ಸುಳ್ಯ : ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ

ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮವು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮರುಳ್ಯ ರವರ ಅಧ್ಯಕ್ಷತೆಯಲ್ಲಿ ಜು.14ರಂದು ಸುಳ್ಯ ತಾಲೂಕು ಕಚೇರಿಯಲ್ಲಿ ನಡೆಯಿತು. ಗ್ರಾಮ ಆಡಳಿತಾಧಿಕಾರಿಗಳಿಗೆ ಶಾಸಕರು ಲ್ಯಾಪ್ ಟಾಪ್ ವಿತರಿಸಿದರು.‌ ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ನೀರಬಿದಿರೆ, ನಗರ ಪಂಚಾಯತ್ ಸದಸ್ಯರಾದ ಶ್ರೀಮತಿ ಶೀಲಾವತಿ, ತಾಲೂಕು...

ಬೆಳ್ಳಾರೆ : ಕಲಾ ಮಂದಿರ್ ನಲ್ಲಿ ಕೀಬೋರ್ಡ್ ಮತ್ತು ಸುಗಮ ಸಂಗೀತ ತರಗತಿಗಳು ಆರಂಭ

ಬೆಳ್ಳಾರೆಯ ದೇವಿ ಹೈಟ್ಸ್ ನಲ್ಲಿರುವ ಕಲಾ ಮಂದಿರ್ ಡ್ಯಾನ್ಸ್ ಕ್ರಿವ್ ಸಂಸ್ಥೆಯಲ್ಲಿ ಲಹರಿ ಸಂಗೀತ ಕಲಾ ಕೇಂದ್ರದ ಕೀ ಬೋರ್ಡ್ ಮತ್ತು ಸುಗಮ ಸಂಗೀತ ತರಗತಿಗಳು ಉದ್ಘಾಟನೆಗೊಂಡಿತು. ಬೆಳ್ಳಾರೆ ಜೆಸಿಐ ಅಧ್ಯಕ್ಷರಾದ ಪ್ರದೀಪ್ ಕುಮಾರ್ ರೈ ಬೀಡು  ತರಗತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಲಾ ಮಂದಿರ್ ನಿರ್ದೇಶಕ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪ್ರಮೋದ್ ಕುಮಾರ್...
Ad Widget

ಪುತ್ತೂರು : ಮುಂಗಾರು ಕವಿಗೋಷ್ಠಿಯಲ್ಲಿ ಕವನ ವಾಚನ

ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಸಹಕಾರದೊಂದಿಗೆ ಪ್ರಗತಿ ಎಜ್ಯುಕೇಶನ್ ಫೌಂಡೇಶನ್(ರಿ.) ಪುತ್ತೂರು ಇದರ ಆಶ್ರಯದಲ್ಲಿ ದಿ.ಚಿದಾನಂದ ಕಾಮತ್ ಕಾಸರಗೋಡು ಸ್ಮರಣಾರ್ಥ ಜು.13ರಂದು ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ನಡೆದ ಮುಂಗಾರು ಕವಿಗೋಷ್ಠಿಯಲ್ಲಿ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರು "ಮನುಷ್ಯನಾಟಕ್ಕೆ ಮಳೆ ನಿಲ್ಲಲಿ" ಎಂಬ ಶೀರ್ಷಿಕೆಯ ಕವನ...

ಸುಳ್ಯ : ರೋಟರಿ ಸ್ಕೂಲ್ ನಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ

ಪ್ರಯೋಜನ ಪಡೆದ 176 ಜನ

ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿಯ ಜೂನಿಯರ್ ರೆಡ್ ಕ್ರಾಸ್ ಘಟಕ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಕಾರದೊಂದಿಗೆ "ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ" ವು ಜುಲೈ 13 ಆದಿತ್ಯವಾರದಂದು ರೋಟರಿ ಹೈಯರ್ ಪ್ರೈಮರಿ ಸ್ಕೂಲ್ ರಥಬೀದಿ ಸುಳ್ಯದಲ್ಲಿ ಅತ್ಯಂತ  ಯಶಸ್ವಿಯಾಗಿ ನಡೆಯಿತು. ರೋಟರಿ  ಚಾರಿಟೇಬಲ್ ಟ್ರಸ್ಟ್ ನ...

ಅರಂಬೂರು : “ಆಟಿಲಿ ಒಂದ್ ದಿನ” ಕಾರ್ಯಕ್ರಮದ ಆಮಂತ್ರಣ ಪತ್ರ ಅನಾವರಣ

ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ಜುಲೈ 27ರಂದು ಅರಂಬೂರಿನ ಮೂಕಾಂಬಿಕ ಭಜನಾ ಮಂದಿರದಲ್ಲಿ ನಡೆಯಲಿರುವ “ಆಟಿಲಿ ಒಂದ್ ದಿನ”  ಕಾರ್ಯಕ್ರಮದ ಆಮಂತ್ರಣ ಪತ್ರ ಅನಾವರಣ ಕಾರ್ಯಕ್ರಮವು ಜುಲೈ 12ರಂದು ಅರಂಬೂರಿನ ಮೂಕಾಂಬಿಕ ಭಜನಾ ಮಂದಿರದ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗೌಡ ಘಟಕದ ಅಧ್ಯಕ್ಷರಾದ ಮನೋಹರ ಅರಂಬೂರು, ಮಹಿಳಾ ಘಟಕದ ಅಧ್ಯಕ್ಷರಾದ ಡಾ.ಅನುರಾಧಾ ಕುರುಂಜಿ,...

ಕವನ : ಮೌನದ ಮಡಿಲಿನಲ್ಲಿ…

ಮುದುಡಿ ಹೋದ ಮನದ ಮೌನಕೆ ಮಾತುಗಳೇ ಉತ್ತರ, ಆದರೂ ಅನಿಸುವುದು ಕೆಲವೊಮ್ಮೆ ಇಲ್ಲಿ ಮಾತಿಗಿಂತಲೂ ಮೌನವೇ ಉತ್ತಮ...ಕದಡಿ ಹೋದ ಮನದ ಭಾವನೆಗಳಿಗೆ ಇಲ್ಲದ ಭರವಸೆಗಳ ತುಂಬುವುದಕ್ಕಿಂತ, ಕಾಣದಾದ ಬದುಕ ದಾರಿಗೆ ಸಿಗದ ಕನಸುಗಳ ಹೊಸೆಯುವುದಕ್ಕಿಂತ ಮೌನವಾಗಿ ಇರುವುದೇ ಉತ್ತಮ, ಬದುಕಿನಲ್ಲಿ ಕೆಲವೊಮ್ಮೆ ಮೌನವಾಗಿ ಉಳಿಯುವುದೇ ಉತ್ತಮ...ಮನದಲ್ಲೊಂದು ನಿರ್ಧಾರವಿಲ್ಲದೇ, ಬದುಕಿಗೊಂದು ಗುರಿಯು ಇಲ್ಲದೇ ನೂರು ತಿರುವುಗಳ ಬದುಕ...

ನಿಧನ : ಬಾಲಗೋಪಾಲ್ ಸುಬ್ರಹ್ಮಣ್ಯ

ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಆದಿ ಸುಬ್ರಹ್ಮಣ್ಯ ನಿವಾಸಿಯಾದ ಸುಬ್ರಹ್ಮಣ್ಯದಲ್ಲಿ ಪಂಕ್ಚರ್ ಅಂಗಡಿ ನಡೆಸುತ್ತಿದ್ದ ಬಾಲಗೋಪಾಲ್ ಸುಬ್ರಹ್ಮಣ್ಯ ರವರು ಜು.12 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅಸೌಖ್ಯದಿಂದಿದ್ದ ಅವರಿಗೆ 60 ವರ್ಷ ವಯಸ್ಸಾಗಿತ್ತು.ಗುತ್ತಿಗಾರಿನಲ್ಲಿ ಟಯರ್ ವರ್ಕ್ಸ್ ಅಂಗಡಿಯನ್ನು ನಡೆಸುತ್ತಿದ್ದ ಅವರು ಕಳೆದ 15 ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ರಶ್ಮಿ ಅಟೋ ವರ್ಕ್ಸ್ ಎಂಬ ಶಾಪ್ ಅನ್ನು ನಡೆಸುತ್ತಿದ್ದರು.ಮೃತರು...

ಗುತ್ತಿಗಾರು : ಬಿಜೆಪಿ ಬೂತ್ ಸಮಿತಿ  ವತಿಯಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ

ಗುರು ಪೂರ್ಣಿಮೆ ಅಂಗವಾಗಿ ಗುತ್ತಿಗಾರು ಗ್ರಾಮದ 123 ನೇ ಬೂತ್ ನ ಬಿಜೆಪಿ ಕಾರ್ಯಕರ್ತರಿಂದ ನಿವೃತ್ತ ಅಧ್ಯಾಪಕರಾದ ಧ್ರುವ ಕುಮಾರ್ ಹಾಗೂ ಶ್ರೀಮತಿ ಭುವನೇಶ್ವರಿಯವರಿಗೆ ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ವೆಂಕಟ್ ವಳಲಂಬೆ, ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸದಸ್ಯರು ಆಗಿರುವ ವೆಂಕಟ್ ದಂಬೆಕೋಡಿ ಹಾಗೂ ಬೂತ್ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ನಿಧನ : ಆಯಿಷಾ ಬೆಳ್ಳಾರೆ

ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ ಇದರ ಪ್ರಧಾನ‌ ಕಾರ್ಯದರ್ಶಿ ದಾವೂದ್ ಸಅದಿಯವರ ತಾಯಿ ಆಯಿಷಾ ಅವರು ಅಲ್ಪಕಾಲದ ಅಸೌಖ್ಯದಿಂದ ಜು 10ರಂದು ನಿಧನರಾದರು.ಅವರಿಗೆ 80 ವರುಷ ವಯಸ್ಸಾಗಿತ್ತು.ಅವರು ದಾವೂದ್ ಸಅದಿ‌ ಸೇರಿದಂತೆ ಐದು ಗಂಡು ಹಾಗೂ ಆರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.(ವರದಿ : ಎಂ.ಎ.ಮುಸ್ತಫಾ ಬೆಳ್ಳಾರೆ)

“ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ” : ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ಸುಬ್ರಹ್ಮಣ್ಯದಲ್ಲಿ ಪರಿಸರ ಉಳಿಸಿ ಅಭಿಯಾನಕ್ಕೆ ಚಾಲನೆ

ಸುಬ್ರಹ್ಮಣ್ಯ ಜುಲೈ 11: ಜಸ್ಟಿಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಎ.ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ದೇರಳಕಟ್ಟೆ ಮಂಗಳೂರು ಇವರು ಸುಬ್ರಹ್ಮಣ್ಯದ ಸದಾನಂದ ವೈದ್ಯಕೀಯ ಮತ್ತು ದಂತ ಆರೋಗ್ಯ ಕೇಂದ್ರ, ಶ್ರೀ ಸುಬ್ರಹ್ಮಣ್ಯ ಮಠ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಸೀನಿಯರ್ ಚೇಂಬರ್, ಡಾl ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್, ಅರಣ್ಯ ಇಲಾಖೆ,...
Loading posts...

All posts loaded

No more posts

error: Content is protected !!