Ad Widget

ಸುಳ್ಯ : ಕಾಫಿ ಬೆಳೆಗೆ ಪ್ರೋತ್ಸಾಹ ನೀಡುವ “ಕಾಪಿಕೊ” ಕಾರ್ಯಗಾರ ಉದ್ಘಾಟಿಸಿದ ಸಂಸದ ಬ್ರಿಜೇಶ್ ಚೌಟ

https://youtu.be/rLTT0umkzRc?si=J4QvNec2i5KJKm_0 ಅಡಿಕೆ ಬೆಳೆಗೆ ಹಳದಿ ರೋಗ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕಾಫಿ ಬೆಳೆಗೆ ಉತ್ತೇಜನ ನೀಡಲು "ಕಾಪಿಕೊ ಕಾರ್ಯಗಾರ" ಹಮ್ಮಿಕೊಳ್ಳಲಾಗಿದ್ದು, ಆ.25 ರಂದು ಸುಳ್ಯದ ಸಿಎ ಬ್ಯಾಂಕ್ ನ ಎ.ಎಸ್.ವಿಜಯಕುಮಾರ್ ಸಭಾಭವನದಲ್ಲಿ ಅಯೋಜನೆಗೊಂಡ ಕಾರ್ಯಕ್ರಮವು ದ.ಕ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ದೀಪ ಬೆಳಗಿಸಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್...

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರಂತರವಾಗಿ ಮುಂದುವರಿದ ಸ್ವಚ್ಛತಾ ಕಾರ್ಯ

ಸುಬ್ರಹ್ಮಣ್ಯ ಆಗಸ್ಟ್ 24 : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಾ.ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನವರು ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನವರ ಸಹಯೋಗದೊಂದಿಗೆ ನಿರಂತರವಾಗಿ ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡಿದ್ದು, ರಾಜ್ಯದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಮುಜರಾಯಿ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದರೂ ಪಕ್ಕದ ಪರಿಸರದಲ್ಲಿ, ಮಾರ್ಗದ ಬದಿ,...
Ad Widget

“ಅಮರ ಸುದ್ದಿ ವಿಶೇಷ ವರದಿ”

ಕೃಷಿ ತೋಟಗಳಿಗೆ ಆನೆ ಹಾಗೂ ಇತರೆ ಕಾಡುಪ್ರಾಣಿಗಳ ನಿರಂತರ ದಾಳಿಯಿಂದ ಕಂಗೆಟ್ಟಿರುವ ಸುಳ್ಯ ತಾಲೂಕಿನ ಕೃಷಿಕರು

ಒಂದೆಡೆ ಅಡಿಕೆಗೆ ಹಳದಿ ಎಲೆಚುಕ್ಕೆ ರೋಗವಾದರೆ ಇನ್ನೊಂದೆಡೆ ಕೃಷಿ ತೋಟಗಳಿಗೆ ಕಾಡುಪ್ರಾಣಿಗಳ ನಿರಂತರ ದಾಳಿ ; “ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ” ಎಂಬಂತಾಗಿದೆ ತಾಲೂಕಿನ ಕೃಷಿಕರ ಪರಿಸ್ಥಿತಿ

✍️ಉಲ್ಲಾಸ್ ಕಜ್ಜೋಡಿ

“ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ” ಎಂಬ ಗಾದೆ ಮಾತಿದೆ. ಇಂದು ಈ ಗಾದೆಮಾತು ಅದೇಕೋ ಅಡಿಕೆ ಬೆಳೆಯನ್ನು ಮುಖ್ಯ ಬೆಳೆಯನ್ನಾಗಿ ಹಾಗೂ ತೆಂಗು, ಬಾಳೆ, ಕಾಳುಮೆಣಸು, ಕೊಕ್ಕೊ ಹಾಗೂ ರಬ್ಬರ್ ಸೇರಿದಂತೆ ಇನ್ನಿತರ ಕೆಲವು ಬೆಳೆಗಳನ್ನು ಉಪಬೆಳೆಗಳಾಗಿ ಬೆಳೆಯುತ್ತಿರುವ, ಇದರಿಂದಲೇ ತಮ್ಮ ಬದುಕನ್ನು ನಡೆಸುತ್ತಿರುವ ಸುಳ್ಯ ತಾಲೂಕಿನ ಕೃಷಿಕರ ಬದುಕಿನಲ್ಲಿ ನಿಜವಾಗುತ್ತಿದೆ ಎಂದೆನಿಸುತ್ತಿದೆ. ಏಕೆಂದರೆ...

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಕುಲ್ಕುಂದ ಬಸ್ ನಿಲ್ದಾಣ ಸ್ವಚ್ಚತಾ ಕಾರ್ಯ

ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಕುಲ್ಕುಂದದ ರೇಂಜ್ ಫಾರೆಸ್ಟ್ ಆಫೀಸ್ ಮುಂಬಾಗದಲ್ಲಿರುವ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಲಾಯಿತು.ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ| ವಿಮಲಾ ರಂಗಯ್ಯ ಎಂ.ಜೆ.ಎಫ್, ಕಾರ್ಯದರ್ಶಿ ಲ| ಗಾಯತ್ರಿ ಕೃಷ್ಣ, ಖಜಾಂಜಿ ಲ| ಭಾರತಿ ದಿನೇಶ್, ಪ್ರದೇಶ 8 ರ ಅಧ್ಯಕ್ಷರಾದ ಲ| ಪ್ರೋ. ರಂಗಯ್ಯ ಶೆಟ್ಟಿಗಾರ್ ಪಿ.ಎಂ.ಜೆ.ಎಫ್, ಡಿ.ಸಿ ಗ್ರಾಮೀಣ...

ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ಗುತ್ತಿಗಾರು ಪ.ಪೂ ಕಾಲೇಜಿನ ಬಾಲಕಿಯರ ತಂಡ ಚಾಂಪಿಯನ್

ಮುಂಗಾರು ವಾಲಿಬಾಲ್ ಅಕಾಡೆಮಿ(ರಿ.) ಸುಳ್ಯ ಹಾಗೂ ಗ್ರಿನ್ ವ್ಯೂ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಒಂದನೇ ತರಗತಿಯಿಂದ ಪಿಯುಸಿ ವಿಭಾಗದ ವಿದ್ಯಾರ್ಥಿಗಳ ವಾಲಿಬಾಲ್ ಚಾಂಪಿಯನ್ ಶಿಪ್ ನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಬಾಲಕಿಯರ ತಂಡ ಚಾಂಪಿಯನ್ ಆಗಿ ಹಾಗೂ ಬಾಲಕರ ತಂಡ ರನ್ನರ್ ಆಗಿ ಹೊರಹೊಮ್ಮಿದೆ.

ಉಬರಡ್ಕ ಸೊಸೈಟಿ ಮಹಾಸಭೆ : 162 ಕೋಟಿ ವ್ಯವಹಾರ – ರೂ. 79.24 ಲಕ್ಷ ಲಾಭ – ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಣೆ

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯು ಆ.24ರಂದು ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಭವನದಲ್ಲಿ ನಡೆಯಿತು.ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ಅಧ್ಯಕ್ಷತೆ ವಹಿಸಿ ಎಲ್ಲರನ್ನೂ ಸ್ವಾಗತಿಸಿ, ಸಂಘವೂ 162 ಕೋಟಿ ವ್ಯವಹಾರ ಹೊಂದಿದ್ದು, ರೂ. 79.24 ಲಕ್ಷ ಲಾಭ ಹೊಂದಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು....

ಪಂಜ : ಗಣೇಶೋತ್ಸವದ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮ ಉದ್ಘಾಟನೆ

ಪಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಗಣೇಶೋತ್ಸವ ಕಾರ್ಯಕ್ರಮ ಆ.27 ರಿಂದ ಆ.29 ತನಕ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ವಿಜೃಂಭಣೆಯಿಂದ ಜರುಗಲಿದ್ದು, ಅದರ ಅಂಗವಾಗಿ ಆ.24ರಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಚಿತ್ರಕಲಾ ಮತ್ತು ಕಸದಿಂದ ರಸ ಸ್ಪರ್ಧೆ, ಕೇರಂ ಮತ್ತು ಚೆನ್ನೆಮಣೆ-ಸ್ಪರ್ಧೆ ನಡೆಯಿತು.ಕಲ್ಮಡ್ಕ...

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ – ಶೇ.12 ಡಿವಿಡೆಂಡ್ ಘೋಷಣೆ

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಪ್ರಧಾನ ಕಛೇರಿಯ ಎ.ಎಸ್ ವಿಜಯಕುಮಾರ್ ಸಭಾಭವನದಲ್ಲಿ ಜರಗಿತು. ವರದಿ ವಾಚನದ ಬಳಿಕ ಸದಸ್ಯರಾದ ಜಯರಾಮ ಮುಂಡೋಳಿಮೂಲೆ ಮಾತನಾಡಿ ಕೃಷಿಕ ಸದಸ್ಯರಿಂದ ಅಲ್ಪ ಮೊತ್ತ ಪಡೆದು ಅಧ್ಯಯನ ಪ್ರವಾಸ  ಏರ್ಪಡಿಸಲು ಸಲಹೆ ನೀಡಿದರು. ವಿವಿಧ ಚರ್ಚೆಗಳು ನಡೆದು ಅಜ್ಜಾವರ ಗ್ರಾಮಕ್ಕೆ 2 ಎಕರೆ ಭೂಮಿ...

ಹರಿಹರ ಪಳ್ಳತ್ತಡ್ಕ : ಆ.26 ರಂದು “ಮೊಸರು ಕುಡಿಕೆ ಉತ್ಸವ”

(ವರದಿ : ಉಲ್ಲಾಸ್ ಕಜ್ಜೋಡಿ) ಶಿವಹರಿ ಆಟೋ ಚಾಲಕ-ಮಾಲಕರ ಸಂಘ(ರಿ.) ಹರಿಹರ ಪಳ್ಳತ್ತಡ್ಕ ಹಾಗೂ ಫ್ರೆಂಡ್ಸ್ ಹರಿಹರ ಪಳ್ಳತ್ತಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ.26 ಮಂಗಳವಾರದಂದು ಹರಿಹರ ಪಳ್ಳತ್ತಡ್ಕ ಪೇಟೆಯಲ್ಲಿ ಬೆಳಿಗ್ಗೆ 10:00 ಗಂಟೆಯಿಂದ “ಮೊಸರು ಕುಡಿಕೆ ಉತ್ಸವ”ವು ವಿವಿಧ ಸ್ಪರ್ಧೆಗಳೊಂದಿಗೆ ನಡೆಯಲಿದ್ದು, ಸಾರ್ವಜನಿಕ ಪುರುಷರಿಗೆ ಎಣ್ಣೆಗಂಬ ಏರುವಿಕೆ, ಅಡ್ಡ ಎಣ್ಣೆಗಂಬ...

ಆ.27 & 28 ರಂದು ವಳಲಂಬೆಯಲ್ಲಿ  ಗಣೇಶೋತ್ಸವ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 22 ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಆ.27 ಮತ್ತು 28 ರಂದು ನಡೆಯಲಿದೆ. ಆ.27 ಬುಧವಾರ ಬೆಳಿಗ್ಗೆ 9 ಗಂಟೆಗೆ ಗಣಪತಿ ಪ್ರತಿಷ್ಠೆ, ನಂತರ ಸಾರ್ವಜನಿಕ ಗಣಪತಿ ಹವನ, ಗಂಟೆ 10 ರಿಂದ ಅಕ್ಷರಾಭ್ಯಾಸ ಮತ್ತು ಮಕ್ಕಳಿಗೆ ಕಿವಿ ಚುಚ್ಚುವ ಕಾರ್ಯಕ್ರಮ...
Loading posts...

All posts loaded

No more posts

error: Content is protected !!