ಐನೆಕಿದು : ಕೂಜುಗೋಡಿನಲ್ಲಿ ತೋಟಗಳಿಗೆ ಆನೆ ದಾಳಿ ; ಕಂಗು, ತೆಂಗು ಹಾಗೂ ಬಾಳೆ ಕೃಷಿಗೆ ಹಾನಿ-ನಷ್ಟ

ಕಡಬ ತಾಲೂಕಿನ ಐನೆಕಿದು ಗ್ರಾಮದ ಜಯಪ್ರಕಾಶ್ ಕೂಜುಗೋಡು ಹಾಗೂ ಸುರೇಶ್ ಕೂಜುಗೋಡು ರವರ ತೋಟಗಳಿಗೆ ಆನೆ ದಾಳಿ ನಡೆಸಿದೆ ಎಂದು ತಿಳಿದುಬಂದಿದ್ದು, ಡಿ.18 ರಂದು ರಾತ್ರಿ ಜಯಪ್ರಕಾಶ್ ಕೂಜುಗೋಡು ರವರ ತೋಟಕ್ಕೆ ಹಾಗೂ ಡಿ.19 ರಂದು ಸುರೇಶ್ ಕೂಜುಗೋಡು ರವರ ತೋಟಕ್ಕೆ ದಾಳಿ ನಡೆಸಿದ ಆನೆ ಕಂಗು, ತೆಂಗು ಹಾಗೂ ಬಾಳೆ ಕೃಷಿಯನ್ನು ನಾಶಪಡಿಸಿದೆ.ಈ ಸಂದರ್ಭದಲ್ಲಿ...

ಡಿ.20 ರಿಂದ ಜ.04 ರವರೆಗೆ ಪುತ್ತೂರಿನ ಜಿ‌.ಎಲ್ ಒನ್ ಮಾಲ್ ನಲ್ಲಿ “ಜಿ.ಎಲ್ ಉತ್ಸವ” ಹಾಗೂ “ಫುಡ್ ಫೆಸ್ಟಿವಲ್” ; ಚಳಿಗಾಲವನ್ನು ಬೆಚ್ಚಗಾಗಿಸಲು “ಶಾಪಿಂಗ್ ಸಂಭ್ರಮ” ವಿಶೇಷ ಕೊಡುಗೆಗಳು, ಕೂಪನ್ ಗಳು ಹಾಗೂ ಖಚಿತ ಬಹುಮಾನಗಳು ; ವೀಕೆಂಡ್ ಅನ್ನು ಸ್ಪೆಷಲ್ ಆಗಿಸಲು “ಸಾಂಸ್ಕೃತಿಕ ಕಾರ್ಯಕ್ರಮಗಳು, ಫ್ಯಾಷನ್ ಷೋ” ಹಾಗೂ “ಚಿತ್ರಕಲಾ ಸ್ಪರ್ಧೆ”

ಪುತ್ತೂರಿನ ಪ್ರತಿಷ್ಠಿತ ಜಿ.ಎಲ್ ಒನ್ ಮಾಲ್ ನಲ್ಲಿ ಡಿ.20 ರಿಂದ ಜ.04 ರವರೆಗೆ “ಜಿ.ಎಲ್ ಮಾಲ್ ಉತ್ಸವ” ಶಾಪಿಂಗ್ ಸಂಭ್ರಮವು ಗ್ರಾಹಕರ ಚಳಿಗಾಲವನ್ನು ಬೆಚ್ಚಗಾಗಿಸಲು ಆಕರ್ಷಕ “ಫುಡ್ ಫೆಸ್ಟಿವಲ್” ನೊಂದಿಗೆ ಬಹಳ ಅದ್ದೂರಿಯಾಗಿ ನಡೆಯಲಿದ್ದು, ವಿಶೇಷ ಆಕರ್ಷಣೆಯಾಗಿ ರೀಲ್ಸ್ ಚಾಲೆಂಜ್, ಎಲ್ಲಾ ಮಳಿಗೆಗಳಲ್ಲಿ ವಿಶೇಷ ಕೊಡುಗೆಗಳು, ಶಾಪಿಂಗ್ ಕೂಪನ್ ಗಳು ಹಾಗೂ ಖಚಿತ ಬಹುಮಾನಗಳು ಇರಲಿವೆ....
Ad Widget

ಸಮಸ್ತ 100ನೇ ವಾರ್ಷಿಕ ಮಹಾ ಸಮ್ಮೇಳನ ಪ್ರಚಾರಾರ್ಥ ಅರಂತೋಡು ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ದ್ವಜದಿನ ಆಚರಣೆ

ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ವತಿಯಿಂದ ಆದರ್ಶ ಪರಿಶುದ್ಧತೆ ಶತಮಾನಗಳಿಂದ ಎಂಬ ಧ್ಯೇಯವಾಕ್ಯದೊಂದಿಗೆ ಸಮಸ್ತ 100ನೇ ವಾರ್ಷಿಕ ಪ್ರಚಾರ ಸಮ್ಮೇಳನಾರ್ಥ ಧ್ವಜ ದಿನವನ್ನು ಆಚರಿಸಲಾಯಿತು. ದ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ನೆರವೇರಿಸಿದರು. ಬದ್ರಿಯಾ ಜುಮಾ  ಮಸೀದಿಯ ಖತೀಬರಾದ ಇಸ್ಮಾಯಿಲ್ ಫೈಝಿ ಗಟ್ಟಮನೆ ಸಂದೇಶ ಭಾಷಣ ಮಾಡಿದರು. ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಕಾರ್ಯದರ್ಶಿ ಕೆ.ಎಂ...

ಕೆ.ವಿ.ಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಕ್ಯಾಲೆಂಡರ್ ಬಿಡುಗಡೆ

ಕೆ.ವಿ.ಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 2026ನೇ ವರುಷದ ಕ್ಯಾಲೆಂಡರ್‌ನ್ನು  ಸಂಘದ ಸ್ಥಾಪಕಾಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್ ಕೆ.ವಿ.ಯವರು ಡಿಸೆಂಬರ್ 18ರಂದು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ವಸಂತ ಕಿರಿಭಾಗ, ನಿರ್ದೆಶಕರುಗಳಾದ  ಯಶೋಧ ರಾಮಚಂದ್ರ, ಮಾಧವ ಬಿ.ಟಿ, ಕಮಲಾಕ್ಷ ನಂಗಾರು, ಡಾ. ಮನೋಜ್ ಕುಮಾರ್, ದಿನೇಶ್ ಮಡ್ತಿಲ, ಭವಾನಿಶಂಕರ ಅಡ್ತಲೆ, ದಯಾನಂದ ಅಟ್ಲೂರು,...

“ಸ್ವದೇಶಿ ಬಳಸಿ-ದೇಶ ಬೆಳೆಸಿ” ಸ್ವದೇಶಿ ಜಾಗೃತಿ ಜಾಗರಣ ಸೈಕ್ಲಿಂಗ್ ಅಭಿಯಾನಕ್ಕೆ ಅರಂತೋಡಿನಲ್ಲಿ ಸ್ವಾಗತ

“ಸ್ವದೇಶಿ ಬಳಸಿ ದೇಶ ಬೆಳೆಸಿ” ಎಂಬ ಘೋಷ ವಾಕ್ಯದಡಿ, ಸಾಪ್ಟವೇರ್ ಉತ್ಪನ್ನಗಳಿಂದ ಹಿಡಿದು ನಿತ್ಯ ಉಪಯೋಗಿಸುವ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ದೇಶದ ಆರ್ಥಿಕತೆಯನ್ನು ಬಳಪಡಿಸುವ ಉದ್ದೇಶದಿಂದ ಬೆಂಗಳೂರಿನ ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಜಿ ಸೇನಾಧಿಕಾರಿ ಬ್ರಿಗೇಡಿಯರ್ ರವಿ ಮುನಿಸ್ವಾಮಿ ನೇತ್ರತ್ವದಲ್ಲಿ ನಡೆಯುತ್ತಿರುವ ಸ್ವದೇಶಿ ಜಾಗರಣ ಸೈಕೆಲಿಂಗ್ ಅಭಿಯಾನ ಬುಧವಾರ ಸುಳ್ಯ...

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಂಥಾಲಯ ಮೇಲ್ವಿಚಾರಕರಿಂದ ಜಿಲ್ಲಾ ಪಂಚಾಯತ್ ಸಿಒಇ ಗೆ ಮನವಿ

ಗ್ರಾಮ ಪಂಚಾಯತ್ ಗ್ರಂಥಾಲಯ, ಅರಿವು ಕೇಂದ್ರ ಮೇಲ್ವಿಚಾರಕರಿಗೆ ವೇತನ ವಾವತಿಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ, ವೇತನವನ್ನು ಸಕಾಲಿಕವಾಗಿ ಪಾವತಿಸುವ  ಬಗ್ಗೆ ಮತ್ತು ಪಿ.ಎಫ್, ಇ.ಎಸ್.ಐ ಸೌಲಭ್ಯ ಒದಗಿಸಿಕೊಡುವ ಬಗ್ಗೆ ಮೇಲ್ವಿಚಾರಕರು  ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿನಾಯಕ್ ನರ್ವಡೆ IAS ಅವರಿಗೆ ಡಿ.18 ರಂದು  ಮನವಿ ನೀಡಿ ಒತ್ತಾಯಿಸಿದ್ದಾರೆ. ದ.ಕ ಜಿಲ್ಲೆಯ ಗ್ರಾಮ ಪಂಚಾಯತ್ ಗ್ರಂಥಾಲಯ, ಅರಿವು ಕೇಂದ್ರ ಮೇಲ್ವಿಚಾರಕರಿಗೆ...

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಬಾಬು ಗೌಡ.ಬಿ ಕಡೆಂಗ ಆಯ್ಕೆ

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ರಚನೆ ಇತ್ತೀಚೆಗೆ ನಡೆದಿದ್ದು, ಡಿ.17 ರಂದು ಪ್ರಥಮ ಸಭೆ ನಡೆಯಿತು.ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಬಾಬು ಗೌಡ.ಬಿ ಕಡೆಂಗ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಅರ್ಚಕ ರಾಜೇಂದ್ರ ಪ್ರಸಾದ್ ಮೂಡಿತ್ತಾಯ, ದಿನೇಶ್‌ ಕೋಲ್ಟಾರು, ರಾಧಾಕೃಷ್ಣ ಕೋಲ್ಚಾರು, ಪ್ರಸಾದ್ ಕುಮಾರ್ ನಾಗಪಟ್ಟಣ, ಶ್ರೀಮತಿ ಜಯಲಕ್ಷ್ಮಿ...

ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ – ಡಿ.23ರಂದು ಮಂಗಳೂರಿನಲ್ಲಿ  ಜಿಲ್ಲಾ ಗ್ಯಾರಂಟಿ ಸಮಾವೇಶ

ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಸುಳ್ಯ ತಾಲೂಕು ಮಟ್ಟದ ಯೋಜನಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಇಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಗೃಹಲಕ್ಷ್ಮಿ ಯೋಜನೆಯ ಪ್ರಗತಿ ಪರಿಶೀಲಿಸಿ ನವೆಂಬರ್ ತಿಂಗಳ ಸಭೆಯ ವಿಷಯಗಳ ಬಗ್ಗೆ ಕೈಗೊಂಡಿರುವ ಕ್ರಮಗಳ ಪಾಲನಾ ವರದಿಯನ್ನು ಸಭೆಯಲ್ಲಿ ಚರ್ಚಿಸಲಾಯಿತು....

ಹನುಮಗಿರಿ ಮೇಳದ ಪ್ರಧಾನ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆಯವರಿಗೆ ಗೌರವಾರ್ಪಣೆ

ಕುಕ್ಕೆ ಸುಬ್ರಹ್ಮಣ್ಯ : ಕುಕ್ಕೆ ದೇವಳದ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದ ನೂತನ ಸಭಾಭವನದಲ್ಲಿ  ಹನುಮನಗಿರಿಮೇಳದವರಿಂದ ಈ ವರ್ಷದ ನೂತನ ಪ್ರಸಂಗ “ವರ್ಣಪಲ್ಲಟ” ಯಕ್ಷಗಾನ  ಬಯಲಾಟ ಜರಗಿತು.ಈ ಸಂದರ್ಭದಲ್ಲಿ ಹನುಮಗಿರಿ ಮೇಳದ ಪ್ರಧಾನ ಭಾಗವತರಾದ ಶ್ರೀ ರವಿಚಂದ್ರ  ಕನ್ನಡಿಕಟ್ಟೆಯವರನ್ನು    ಸುಬ್ರಹ್ಮಣ್ಯದ ಯಕ್ಷ ಮಿತ್ರರ ಪರವಾಗಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪುರೋಹಿತರಾದ ಶಂಕರ ಭಟ್, ರವೀಂದ್ರ ಭಟ್, ಉದ್ಯಮಿ ರವೀಂದ್ರ,...

ಕೊಲ್ಲಮೊಗ್ರು : ಅಪಹರಣಕ್ಕೆ ಯತ್ನ ಸಂಚಿನ ವದಂತಿ ಸುಖಾಂತ್ಯ –  ಸತ್ಯಾಸತ್ಯತೆ ಬಯಲಿಗೆಳೆದ ಸುಬ್ರಹ್ಮಣ್ಯ ಪೊಲೀಸರು

ಕೊಲ್ಲಮೊಗ್ರು ಗ್ರಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಶಾಲಾ ಮಕ್ಕಳನ್ನು ಸಂಜೆ ಸಮಯದಲ್ಲಿ ಓರ್ವ ಮುಸುಕುಧಾರಿ ಹಾಗೂ ಇನ್ನೋರ್ವ ಹೆಲ್ಮೆಟ್ ಧರಿಸಿದ ಅಪರಿಚಿತ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ಬಂದು ಶಾಲಾ ಮಕ್ಕಳನ್ನು ಅಪಹರಣ ನಡೆಸಲು ಸಂಚು ರೂಪಿಸಿದ್ದರು ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯೊಂದಿಗೆ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟು ಪೋಷಕರು ಹಾಗೂ ಮಕ್ಕಳಲ್ಲಿ ಭಯವನ್ನು...
Loading posts...

All posts loaded

No more posts

error: Content is protected !!