ಅಮರ್ ರಹೇ ಜವಾನ್… ಸೈನಿಕರಿಗೊಂದು ಸಲಾಂ…

ಕಾರ್ಗಿಲ್ ವಿಜಯ್ ದಿವಸ – ಜುಲೈ 26

✍️ಡಾ|| ಮುರಲೀ ಮೋಹನ್‍ ಚೂಂತಾರು

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಜವಾನರ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಪ್ರತಿ ವರ್ಷ ಇಂಡಿಯಾ ಗೇಟ್‍ನಲ್ಲಿರುವ ಅಮರ್ ಜವಾನ ಜ್ಯೋತಿಯಲ್ಲಿ ಸೈನಿಕರಿಗೆ ಪುಷ್ಪ ನಮನ ಸಲ್ಲಿಸುತ್ತಾರೆ, ಈ ಕಾರ್ಗಿಲ್ ಯುದ್ಧ ಭಾರತ ಮತ್ತು ಪಾಕಿಸ್ತಾನದ ನಡುವೆ 1999...

ಅಮರ ಸುದ್ದಿ ಸ್ಪೆಷಲ್ ರಿಪೋರ್ಟ್

ಹೆಚ್ಚುತ್ತಿವೆ ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವ ಪ್ರಕರಣಗಳು…!

ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವುದನ್ನು ತಡೆಗಟ್ಟಲು ಗ್ರಾಮ ಪಂಚಾಯತ್ ಗಳು ಹಾಗೂ ಸ್ಥಳೀಯರು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು…!?

ಇಲ್ಲಿದೆ ಉತ್ತರ…

✍️ಉಲ್ಲಾಸ್ ಕಜ್ಜೋಡಿ

ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ. ಈಗೀಗ ನಮಗೆ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ನಾಯಿಗಳು, ಬೆಕ್ಕುಗಳು, ಚಿಕ್ಕಚಿಕ್ಕ ಮರಿಗಳು ಹಾಗೂ ಕೆಲವೊಮ್ಮೆ ದನ-ಕರುಗಳು ಕೂಡ ಕಾಣಸಿಗುತ್ತವೆ. ಅದರಲ್ಲಿ ಕೆಲವು ದನ-ಕರುಗಳು ಮೇಯಲು ಬಿಟ್ಟಿದ್ದೂ ಇರಬಹುದು, ಹಾಗೆಂದು ಎಲ್ಲಾ ದನ-ಕರುಗಳನ್ನು ಮೇಯಲು ಬಿಟ್ಟಿದ್ದು ಎಂದು ಹೇಳಲಾಗುವುದಿಲ್ಲ...ಈ ನಾಯಿ, ಬೆಕ್ಕು, ದನ-ಕರುಗಳನ್ನು...
Ad Widget

ಎಲ್ಲಾ  ಓಕೆ, ಜಂಕ್ ಪುಡ್ ಯಾಕೆ..?

ಇಂದು ಜಂಕ್ ಫುಡ್ ಜಾಗೃತಿ ದಿನ

✍️ಡಾ| ಮುರಲೀ ಮೋಹನ್ ಚೂಂತಾರು“ಬದುಕುವುದಕ್ಕಾಗಿ ತಿನ್ನಿ, ತಿನ್ನಲಿಕ್ಕಾಗಿ ಬದುಕಬೇಡಿ” ಎಂಬ ಮಾತನ್ನು ಪ್ರಾಯಶಃ ಇಂದಿನ ಕಾಲಘಟ್ಟದಲ್ಲಿ ನಮ್ಮ ಯುವಜನತೆ ಮತ್ತು ಮಕ್ಕಳಿಗೆ ಪುನಃ ನೆನಪಿಸಿಕೊಡಬೇಕಾದ ಅನಿವಾರ್ಯತೆ ಬಂದೊದಗಿದೆ ಎಂಬುದಂತೂ ನೂರಕ್ಕೆ ನೂರರಷ್ಟು ಸತ್ಯ. ನಮ್ಮ ದೇಹದ ದೈಹಿಕ, ಮಾನಸಿಕ ಬೌದ್ಧಿಕ ಮತ್ತು ಸರ್ವತೋಮುಖ ಬೆಳವಣಿಗೆಯಲ್ಲಿ ನಮ್ಮ ಆಹಾರ, ಬಹುಮುಖ್ಯ ಪಾತ್ರ ವಹಿಸುತ್ತದೆ. ಬಹಳಷ್ಟು ರೀತಿಯ ಆಧುನಿಕ...

ಕಿರುಕಥೆ – ಕನಸು ನನಸು

ನಯನ ಸುಮಧುರ ಜೀವನದಲ್ಲಿರುವ ಹುಡುಗಿ.ಮಾತಾಪಿತರಿಗೆ ಒಬ್ಬಳೇ ಮಗಳು.ಬಹಳ ಮುದ್ದಿಸಿ ಬೆಳೆಸಿದ್ದರು ತಂದೆ ತಾಯಿ.ಆಕರ್ಷಕ ತಾರೆಯಾಗಿ ಬೆಳಗುತ್ತಿದ್ದಳು ನಯನ.ಕಡು ಬಡತನವಿಲ್ಲದೆ ಜೀವಿಸಲು ಬೇಕಾದ ಶೈಲಿಯನ್ನು ಹೊಂದಿತ್ತು ಅವಳ ಕುಟುಂಬ.ಪಿ.ಯು ಸಿ ಓದುತ್ತಿದ್ದ ನಯನಾಳಿಗೆ ತಂದೆ ತಾಯಿಯರಲ್ಲಿ ಅಪಾರ ಪ್ರೀತಿ ಗೌರವ.ಒಂದು ಕೂಡಾ ಅಪ್ಪಿ ತಪ್ಪಿ ಮಾತನಾಡದೆ ಮಾತಾಪಿತರ ಬಗ್ಗೆ ಪೂರ್ಣ ಸಂಯಮ ತೋರುತ್ತಿದ್ದಳು ನಯನ.ಖುಷಿ ತುಂಬಿ ಇವರ...

ಕವನ : ಮೌನದ ಮಡಿಲಿನಲ್ಲಿ…

ಮುದುಡಿ ಹೋದ ಮನದ ಮೌನಕೆ ಮಾತುಗಳೇ ಉತ್ತರ, ಆದರೂ ಅನಿಸುವುದು ಕೆಲವೊಮ್ಮೆ ಇಲ್ಲಿ ಮಾತಿಗಿಂತಲೂ ಮೌನವೇ ಉತ್ತಮ...ಕದಡಿ ಹೋದ ಮನದ ಭಾವನೆಗಳಿಗೆ ಇಲ್ಲದ ಭರವಸೆಗಳ ತುಂಬುವುದಕ್ಕಿಂತ, ಕಾಣದಾದ ಬದುಕ ದಾರಿಗೆ ಸಿಗದ ಕನಸುಗಳ ಹೊಸೆಯುವುದಕ್ಕಿಂತ ಮೌನವಾಗಿ ಇರುವುದೇ ಉತ್ತಮ, ಬದುಕಿನಲ್ಲಿ ಕೆಲವೊಮ್ಮೆ ಮೌನವಾಗಿ ಉಳಿಯುವುದೇ ಉತ್ತಮ...ಮನದಲ್ಲೊಂದು ನಿರ್ಧಾರವಿಲ್ಲದೇ, ಬದುಕಿಗೊಂದು ಗುರಿಯು ಇಲ್ಲದೇ ನೂರು ತಿರುವುಗಳ ಬದುಕ...

ಪುಸ್ತಕ ಪರಿಚಯ : ಉಲ್ಲಾಸ್ ಕಜ್ಜೋಡಿ ಯವರ “ಜೀವನಯಾನ” ಕವನ ಸಂಕಲನ

“ಜೀವನಯಾನ” ಕವನ ಸಂಕಲನದ ಮೂಲಕ ಸಾರಸ್ವತ ಲೋಕಕ್ಕೆ ಬರುತ್ತಿರುವ ‘ಉಲ್ಲಾಸ್ ಕಜ್ಜೋಡಿ’ ತುಂಬು ಜೀವನೋತ್ಸಾಹದ ಯುವಕ. ದಿವ್ಯಾಂಗಚೇತನರಾದ ಉಲ್ಲಾಸ್ ಈಗ ನಮಗೆಲ್ಲಾ ಆದರ್ಶವಾಗಿ ತಮ್ಮ ಸಂವೇದನಾಶೀಲ ಕವಿತೆಗಳ ಮೂಲಕ ಎಲ್ಲರನ್ನೂ ಎದುರಾಗಿದ್ದಾರೆ. “ಜೀವನಯಾನ” ಎಂಬ ಶೀರ್ಷಿಕೆಗೆ ತಕ್ಕಂತೆ ತನ್ನ ಜೀವನಪಯಣದ ತಲ್ಲಣಗಳನ್ನೇ ಕವಿತೆಗಳನ್ನಾಗಿಸಿ ನಮ್ಮನ್ನೆಲ್ಲ ಬೆರಗುಗೊಳಿಸಿದ್ದಾರೆ. “ಕ್ಷಣಿಕ ಬದುಕುವ ಹೂವಿಗಿರದ ಸ್ವಾರ್ಥ ಅದೆಷ್ಟೋ ವರ್ಷ ಬದುಕುವ...

ಪ್ರಭಾಕರ ಶಿಶಿಲರು ಬರೆದ ವಿಶಿಷ್ಟ ಕತೆಗಳು ಪುಸ್ತಕದ ವಿಮರ್ಷೆ

ಕಳೆದ ಫೆಬ್ರವರಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡ ಕೃತಿ "ಪ್ರಭಾಕರ ಶಿಶಿಲರ ವಿಶಿಷ್ಟ ಕತೆಗಳು". ಇದು ಶಿಶಿಲರ ಆಯ್ದ ಕತೆಗಳ ಸಂಪಾದಿತ ಕೃತಿ. ಸಂಪಾದಕರು ಶಿಶಿಲ ಅಭಿಮಾನಿ ಕನ್ನಡ ಪ್ರಾಧ್ಯಾಪಕರಾದ ಡಾ ಎಂ.ಪಿ. ಶ್ರೀನಾಥ್. ಇವರು ಪ್ರಸಕ್ತ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು.ರಾವು...

ಎಲ್ಲಾ ಓಕೆ ಗಾಂಜಾ ಯಾಕೆ…?

ಡಾ|| ಮುರಲೀ ಮೋಹನ್ ಚೂಂತಾರುಜೂನ್ 26 ರಂದು ವಿಶ್ವದಾದ್ಯಂತ “ಮಾದಕವಸ್ತು ವಿರೋಧಿ ದಿನ” ಎಂದು ಆಚರಿಸಲಾಗುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವ ಜನತೆಯನ್ನು  ಜಾಗೃತಗೊಳಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ ಎಂದರೂ ತಪ್ಪಲ್ಲ.ಇಂದು ನಾವು ಜೀವಿಸುತ್ತಿರುವ ಈ ಕಾಲಘಟ್ಟ ಎನ್ನುವುದು, ಬಹಳ ಸ್ಪರ್ಧಾತ್ಮಕ ಜಗತ್ತು. ಎಲ್ಲವೂ ಬಹಳ ವೇಗದಲ್ಲಿ...

ಕವನ : ಸೃಷ್ಟಿಯ ಸೊಬಗು…

ಮುಗಿಲನ್ನೇ ಮುರಿಯುತ್ತಾ ಆ ಮಳೆಯ ಹನಿಗಳು ಇಳೆಸೇರ ಬರುತಿವೆ ಕಾತುರದಿಂದ, ಆತುರಾತುರದಿಂದ...ಸುಡು ಬಿಸಿಲ ಶಾಖಕ್ಕೆ ಕೆಂಪಾದ ಭೂಮಿಯದು ಕಾಯುತ್ತಾ ಕುಳಿತಿತ್ತು ತನ್ನ ಸ್ನೇಹಿತನ ಆಗಮನಕೆ, ತನ್ನೊಳಗಿನ ಬಿಸಿಯನ್ನು ತಣಿಸುವ ಆ ಮಳೆರಾಯನ ಆಗಮನಕೆ...ಮಳೆಯು-ಇಳೆಯು ಜೊತೆ ಸೇರಿದಾಗ ಉಂಟಾದ ಸಂಭ್ರಮದ ಸೊಬಗಿಗೆ ಸಾಕ್ಷಿಯಾಗಿತ್ತು ಜೀವಸಂಕುಲ, ಮನವ ತಣಿಸಿತ್ತು ಸೃಷ್ಟಿ ಇಂಚರ...✍️ ಉಲ್ಲಾಸ್ ಕಜ್ಜೋಡಿ

ಲೀಚ್ ಥೆರಪಿ

✍️ಡಾ|| ಮುರಲೀ ಮೋಹನ್ ಚೂಂತಾರುಲೀಚ್ ಎಂದು ಆಂಗ್ಲಭಾಷೆಯಲ್ಲಿ ಕರೆಸಿಕೊಳ್ಳುವ ‘ಜಿಗಣೆ’ ಅಥವಾ ‘ಇಂಬಳ’ ಸಾಮಾನ್ಯವಾಗಿ ತೇವವಿರುವ ಜಾಗಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ. ಈ ಜೀವಿಯ ಆಹಾರ ಮತ್ತು ವಾಸಸ್ಥಳ ಎಲ್ಲವೂ ಜಲವೇ ಆಗಿರುವುದರಿಂದ ಇವುಗಳಿಗೆ ‘ಜಲೌಕ’ ಎಂದೂ ಕರೆಯುತ್ತಾರೆ. ವಿಷಕಾರಕ ಜಿಗಣೆ ಮತ್ತು ವಿಷರಹಿತ ಜಿಗಣೆ ಎಂದು ಎರಡು ವಿಧಗಳಿದ್ದು, ವಿಷರಹಿತ ಜಿಗಣೆಗಳನ್ನು ಚಿಕಿತ್ಸೆಗಾಗಿ...
Loading posts...

All posts loaded

No more posts

error: Content is protected !!