಸಮಿತಿ ಅಧ್ಯಕ್ಷೆ ಪೂಜಾ ಕಲ್ಲೂರಾಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಾರದಾ...

ಪ್ರವೀಣ್ ಬೆಳ್ಳಾರೆ ಅವರಿಗೆ ಗೋಪಾಲ್ಸ್ ರಾಷ್ಟ್ರಮಟ್ಟದ ಪ್ರಶಸ್ತಿ

ಸ್ಥಳೀಯ ದೇಸಿ ಹಸುಗಳು ಮತ್ತು ಗೋಪಾಲಕ ಸಮುದಾಯಕ್ಕೆ ಬೆಂಬಲವಾಗಿ ಸ್ಥಾನೀಯ ದೇಶಿ ಹಸುಗಳನ್ನು ಸಾಕುವವರು ಮತ್ತು ಸಂರಕ್ಷಕರಿಗೆ ಗೋಪಾಲ್ಸ್ ಸಂಸ್ಥೆಯವರು ನೀಡುವ ರಾಷ್ಟ್ರಮಟ್ಟದ ಗೋಪಾಲ್ಸ್ ಪ್ರಶಸ್ತಿಯನ್ನು ಪ್ರವೀಣ್ ಬೆಳ್ಳಾರೆ ಅವರಿಗೆ ಬೆಂಗಳೂರಿನ ಮಲ್ಲೇಶ್ವರಂ ಚೌಡಯ್ಯ ಸ್ಮಾರಕ ಭವನ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ ತಲಾ ಇಬ್ಬರು...

ಸುಳ್ಯ : ಗೌಡ ಯುವ ಸೇವಾ ಸಂಘ ಹಾಗೂ ವಿವಿಧ ಘಟಕಗಳ ಆಶ್ರಯದಲ್ಲಿ ಆಟಿಯ ಸಂಭ್ರಮ ಕಾರ್ಯಕ್ರಮ ; ವಿವಿಧ ಸಾಧಕರಿಗೆ ಸನ್ಮಾನ

ಸುಳ್ಯ : ಗೌಡರ ಯುವ ಸೇವಾ ಸಂಘ, ಮಹಿಳಾ ಘಟಕ ಮತ್ತು ತರುಣ ಘಟಕ ಇವರ ಸಹಯೋಗದೊಂದಿಗೆ ಸುಳ್ಯ ನಗರ ಗೌಡ ಸಮಿತಿ, ಮಹಿಳಾ ಘಟಕ, ತರುಣ ಘಟಕಗಳ ನೇತೃತ್ವದಲ್ಲಿ 13ನೇ ವರ್ಷದ ಆಟಿಯ ಸಂಭ್ರಮ ಆಗಸ್ಟ್ 3 ರಂದು ಗೌಡ ಸಮುದಾಯ ಭವನ ಕೊಡಿಯಾಲಬೈಲು ನಲ್ಲಿ ನಡೆಯಿತು.ಸಮಾರಂಭ ಅಧ್ಯಕ್ಷತೆಯನ್ನು ಗೌಡರ ಯುವ ಸೇವಾ ಸಂಘದ...

ಶ್ರೀ ಕೃಷ್ಣ ದೇವರ ತುಳು ಭಕ್ತಿಗೀತೆ “ಲೇ ಲೇ ಲೇಲೆಗಾ ಹಾಡು” ಅಧಿಕೃತವಾಗಿ ಬಿಡುಗಡೆ

ಭಕ್ತಿಗೀತೆಗಳ ಲೋಕಕ್ಕೆ ಮತ್ತೊಂದು ಭಕ್ತಿಯ ಮಧುರ ಗೀತೆ ಇಂದು ಸೇರ್ಪಡೆಯಾಗಿದೆ. ಫೆ.02ರಂದು ಮಂಗಳೂರಿನ ಶ್ರೀ ನವದುರ್ಗಾ ಮಂತ್ರಾಮೂರ್ತಿ ಕ್ಷೇತ್ರದಲ್ಲಿ ಕ್ಷೇತ್ರದ ತಂತ್ರಿಗಳಾದ ಕೆ.ಯೋಗೀಶ್ ಭಟ್ ಚಿಂತನೆಯಲ್ಲಿ ಬಿಡುಗಡೆಗೊಳಿಸಿದರು. ಕುಣಿತ ಭಜನೆ ಹಾಗೂ ಭಜಕರಿಗಾಗಿಯೇ ಭಕ್ತಿಪದ ಬಿಡುಗಡೆಗೊಂಡಿದೆ. ಈ ಸಂದರ್ಭದಲ್ಲಿ ಬಹರೇನ್ ನಿಂದ ಆಗಮಿಸಿದ ನವೀನ್ ಮಾವಜಿ ಹಾಗೂ ಹನುಮಾನ್ ಭಟ್, ರಾಜೇಂದ್ರ ಮಂಗಳೂರು, ಪ್ರಗತ್ ಪುತ್ತೂರು...

ಕುಶಾಲನಗರ : ಕಾರು ಬೈಕ್ ಭೀಕರ ಅಪಘಾತ ; ಪೆರುವಾಜೆಯ ಯುವಕ ಮೃತ್ಯು

ಕುಶಾಲನಗರದ ಆನೆಕಾಡು ಸಮೀಪ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದು ಬೈಕ್‌ ಸವಾರ ಪೆರುವಾಜೆಯ ಕಾರ್ತಿಕ್ ಭಟ್ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಅವಿವಾಹಿತರಾಗಿದ್ದ ಅವರು ಮೈಸೂರಿನ ಇನ್ಫೋಸಿಸ್ ಉದ್ಯೋಗಿಯಾಗಿದ್ದು, ಅರ್ನಾಡಿ ವಿಷ್ಣು ಭಟ್ ರವರ ಪುತ್ರ. ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕ್...
Loading posts...

All posts loaded

No more posts

error: Content is protected !!