ಇಂದು(ಜು.17) ಮಂಗಳೂರು ಆಕಾಶವಾಣಿಯ “ಯುವವಾಣಿಯ”ಲ್ಲಿ ಅನನ್ಯ ಸುಬ್ರಹ್ಮಣ್ಯ ಅವರ ಭಾಷಣ ಪ್ರಸಾರ

ಇಂದು(ಜು.17) ಮಂಗಳೂರು ಆಕಾಶವಾಣಿಯ "ಯುವವಾಣಿ"ಯಲ್ಲಿ ಸುಬ್ರಹ್ಮಣ್ಯದ ಅನನ್ಯ.ಎಚ್ ಅವರ ಬಾಷಣ "ಜೋಳಿಗೆಯ ಕಂದಮ್ಮ" ರಾತ್ರಿ ಗಂಟೆ 8.00 ಕ್ಕೆ ಪ್ರಸಾರವಾಗಲಿದೆ.ಇವರು ಪುತ್ತೂರಿನ ವಿವೇಕಾನಂದ ವಿದ್ಯಾಲಯದಲ್ಲಿ ಅಂತಿಮ ವರ್ಷದ ಪತ್ರಿಕೋದ್ಯಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಕೊಲ್ಲಮೊಗ್ರು : ವೀಲ್ ಚೇರ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ| ಡಿ.ವೀರೇಂದ್ರ ಹೆಗ್ಗಡೆ ರವರ ಜನ ಮಂಗಲ ಕಾರ್ಯಕ್ರಮದ ಅಡಿಯಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಕಾರ್ಯಕ್ಷೇತ್ರದ "ಎ" ಒಕ್ಕೂಟದ ಕಾರ್ಯದರ್ಶಿಯಾದ ಅನಿತಾ ಬೊಂಬಿಲ ರವರ ಅತ್ತೆಯಾದ ಬಾಲಕಿ ರವರಿಗೆ ಸುಮಾರು 3 ತಿಂಗಳಿನಿಂದ ಮೂಳೆ ಸವೆತದಿಂದ ನಡೆದಾಡಲು ಕಷ್ಟವಾದ ಕಾರಣ ವೀಲ್ ಚೇರ್ ಗಾಗಿ ಯೋಜನೆಗೆ ಮನವಿ ಸಲ್ಲಿಸಿದ್ದರು....
Ad Widget

ನಾಲ್ಕೂರು : ಉಜಿರಡ್ಕ ಕೊರಗಜ್ಜ ಸಾನಿಧ್ಯಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ ಭೇಟಿ

ನಾಲ್ಕೂರು ಗ್ರಾಮದ ಉಜಿರಡ್ಕ ಸ್ವಾಮಿ ಕೊರಗಜ್ಜ ಸಾನಿಧ್ಯಕ್ಕೆ ಜು.16 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ ರವರು ಭೇಟಿ ನೀಡಿ ದೈವದ ಆಶಿರ್ವಾದ ಪಡೆದರು.ಈ ಸಂದರ್ಭದಲ್ಲಿ ಸುರೇಶ್ ಉಜಿರಡ್ಕ ರವರು ಹರೀಶ್ ಇಂಜಾಡಿ ರವರನ್ನು ಗೌರವದಿಂದ ಬರಮಾಡಿಕೊಂಡರು.ಹರೀಶ್ ಇಂಜಾಡಿ ರವರು ಈ ಹಿಂದೆಯೂ ಕೂಡ ಸಾನಿಧ್ಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದರು.

ಕೊಲ್ಲಮೊಗ್ರು : ವೀಲ್ ಚೇರ್ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ| ಡಿ.ವೀರೇಂದ್ರ ಹೆಗ್ಗಡೆ ಯವರ ಜನಮಂಗಲ ಕಾರ್ಯಕ್ರಮದ ಅಡಿಯಲ್ಲಿ ಫಲಾನುಭವಿಗಳಿಗೆ ವೀಲ್ ಚೇರ್ ವಿತರಣೆ ನಡೆಯಿತು.ಸುಳ್ಯ ತಾಲೂಕಿನ ಕೊಲ್ಲಮೊಗ್ರು ಕಾರ್ಯಕ್ಷೇತ್ರದ "ಬಿ" ಒಕ್ಕೂಟದ ಸೌಭಾಗ್ಯ ಸಂಘದ ಸದಸ್ಯರಾದ ಲಲಿತಾ ರವರ ಪತಿ ಹುಕ್ರಪ್ಪ ಗೌಡ ಮಲ್ಲಾಜೆ ರವರಿಗೆ ಅನಾರೋಗ್ಯದಿಂದಾಗಿ ನಡೆದಾಡಲು ಕಷ್ಟವಾದ ಕಾರಣ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಮಾಧವ...

ಅರೆಲ್ತಡಿ ಉಳ್ಳಾಕುಲು ದೇವಸ್ಥಾನಕ್ಕೆ ಭೇಟಿ ನೀಡಿದ ಜನಾರ್ಧನ ರೆಡ್ಡಿ

ಸವಣೂರು ಗ್ರಾಮದ ಅರೆಲ್ತಡಿ ಉಳ್ಳಾಕುಲು ದೇವಸ್ಥಾನಕ್ಕೆ  ಗಂಗವತಿ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿಯವರು ಭೇಟಿ ನೀಡಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಅವರನ್ನು ಸ್ವಾಗತಿಸಿದರು.ನಂತರ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಮಾಜಿ ಸಂಸದರರಾದ ನಳಿನ್ ಕುಮಾರ್ ಕಟೀಲು, ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಸಹಿತ ಪ್ರಮುಖರು, ಕಾರ್ಯಕರ್ತರು, ಗ್ರಾಮಸ್ಥರು...

ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ನೇಜಿ ನಾಟಿ

ಸುಬ್ರಹ್ಮಣ್ಯ ಜು.16: ಸದಾ ಸಮವಸ್ತ್ರ ಧರಿಸಿ ಕಾಲೇಜಿನಲ್ಲಿ ಪಾಠ ಕೇಳುವ ವಿದ್ಯಾರ್ಥಿಗಳು ಕೆಸರು ತುಂಬಿದ ಗದ್ದೆಗೆ ಇಳಿದು ರೈತರಂತೆ ಕೈಯಲ್ಲಿ ನೇಜಿ ಹಿಡಿದು ನೇಜಿ ನಾಟಿ ಮಾಡಿ ಖುಷಿಪಟ್ಟರು.ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಮಹಾ ವಿದ್ಯಾಲಯದ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗ, ಐಕ್ಯೂಎಸಿ ಘಟಕ ಆಶ್ರಯದಲ್ಲಿ "ಭತ್ತ ಬೇಸಾಯ ರಕ್ಷಿಸುವಲ್ಲಿ ಯುವಜನತೆಯ ಪಾತ್ರ" ಕಾರ್ಯಕ್ರಮದ ಅಂಗವಾಗಿ ನೇಜಿ...

ಸುಳ್ಯ : ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಹಾವು ದಿನಾಚರಣೆ

ವಿಶ್ವ ಹಾವುಗಳ ದಿನಾಚರಣೆಯ ಪ್ರಯುಕ್ತ ಪರಿಸರ ಹಾಗೂ ವಿವಿಧ ರೀತಿಯ ಉರಗಗಳ ಸಂರಕ್ಷಣೆಯ ಕುರಿತು ಮಾಹಿತಿ ಕಾರ್ಯಗಾರವು ಕಾಲೇಜಿನ ಸುಶ್ರುತ ಸಭಾಂಗಣದಲ್ಲಿ ಜು.16 ರಂದು ನಡೆಯಿತು.ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅರಣ್ಯ ಸಂರಕ್ಷಣಾಕಾರ ಭುವನೇಶ್ ಕೈಕಂಬ ಇವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ, ಪ್ರಕೃತಿಯ ಸಮತೋಲನದಲ್ಲಿ ಉರಗಗಳ ಮಹತ್ವ, ವಿವಿಧ ಉರಗಗಳ ಪರಿಚಯ ಹಾಗೂ...

ಆಲೆಟ್ಟಿ : ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

ಕಾರ್ಯಕರ್ತರ ಅಹವಾಲು ಸ್ವೀಕಾರ

ದ.ಕ. ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಜು.15 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಕಾರ್ಯಕರ್ತರ ಭೇಟಿಯಾಗಿ ಅಹವಾಲು ಸ್ವೀಕರಿಸಿದರು. ಆಲೆಟ್ಟಿಗೆ ಆಗಮಿಸಿದ ಸಂಸದರು ಸೊಸೈಟಿ ಸಭಾಂಗಣದಲ್ಲಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿ, ಮಾತನಾಡಿದರು. ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದಕು| ಭಾಗೀರಥಿ ಮುರುಳ್ಯ, ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಮಂಡಲ...

ಎ.ಬಿ.ವಿ.ಪಿ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿನ ಆಚರಣೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ತಾಲೂಕು ಘಟಕದಿಂದ ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ಜ್ಞಾನದೀಪ ಶಾಲೆಯಲ್ಲಿ ಜು.14 ರಂದು ಆಚರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಗದಾಧರ್ ರವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ "ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ" ದ ಮಹತ್ವದ ಕುರಿತು ಮಾತನಾಡಿದರು. ತಾಲೂಕಿನ ಸಂಚಾಲಕರಾದ ನಂದನ್ ಪವಿತ್ರಮಜಲು ಸದಸ್ಯತ್ವದ ಮಹತ್ವವನ್ನು ವಿವರಿಸಿದರು. ಎಬಿವಿಪಿಯ ಸಕ್ರಿಯ...

ಅರಂತೋಡು : ಸ್ನೇಹ ಹೋಟೆಲ್ ಮಾಲಕ ಯೋಗೀಶ್ ಗೂನಡ್ಕ ನಿಧನ

ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಸುಮಾರು 24 ವರ್ಷ ಗಳಿಂದ ಹೋಟೆಲ್ ಉದ್ಯಮ ನಡೆಸುತ್ತಿದ್ದ ಯೋಗೀಶ್(42) ರವರು ಜು.16 ರಂದು ನಿಧನರಾದರು. ಮೃತರು ತಾಯಿ ಮೀನಾಕ್ಷಿ, ಪತ್ನಿ ಲಲಿತಾ(ರೇಶ್ಮಾ), ಪುತ್ರರಾದ ಧನುಷ್ ಹಾಗೂ ಗೌಶಿಕ್ ರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!