Ad Widget

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸುಬ್ರಹ್ಮಣ್ಯ ಶಾಲೆಗೆ ಪ್ರಿಂಟರ್ ಕೊಡುಗೆ

ಸುಬ್ರಹ್ಮಣ್ಯ ಜುಲೈ 23 : ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ ಇಲ್ಲಿಗೆ ಸ್ಕ್ಯಾನಿಂಗ್, ಜೆರಾಕ್ಸ್ ಹಾಗೂ ಪ್ರಿಂಟ್‌ ಗಳನ್ನು ಒಳಗೊಂಡ ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಸುಬ್ರಹ್ಮಣ್ಯದ ಬ್ಯಾಂಕ್ ಆಫ್ ಬರೋಡ ಶಾಖೆಯವರು ಪ್ರಿಂಟರ್ ನ ಪ್ರಾಯೋಜಕರಾಗಿದ್ದರು.ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ಜಯಪ್ರಕಾಶ್ ವಹಿಸಿದ್ದರು....

ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷರಾದ ಜಯಪ್ರಕಾಶ್ ಅವರಿಗೆ ಎಂ.ಪಿ.ಎಚ್.ಎಫ್ ಪದವಿ

ಸುಬ್ರಹ್ಮಣ್ಯ ಜುಲೈ 23 : ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ಜಯಪ್ರಕಾಶ್ ಅವರು ರೋಟರಿ ಅಂತರರಾಷ್ಟ್ರೀಯ ಸ್ಥಾಪಕರಾದ ಪೌಲ್ ಹ್ಯಾರಿಸ್ ಅವರ ನೆನಪಿನಲ್ಲಿ ನೀಡಲಾಗುವ ಎಂ.ಪಿ.ಎಚ್.ಎಫ್ ಪದವಿಯನ್ನು ಪಡೆದಿರುತ್ತಾರೆ. ಜಯಪ್ರಕಾಶ್ ಅವರು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪ್ರಾರಂಭದಿಂದ ಕಳೆದ 23 ವರ್ಷಗಳಲ್ಲಿ ಪ್ರಪ್ರಥಮವಾಗಿ ಎಂ.ಪಿ.ಎಚ್.ಎಫ್ ಪಡೆದವರಾಗಿದ್ದಾರೆ.ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ರಸಾಯನಶಾಸ್ತ್ರ ಉಪನ್ಯಾಸಕರಾಗಿರುವ...
Ad Widget

ಸೋಣಂಗೇರಿ :  ಶ್ರೀಕೃಷ್ಣ ಭಜನಾ ಮಂದಿರದ ನೂತನ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ

ಆಮಂತ್ರಣ ಬಿಡುಗಡೆ

ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂದಿರದ ನೂತನ ಮಂದಿದ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಆ.15 ರಿಂದ ಆ.18 ವರೆಗೆ ನಡೆಯಲಿದೆ.‌  ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ನಡೆಯಿತು. ಈ ಸಂದರ್ಭದಲ್ಲಿ ಮಂದಿರದ ಆಡಳಿತ ಸಮಿತಿಯ ಅಧ್ಯಕ್ಷರಾದ ಗಿರಿಧರ ಗೌಡ ನಾಯರ್ ಹಿತ್ಲು, ಉಪಾಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ, ಕಾರ್ಯದರ್ಶಿ ನಿರಂಜನ ಮಿತ್ತಮಜಲು, ಜೊತೆ ಕಾರ್ಯದರ್ಶಿ ಉದಯಕುಮಾರ್...

ಸುಬ್ರಹ್ಮಣ್ಯ : ಸರಕಾರಿ ಆಸ್ಪತ್ರೆಯ ಅಂಬ್ಯುಲೆನ್ಸ್ ಚಾಲಕ ನಾಪತ್ತೆ

ದೂರು ದಾಖಲು

ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ಆಂಬುಲೆನ್ಸ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಹೊನ್ನಪ್ಪ(52 ವರ್ಷ) ಎಂಬವರು ನಾಪತ್ತೆಯಾಗಿರುವ ಘಟನೆ ಚಿಂತೆಗೆ ಕಾರಣವಾಗಿದೆ. ಈ ಕುರಿತು ಅವರ ಪತ್ನಿ ಶ್ರೀಮತಿ ಪ್ರೇಮ(50) ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಪ್ರಕರಣ ಸಂಖ್ಯೆ 38/2025 ರಂತೆ ದೂರು ನೀಡಿದ್ದಾರೆ.ಜು.22 ರಂದು ಬೆಳಿಗ್ಗೆ ಸುಮಾರು 9.00 ಗಂಟೆಗೆ, ಹೊನ್ನಪ್ಪ ಅವರು ಕೆಲಸಕ್ಕೆ ಹೋಗುವಂತೆ...

ನಾಳೆಯಿಂದ(ಜು.23) ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಲಕ್ಷ್ಮೀನಾರಾಯಣ ಹೃದಯ ಹೋಮ

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಾಳೆಯಿಂದ 10 ದಿನಗಳ ಕಾಲ ನಿರಂತರವಾಗಿ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ ಹಾಗೂ ಅನ್ನದಾನ ಸೇವೆ ನಡೆಯಲಿರುವುದು.ಲಕ್ಷ್ಮೀನಾರಾಯಣ ಹೃದಯ ಎಂಬ ಪೌರಾಣಿಕ ಮಂತ್ರಗಳು ಅಥರ್ವಣ ರಹಸ್ಯದಲ್ಲಿ ಹೇಳಲ್ಪಟ್ಟಿದೆ. “ಶ್ರೇಷ್ಠವಾದ ಹಾಗೂ ಅತ್ಯಂತ ಶಕ್ತಿಯುತವಾದ ಜಪ ಹಾಗೂ ಹೋಮಗಳನ್ನು ನಾಳೆ ಬುಧವಾರದಿಂದ ಪ್ರಾರಂಭಗೊಂಡು ಆಗಸ್ಟ್...

ಕರಿಕೆ ಕಾಲೋನಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ರಚನೆ

ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಬನ್ನೂರುಪಟ್ಟೆ

ಉಪಾಧ್ಯಕ್ಷರಾಗಿ ಯಮುನಾ

ಕರಿಕೆ ಕಾಲೋನಿ ಶಾಲೆಯ 25-26ನೇ ಸಾಲಿನ ನೂತನ ಶಾಲಾಭಿವೃದ್ಧಿ ಸಮಿತಿಯನ್ನು ದಿನಾಂಕ ಜು.21ರಂದು ರಚನೆ ಮಾಡಲಾಯಿತು.ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಬನ್ನೂರುಪಟ್ಟೆ,ಉಪಾಧ್ಯಕ್ಷರಾಗಿ ಯಮುನಾಹಾಗೂ ಸದಸ್ಯರುಗಳಾಗಿ ಕುಸುಮಾವತಿ, ಕಲಾ, ಚಂದ್ರಿಕಾ, ವಿದ್ಯಾ, ಸೌಮ್ಯ, ಜಲಜಾಕ್ಷಿ, ಜನಾರ್ಧನ, ಶ್ರೀಜೇಶ್, ವಿಶ್ವನಾಥ, ಕೃಷ್ಣ ನಾಯ್ಕ್, ಶಿವಪ್ಪ, ರೇಖಾ, ಕಮಲಾಕ್ಷ, ಅನಿತಾ, ಇಂದಿರಾ, ಕುಶಾಲಪ್ಪ ಹಾಗೂ ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕರಾದ ಪ್ರಸನ್ನ ಕುಮಾರಿ,ಪದನಿಮಿತ್ತ...

ಸರಕಾರಿ ಶಾಲೆಯ ವಿದ್ಯಾರ್ಥಿನಿ ಅಕ್ಷಯ ಬಾಬ್ಲುಬೆಟ್ಟು ಯೋಗಾಸನದಲ್ಲಿ ವಿಶ್ವ ದಾಖಲೆ

ಯೋಗಾಸನದಲ್ಲಿ 07 ಕ್ಲಿಷ್ಟಕರ ಆಸನಗಳನ್ನು, ಒಂದೊಂದು ಆಸನವನ್ನು 03 ನಿಮಿಷ ಒಂದೇ ಸ್ಥಿತಿಯಲ್ಲಿ 21 ನಿಮಿಷ ನಿರಂತರ ಆಸನಗಳನ್ನು ಮಾಡುವ ಮೂಲಕ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ನಲ್ಲಿ ಅಕ್ಷಯ ಬಾಬ್ಲುಬೆಟ್ಟು(ಏನೆಕಲ್ಲು) ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಇವರು ಏನೇಕಲ್ಲು ನಿವಾಸಿ ಮೋಹನ್ ಕುಮಾರ್ ಮತ್ತು ಶ್ರೀಮತಿ ದಿವ್ಯ ಕುಮಾರಿರವರ ಪುತ್ರಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಏನೆಕಲ್ಲು...

“ಮಾನವನ ಅತಿಕ್ರಮಣವೇ ಪರಿಸರ ನಾಶಕ್ಕೆ ಕಾರಣ” : ದಿನೇಶ್ ಹೊಳ್ಳ

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಕ.ಸಾ.ಪ ವತಿಯಿಂದ ಪರಿಸರ ಜಾಗೃತಿಯಾನ – ಪರಿಸರ ಗೀತೆ ಗಾಯನ ಕಾರ್ಯಕ್ರಮ

"ಪಶ್ಚಿಮ ಘಟ್ಟಗಳಲ್ಲಿ ಬುಡಕಟ್ಟು ಸಮುದಾಯದ ಜನರು ಅರಣ್ಯವನ್ನು ರಕ್ಷಿಸುತ್ತಿದ್ದರು, ಅವರನ್ನು ಅಪರಾಧಿ ಭಾವನೆಯಿಂದ ಕಾಣಲಾಗುತ್ತಿದೆ. ಮಾನವನೇ ಕಾಡಿಗೆ ಹೋಗಿದ್ದಾನೆ ಹೊರತು ಪ್ರಾಣಿಗಳು ನಾಡಿಗೆ ಬಂದಿಲ್ಲ. ಆಧುನಿಕರಣದ ಭರಾಟೆಯಲ್ಲಿ ಪರಿಸರ ನಾಶ ಸಂಭವಿಸುತ್ತಿದ್ದು, ಇದು ವನ್ಯಜೀವಿಗಳ ಹಾಗೂ ಮಾನವನ ಭವಿಷ್ಯಕ್ಕೆ ಕುತ್ತು ತಂದಿದೆ. ಸಾಲುಮರದ ತಿಮ್ಮಕ್ಕ, ತುಳಸಿ ಗೌಡ, ಸುಕ್ರಿ ಬೊಮ್ಮ ಗೌಡ ಇನ್ನಿತರ ಸಿದ್ದಿ ಜನಾಂಗದ...

ಸುಳ್ಯ : ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಕ್ಯಾಂಪ್

ಸುಳ್ಯ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ತಾಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್ ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಜಂಟಿಯಾಗಿ ನಡೆಯಿತು. ಈ ವೇಳೆ ತಾಲೂಕು ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಎಂ.ಆರ್.ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಯು.ಆರ್.ಡಬ್ಲ್ಯೂ ಪ್ರವೀಣ್...

ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ

ಸುಬ್ರಾಯ ಸಂಪಾಜೆಯವರಿಗೆ ಸನ್ಮಾನ

“ಪತ್ರಕರ್ತರು ವೃತ್ತಿಯಲ್ಲಿ ಅಭಿವೃದ್ಧಿಯ ಸಿದ್ಧಾಂತದೊಂದಿಗೆ ಮುನ್ನಡೆಯಬೇಕು” – ಆರ್.ಸಿ ಭಟ್

“ಪತ್ರಕರ್ತರು ವೃತ್ತಿಯಲ್ಲಿ ಅಭಿವೃದ್ಧಿಯ ಸಿದ್ಧಾಂತದೊಂದಿಗೆ ಮುನ್ನಡೆಯಬೇಕು” ಎಂದು ವಿಜಯ ಕರ್ನಾಟಕ ದೈನಿಕದ ಹಿರಿಯ ಉಪ ಸಂಪಾದಕರಾದ ಆರ್.ಸಿ ಭಟ್ ಹೇಳಿದರು. ಅವರು ಸುಳ್ಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು. “ಹೆಚ್ಚಿನ ಜ್ಞಾನ ಪಡೆಯಲು ಪತ್ರಿಕೆಗಳು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಪುಸ್ತಕದ ಚೌಕಟ್ಟು ಮೀರಿ ಪತ್ರಿಕೆಗಳಿಂದ ಜ್ಞಾನ ಪಡೆಯಬಹುದು. ಪತ್ರಕರ್ತರು ವೃತ್ತಿಯಲ್ಲಿ...
Loading posts...

All posts loaded

No more posts

error: Content is protected !!