ಪಂಜ : ಲಯನ್ಸ್ ಕ್ಲಬ್ ಹಾಗೂ ಕಂದಾಯ ಇಲಾಖೆ ನಾಡಕಛೇರಿಯ ಜಂಟಿ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಧ್ವಜಸ್ತಂಭ ಕೊಡುಗೆ

(ವರದಿ : ಉಲ್ಲಾಸ್ ಕಜ್ಜೋಡಿ) ಲಯನ್ಸ್ ಕ್ಲಬ್ ಪಂಜ ಹಾಗೂ ಕಂದಾಯ ಇಲಾಖೆ ನಾಡಕಛೇರಿ ಪಂಜ ಇವುಗಳ ಜಂಟಿ ಆಶ್ರಯದಲ್ಲಿ ಆ.15 ರಂದು ಪಂಜ ನಾಡಕಛೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಧ್ವಜಸ್ತಂಭ ಕೊಡುಗೆ ಕಾರ್ಯಕ್ರಮ ನಡೆಯಿತು.ನೂತನ ಧ್ವಜಸ್ತಂಭದ ಉದ್ಘಾಟನೆಯನ್ನು ಉಪ ತಹಶೀಲ್ದಾರ್ ಚಂದ್ರಕಾಂತ್.ಎಂ.ಆರ್ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷರಾದ...

ದ.ಕ.ಜಿ.ಪಂ ಕಿ.ಪ್ರಾ ಶಾಲೆ ಮೆಟ್ಟಿನಡ್ಕದಲ್ಲಿ 79ನೇ ಸ್ವಾತಂತ್ರೋತ್ಸವ

ದ.ಕ.ಜಿ.ಪಂ.ಕಿ.ಪ್ರಾ ಶಾಲೆ ಮೆಟ್ಟಿನಡ್ಕದಲ್ಲಿ ಆ.15 ರಂದು 79 ನೇ ಸ್ವಾತಂತ್ರೋತ್ಸವ ಅತ್ಯಂತ ವಿಜೃಂಭಣೆಯಿಂದ  ಜರುಗಿತು.ಧ್ವಜಾರೋಹಣ ವನ್ನು ಗ್ರಾಮ ಪಂಚಾಯತ್ ನ ಸದಸ್ಯರಾದ  ಶ್ರೀಮತಿ ಅನಿತಾ ರಮಾನಂದ  ರವರು ನೆರವೇರಿಸಿದರು. ನಂತರ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳು, ಪೋಷಕರು, ಮತ್ತು ಶಿಕ್ಷಕರು ಸೇರಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.ನಂತರ ಸಭಾಕಾರ್ಯಕ್ರಮ ನಡೆಯಿತು, ಸಭೆಯ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ...
Ad Widget

ಎನ್.ಎಸ್.ಎಸ್ ಸೇವಾಸಂಗಮ ಟ್ರಸ್ಟ್ ವತಿಯಿಂದ ಜ್ಯೋತಿ ವೃತ್ತ ಅಂಗನವಾಡಿ ಕೇಂದ್ರದಲ್ಲಿ  ಸ್ವಾತಂತ್ರ್ಯ ದಿನಾಚರಣೆ

ಎನ್.ಎಸ್.ಎಸ್. ಸೇವಾಸಂಗಮ ಟ್ರಸ್ಟ್ (ರಿ.) ವತಿಯಿಂದ ಜ್ಯೋತಿ ವೃತ್ತ ಅಂಗನವಾಡಿ ಕೇಂದ್ರದಲ್ಲಿ 79ನೇ  ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸೇವಾ ಸಂಗಮದ ಸಲಹಾ ಸಮಿತಿ ಸದಸ್ಯರಾದ ಡಾ| ಅನುರಾಧಾ ಕುರುಂಜಿಯವರು   ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಸೇವಾಸಂಗಮದ ಗೌರವ ಸಲಹೆಗಾರಾದ ಚಂದ್ರಶೇಖರ.ಸಿ ಬಿಳಿನಲೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಅಥಿತಿಗಳಾಗಿ ಗೌರವ ಸಲಹೆಗಾರಾದ ಪಾಲಚಂದ್ರ ವೈ.ವಿ, ಅಂಗನವಾಡಿ...

ಪಳ್ಳಿಮಜಲು : 79ನೇ ಸ್ವಾತಂತ್ರ್ಯ ದಿನಾಚರಣೆ

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಅಬೂಬಖರ್ ಸ್ವಿದ್ದೀಖ್(ರ) ಮಸೀದಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಸಿರಾಜುಲ್ ಇಸ್ಲಾಂ ಸೆಕೆಂಡರಿ ಮದರಸ ಪಳ್ಳಿಮಜಲು ಮುಖ್ಯೋಪಾಧ್ಯಾಯರಾದ ಮಹಮೂದ್ ಸಖಾಫಿ ದು:ಆ ನೆರವೇರಿಸಿದರು.ದ್ವಜಾರೋಹಣವನ್ನು ಸಿರಾಜುಲ್ ಇಸ್ಲಾಂ ಖೊಮ್ಮಿಟೆ ಪಳ್ಳಿಮಜಲು ಅಧ್ಯಕ್ಷರಾದ ಹನೀಫ್ ಸಲಾಲ  ನೆರವೇರಿಸಿದರು.ಪಳ್ಳಿಮಜಲು ಮಸೀದಿ ಖತೀಬರಾದ ರಫೀಖ್ ಅಹ್ಸನಿ ಉಸ್ತಾದರು ಸ್ವಾತಂತ್ರ್ಯೋತ್ಸವ ಸಂದೇಶವನ್ನು ನೀಡಿ ನಮ್ಮ ಭಾರತವು ಸರ್ವ ಧರ್ಮೀಯರು ಒಂದಾಗಿ...

ಸರಕಾರಿ ಪ್ರೌಢ ಶಾಲೆ ಅಜ್ಜಾವರದಲ್ಲಿ 79ನೇ ಸ್ವಾತಂತ್ರೋತ್ಸವ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ

ಸರಕಾರಿ ಪ್ರೌಢ ಶಾಲೆ ಅಜ್ಜಾವರದಲ್ಲಿ 79ನೇ ಸ್ವಾತಂತ್ರೋತ್ಸವ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ, ಸ್ಮಾರ್ಟ್ ಟಿವಿ ಉದ್ಘಾಟನೆ ಮತ್ತು ನೀರಿನ ಟ್ಯಾಂಕ್ ಕಾಮಗಾರಿಗೆ ಗುದ್ದಲಿ ಪೂಜೆ ಆ.15 ರಂದು ನಡೆಯಿತು.ಧ್ವಜಾರೋಹಣ ವನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಕಣೆಮರಡ್ಕ ರವರು ನೆರವೇರಿಸಿದರು.ಅತಿಥಿಗಳಾಗಿ ಅವಿನಾಶ್ ಡಾಕ್ಟರ್ ಅಜ್ಜಾವರ, ಅಬ್ದುಲ್ ರಹಿಮಾನ್ ಸಂಕೇಶ್, ಬಾಲಕೃಷ್ಣ ಮಾಸ್ತರ್ ಅಜ್ಜಾವರ, ಯಶೋಧರ...

ಕೊಲ್ಲಮೊಗ್ರು : ದೊಡ್ಡಣ್ಣ ಶೆಟ್ಟಿ ಕೆರೆ ಅಮೃತ ಸರೋವರದ ಬಳಿ 79ನೇ ಸ್ವಾತಂತ್ರ್ಯ ದಿನಾಚರಣೆ

ಕೊಲ್ಲಮೊಗ್ರು ಗ್ರಾಮದ ದೊಡ್ಡಣ್ಣ ಶೆಟ್ಟಿ ಕೆರೆ ಅಮೃತ ಸರೋವರದ ಬಳಿಯಲ್ಲಿ ಆ.15 ರಂದು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಾಧವ ಚಾಂತಾಳ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹಿನಿ ಕಟ್ಟ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ್, ಪಂಚಾಯತ್ ಸಿಬ್ಬಂದಿಗಳಾದ ಲೀಲಾವತಿ ಬೊಳಿಯಾನ, ನವ್ಯ ನಡುಗಲ್ಲು, ವಸಂತ...

ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಭಕ್ತಿ ಗೀತೆ ಬಿಡುಗಡೆ

ತುಳು ನಾಡ ಗಾನ ಗಂಧರ್ವ ಗಾಯಕ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದಿಂದ ಮೂಡಿಬಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹೊಸ ಭಕ್ತಿ ಗೀತೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಬಿಡುಗಡೆಗೊಳಿಸಿದರು.ಈ ಅದ್ಭುತ ಗೀತೆಯು ಜಗದೀಶ್ ಆಚಾರ್ಯ ಮತ್ತು ಅವರ ಕಲಾ ಬಳಗದಿಂದ ಮೂಡಿಬಂದಿದ್ದು, ಭಕ್ತರ ಹೃದಯ ಮುಟ್ಟುವಂತೆ...

ಪಂಜ ದೇವಸ್ಥಾನಕ್ಕೆ ನಾಗತೀರ್ಥ ಶಾಲಾ ವಿದ್ಯಾರ್ಥಿಗಳಿಂದ ಸ್ವಾತಂತ್ರೋತ್ಸವ ಪ್ರಯುಕ್ತ ಮೆರವಣಿಗೆ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ನಾಗತೀರ್ಥ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಸ್ವಾತಂತ್ರೋತ್ಸವ ಪ್ರಯುಕ್ತ ಪ್ರತೀ ವರುಷದಂತೆ ಆ.15 ರಂದು ಮೆರವಣಿಗೆ ನಡೆಯಿತು.ಬಳಿಕ ದೇಗುಲದಲ್ಲಿ ಭಜನಾ ಸಂಕೀರ್ತನೆ ನಡೆಸಿ ಶ್ರೀ ದೇವರ ಪ್ರಸಾದ, ಉಪಹಾರ ಸ್ವೀಕರಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಸ್ವಾಗತಿಸಿದರು. ಮೆರವಣಿಗೆಯಲ್ಲಿ ಶಿಕ್ಷಕರು, ಪೋಷಕರು...

ಲಕ್ಷ್ಮಿ ಮುತ್ಲಾಜೆ ನಿಧನ

ನಾಲ್ಕೂರು ಗ್ರಾಮದ ನಡುಗಲ್ಲು ಮುತ್ಲಾಜೆ ದಿ.ಸುಬ್ಬಣ್ಣ ಗೌಡರ ಧರ್ಮಪತ್ನಿ ಲಕ್ಷ್ಮಿ ಅಲ್ಪಕಾಲದ ಅಸೌಖ್ಯದಿಂದ ಆ.13 ರಂದು ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ನಿವೃತ್ತ ಪೋಲೀಸ್ ಸೋಮಶೇಖರ್,  ರಾಧಾಕೃಷ್ಣ, ಪುತ್ರಿಯರಾದ ಭಾನುಮತಿ, ಸುನಂದಾ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

ಬೆಳ್ಳಾರೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಜರುಗಿತು. ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ.ಎಲ್  ರೈ ಧ್ವಜರೋಹಣ ನೆರವೇರಿಸಿದರು.ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ, ರೋಟರಿ ಕ್ಲಬ್ ಅಧ್ಯಕ್ಷ ವಿಶ್ವನಾಥ ಪೂಜಾರಿ.ಕೆ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಆರ್.ಕೆ ಭಟ್ ಕುರುಂಬುಡೇಲು ಉಪಸ್ಥಿತರಿದ್ದರು.  ಬಾಲವಿಕಾಸ ಸಮಿತಿ ಅಧ್ಯಕ್ಷೆ  ಶ್ರೀಮತಿ ದೇವಿಕಾ...
Loading posts...

All posts loaded

No more posts

error: Content is protected !!