Ad Widget

“ಮೌನವಾಗಿದ್ದೆ ನಾನು…..”

ಮೌನವಾಗಿದ್ದೆ ನಾನು ಹಸಿರು ಚೆಲ್ಲುತ್ತಾ ಉಸಿರು ಪಸರಿಸುತ್ತಾ  ಅಮೃತವಾಗಿ ಸಿರಿ ಸಮೃದ್ಧಿಯಾಗಿ ತಾಯ ಮಮತೆಯ ತೊಟ್ಟಿಲಾಗಿ ಹದವರಿತು ಕಾರ್ಯವೆಸಗುತಲಿದ್ದೆ ಕ್ಷಮೆಯಾಧರಿತ್ರಿಯಾಗಿ ಕಾಯುತಲಿದ್ದೆಬಡಿದೆಬ್ಬಿಸಿದೆ ನೀನು ವಿಕೃತಿಯ ಮೆರೆಯುತ್ತಾನಿನ್ನಾಸೆ ಆಮಿಷಗಳಿಗೆ ನನ್ನ ಬಲಿಕೊಟ್ಟೆ ನನ್ನೊಡಲ ನೀ ಬರಿದು ಮಾಡಿಬಿಟ್ಟೆ ನನ್ನುಸಿರಿನಲ್ಲೇ ನಿನ್ನುಸಿರು ಅದ ಮರೆತು ಬಗೆದೆ ನನ್ನ ಬಸಿರುನಿಗೂಢತೆಯ ಹೊತ್ತ ವಿಸ್ಮಯಗಳ ತಾಣದೊಳು ರಹಸ್ಯಗಳ ಒಡಲೊಳಿಟ್ಟು ಮೌನವಾಗಿದ್ದೆ ನಾನು...

ಜ.30ರಂದು ಸುಬ್ರಹ್ಮಣ್ಯ ಹಾಗೂ ಗುತ್ತಿಗಾರು ಉಪ ಕೇಂದ್ರಗಳ ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ

ಜ.30ನೇ ಶುಕ್ರವಾರದಂದು ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ 33 ಕೆ.ವಿ ಮಾರ್ಗ ಹಾಗೂ 33/11 ಕೆ.ವಿ ಗುತ್ತಿಗಾರು ಮತ್ತು ಸುಬ್ರಹ್ಮಣ್ಯ ವಿದ್ಯುತ್ ಉಪ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಪೂರ್ವಾಹ್ನ 10:00 ಗಂಟೆಯಿಂದ ಸಾಯಂಕಾಲ 4:00 ಗಂಟೆಯವರೆಗೆ ಸುಬ್ರಹ್ಮಣ್ಯ ಹಾಗೂ ಗುತ್ತಿಗಾರು ಉಪ ಕೇಂದ್ರಗಳಿಂದ ಹೊರಡುವ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ ಸುಬ್ರಹ್ಮಣ್ಯ ಉಪ ಕೇಂದ್ರದಿಂದ ಹೊರಡುವ ಹರಿಹರ...
Ad Widget

ಕೊಯನಾಡು : ಗಣರಾಜ್ಯೋತ್ಸವ ಪ್ರಯುಕ್ತ ಗಣೇಶ ಯುವ ಬಳಗ ವತಿಯಿಂದ ಶ್ರಮದಾನ

ಕೊಡಗು-ಸಂಪಾಜೆ ಗ್ರಾಮದ ಕೊಯನಾಡು ಶ್ರೀ ಗಣೇಶ ಯುವ ಬಳಗ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ  ಶ್ರಮದಾನ ಕಾರ್ಯ ನಡೆಯಿತು.ಸ್ವಚ್ಛ ಎಂದರೆ ನಿರ್ಮಲವಾದದ್ದು, ಪರಿಶುದ್ಧವಾದದ್ದು ಎಂದರ್ಥ ಸ್ವಚ್ಛ ಭಾರತ ಎಂದರೆ ಭಾರತ ದೇಶದ ಕಲುಷಿತ ಸ್ಥಳಗಳನ್ನು ನಿರ್ಮಲಗೊಳಿಸುವದು. ಸ್ವಚ್ಛ ಭಾರತ ಅಭಿಯಾನವು ಭಾರತ ದೇಶದ ಒಂದು ಅತ್ಯುತ್ತಮ ನೈರ್ಮಲ್ಯ ಯೋಜನೆಯಾಗಿದೆ ಈ ಉದ್ದೇಶದಿಂದ  ಗಣರಾಜ್ಯೋತ್ಸವದಂದು  ಕೊಯನಾಡಿನಿಂದ - ಚಿಟ್ಟೆಕಾನ...

“ವನಜ-ಸುಜನಾ ರಂಗಮನೆ ಪ್ರಶಸ್ತಿ”ಗೆ ಹಾಸ್ಯಗಾರ ಮಹೇಶ್ ಮಣಿಯಾಣಿ ಆಯ್ಕೆ

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಸುಳ್ಯ ಇದರ ಆಶ್ರಯದಲ್ಲಿ, ರಂಗನಿರ್ದೇಶಕ ಡಾ| ಜೀವನ್ ರಾಂ ಸುಳ್ಯ ಇವರ ಮಾತಾಪಿತೃಗಳ ನೆನಪಿನಲ್ಲಿ ಕೊಡ ಮಾಡುವ 2026 ನೇ ಸಾಲಿನ “ವನಜ-ಸುಜನಾ ರಂಗಮನೆ ಪ್ರಶಸ್ತಿ”ಗೆ ಶ್ರೀ ಧರ್ಮಸ್ಥಳ ಮೇಳದ ಪ್ರಸಿದ್ಧ ಹಾಸ್ಯಗಾರರಾದ ಮಹೇಶ್ ಮಣಿಯಾಣಿಯವರನ್ನು ಆಯ್ಕೆ ಮಾಡಲಾಗಿದೆ.ಸುಳ್ಯ ತಾಲೂಕಿನ ದೊಡ್ಡತೋಟದವರಾದ ಮಹೇಶ ಮಣಿಯಾಣಿ ಇವರು ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ...

ಪುತ್ತೂರು ಕಂಬಳದಲ್ಲಿ ಕುಮಾರ್ ಪೆರ್ನಾಜೆಯವರ ಸಾಧನೆಗೆ ಸನ್ಮಾನ

ಪುತ್ತೂರು : ಸಾಂಸ್ಕೃತಿಕ ಶ್ರೀಮಂತಿಕೆಯ ಕರಾವಳಿಯ ಕ್ರೀಡೆ 33ನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳವು ಪುತ್ತೂರು ಶ್ರೀ ಮಾಲಿಂಗೇಶ್ವರ ದೇವರ ದೇವಮಾರು ಗದ್ದೆಯಲ್ಲಿ ಜ. 24 ರಂದು ಹಲವು ವಿಶೇಷಗಳಲ್ಲಿ ಜಾಗತಿಕವಾಗಿ ಜೇನು ಗಡ್ಡದಾರಿ ಜೇನು ಕೃಷಿ ವಿಶಿಷ್ಟ ಬರಹ ಸಂಶೋಧನೆ ಬೋರ್ಡ್ ದ್ರಾವಣ ಟೆಕ್ನಿಕ್ ರಾಷ್ಟ್ರೀಯ ಪ್ರಶಸ್ತಿ ಹಲವು ಪ್ರಶಸ್ತಿ ಸನ್ಮಾನ...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಒಡೆಯರ್ ಭೇಟಿ

ಸುಬ್ರಹ್ಮಣ್ಯ ಜನವರಿ 27 : ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜ.27ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಸುಬ್ರಹ್ಮಣ್ಯ ಮಠದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಿದ್ವತ್ ಸಮ್ಮೇಳನ ವಿಶ್ವ ಸಂಭ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಈ ಸಂದರ್ಭದಲ್ಲಿ ಶ್ರೀ...

ಪಂಜ ಶಾಲೆಯಲ್ಲಿ ಮಕ್ಕಳೊಂದಿಗೆ ಎಸ್.ಐ ಸಂವಾದ ಕಾರ್ಯಕ್ರಮ

ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಬ್ರಹ್ಮಣ್ಯ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಜ.27ರಂದು ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಮಧ್ಯಾಹ್ನ ಶಾಲೆಗೆ ಭೇಟಿ ನೀಡಿದ ಪೊಲೀಸ್ ಉಪನಿರೀಕ್ಷಕರನ್ನು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಬರಮಾಡಿಕೊಂಡರು. ನಂತರ ಕ್ಲಾಸ್ ರೂಮ್‌ಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು. ಮಕ್ಕಳ...

ಸುಳ್ಯ : ಮತ್ತೆ ಕೈಕೊಟ್ಟ ವಿದ್ಯುತ್

ಇಂದು ಸುಳ್ಯ ಭಾಗದಲ್ಲಿ ಇಂದು ಹಗಲಿನ ವೇಳೆ ವಿದ್ಯುತ್ ಲೈನ್ ನಿರ್ವಹಣಾ ಕಾರ್ಯಕ್ಕೆ ಮೆಸ್ಕಾಂ ವಿದ್ಯುತ್ ಕಡಿತ ಮಾಡಿತ್ತು. ನಿರ್ವಹಣಾ ಕೆಲಸ ಮುಗಿದು ಸಂಜೆ ವಿದ್ಯುತ್ ಆಗಮಿಸಿತ್ತಾದರೂ ಕೆಲ ಹೊತ್ತಿನಲ್ಲಿ ಮತ್ತೆ ಕೈ ಕೊಟ್ಟಿದೆ. ಬೀರಮಂಗಲ ಸಮೀಪ 33 ಕೆ.ವಿ ಲೈನ್ ನ ವೈರ್ ಕಟ್ ಆಗಿದ್ದು 8:30 ವೇಳೆಗೆ ದುರಸ್ತಿ ಕಾರ್ಯ ನಡೆದು ವಿದ್ಯುತ್...

ಸುಬ್ರಹ್ಮಣ್ಯ : ಜ.29ರಂದು ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಮೆಸ್ಕಾಂ ಜನಸಂಪರ್ಕ ಸಭೆ

ಜ.29ನೇ ಗುರುವಾರದಂದು ಪೂರ್ವಾಹ್ನ 11:00 ಗಂಟೆಯಿಂದ 12:00 ಗಂಟೆಯವರೆಗೆ ಮೆಸ್ಕಾಂ ಮಂಗಳೂರು ಕಾರ್ಯ ಮತ್ತು ಪಾಲನಾ ವೃತ್ತದ ಮಾನ್ಯ ಅಧೀಕ್ಷಕ ಎಂಜಿನಿಯರ್(ವಿ) ಇವರ ಅಧ್ಯಕ್ಷತೆಯಲ್ಲಿ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯನ್ನು ಮೆಸ್ಕಾಂ ಸುಬ್ರಹ್ಮಣ್ಯ ಉಪವಿಭಾಗ ಕಛೇರಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಗ್ರಾಹಕರು ತಮ್ಮ ಕುಂದುಕೊರತೆಗಳನ್ನು ಖುದ್ದಾಗಿ ಅಥವಾ 08257-200699 ಮೂಲಕ ಸಲ್ಲಿಸಬಹುದು ಎಂದು...

ಸುಳ್ಯ ಸಂತ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ ಹಾಗೂ ಸನ್ಮಾನ ಕಾರ್ಯಕ್ರಮ

ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ ಜ.26 ರಂದು ನಡೆಯಿತು. ಧ್ವಜಾರೋಹಣವನ್ನು ನಿವೃತ ಸಿ‌.ಆರ್.ಪಿ.ಎಫ್ ಯೋಧರಾದ  ವಿದ್ಯಾಧರ.ಎನ್ ಪಟ್ಟೆ ಇವರು ನೆರವೇರಿಸಿ ಗಣರಾಜ್ಯೋತ್ಸವ ಸಂದೇಶವನ್ನು ನೀಡಿದರು. ವೇದಿಕೆಯಲ್ಲಿ ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲಾ ಉಪಾಧ್ಯಕ್ಷರಾದ ಪ್ರವೀಣ್ ಜಯನಗರ ಉಪಸ್ಥಿತರಿದ್ದು, ಸಂದರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ  ಶಾಲಾ ಸ್ಕೌಟ್ಸ್ ತಂಡ ರಾಜ್ಯಮಟ್ಟದ...
Loading posts...

All posts loaded

No more posts

error: Content is protected !!