ಶೇ.100 ಫಲಿತಾಂಶ ಪಡೆದ ಗುತ್ತಿಗಾರು ಕಾಲೇಜಿಗೆ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಸನ್ಮಾನ

ಹಳ್ಳಿ ಪ್ರದೇಶಗಳಲ್ಲಿ ಅಪ್ಪಟ ಹಳ್ಳಿ ಪ್ರದೇಶದ ಮಕ್ಕಳಿಗೆ ಯಾವುದೇ ಖಾಸಗಿ ವಿದ್ಯಾಸಂಸ್ಥೆಗಳಿಗೆ ಕಡಿಮೆ ಇಲ್ಲದ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಕ್ರೀಡಾ ಕ್ಷೇತ್ರದಲ್ಲಿ ಕೂಡ ಸಾಧನೆ ತೊರೆಯುತ್ತಿರುವ ಸರಕಾರಿ ಕಾಲೇಜು ಗುತ್ತಿಗಾರಿನ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಶಿಕ್ಷಣ ಸಂಸ್ಥೆಯು‌ 2024-25ನೇ ಶೈಕ್ಷಣಿಕ ಸಾಲಿಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ...

“ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪಡೆದ ಶ್ರೀಮತಿ ಲಲಿತಾ ಕುಮಾರಿ ಅವರಿಗೆ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ

“ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪಡೆದ ಕೊಲ್ಲಮೊಗ್ರದ ಬೆಂಡೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲಲಿತಾ ಕುಮಾರಿ ಅವರಿಗೆ ಇಂದು(ಸೆ.14) ಕೊಲ್ಲಮೊಗ್ರದ ಮಯೂರ ಕಲಾಮಂದಿರದಲ್ಲಿ ನಡೆದ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಡಾ. ಸೋಮಶೇಖರ್ ಕಟ್ಟೆಮನೆ,...
Ad Widget

ಸೆ.15 : 500ನೇ  ಜಯಂತ್ಯೋತ್ಸವದ ಹಿನ್ನೆಲೆಯಲ್ಲಿ ವೀರ ರಾಣಿ ಅಬ್ಬಕ್ಕ ರಥಯಾತ್ರೆ ಸುಳ್ಯಕ್ಕೆ – ಹೆಚ್ಚಿನ ಸಂಖ್ಯೆಯಲ್ಲಿ ಸ್ವಾಗತಿಸುವಂತೆ ವೆಂಕಟ್ ವಳಲಂಬೆ ಮನವಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಇದರ ನೇತೃತ್ವದಲ್ಲಿ ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಅಬ್ಬಕ್ಕ ಅವರ 500ನೇ  ಜಯಂತ್ಯೋತ್ಸವ ಪ್ರಯುಕ್ತ  ರಥಯಾತ್ರೆ ಆರಂಭಗೊಂಡಿದೆ. ರಥಯಾತ್ರೆಯು ಸೆ.15 ರಂದು ಸಂಜೆ 6 ಗಂಟೆಗೆ ಸುಳ್ಯದ ಗಾಂಧಿನಗರಕ್ಕೆ ಆಗಮಿಸಲಿದೆ. ದೇಶಾಭಿಮಾನಿಗಳು, ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸ್ವಾಗತಿಸಲು ತಿರ್ಮಾನಿಸಲಾಗಿದ್ದು, ಬಳಿಕ  ಪಂಜಿನ...

ಸುಳ್ಯ : ವೆಂಕಟರಮಣ ಸೊಸೈಟಿ ಮಹಾಸಭೆ – 2.28 ಕೋಟಿ ರೂ. ಲಾಭ – 15 ಶೇ. ಡಿವಿಡೆಂಡ್ ಘೋಷಣೆ

ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಇದರ ಮಹಾಸಭೆ ಸೆ.14 ರಂದು ಸಂಘದ ಅಧ್ಯಕ್ಷರಾದ ಕೆ.ಸಿ.ಸದಾನಂದ  ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು “ನಮ್ಮ ಸಂಘವು ವಾರ್ಷಿಕ ಉತ್ತಮ ವ್ಯವಹಾರ ನಡೆಸಿದ್ದು 2.28 ಲಕ್ಷ ಲಾಭಾಂಶ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.15% ಡಿವಿಡೆಂಡ್ ನೀಡುವುದು” ಎಂದು ಘೋಷಿಸಿದರು.‌ ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ, ಸ್ಥಾಪಕಾಧ್ಯಕ್ಷ,...

ತಾಲೂಕಿನ ಪಶು ಆಸ್ಪತ್ರೆ ಮತ್ತು ಪಶು ಚಿಕಿತ್ಸಾಲಯ ಗಳಲ್ಲಿ ರೇಬಿಸ್ ರೋಗನಿರೋಧಕ ಲಸಿಕೆ ಉಚಿತವಾಗಿ ಲಭ್ಯ

ತಾಲೂಕಿನ ಪಶು ಆಸ್ಪತ್ರೆ ಸುಳ್ಯ ಹಾಗೂ ಬೆಳ್ಳಾರೆ, ಗುತ್ತಿಗಾರು ಮತ್ತು ಕಳಂಜ ಪಶು ಚಿಕಿತ್ಸಾಲಯಗಳಲ್ಲಿ ದಿನಾಂಕ 16.9.2025 ರಿಂದ ಹುಚ್ಚುನಾಯಿ ರೋಗ(ರೇಬಿಸ್) ನಿರೋಧಕ ಲಸಿಕೆಯು ಉಚಿತವಾಗಿ ಲಭ್ಯವಿದ್ದು ಎಲ್ಲಾ ನಾಯಿ ಮತ್ತು ಬೆಕ್ಕುಗಳ ಮಾಲೀಕರು ಕೆಲಸದ ವೇಳೆಯಲ್ಲಿ ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸಂಪರ್ಕಿಸಿ ತಮ್ಮ ಸಾಕುಪ್ರಾಣಿಗಳಿಗೆ ಉಚಿತವಾಗಿ ಲಸಿಕೆ ಪಡೆದುಕೊಳ್ಳುವಂತೆ ಪಶುಸಂಗೋಪನಾ ಇಲಾಖೆಯ ಪ್ರಕಟಣೆಯಲ್ಲಿ ಸಹಾಯಕ...

ಕುಕ್ಕಂದೂರು ಶ್ರೀಕಿನ್ನಿಮಾಣಿ – ಪೂಮಾಣಿ ದೈವಸ್ಥಾನದ ನೂತನ ಪದಾಧಿಕಾರಿಗಳ ಆಯ್ಕೆ

ಜಾಲ್ಸೂರು ಗ್ರಾಮದ ಕುಕ್ಕಂದೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ಇದರ ಕಿನ್ನಿಮಾಣಿ ಪೂಮಾಣಿ ಸೇವಾ ಸಮಿತಿಯ 2025-26 ನೇ ಸಾಲಿನ ಸಭೆಯು ಆ.31ರಂದು ನಡೆಯಿತು.ಸಭೆಯಲ್ಲಿ ನೂತನ ಸೇವಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ದೈವಸ್ಥಾನದ ಆಡಳಿತ ಮೊಕ್ತೇಸರರಾದ ಬಾಲಕೃಷ್ಣ ಗೌಡ ನಡುಬೆಟ್ಟು, ಪ್ರಧಾನ ಅರ್ಚಕರಾದ ಸುಭಾಶ್ ರೈ ಕುಕ್ಕಂದೂರು ಮತ್ತು ಊರಿನವರು ಉಪಸ್ಥಿತರಿದ್ದರು.ನೂತನ ಸಮಿತಿಯಗೌರವ ಅಧ್ಯಕ್ಷರಾಗಿ...

ಮಲ್ಲಾರ ರಸ್ತೆಯಲ್ಲಿ ಹಾಡಹಗಲೇ ಕಾಡಾನೆ ಪ್ರತ್ಯಕ್ಷ

Advertisement : ಕಾರ್ಯಕ್ರಮಗಳ ನೇರಪ್ರಸಾರ ಮಾಡಲು ಸಂಪರ್ಕಿಸಿ - ವಿವಿಧ ಸಾಂಸ್ಕೃತಿಕ, ನೇಮೋತ್ಸವ, ಜಾತ್ರೋತ್ಸವ, ಕ್ರೀಡೋತ್ಸವ ಹಾಗೂ ಸಭೆ-ಸಮಾರಂಭಗಳನ್ನು ನೇರಪ್ರಸಾರ ಮಾಡಲು ನಮ್ಮನ್ನು ಸಂಪರ್ಕಿಸಿ : 9449387044 | 9980085616ಹರಿಹರ ಪಳ್ಳತ್ತಡ್ಕ ಹಾಗೂ ನಡುಗಲ್ಲು ಮುಖ್ಯ ರಸ್ತೆಯ ಮಧ್ಯೆ ಸಿಗುವ ಮಲ್ಲಾರ ಎಂಬಲ್ಲಿ ಇದೀಗ ಸಂಜೆ 4:30ರ ಸುಮಾರಿಗೆ ಕಾಡಾನೆಯೊಂದು ರಸ್ತೆ ದಾಟಿದೆ ಎಂದು ತಿಳಿದುಬಂದಿದ್ದು,...

ಗುತ್ತಿಗಾರು : ಕಾಳುಮೆಣಸು ಹಾಗೂ ಕಾಫಿ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ

(ಚಿತ್ರ : ಪ್ರಕೃತಿ ಗುತ್ತಿಗಾರು) ತೋಟಗಾರಿಕೆ ಇಲಾಖೆ ಸುಳ್ಯ ಇದರ ವತಿಯಿಂದ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ ಸಹಯೋಗದೊಂದಿಗೆ 2025-26ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆಯಡಿ ಕಾಳುಮೆಣಸು ಹಾಗೂ ಕಾಫಿ ಬೇಸಾಯ ಬಗ್ಗೆ ಮಾಹಿತಿ ಕಾರ್ಯಕ್ರಮ ಸೆ.12 ರಂದು  ಗುತ್ತಿಗಾರಿನ ಪ್ರಾ.ಕೃ.ಪ.ಸ. ಸಂಘದ ದೀನ್ ದಯಾಳ್ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾ.ಕೃ.ಪ.ಸ.ಸಂಘದ...

“ಪ್ರಥಮ ಚಿಕಿತ್ಸೆ ತಿಳುವಳಿಕಾ ದಿನ” ಸೆಪ್ಟೆಂಬರ್-13 ; ✍️ಡಾ|| ಮುರಲೀ ಮೋಹನ್ ಚೂಂತಾರು

ಯಾವುದೇ ರೀತಿಯ ಗಾಯ ಅಥವಾ ಅಪಘಾತಗಳಾದಾಗ ತಕ್ಷಣವೇ ಘಾಸಿಗೊಳಗಾದವರಿಗೆ ನೀಡುವ ಪ್ರಾಥಮಿಕವಾದ ಸಹಾಯವನ್ನು ಪ್ರಥಮ ಚಿಕಿತ್ಸೆ ಎನ್ನಲಾಗುತ್ತದೆ.  ಇದಕ್ಕೆ ವಿಶೇಷವಾದ ತರಬೇತಿ ಅಥವಾ ಪೂರ್ವ ತಯಾರಿ ಅಗತ್ಯವಿಲ್ಲ.  ಸಾಮಾನ್ಯ ಜ್ಞಾನವನ್ನು ಬಳಸಿಕೊಂಡು ಆ ಕ್ಷಣದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ರೋಗಿಯ ಪ್ರಾಣವನ್ನು ರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತದೆ.  ವೈದ್ಯರ ಲಭ್ಯತೆ ಸಿಗುವವರೆಗೆ ಅಥವಾ ಸುಸಜ್ಜಿತವಾದ ಆಸ್ಪತ್ರೆ ತಲುಪುವವರೆಗೆ...

ಕೊಲ್ಲಮೊಗ್ರ : ನಿವೃತ್ತ ಅಂಗನವಾಡಿ ಸಹಾಯಕಿ ಮುತ್ತಮ್ಮ ಕುಚ್ಚಾಲ ನಿಧನ

ಕಲ್ಮಕಾರು ಗ್ರಾಮದ ಗಡಿಕಲ್ಲು ನಿವಾಸಿ ನಿವೃತ್ತ ಅಂಗನವಾಡಿ ಸಹಾಯಕಿ ಮುತ್ತಮ್ಮ ಕುಚ್ಚಾಲ ರವರು ಸೆ.12 ರಂದು ನಿಧನರಾದರು.ಮೃತರಿಗೆ 92 ವರ್ಷ ವಯಸ್ಸಾಗಿತ್ತು.1984 ರಿಂದ 2011 ರವರೆಗೆ ಸುಮಾರು ಸುಧೀರ್ಘ 27 ವರ್ಷಗಳ ಕಾಲ ಕೊಲ್ಲಮೊಗ್ರು ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ 2011 ರಲ್ಲಿ ನಿವೃತ್ತರಾಗಿದ್ದ ಇವರು ಪುಟಾಣಿ ಮಕ್ಕಳ ಪ್ರೀತಿಗೆ ಪಾತ್ರರಾಗಿದ್ದರು.ಮೃತರು ಪುತ್ರರಾದ...
Loading posts...

All posts loaded

No more posts

error: Content is protected !!