ಜುಲೈ 15ರ ರಾತ್ರಿ 8ರಿಂದ – ಜುಲೈ 23ರ ಬೆಳಿಗ್ಗೆ 5ರವರೆಗೆ ಲಾಕ್ ಡೌನ್ : ಜಿಲ್ಲಾಧಿಕಾರಿ ಆದೇಶ ವೈದ್ಯಕೀಯ ಸೇವೆ ನಿರಂತರ, ದಿನಸಿ,ತರಕಾರಿ ಹಾಲು, ಪೇಪರ್ ಗೆ ಸಮಯ ನಿಗದಿ

ಜುಲೈ 15ರ ರಾತ್ರಿ 8ರಿಂದ ಜುಲೈ 23ರ ಬೆಳಿಗ್ಗೆ 5ರವರೆಗೆ ಲಾಕ್ ಡೌನ್ ಆದೇಶ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಸೇವೆ ನಿರಂತರ, ಅಗತ್ಯ ವಸ್ತುಗಳಾದ ದಿನಸಿ,ತರಕಾರಿ ಹಾಲು, ಪೇಪರ್ ಪಡೆಯಲು ಬೆಳಿಗ್ಗೆ 8 ರಿಂದ ಪೂ. 11 ಗಂಟೆಯವರೆಗೆ ನಿಗದಿ ಪಡಿಸಲಾಗಿದೆ. ಇನ್ನುಳಿದ ಬೇರೆ ಅಂಗಡಿಗಳು ಬಂದ್ ಆಗಲಿದೆ...

ಪಿಯುಸಿ ಫಲಿತಾಂಶ : ದ.ಕ, ಉಡುಪಿ ಸಮಬಲ -ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆ ಶೇ 90.71 ಫಲಿತಾಂಶ ಪಡೆದಿದ್ದು, ಆದ್ದರಿಂದ ಎರಡು ಜಿಲ್ಲೆ ಪ್ರಥಮ ಸ್ಥಾನ ಪಡೆದಂತಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಫಲಿತಾಂಶವನ್ನು ಪರೀಕ್ಷಿಸಬೇಕಾದರೆ ಇಲ್ಲಿ ಕ್ಲಿಕ್ ಮಾಡಿ 👇 http://www.karresults.nic.in/indexPUC_2020.asp
Ad Widget

ಮರ್ಕಂಜ ಯುವ ಕಾಂಗ್ರೆಸ್ : ಅಧ್ಯಕ್ಷ ಚರಣ್ ಕಾಯರ- ಕಾರ್ಯದರ್ಶಿ ಆದರ್ಶ ಪಾರೆಪ್ಪಾಡಿ

ಆದರ್ಶ ಪಾರೆಪ್ಪಾಡಿ ಮರ್ಕಂಜ ಗ್ರಾಮದ ಯುವ ಕಾಂಗ್ರೆಸ್ ಅಧ್ಯಕ್ಷ ರಾಗಿ ಯುವ ನ್ಯಾಯವಾದಿ ಚರಣ್ ಕಾಯರ ಹಾಗೂ ಕಾರ್ಯದರ್ಶಿ ಯಾಗಿ ಆದರ್ಶ ಪಾರೆಪ್ಪಾಡಿ ಆಯ್ಕೆಯಾಗಿದ್ದಾರೆ.

ಸಂವಿಧಾನ ಶಿಲ್ಪಿಗೆ ಅಪಮಾನ – ಸಂಪಾಜೆ ದಲಿತ ಸಂಘರ್ಷ ಸಮಿತಿ ಖಂಡನೆ

ಸಂವಿಧಾನ ಶಿಲ್ಪಿ,ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ನಿವಾಸ ರಾಜಗೃಹದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವುದನ್ನು, ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ.ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಭಾವನೆಗಳನ್ನು ಭಾರತದ ಪ್ರಜೆಗಳಲ್ಲಿ ಪ್ರತಿಷ್ಠಾಪಿಸಿದ ಮಹಾನ್ ಚೇತನವನ್ನು ಅಪಮಾನಿಸುವ ಮನಸ್ಥಿತಿಯವರು ಈ ಕಾಲದಲ್ಲೂ ಇದ್ದಾರೆ ಎಂಬುದು ಅತಂಕಕಾರಿ ವಿಷಯವಾಗಿದೆ.ಶಿಕ್ಷಣ ಸಂಘಟನೆ, ಹೋರಾಟ ಎಂಬ ಮೂರು ಧ್ಯೇಯವನ್ನು...

ಆದರ್ಶ ಗ್ರಾಮದಲ್ಲಿ ಆದರ್ಶ ಮೆರೆದ ಯುವಬ್ರಿಗೇಡ್ – ಅಂಧ ಕೂಲಿ ಕಾರ್ಮಿಕನಿಗೆ ಅರಮನೆ ಹಸ್ತಾಂತರ ಮಾಡಿದ ಚಕ್ರವರ್ತಿ

ಟಾರ್ಪಲ್ ಹಾಸಿದ ಜೋಪಡಿಯಲ್ಲಿ ವಾಸಿಸುತ್ತಿದ್ದ ಅಂಧವ್ಯಕ್ತಿಗೆ ಇಂದು ಅರಮನೆ ಸಿಕ್ಕಂತಹ ಸಂತೋಷ. ಆ ವ್ಯಕ್ತಿಯೇ ಕಡಬ ತಾಲೂಕಿನ  ಕೇನ್ಯ ಗ್ರಾಮದ ಪೆರ್ಲಕಟ್ಟೆ ನಿವಾಸಿ ಲಿಂಗು.  ಇವರ ಸಂತೋಷಕ್ಕೆ ಕಾರಣಕರ್ತರಾಗಿದ್ದು ರಾಷ್ಟೀಯತೆಯನ್ನು ಉಸಿರಾಗಿಸಿಕೊಂಡು ಹೆಮ್ಮರವಾಗಿ ಬೆಳೆದಿರುವ ದೇಶಾಭಿಮಾನಿಗಳ ಯುವ ತಂಡ ಯುವ ಬ್ರೀಗೇಡ್. ಯುವ ಬ್ರೀಗೇಡ್ ತಂಡದೊಂದಿಗೆ ಚಕ್ರವರ್ತಿ ಅಂಧವ್ಯಕ್ತಿಯಾಗಿದ್ದರೂ ಆತನದ್ದು ಸ್ವಾವಲಂಬಿ ಸ್ವಾಭಿಮಾನದ ಬದುಕು. ಜೊತೆಯಲ್ಲಿ...

*ಡಯಾಲಿಸಿಸ್ ಗೆ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಎಸ್.ಎಸ್ ಎಫ್ ಸಲ್ಲಿಸಿದ ಮನವಿಗೆ ತುರ್ತು ಸ್ಪಂದನೆ*

ಕೋವಿಡ್- 19 ಮಹಾವ್ಯಾಧಿಯು ತಾಲೂಕಿನಲ್ಲೂ ಕಾಣಿಸಿಕೊಂಡಿದ್ದು, ಸುಳ್ಯ ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳಿಗೂ ಪಾಸಿಟಿವ್ ವರದಿ ಬಂದು ಆಸ್ಪತ್ರೆಯು ಸೀಲ್ ಡೌನ್ ಆಗಿದ್ದರಿಂದ ಸರಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದ ಸುಮಾರು 33ರಷ್ಟು ಡಯಾಲಿಸೀಸ್ ರೋಗಿಗಳು ಅತಂತ್ರ ಸ್ಥಿತಿಗೊಳಗಾಗಿದ್ದಾರೆ. ಈ ಬಗ್ಗೆ ತಕ್ಷಣ ಎಸ್.ಎಸ್.ಎಫ್ ಸುಳ್ಯ ಡಿವಿಷನ್ ಸಮಿತಿಯು ಮಾನ್ಯ ತಾಲೂಕು ವೈದ್ಯಾಧಿಕಾರಿಯವರಿಗೆ ತುರ್ತು ಕ್ರಮಕೈಗೊಂಡು ಬದಲಿ ವ್ಯವಸ್ಥೆ ಕಲ್ಪಿಸುವಂತೆ...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಇಂದು ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ " ಕೊರೊನಾ ಮಹಾಮಾರಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದ ಬಳಿಕವೇ ಶಾಲೆಗಳ ಪುನರ್ ಆರಂಭದ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು" ಎಂದರು.ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಜುಲೈ 13 ರಿಂದ ಉತ್ತರ ಪತ್ರಿಕೆಗಳ ಮೌಲ್ಯ...

ರಸ್ತೆ ಅಭಿವೃದ್ಧಿಗೆ ತಡೆಯಲು ಡಿಸಿ ಗೆ ಆಕ್ಷೇಪಣೆ ಅರ್ಜಿ ಸಲ್ಲಿಕೆ – ತನ್ನ ಹೆಸರು ಬಳಸಿ ಅವಮಾನ ಮಾಡಿದ್ದಾರೆಂದು ಗ್ರಾಮಸ್ಥರೊರ್ವರು ದೈವಕ್ಕೆ ಮೊರೆ

ರಸ್ತೆ ಅಭಿವೃದ್ಧಿಗೆ ತಡೆಯಲು ಡಿಸಿ ಗೆ ಆಕ್ಷೇಪಣೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯಲ್ಲಿತನ್ನ ಹೆಸರು ಬಳಸಿ ಅವಮಾನ ಮಾಡಿದ್ದಾರೆಂದು ಅವರ ವಿರುದ್ಧ ಗ್ರಾಮಸ್ಥರಾದ ವಿಶ್ವನಾಥ ಆಚಾರ್ಯ ಕೋಣೆಕಾನ, ದೈವಕ್ಕೆ ಮೊರೆ ಹೋಗುವುದಾಗಿ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ ಅವರು " ಇತ್ತೀಚಿಗೆ ನಮ್ಮ ಶಾಸಕರ ಸಹಕಾರದಿಂದ ಗುತ್ತಿಗಾರಿನ ಮುತ್ತಪ್ಪನಗರದಿಂದ ಚಿಲ್ತಡ್ಕ ಉಳ್ಳಾಕುಲು ಮಾಡ - ಚಿಲ್ತಡ್ಕ...

ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ, ಶಾಸಕ ಅಂಗಾರ ಸಂಪೂರ್ಣ ವಿಫಲ – ಕಾಂಗ್ರೆಸ್ ಹೇಳಿಕೆ

ದೇಶದಲ್ಲಿ ಕೊರೋನ ಮಹಾಮಾರಿ ಜನರ ಜೀವದೊಂದಿಗೆ ರುದ್ರ ತಾಂಡವ ವಾಡುತ್ತಿದೆ. ದಿನದಿಂದ ದಿನಕ್ಕೆ ಎಲ್ಲಾ ಕಡೆ ಸಾವಿರಾರು ಸಂಖ್ಯೆಯಲ್ಲಿ ಸೋಂಕಿತರು ಹೆಚ್ಚಾಗುತ್ತಲೇ ಇದ್ದಾರೆ. ರಾಜ್ಯ ದಲ್ಲಿ ಇತ್ತೀಚಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಈ ಮಹಾಮಾರಿ ಯನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಅಗತ್ಯ ಆರೋಗ್ಯ ಪರಿಕರಗಳನ್ನು ಒದಗಿಸುವಲ್ಲಿ ಮತ್ತು ಆಸ್ಪತ್ರೆ ಗಳಲ್ಲಿ ಬೆಡ್...

ಸುಳ್ಯ : ಕ್ಯಾಂಪ್ಕೋ ಸಂಸ್ಥಾಪನಾ ದಿನ ಆಚರಣೆ

ಕ್ಯಾಂಪ್ಕೋ ಸ್ಥಾಪನಾ ದಿನ" ವನ್ನು ಇಂದು( ಜುಲೈ 11) ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕ್ಯಾಂಪ್ಕೋ ಬ್ರಹ್ಮ ದಿ.ಶ್ರೀ.ವಾರಣಾಶಿ ಸುಬ್ರಾಯ ಭಟ್ ಅವರನ್ನು ನೆನಪಿಸಲಾಯಿತು. ಕಾರ್ಯಕ್ರಮದಲ್ಲಿ ಜಗದೀಶ್ ರಾವ್ ಅಜ್ಜಾವರ,ಸುಬ್ರಹ್ಮಣ್ಯ ಭಟ್ಎಲಿಮಲೆ,ಶಿವರಾಮ ಗೌಡ ಕೇರ್ಪಳ,ಸಂಸ್ಥೆಯ ನೌಕರರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!