ಸಾಹಿತಿ ಭೀಮರಾವ್ ವಾಷ್ಠರ್ ಅವರಿಗೆ ಸನ್ಮಾನ

ಪುತ್ತೂರಿನ ಮಕ್ಕಳ ಮಂಟಪ ವೇದಿಕೆಯಲ್ಲಿ ಉಪತಹಸೀಲ್ದಾರ್ ಮತ್ತು ಕವಯತ್ರಿಯಾದ ಕು || ಸುಲೋಚನಾ ಪಿ ಕೆ ಅವರ ಜೋಡಿ ಸಾಹಿತ್ಯ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಸುಳ್ಯದ ಜ್ಯೋತಿಷಿ, ಸಾಹಿತಿ, ಚಿತ್ರ ನಿರ್ದೇಶಕರಾದ ಎಚ್. ಭೀಮರಾವ್ ವಾಷ್ಠರ್ ಅವರನ್ನು ವೇದಿಕೆಯ ಗಣ್ಯರ ಜೊತೆ ಭಾಗವಹಿಸಿದ ಎಲ್ಲಾ ಕವಿಗಳು ಜೊತೆಯಾಗಿ ಸಮ್ಮಾನಿಸಿ ಗೌರವಿಸಿದರು. ಸಮಾರಂಭದ...

ಸುಬ್ರಹ್ಮಣ್ಯ : ಎಸ್‌ಎಸ್‌ಪಿಯುನಲ್ಲಿ ನಡೆದ ರಾಷ್ಟೀಯ ಯುವ ದಿನಾಚರಣೆ

ಸುಬ್ರಹ್ಮಣ್ಯ: ಯುವ ಜನತೆಯ ಪ್ರಗತಿಯಿಂದ ರಾಷ್ಟ್ರದ ಏಳಿಗೆ ಸಾಧಿತವಾಗುತ್ತದೆ. ಭವಿಷ್ಯದಲ್ಲಿ ಯುವ ಜನತೆಯ ಅಭ್ಯುದಯಕ್ಕೆ ಯುಗದಲ್ಲಿ ಗಣಕಯಂತ್ರ ಜ್ಞಾನ ಅಡಿಗಲ್ಲಾಗುತ್ತದೆ.ಆದುದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡಲಾಗಿದೆ.ಇದು ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಪ್ರಗತಿ ಸಾಧಿಸಲು ಅನುಕೂಲತೆ ಒದಗಿಸುತ್ತದೆ ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮತ್ತು ಎಸ್‌ಎಸ್‌ಪಿಯು ಕಾಲೇಜಿನ ಕಾರ್ಯದರ್ಶಿ ಡಾ.ನಿಂಗಯ್ಯ ಹೇಳಿದರುಮಹತೋಭಾರ ಕುಕ್ಕೆ...
Ad Widget

ಎಡಮಂಗಲ; ಅನಾರೋಗ್ಯದಿಂದ ವಿದ್ಯಾರ್ಥಿನಿ ಮೃತ್ಯು !

ಅನಾರೋಗ್ಯಕ್ಕೊಳಗಾಗಿ ವಿದ್ಯಾರ್ಥಿನಿ ಮೃತ ಪಟ್ಟ ಘಟನೆ ಎಡಮಂಗಲದಿಂದ ವರದಿಯಾಗಿದೆ. 11 ರಂದು ಅನಾರೋಗ್ಯಕ್ಕೊಳಗಾದ ವಿದ್ಯಾರ್ಥಿಯನ್ನು ಕೂಡಲೇ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಈಕೆ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ಪದವಿ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿನಿ. ಈಕೆ ಎಡಮಂಗಲ ಗ್ರಾಮದ ಗಂಡಿತಡ್ಕ ರಾಮಚಂದ್ರ ನಾಯ್ಕ ಇವರ...

ಪೆರಾಜೆ ಜ್ಯೋತಿ ಪ್ರೌಢಶಾಲೆಯಲ್ಲಿ ಕುವೆಂಪು ಜನ್ಮದಿನಾಚರಣೆ ಹಾಗೂ ಪುಸ್ತಕ ಬಿಡುಗಡೆ

‘ಕುವೆಂಪು’ ಈ ಜಗದ ಸೋಜಿಗ. ಬಹುಷ: ಅವರ ‘ವಿಶ್ವಮಾನವತತ್ವ’ ಕುರಿತಾಗಿ ಆದಷ್ಟು ಚರ್ಚೆ ಬೇರೆ ಯಾವ ಸಾಹಿತಿಯ ಬಗ್ಗೆಯೂ ನಡೆದಿಲ್ಲ. ಕನ್ನಡಕ್ಕೆ ಪ್ರಥಮ ‘ಜ್ಙಾನಪೀಠ’ ಪ್ರಶಸ್ತಿ ತಂದುಕೊಟ್ಟ ಈ ಪ್ರಥಮ ‘ರಾಷ್ಟçಕವಿ’, ಮುದ್ರಿತ ಪುಟಗಳಲ್ಲಿ ಸುಮಾರು 40,000 ಪುಟಗಳಾಗುವಷ್ಟು ಕವನ, ಕತೆ, ಲೇಖನ, ವಿಮರ್ಷೆ, ನಾಟಕ, ಕಾದಂಬರಿಗಳನ್ನು (69 ಕೃತಿಗಳು) ಬರೆದವರು. ಅದೂ ಆಧುನಿಕ ಸೌಲಭ್ಯಗಳಾದ...

ಸುಳ್ಯ : ಶಾರದಾ ಮಹಿಳಾ ಕಾಲೇಜಿನಲ್ಲಿ ಪತ್ರಿಕೋದ್ಯಮ ಕುರಿತು ಉಪನ್ಯಾಸ ; ಪತ್ರಿಕೆ ನಮ್ಮ ಸಮಾಜದ ಕನ್ನಡಿ – ಪತ್ರಕರ್ತ ಸುಧಾಕರ ಸುವರ್ಣ

ಸಮಾಜ ಹೇಗಿದೆ ನೋಡಲು ಪತ್ರಿಕೆಗಳನ್ನು ನೋಡಬೇಕಿದೆ. ಪತ್ರಿಕೆ ಸಮಾಜದ ಕನ್ನಡಿ ಎಂದು ಹಿರಿಯ ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಹೇಳಿದರು.ಅವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸುಳ್ಯ ಇದರ ವತಿಯಿಂದ ಶಾರದಾ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪತ್ರಿಕೋದ್ಯಮದ ಕುರಿತು ಉಪನ್ಯಾಸ ನೀಡಿದರು. ಸಹಜವಲ್ಲದ ಘಟನೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳು ಪತ್ರಿಕೆಗಳಲ್ಲಿ ವರದಿಗಳಾಗಿ ಬರುತ್ತದೆ....

ಸುಳ್ಯಕ್ಕೆ ಆಗಮಿಸಿದ ಡಾ. ರೇಣುಕಾ ಪ್ರಸಾದ್ ಕೆ.ವಿಯವರಿಗೆ ಸ್ವಾಗತ

ಸುಳ್ಯಕ್ಕೆ ಆಗಮಿಸಿದ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ಕುರುಂಜಿ ವೆಂಕಟ್ರಮಣ ಗೌಡರ ಪುತ್ರ ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರಿಗೆ ಸುಳ್ಯದ ಜನತೆ ಹಾಗೂ ಕೆ.ವಿ.ಜಿ ಕ್ಯಾಂಪಸ್ ಸಿಬ್ಬಂದಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಡಾ. ರೇಣುಕಾ ಪ್ರಸಾದ್ ರವರು ಕ್ಯಾಂಪಸ್ ಜಂಕ್ಷನ್‌ನಲ್ಲಿರುವ ಕೆ.ವಿ.ಜಿಯವರ ಪುತ್ಥಳಿಗೆ ಬಳಗ ಸಾಕ್ಷಿಯಾಯಿತು. ಸೇರಿದ್ದ ಜನಸ್ತೋಮ ಆರ್. ಪಿ.ಯವರಿಗೆ ಆತ್ಮೀಯತೆಯ ನಮನಗಳನ್ನು ಸಲ್ಲಿಸಿದರು. ಮಾಲಾರ್ಪಣೆ...

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಸುವರ್ಣ ಮಹೋತ್ಸವಕ್ಕೆ ಚಾಲನೆ

ಕುಕ್ಕುಜಡ್ಕ ಚೊಕ್ಕಾಡಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಜ.12ರಂದು ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಅಮರಮುಡ್ನೂರು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಾನಕಿ ಕಂದಡ್ಕ ರವರು ಧ್ವಜಾರೋಹಣ ನೆರವೇರಿಸುವ ಮೂಲಕ ಉದ್ಘಾಟಿಸಿದರು. ನೀಡಿದರು.ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಮಾಜಿ ಸಚಿವ ಎಸ್. ಅಂಗಾರರವರು ಶಾಲೆಯ ಪ್ರವೇಶ ಬಾಗಿಲಿನಲ್ಲಿ ವಿದ್ಯಾ ಮಹಾಗಣಪತಿ ಮೂರ್ತಿ ಸ್ಥಾಪಿಸಲಾಗಿದ್ದು ಪುಷ್ಪ ಮಾಲೆಯನ್ನು ಸಮರ್ಪಿಸಿ...

40 ವರ್ಷಗಳಿಂದ ಮಿತ್ತೂರ್ ಉಳ್ಳಾಕುಳ ದೈವದ ಹಾಗೂ ಮಿತ್ತೂರ್ ನಾಯರ್ ದೈವಗಳ ದೊಡ್ಡಪೂಜಾರಿಯಾಗಿ ಸೇವೆ ಸಲ್ಲಿಸಿದ ರವಿರಾಮರಿಗೆ ಸನ್ಮಾನ

40 ವರ್ಷಗಳಿಂದ ಮಿತ್ತೂರ್ ಉಳ್ಳಾಕುಳ ದೈವದ ಹಾಗೂ ಮಿತ್ತೂರ್ ನಾಯರ್ ದೈವಗಳ ದೊಡ್ಡಪೂಜಾರಿಯಾಗಿ ಸೇವೆ ಮಾಡುತಿದ್ದ ರವಿರಾಮ ರೈ ಯಾವರಿಗೆ ಬೂಡು ಮನೆ ತನದ ಪರವಾಗಿ ವಿಶೇಷವದ ಗೌರವರ್ಪಣೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಬಳ್ಳಾರ ಪ್ರತಿನಿಧಿಯಾದ ಬೂಡು ರಾದಕೃಷ್ಣ ರೈ, ರವಿರಾಮ ರೈ ಯವರ ಸೇವೆಯನ್ನು ಬಣಿಸಿ ಶ್ರೀಯುತರ ಗುಣಗಾನ ಮಾಡಿದರು. ಹರೀಶ್ ರೈ ಉಬರಡ್ಕ...

ನೆಹರು ಮೆಮೋರಿಯಲ್ ಕಾಲೇಜು: ಸ್ವಾಮಿವಿವೇಕಾನಂದರ ಜನ್ಮದಿನ ಆಚರಣೆ

ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ಇಲ್ಲಿ ದಿ.೧೨.೦೧.೨೦೨೪ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ ಇವರ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಂ ಬಾಲಚಂದ್ರ ಗೌಡ ಇವರು ಸ್ವಾಮಿ ವಿವೇಕಾನಂದರ ಬಗ್ಗೆ ಮಾತನಾಡಿ, ಅವರ ಆದರ್ಶಗಳನ್ನು ಇಂದಿನ ಯುವಜನತೆ ಮೈಗೂಡಿಸಿಕೊಂಡರೆ ರಾಷ್ಟç ನಿರ್ಮಾಣ...

ಸುಳ್ಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಸ್ವಾಮಿ ವಿವೇಕಾನಂದರ 162ನೇ ಜಯಂತಿ ಆಚರಣೆಯು ಜ.12ರಂದು ಸುಳ್ಯದ ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣ ಸಮಿತಿ ಇದರ ಆಶ್ರಯದಲ್ಲಿ ಸುಳ್ಯದ ಅಂಬೇಟಡ್ಕದಲ್ಲಿ ನಡೆಯಿತು. ಸುಳ್ಯದ ಹೆಚ್.ಇ.ಎಫ್. ಅಧ್ಯಕ್ಷ ಚಿದಾನಂದ ವಿದ್ಯಾನಗರ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಹಾರಾರ್ಪಣೆಗೈದರು. ಹೆಚ್.ಇ.ಎಫ್. ಸ್ಥಾಪಕಾಧ್ಯಕ್ಷ ಕೇಶವ ನಾಯಕ್, ನ.ಪಂ. ಸದಸ್ಯರುಗಳಾದ ಶೀಲಾ ಕುರುಂಜಿ, ಕಿಶೋರಿ ಶೇಟ್ ಮುಖ್ಯ ಅತಿಥಿಗಳಾಗಿದ್ದರು. ಪದ್ಮಶ್ರೀ ಪುರಸ್ಕೃತ...
Loading posts...

All posts loaded

No more posts

error: Content is protected !!