- Friday
- April 24th, 2026
ನೂರು ಕಷ್ಟ ದಾಟಿ ಸಾಗಿ ಗೆಲುವು ಪಡೆದುಕೊಂಡೆ ನೀ, ಗೆಲುವು ಪಡೆದ ಸಂತಸದಲಿ ಕಳೆದ ದಿನವ ಮರೆತೆ ನೀ, ಬಂದ ಹಾದಿ ತೊರೆದೆ ನೀ…ನಿನ್ನ ಗೆಲುವ ಮೆಟ್ಟಿಲಾದ ನಿನ್ನವರ ಮರೆತೆ ನೀ, ನಾನೇ ಎಂಬ ಜಂಭದಲ್ಲಿ ಪ್ರೀತಿ ಸ್ನೇಹ ಮರೆತೆ ನೀ, ಕಳೆದ ಎಲ್ಲಾ ದಿನಗಳನ್ನು ಮರೆತು ಮುಂದೆ ನಡೆದೆ ನೀ…ಸೋಲೇ ಗೆಲುವ ಮೆಟ್ಟಿಲೆಂಬ ಮಾತನ್ನು...
ತುಳುನಾಡು ಎನ್ನುವುದು ಸಾಂಸ್ಕೃತಿಕವಾಗಿ ಸಾಂಪ್ರದಾಯಿಕವಾಗಿ ಏಕತೆಯನ್ನು ಸಾರಿದ ನಾಗ ನಡೆಯ ಪವಿತ್ರ ಭೂಮಿ. ತುಳುನಾಡು ತುಳುವರ ಆಚರಣೆಗಳು ಕೇವಲ ಧರ್ಮಕ್ಕೆ ಸೀಮಿತವಾಗಿರದೆ ಸರ್ವ ಧರ್ಮೀಯರು ಆಚರಿಸುವ ಆಚರಣೆಗಳಾಗಿವೆ, ಆಟಿ ಬಂದಾಗ ಹಿಂದೂ ಮುಸಲ್ಮಾನ ಕ್ರೈಸ್ತ ಎಲ್ಲರೂ ಕೂಡ ಒಂದು ಕಾಲ ಘಟ್ಟದಲ್ಲಿ ಆಚರಿಸದೆ ಅನುಭವಿಸಿದವರು…ಆಟಿ ಬಂದಾಗ ಅಟ್ಟ ಕಾಲಿ ಸೋಣ ಬಂದಾಗ ಪೆಲತಾರಿ ಚೋಲಿ ಎಂಬ...
ಅನುಭವವು ತಾನೇ ಜಗದ ಅತೀ ದೊಡ್ಡ ಪಾಠವು, ಅನುಭವವು ಕಲಿಸುವ ಪಾಠ ಎಂದೂ ಮರೆಯದು, ಬದುಕಿನಲ್ಲಿ ಎಂದೂ ಮರೆಯದು, ಅದು ಸೋಲೇ ಇರಲಿ ಇಲ್ಲ ಗೆಲುವೇ ಇರಲಿ, ಅದು ನೋವೇ ಇರಲಿ ಇಲ್ಲ ನಲಿವೇ ಇರಲಿ…ಬದುಕಿನ ಪ್ರತಿ ನಿಮಿಷ ಅನುಭವವೇ ತಾನೇ, ಒಂದೊಂದು ನಿಮಿಷವು ಇಲ್ಲಿ ಪಾಠವೇ ತಾನೇ…ಅನುಭವದ ಪುಸ್ತಕದಲ್ಲಿ ಸೋಲುನೂ ಒಂದು ಪಾಠ, ಗೆಲುವನ್ನು...
ಎತ್ತರದ ಆಗಸದಿ ತಂಪಾದ ಮಳೆ ಹನಿಯು ಇಂಪಾದ ಸದ್ದಿನಲಿ ಭುವಿಯ ಸೇರುತಿದೆ, ಇಳೆಯ ತಂಪಾಗಿಸುತಿದೆ…ಪಟ ಪಟನೇ ಬೀಳುವ ಮಳೆ ಹನಿಯ ಸದ್ದು ಕಿವಿಗೆ ಇಂಪು, ಮನಸಿಗೆ ನೀಡುತಿದೆ ತಂಪು…ಜೋರಾಗಿ ಮಳೆ ಬಂದು ನಿಂತ ಆ ಕ್ಷಣ ಸುತ್ತಲಿನ ಪರಿಸರವು ಹಸಿರಾಗಿ ತುಂಬಿ, ಹಕ್ಕಿಗಳ ಚಿಲಿಪಿಲಿ ನಾದವು ಇಂಪಾಗಿ ಕೇಳುತಿದೆ, ಕಿವಿಗೆ ಇಂಪಾಗಿ ಕೇಳುತಿದೆ…ಸದ್ದಿಲ್ಲದೇ ಬರುವ ಆ...
ನಮ್ಮ ತುಳುನಾಡಿನಲ್ಲಿ ತರವಾಡು ಮನೆಗೆ ಭಾರಿ ಮಹತ್ವವಿದೆ . ತರವಾಡು ಮನೆಯಿಲ್ಲದ ಕುಟುಂಬವಿರದು. ತರವಾಡು ಮನೆಯು ತನ್ನ ಕುಟುಂಬದ ಮನೆಗಳ ದೈವಗಳ ಕಾರ್ಯ ದೇವರ ಕಾರ್ಯಗಳ ಮುಂದುವರಿಕೆಗೆ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ತರವಾಡು ಮನೆಯ ಯಜಮಾನನು ತನ್ನದೆ ಆದ ಗೌರವವನ್ನು ಹೊಂದಿದ್ದು , ಕುಟುಂಬ ಸದಸ್ಯರನ್ನು ಪ್ರೀತಿ , ಸಹನೆ , ತಾಲ್ಮೆಯಿಂದ ಸಮರ್ಪಕವಾಗಿ ನಿಭಾಯಿಸುವ...
ಉರುಳುತಿದೆ ಕಾಲವು, ಸಾಗುತಿದೆ ಜೀವವು…ಕನಸನೆಲ್ಲಾ ಮೂಟೆ ಕಟ್ಟಿ, ಕೊನೆಯೇ ಇರದ ದಾರಿ ಮುಟ್ಟಿ ಸಾಗುತಿದೆ ಜೀವವು, ಉರುಳುತಿದೆ ಕಾಲವು…ಕನಸಿನ ದಾರಿಯ ದಾಟಿ, ಮನಸಿನ ಮೌನವ ಮೀರಿ ಮೈಲಿಗಲ್ಲು ಇರದ ದಾರಿ ಹುಡುಕಿ ಸಾಗಿ…ಉರುಳುತಿದೆ ಕಾಲವು, ಸಾಗುತಿದೆ ಜೀವವು…ಏತಕೆ ತಿಳಿಯದ ಪಯಣ, ಸಾಗಿದೆ ಹುಡುಕಿ ಕಾರಣ…ಸಾಗುವುದೆಲ್ಲೋ, ಸೇರುವುದೆಲ್ಲೋ ತಿಳಿದೇ ಇಲ್ಲ…ಕ್ಷಣಿಕದ ಬದುಕಿನಲ್ಲಿ ಕ್ಷಣ ಕ್ಷಣವು ಅನುಭವ ತಾನೇ,...
ಸುಡುವ ಬಿಸಿಲಿನಲಿಕೊರೆಯುವ ಚಳಿಯಲಿದಿನನಿತ್ಯ ನಮ್ಮ ಕಾಯುವಧೀರ ಸೈನಿಕನೇನಿನಗೊಂದು ನನ್ನ ಸಲಾಂ.. ನೀನಿದ್ದರೆ ಈ ಭೂಮಿಯಲ್ಲಿನಮಗೆಲ್ಲ ಸುಖ ನಿದ್ರೆನಮಗಾಗಿ ಹೋರಾಡುವ ಸೈನಿಕನಿನಗೊಂದು ನನ್ನ ಸಲಾಂ.. ತನ್ನವರನ್ನು ಮರೆತುಕೈಯಲ್ಲಿ ಬಂದೂಕನ್ನು ಹಿಡಿದುದೇಶದ ಜನರಿಗಾಗಿ ನಿದ್ರೆ ಬಿಡುವ ಸೈನಿಕನಿನಗೊಂದು ನನ್ನ ಸಲಾಂ.. ದೇಶದ ಮೂಲೆ ಮೂಲೆಗಳಲ್ಲಿಇರುವ ಶತ್ರುಗಳನ್ನು ಸದೆ ಬಡಿಯಲುಎದೆ ಉಬ್ಬಿಸಿ ನಿಂತಿರುವ ಸೈನಿಕನಿನಗೊಂದು ನನ್ನ ಸಲಾಂ.. ಸಾಗರದಂತಹ ಸುಳಿಗಳೆಡೆಯಲಿಬೀಸುವ...
ಸಂಚಾರಿ ಈ ಬದುಕು ಸಾಗುತಿದೆ ಎಲ್ಲಿಯೂ ನಿಲ್ಲದೇ,ಏಕಾಂಗಿ ಈ ಬದುಕು ನಿಂತಿದೆ ಸುತ್ತಲೂ ಯಾರಿಲ್ಲದೇ…ಗೆಲ್ಲುವ ಛಲ ತುಂಬಿದ ಬದುಕು ಸಾಗುತಿದೆ ಸೋತರೂ ಕುಗ್ಗದೇ, ಕಣ್ಣೆದುರು ಸೋಲಿದ್ದರೂ ಜಗ್ಗದೇ…ಮೌನಿ ಈ ಬದುಕು ಸಾಗುತಿದೆ ಚುಚ್ಚು ಮಾತುಗಳ ಕೇಳಿಯೂ ಕೇಳದಂತೆ, ಅಣಕಿಸುವವರ ನೋಡಿಯೂ ನೋಡದಂತೆ…ಕನಸು ಕಾಣುವ ಬದುಕು ಸಾಗುತಿದೆ ಕನಸು ನನಸಾಗಿಸಲು, ಬದುಕ ಗುರಿ ಮುಟ್ಟಿಸಲು…ಸೋಲೇ ತುಂಬಿದ ಬದುಕು...
ತಿಳಿದು ತಿಳಿದು ಮಾಡಿದ ತಪ್ಪು, ಅಳೆದು ತೂಗಿ ನೀಡಿದ ದಾನ ನಿನ್ನ ಬದುಕ ಹಾದಿಯಲ್ಲಿ ಎಂದೂ ಒಳಿತು ಮಾಡದು…ಸ್ವಾರ್ಥದಿಂದ ಮಾಡಿದ ಸೇವೆ, ಸುಳ್ಳಿನಿಂದ ಕಟ್ಟಿದ ಅರಮನೆ ಹೆಚ್ಚು ಕಾಲ ಉಳಿಯದು ಇಲ್ಲಿ ಓ ಗೆಳೆಯ…ಮನದ ಒಳಗೆ ವಿಷವ ತುಂಬಿ ಹೊರಗೆ ಸಿಹಿಯ ನೀಡುವಂತೆ ನಟಿಸಿದರೆ ಏನು ಫಲವೋ ಓ ಗೆಳೆಯ… ತಿಳಿದು ತಿಳಿದು ತಪ್ಪನೆಂದೂ ಮಾಡಲೆಬೇಡ...
ಕೋಟಿ ಹೃದಯಗಳ ಪ್ರಾರ್ಥನೆ ಹುಸಿಯಾಯಿತು…ಕೋಟಿ ಮನಸುಗಳ ಆಸೆಯು ಹುಸಿಯಾಯಿತು, ಇಂದು ಹುಸಿಯಾಯಿತು…ಪ್ರೀತಿ-ಸ್ನೇಹದ "ಅರಸು" ಮರೆಯಾದನು, ಇಂದು ಮರೆಯಾದನು…"ದೊಡ್ಮನೆ"ಯ "ಬೆಟ್ಟದ ಹೂವು" ಮರೆಯಾಯಿತು "ಆಕಾಶ"ದಲ್ಲಿ ಮರೆಯಾಯಿತು… ವಿಧಿಯ ಆಟದ ಎದುರು ಎಲ್ಲಾ ಶೂನ್ಯವಾಯಿತು, ಎಲ್ಲಾ ಮುಗಿದು ಹೋಯಿತು…ಯಾರ ಊಹೆಗೂ ನಿಲುಕದ ಘಟನೆ ನಡೆದುಹೋಯಿತು, ನಮ್ಮೆದುರು ನಡೆದು ಹೋಯಿತು…ಮರಳಿ ಬಾರದ ಲೋಕಕೆ ಹೊರಟು ಹೋದನು "ವಂಶಿ", ಆ "ಪರಮಾತ್ಮ"ನ...
Loading posts...
All posts loaded
No more posts
