- Friday
- April 18th, 2025

'ಋತೂನಾಂ ಕುಸುಮಾಕರಂ' ಎಂದು ಗೀತಾಚಾರ್ಯರು ಹೇಳುವಂತೆ ಋತುರಾಜ ವಸಂತದ ಶುಭಾಗಮನದ ದಿನವೇ ಯುಗಾದಿ. ಸಾಮಾನ್ಯವಾಗಿ ಹೊಸ ವರ್ಷ ಎಂದರೆ ಜಗತ್ತಿನಲ್ಲಿ ಜನವರಿ ಒಂದು ಎಂದು ನಾವೆಲ್ಲರೂ ಭಾವಿಸುತ್ತೇವೆ. ಆದರೆ ಆ ದಿನ ಮನೆಯ ಗೋಡೆಯ ಮೇಲೆ ಮಾತ್ರ ಕ್ಯಾಲೆಂಡರ್ ಸಂಪೂರ್ಣವಾಗಿ ಬದಲಾಗಿರುತ್ತದೆ ವಿನಃ ನಮ್ಮ ಜೀವನದಲ್ಲಿ ನಮಗೆ ಹೊಸ ದಿನ ಎಂದರೆ ನಮ್ಮ ಹಿಂದೂ ಸಂಪ್ರದಾಯದ...

ಗಡಿಬಿಡಿಯಲ್ಲಿ ಕೆಲಸ ಮಾಡುತ್ತಾ ಬೇಗ ಬೇಗ ಹೊರಟ ಸುಂದರಿಯನ್ನು ಮನೆಯ ಹೊಸ ಸೊಸೆ ಆಶಾ ಕುತೂಹಲದಿಂದ ಕೇಳಿದಳು, ಏನು ಭಾರೀ ಅರ್ಜೆಂಟ್ ಲ್ಲಿ ಹೊರಟಿದ್ದಿ? ಎತ್ಲಾಗಿ ಹೋಗಲಿಕ್ಕಿದೆ? ಅದು ಕುಂಞಕ್ಕ ನಾಳೆ 'ಕೆಡ್ಡಸ' ಅಲ್ಲವಾ ಹಾಗಾಗಿ ನನ್ನೆರಿಗೆ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಹಾ ಕೆಡ್ಡಸಾ ಅದೆಂತ ನಾನು ಕೇಳೆ ಇಲ್ವಲ್ಲಾ ಏನದು ? ಎಂಬ ಆಕೆಯ ಕುತೂಹಲದ ಪ್ರಶ್ನೆ ...
ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಸುಳ್ಯದ ಚಂದನ ಸಾಹಿತ್ಯ ವೇದಿಕೆ ಜಂಟಿಯಾಗಿ ನನ್ನ ಹಾಡು ನನ್ನದು ಸಂಗೀತ ಸ್ಪರ್ಧೆ ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಇತ್ತೀಚಿಗೆ ಜರುಗಿತು . ಚಂದನ ಸಾಹಿತ್ಯ ವೇದಿಕೆಯ ದಶಮಾನೋತ್ಸವ ಮತ್ತು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಂಗೀತ...

✍️ಚಂದ್ರಶೇಖರ ಬೇರಿಕೆ ಮನುಷ್ಯ ಸಾಧ್ಯತೆಯನ್ನು ಮೀರಿದ ಶಕ್ತಿಯೊಂದು ಮಾನವ ಬದುಕಿನ ಅನುಭವಕ್ಕೆ ಬರುತ್ತದೆ ಎಂಬ ಅಚಲ ನಂಬಿಕೆಯ ಮೇಲೆ ತುಳುನಾಡಿನ ದೈವಾರಾಧನಾ ಜಗತ್ತು ಆವೃತ್ತವಾಗಿದೆ. ಪರಶುರಾಮ ಸೃಷ್ಟಿಯ ತುಳುನಾಡು ದೈವ ನೆಲೆಯ ಬೀಡು. ತುಳುನಾಡಿನ ದೈವಾರಾಧನೆಯು 14ನೇ ಶತಮಾನದ ಚರಿತ್ರೆಯನ್ನು ಹೊಂದಿದ್ದು, ಕಾರ್ಕಳ ತಾಲ್ಲೂಕಿನ ಕಾಂತೇಶ್ವರದಲ್ಲಿ ದೊರೆತ 1379ರ ಶಾಸನವು ದೈವಾರಾಧನೆಗೆ ಅಧಿಕೃತ ಲಿಖಿತ ಆಧಾರ...

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಕಾರ್ಯಕ್ರಮವು ನೆರವೇರಿತು. ಸಮಾರಂಭದ ಅಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್ ಭೀಮರಾವ್ ವಾಷ್ಠರ್ ರವರು ವಹಿಸಿದ್ದರು . ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಪೇರಾಲು ರವರು ಉದ್ಘಾಟಿಸಿದರು . ಕನ್ನಡ...

ಬಾಲಿವುಡ್ ಅಂಗಳದಲ್ಲಿ ನಟ ಸುಶಾಂತ್ ಸಿಂಗ್ ಪ್ರಕರಣವು ಒಂದೊಂದೇ ಕೂತೂಹಲಕಾರೀ ತಿರುವುಗಳು ಪಡೆದುಕೊಳ್ಳುತ್ತಿದ್ದಂತೆ ದೇಶಕ್ಕೆ ಕಂಟಕವಾಗಿರುವ ಮಾದಕ ವಸ್ತುಗಳ ಜಾಲ ಬೆಳಕಿಗೆ ಬಂದಿದೆ. ಆದರೆ ಈಗ ಚಂದನವನದಲ್ಲೂ ಡ್ರಗ್ಸ್ ಮಾಫಿಯಾದ ಗುಟ್ಟು ಹೊರ ಬರುತ್ತಿದೆ. ಕನ್ನಡದ ನಟ ನಟಿಯರು ಮಾದಕ ವಸ್ತುಗಳ ದಾಸರಾಗಿರುವುದು ಅಚ್ಚರಿಯನ್ನು ಉಂಟು ಮಾಡಿದೆ. ಬೆಂಗಳೂರಿಗೂ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದ ಕೊಂಡಿ ಇರುವುದು...

ಅಪೂರ್ಣದಿಂದ ಕೂಡಿರುವ ಪುಸ್ತಕಕ್ಕೆ ಹೊಸ ಅಕ್ಷರಗಳನ್ನು ತುಂಬಿ ಸಹ ಜೀವನವನ್ನು ರೂಪಿಸಿ ರಂಗಿನ ಮೆರಗನ್ನು ನೀಡುವಾತ ನಮ್ಮ ಶಿಕ್ಷಕ.ಹಿಂದಿನ ಕಾಲದಿಂದಲೂ ಶಿಕ್ಷಣಕ್ಕೆ ಬಂದಿರುವ ವಿಶೇಷ ಗಣನೆಯು ನಮ್ಮ ಶಿಕ್ಷಣ ಕ್ಷೇತ್ರವನ್ನು ಮೆಲುಕು ಹಾಕುತ್ತಿದೆ. ಶಿಕ್ಷಣ ಸಮಾಜದಲ್ಲಿ ಬಹುವ್ಯಾಪಿಸಿದೆ.ಗುರು ಬ್ರಹ್ಮ ಗುರು ವಿಷ್ಣು ಗುರುರ್ ದೇವೋ ಮಹೇಶ್ವರಗುರು ಸಾಕ್ಷತ್ ಪರ ಬ್ರಹ್ಮ ತಸ್ಮೈಶ್ರೀ ಗುರುವೇ ನಮ ಪ್ರತಿಯೊಬ್ಬರ...

ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕೃತಿಯ ದೇಶ, ಹಲವು ವೈವಿಧ್ಯಗಳ ಬೀಡು. ಸುರಿಯುವ ಮಳೆ, ಭೋರ್ಗರೆವ ಕಡಲು, ಜುಳು ಜುಳು ನಾದಗೈಯುವ ನದಿ-ಝರಿಗಳು, ಕಣ್ಣು ಹಾಯಿಸಿದಷ್ಟೂ ಮುಗಿಯದ ಹಚ್ಚ ಹಸಿರಿನ ತೆಂಗು-ಕಂಗುಗಳೂ, ತೆನೆ ತುಂಬಿ ಬಾಗಿ ಕೈ ಮುಗಿದು ಕಂಗೊಳಿಸುತ್ತಿರುವ ಭತ್ತದ ಗದ್ದೆಗಳು, ಹಸುರುಕ್ಕುವ ಕಬ್ಬು, ಬಣ್ಣ ಬಣ್ಣದ ಹೂಗಳ ತೋಟ, ಹಲವು ಬಗೆಯ ಪುಷ್ಪಗಳ...

21 ನೇ ಶತಮಾನ ಬಹುತೇಕ ಇವತ್ತಿನ ಕಾಲದಲ್ಲಿ ವಿದ್ಯಾವಂತರಿಗೇನು ಕಡಿಮೆ ಇಲ್ಲ ಜಗತ್ತಿನ ಯಾವುದೇ ಮೂಲೆಯಲ್ಲಿ ಯಾವುದೆ ಘಟನೆಗಳು ಅಂದರೆ ಒಳಿತಿರಲಿ ಕೆಡುಕಿರಲಿ ಕ್ಷಣಾರ್ಧದಲ್ಲಿ ಮಾಹಿತಿಯನ್ನು ಸಂಗ್ರಹಿಸುವ ಅವಕಾಶಗಳೆ ಹೆಚ್ಚು ಕಾರಣ ಇವತ್ತು ಎಲ್ಲರ ಕೈಯಲ್ಲೂ ಸ್ಮಾರ್ಟ್ ಪೋನ್ ಇದೆ ತಂತ್ರಜ್ಞಾನದ ವಿಷಯಗಳ ಕಡೆಗೆ ಬಂದಾಗ ನಮ್ಮ ದೇಶ ಶೇಕಡ 80 ರಷ್ಟು ಹಳ್ಳಿ ಪ್ರದೇಶವೇ...

ಆಧುನಿಕತೆ ಬೆಳೆದಂತೆ ಗ್ರಾಮೀಣ ಸೊಬಗು ಮರೆಯಾಗುತ್ತಿರುವುದು ಈ ದಿನದ ಆತಂಕ. ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳು ಇದಕ್ಕೆ ಹೊರತಲ್ಲ. ಧನಿಕರಾಗುವುದೇ ನಮ್ಮ ಜೀವನದ ಗುರಿ ಎಂಬ ಆಶಯಕ್ಕೆ ಆಧುನಿಕ ಜನತೆ ಜೋತು ಬಿದ್ದ ಈ ಕಾಲದಲ್ಲಿ ಸಾಂಪ್ರದಾಯಿಕ ಕೃಷಿ ಹಿಂದೆ ಬಿದ್ದಿರುವುದು ಸಹಜ.ಈ ಕೃಷಿ ಪರಂಪರೆ ನಿಧಾನಕ್ಕೆ ಮರೆಯಾಗುತ್ತಿದೆ. ನಮ್ಮ ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳಲ್ಲಿ ಭತ್ತದ ಕೃಷಿಯೂ...

All posts loaded
No more posts