“ದಕ್ಷಿಣ ಕನ್ನಡ ಸಾಹಿತ್ಯ ನಿರಂತರ ಸ್ಥಿತ್ಯಂತರಗಳ ಪಯಣ” : ಡಾ. ಅನುರಾಧಾ ಕುರುಂಜಿ ; ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಸಂಸ್ಕೃತಿ ವಿಚಾರಗೋಷ್ಠಿಯಲ್ಲಿ ಪ್ರಬಂಧ ಮಂಡನೆ

ಬಂಟ್ವಾಳ : “ಸಾಹಿತ್ಯವು ನಿರಂತರ ಸ್ಥಿತ್ಯಂತರಗಳ ಪಯಣವಾಗಿದ್ದು, ಇಲ್ಲಿನ ಸಾಹಿತ್ಯ ಕೇವಲ ಪುಸ್ತಕದಲ್ಲಿ ಉಳಿಯದೆ, ಜನಪದ, ಯಕ್ಷಗಾನದ ಮೂಲಕ ಜನಜೀವನದಲ್ಲಿ ಬೆರೆತುಹೋಗಿದೆ” ಎಂದು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಅನುರಾಧಾ ಕುರುಂಜಿ ಹೇಳಿದರು. ಬಂಟ್ವಾಳದಲ್ಲಿ ನಡೆದ ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಸಾಹಿತ್ಯ-ಸಂಸ್ಕೃತಿ ವಿಚಾರಗೋಷ್ಠಿಯಲ್ಲಿ "ಸಾಹಿತ್ಯದ ಸ್ಥಿತ್ಯಂತರಗಳು" ಎಂಬ ವಿಚಾರದ ಕುರಿತು...

“ಅಮರ ಸುದ್ದಿ ವಿಶೇಷ ವರದಿ” ; ಸುಳ್ಯ ತಾಲೂಕಿನ ಬಾಳುಗೋಡು, ಮಡಪ್ಪಾಡಿ, ಅರಂತೋಡು, ಶಾಂತಿನಗರ, ಜಾಲ್ಸೂರು ಹಾಗೂ ಅಜ್ಜಾವರ ಸೇರಿದಂತೆ ಹಲವು ಕಡೆಗಳಲ್ಲಿ ಕಂಡುಬರುತ್ತಿವೆ “ಮತದಾನ ಬಹಿಷ್ಕಾರದ ಬ್ಯಾನರ್ ಗಳು” – “ಅಭಿವೃದ್ಧಿ ಇಲ್ಲದೇ ಮತವಿಲ್ಲ” ಎಂದು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಮತದಾರರು

ಉಲ್ಲಾಸ್ ಕಜ್ಜೋಡಿಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ನಗರ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸೇರಿದಂತೆ ಇನ್ನಿತರ ಚುನಾವಣೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ “ಮತದಾನ ಬಹಿಷ್ಕಾರದ ಕೂಗು” ಕೇಳಿಬರುತ್ತಿದ್ದು, ಜನಪ್ರತಿನಿಧಿಗಳ ವಿರುದ್ಧ ಮತದಾರರು “ಅಭಿವೃದ್ಧಿ ಇಲ್ಲದೇ ಮತವಿಲ್ಲ” ಎಂದು “ಮತದಾನ ಬಹಿಷ್ಕಾರದ ಬ್ಯಾನರ್” ಗಳನ್ನು ಅಳವಡಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಹರಿಹರ ಪಳ್ಳತ್ತಡ್ಕ ಗ್ರಾಮದ...
Ad Widget

1ನೇ ತರಗತಿ ದಾಖಲಾತಿಗೆ ವಯಸ್ಸಿನ ಮಿತಿ ಸಡಿಲಿಕೆಗೆ ನಿರ್ಧರಿಸಿದ ಸರ್ಕಾರ ; ವಿಧಾನಸಭೆ ಅಧಿವೇಶನದಲ್ಲಿ ತಿಳಿಸಿದ ಸಚಿವ ಮಧು ಬಂಗಾರಪ್ಪ

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವರಾದ ಮಧುಬಂಗಾರಪ್ಪನವರು ಸದನದಲ್ಲಿ ಮಾತನಾಡಿ “2026-27ನೇ ಸಾಲಿನ 1ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ 60 ದಿವಸದ ವಿನಾಯಿತಿಯನ್ನು ನೀಡಲಾಗಿದೆ. ಈ ಸಂಬಂಧ ದಾಖಲಾತಿ ತಂತ್ರಾಂಶದಲ್ಲಿಯೂ ಬದಲಾವಣೆ ಮಾಡಲಾಗುವುದು. ಎಲ್.ಕೆ.ಜಿ, ಯು.ಕೆ.ಜಿ ದಾಖಲಾತಿಗೂ ತೊಂದರೆಯಾಗುತ್ತಿದ್ದು, ಅಲ್ಲಿಗೂ ಕೂಡಾ ಕಾನೂನನ್ನು ತರಲಾಗುವುದು” ಎಂದು ವಿಧಾನಸಭೆ ಅಧಿವೇಶನದಲ್ಲಿ ತಿಳಿಸಿದ್ದಾರೆ.

ಗರ್ಭಕಂಠದ ಕ್ಯಾನ್ಸರ್ ತಡೆಗೆ ಕೇಂದ್ರ ಸರ್ಕಾರದಿಂದ HPV ಲಸಿಕೆ ಅಭಿಯಾನ – ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ ಲಸಿಕೆ ಹಾಕಿಸಿಕೊಳ್ಳಲು ಸಂಸದ ಕ್ಯಾ. ಚೌಟ ಕರೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಹೆಣ್ಣುಮಕ್ಕಳ ಆರೋಗ್ಯದ ಶ್ರೀರಕ್ಷೆಗೆ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಉಚಿತ ಹೆಚ್.ಪಿ.ವಿ. ಲಸಿಕಾ ಅಭಿಯಾನದ ಪೂರ್ಣ ಸದುಪಯೋಗವನ್ನು ಪಡೆದುಕೊಳ್ಳುವಂತೆ ದಕ್ಷಿಣ ಕನ್ನಡದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ವಿಶೇಷ ಕರೆ ನೀಡಿದ್ದಾರೆ.ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಸದರು, ನಮ್ಮ ಜಿಲ್ಲೆಯ 14ರಿಂದ 15 ವರ್ಷದೊಳಗಿನ ಎಲ್ಲಾ...

ಉನ್ನತ ವ್ಯಾಸಂಗ ಮಾಡುವವರಿಗೆ ವಿದ್ಯಾಮಾತಾ ಅಕಾಡೆಮಿಯಿಂದ “ಉಚಿತ ಶಿಕ್ಷಣ – ಖಚಿತ ಉದ್ಯೋಗ ಯೋಜನೆ” – “ಪಿಯುಸಿ ನಂತರ ಮುಂದೇನು?, ಯಾವ ಕೋರ್ಸ್ ಮಾಡಿದರೆ ಉದ್ಯೋಗ ಸಿಗಬಹುದು?, ಯಾವುದನ್ನು ಆಯ್ಕೆ ಮಾಡಲಿ?” ಎನ್ನುವ ಗೊಂದಲದಲ್ಲಿರುವ ವಿದ್ಯಾರ್ಥಿಗಳು, ಪೋಷಕರಿಗೆ ಅತ್ಯಂತ ಖುಷಿಕೊಡುವ ಸುದ್ದಿ

ಉದ್ಯೋಗ ಕೌಶಲ್ಯತೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲು ದಾರಿ ದೀಪವಾಗಿರುವ ಕರಾವಳಿ ಭಾಗದ ಪ್ರತಿಷ್ಠಿತ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯು ತನ್ನ ಮಾತೃ ಸಂಸ್ಥೆಯಾದ ವಿದ್ಯಾಮಾತಾ ಪೌಂಡೇಶನ್ ಟ್ರಸ್ಟ್ ನ ಮೂಲಕ 2026-27ನೇ ಸಾಲಿನ ಯೋಜನೆಯಂತೆ "ಉಚಿತ ಶಿಕ್ಷಣ - ಖಚಿತ ಉದ್ಯೋಗ" ಎಂಬ ವಿಶಿಷ್ಟ ಹಾಗೂ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಯೋಜನೆಯನ್ನು ಪರಿಚಯಿಸಿದೆ....

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಥಾಪ್ರಕಾರ ಬೋಜನ ಪ್ರಸಾದ ಮತ್ತು ಉಪಹಾರ ವ್ಯವಸ್ಥೆ – ಗ್ಯಾಸ್ ಉಳಿಕೆಗೆ ಕ್ರಮ ; ವಾರಕ್ಕೆ ಬೇಕಾದ ಗ್ಯಾಸ್ ಹಾಗೂ ಕಟ್ಟಿಗೆ ದಾಸ್ತಾನು

“ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉಪಹಾರ ಮತ್ತು ಬೋಜನ ಪ್ರಸಾದ ವಿತರಣೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಪ್ರತಿದಿನದಂತೆ ಬೋಜನ ಪ್ರಸಾದ ಮತ್ತು ಉಪಹಾರವನ್ನು ಭಕ್ತರಿಗೆ ವಿತರಿಸಲಾಗುತ್ತದೆ. ಒಂದು ವಾರಕ್ಕೆ ಬೇಕಾದ ಗ್ಯಾಸ್ ಶೇಖರಿಸಲ್ಪಟ್ಟಿದ್ದು ಬುಧವಾರ ಕೂಡಾ ಶ್ರೀ ದೇವಳಕ್ಕೆ ಗ್ಯಾಸ್ ಸಿಲಿಂಡರ್ ಬಂದಿದೆ. ಆದ್ದರಿಂದ ಭಕ್ತರಿಗೆ ಈ ಬಗ್ಗೆ ಯಾವುದೇ ಗೊಂದಲ...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ತಟ್ಟಿದ ಮಧ್ಯಪ್ರಾಚ್ಯದ ಯುದ್ಧದ ಬಿಸಿ – ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ; ದೇವಸ್ಥಾನದ ಬೆಳಗ್ಗಿನ ಉಪಾಹಾರದ ವಿತರಣೆಯಲ್ಲಿ ಬದಲಾವಣೆ

ಕುಕ್ಕೆ ಸುಬ್ರಹ್ಮಣ್ಯ ಮಾ.11 : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವಂತಹ ಯುದ್ಧದ ಪರಿಣಾಮವಾಗಿ ದೇಶದಾದ್ಯಂತ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದಾಗಿ ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಕೊರತೆ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಮಾ.11 ರಿಂದ ದೇವಸ್ಥಾನದಲ್ಲಿ ಬೆಳಗ್ಗಿನ ಉಪಾಹಾರ ವಿತರಣೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ....

ಗ್ಯಾಸ್ ಬುಕ್ಕಿಂಗ್ ಗೆ ಸರ್ವರ್ ಸಮಸ್ಯೆ – ಗ್ರಾಹಕರ ಪರದಾಟ

ಸರ್ವರ್ ಸಮಸ್ಯೆಯಿಂದಾಗಿ ಗ್ಯಾಸ್ ಬುಕ್ಕಿಂಗ್ ಮಾಡಲು ಗ್ರಾಹಕರು ಪರದಾಡುವಂತಾಗಿದೆ. “ಒಮ್ಮೆ ಬುಕ್ ಮಾಡಿದ ಬಳಿಕ ಇನ್ನೊಮ್ಮೆ ಗ್ಯಾಸ್ ಬುಕ್ಕಿಂಗ್ ಮಾಡಲು 30 ಕಳೆದಿರಬೇಕು” ಎಂಬ ಸರಕಾರದ ಆದೇಶ ಹಿನ್ನೆಲೆ ಹಾಗೂ ಗ್ಯಾಸ್ ಕೊರತೆ ಆಗಬಹುದೆಂಬ ಭಯದಿಂದ ಗ್ರಾಹಕರು ಬುಕ್ಕಿಂಗ್ ಮಾಡಲು ಮುಗಿಬಿದ್ದಿರುವುದರಿಂದ ಸರ್ವರ್ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ಬುಕ್ಕಿಂಗ್ ಮಾಡಿದವರಿಗೂ ಓಟಿಪಿ ಬಾರದೇ ಸಮಸ್ಯೆಯಾಗಿದ್ದು ಕಂಪೆನಿಗಳು ಈ...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಬಾಲಿವುಡ್ ನಟ ಅರ್ಜುನ್ ಕಪೂರ್

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾಲಿವುಡ್ ನಟ ಅರ್ಜುನ್ ಕಪೂರ್ ಮೂರು ದಿನಗಳಿಂದ ಇರುವುದಾಗಿ ತಿಳಿದುಬಂದಿದೆ. ಮಾ.07 ರಂದು ಸುಬ್ರಹ್ಮಣ್ಯ ಕ್ಕೆ ಆಗಮಿಸಿದ್ದ ಅವರು ಮಾ.08 ರಂದು ಸರ್ಪ ಸಂಸ್ಕಾರ ಸೇವೆ ನಡೆಸಿದ್ದಾಗಿ ತಿಳಿದು ಬಂದಿದ್ದು, ಮಾ.09 ರಂದು ಆಶ್ಲೇಷ ಬಲಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಸುಬ್ರಹ್ಮಣ್ಯದ ಔರಮ್ ವಸತಿ ಗೃಹದಲ್ಲಿ ತಂಗಿದ್ದ ಅವರನ್ನು ದೇವಾಲಯ ಆಡಳಿತ ಕಛೇರಿಯಲ್ಲಿ ವ್ಯವಸ್ಥಾಪನಾ...

ಇಂದಿನ(ಮಾರ್ಚ್ 10) ಕ್ಯಾಂಪ್ಕೋ ಮಾರುಕಟ್ಟೆ ಅಪ್‌ಡೇಟ್ – ಇಲ್ಲಿದೆ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯ ಕಂಪ್ಲೀಟ್ ಲಿಸ್ಟ್

ದಿನಾಂಕ : 10 ಮಾರ್ಚ್ 2026ವಾರ : ಮಂಗಳವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(10 ಮಾರ್ಚ್ 2026) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆಹೊಸ ಅಡಿಕೆ : 260-305-450-465ಹಳೆ ಅಡಿಕೆ...
Loading posts...

All posts loaded

No more posts

error: Content is protected !!