ಐವರ್ನಾಡು ಮುತ್ತುಮಾರಿಯಮ್ಮ ದೇವಸ್ಥಾನ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಕನಕಪುರ ಐವರ್ನಾಡು ಇದರ ಬ್ರಹ್ಮಕಲಶೋತ್ಸವವು ಎ.29,30 ಹಾಗೂ ಮೇ.1ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಆಡಳಿತ ಸಮಿತಿ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

ಹರ್ಷಿಣಿ.ಹೆಚ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ

ಹರ್ಷಿಣಿ.ಹೆಚ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ 82.50 ಅಂಕ ಪಡೆದು ಉತ್ತೀರ್ಣಳಾಗಿರುತ್ತಾಳೆ‌. ಇವಳು ಮರ್ಕಂಜ ಗ್ರಾಮದ ಮೋಹನ ಹೊಸೋಳಿಕೆ ಹಾಗೂ ಮರ್ಕಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಗೀತಾ ಹೊಸೋಳಿಕೆ ದಂಪತಿಗಳ ಪುತ್ರಿ.ಇವಳು ಮರ್ಕಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದಾಸರಬೈಲುನಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಜ್ಞಾನದೀಪ ನವೋದಯ ತರಬೇತಿ ಕೇಂದ್ರ ಸುಳ್ಯದಲ್ಲಿ ತರಬೇತಿ ಪಡೆದಿರುತ್ತಾಳೆ.
Ad Widget

ಬೆಳ್ಳಾರೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಪಾರಂಪರಿಕ ವಸ್ತುಗಳ ಪ್ರದರ್ಶನ ; “ಸ್ವ-ಉದ್ಯೋಗದಿಂದ ಮಹಿಳೆಯರ ಬದುಕು ಸದೃಢ” : ಭಾರತಿ ಕೆ.ಪಿ

“ಸ್ವ-ಉದ್ಯೋಗವು ಮಹಿಳೆಯರ ಬದುಕನ್ನು ಸದೃಢಗೊಳಿಸುತ್ತದೆ ಮತ್ತು ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುತ್ತದೆ. ಮುಂದಿನ ದಿನಗಳಲ್ಲಿ ಮಹಿಳೆಯರು ಸ್ವತಂತ್ರವಾಗಿ ಬದುಕು ಸಾಗಿಸಬೇಕು” ಎಂದು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಭಾರತಿ ಕೆ.ಸಿ ಹೇಳಿದರು. ಅವರು 21 ಮಾರ್ಚ್ 2026 ರಂದು ಸ್ನೇಹಶ್ರೀ ಮಹಿಳಾ ಮಂಡಲದ ವತಿಯಿಂದ ಬೆಳ್ಳಾರೆಯ ಜ್ಞಾನನದೀಪ ಶಿಕ್ಷಣ...

ಎಣ್ಮೂರು ಸರಕಾರಿ ಪ್ರೌಢಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಶ್ರಮದಾನ

ಶಿಸ್ತು, ಸಹಕಾರ ಮತ್ತು ಸೇವಾ ಮನೋಭಾವವನ್ನು ಎಳವೆಯಲ್ಲೇ ಮಕ್ಕಳಲ್ಲಿ ಬೆಳೆಸಲು ಪೂರಕವಾದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಒಂದು ದಿನದ ಶ್ರಮದಾನವನ್ನು ಇತಿಹಾಸ ಪ್ರಸಿದ್ಧವಾದ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯಲ್ಲಿ ನಡೆಸಿದರು. ಎಣ್ಮೂರು ಸರಕಾರಿ ಶಾಲೆಯ ಸುಮಾರು 21 ಸ್ಕೌಟ್ಸ್ ಮತ್ತು 26 ಗೈಡ್ಸ್ ಗಳು ಶ್ರಮದಾನದಲ್ಲಿ ಭಾಗವಹಿಸಿದರು. ಸ್ಕೌಟ್ಸ್ ಶಿಕ್ಷಕರಾದ...

ದ್ವಾದಶ ರಾಶಿಗಳ ದಿನ ಭವಿಷ್ಯ

📝ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197 22-03-2026 ಭಾನುವಾರ01,🐏ಮೇಷರಾಶಿ🐏📃,ಮಾನಸಿಕ ನೆಮ್ಮದಿಗಾಗಿ ದೈವಿಕ ಕಾರ್ಯಕ್ರಮಗಳು ನಿರ್ವಹಿಸುತ್ತೀರಿ. ಸಮರ್ಥನೀಯವಲ್ಲದ ಆಲೋಚನೆಗಳಿಂದ ಅನಾರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ. ಸಹಾಯ ಮಾಡಿದ ಆಪ್ತ ಸ್ನೇಹಿತರಿಂದ ಒತ್ತಡ ಹೆಚ್ಚಾಗುತ್ತದೆ. ವ್ಯವಹಾರಗಳು ಸುಗಮವಾಗಿ ಸಾಗದೆ ಅತೃಪ್ತಿ ಉಂಟಾಗುತ್ತದೆ,ಗಮನಿಸಿ:-ವೃತ್ತಿ ಮತ್ತು ಉದ್ಯೋಗಗಳು ಹೆಚ್ಚುವರಿ ಜವಾಬ್ದಾರಿಗಳನ್ನು ಹೊಂದಿರುತ್ತವೆ,ಪರಿಹಾರ:-ಶ್ರೀಕಾಳಿಕಾದೇವಿಯನ್ನು ಸ್ಮರಣೆ ಮಾಡಿ,02,🐂ವೃಷಭರಾಶಿ🐂📃,ಕೌಟುಂಬಿಕ ವಾತಾವರಣ ಊಟಸಾಗದಿಂದ ಕೂಡಿರುತ್ತದೆ....

ವಿಶ್ವ ಅರಣ್ಯ ದಿನಾಚರಣೆಯ ಪ್ರಯುಕ್ತ ಪೆರ್ನಾಜೆಯಿಂದ ಪಂಜಿಗುಂಡಿಯವರೆಗೆ ಸ್ವಚ್ಛತಾ ಅಭಿಯಾನ

ಕರ್ನಾಟಕ ಅರಣ್ಯ ಇಲಾಖೆ ಪುತ್ತೂರು ವಲಯ, ಸ್ಕೌಟ್ ಗೈಡ್ ಯುವದ್ವನಿ , ಯುವಕ ಮಂಡಲ(ರಿ) ಕನಕಮಜಲು, ಗ್ರಾಮ ಪಂಚಾಯತ್ ಕನಕಮಜಲು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಅರಣ್ಯ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಅಭಿಯಾನ ಪೆರ್ನಾಜೆಯಿಂದ ಪಂಜಿಗುಂಡಿಯವರೆಗೆ ಮಾ 21 ರಂದು ನಡೆಯಿತು ಪೆರ್ನಾಜೆಯಿಂದ ಆನೆಗುಂಡಿ ಮೂಲಕ ಪಂಜಿಗುಂಡಿಯವರೆಗೆ ರಸ್ತೆಯ ಎರಡು ಬದಿಗಳಲ್ಲಿದ್ದ ಕಸಗಳನ್ನು ಹೆಕ್ಕಿ ಸ್ವಚ್ಛತಾ...

ಆಸರೆ ಇಲೆಕ್ಟ್ರಾನಿಕ್ಸ್ ನ ಉಳಿತಾಯ ಯೋಜನೆಯ ಎರಡನೇ ಉಚಿತ ಡ್ರಾ

ಗುತ್ತಿಗಾರು ಆಸರೆ ಇಲೆಕ್ಟ್ರಾನಿಕ್ಸ್ ಗುತ್ತಿಗಾರು ಇದರ ನೂತನ ಉಳಿತಾಯ ಯೋಜನೆಯ ಎರಡನೇ ಫ್ರೀ ಡ್ರಾ ಮಾ.16 ರಂದು ನಡೆಯಿತು. ಯುವ ಉದ್ಯಮಿ ವೀರೇಶ್ ನೆಡ್ಚಿಲ್ ವಿಜೇತರ ಆಯ್ಕೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸಂಸ್ಥೆಯ ಜಯಂತ್ ತಳೂರು, ಲೋಹಿತ್ ಮಾವಿನಗೊಡ್ಲು ಮತ್ತಿತರರು ಉಪಸ್ಥಿತರಿದ್ದರು. ಲಿಖಿತ ಅಚಳ್ಳಿ ( ನಂ. 1013) ಉಚಿತ ಡ್ರಾದ ವಿಜೇತರಾಗಿ ಆಯ್ಕೆಯಾದರು.‌ ಉಳಿತಾಯ...

ಜಿಲ್ಲೆಯಿಂದ ಅತೀ ಹೆಚ್ಚು ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾದ ಬೆಳ್ಳಾರೆಯ ಜ್ಞಾನದೀಪದಲ್ಲಿ ಬೇಸಿಗೆ ರಜೆಯ ವಿಶೇಷ ತರಬೇತಿ ಶಿಬಿರ

ನವೋದಯ ಮತ್ತು ವಿವಿಧ ವಸತಿ ಶಾಲಾ ಪ್ರವೇಶ ಪರೀಕ್ಷೆಗೆ ಕಳೆದ 18 ವರ್ಷಗಳಿಂದ ತರಬೇತಿಗಳನ್ನು ನಡೆಸುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ 2025-26ನೇ ಸಾಲಿನ ಬೇಸಿಗೆ ರಜೆಯ ನವೋದಯ ತರಬೇತಿ ಶಿಬಿರ ಏ.15 ರಿಂದ ಮೇ. 15ರವರೆಗೆ ನಡೆಯಲಿದೆ. ಒಂದು ತಿಂಗಳು ನಡೆಯುವ ಈ ತರಬೇತಿ ಶಿಬಿರದಲ್ಲಿ 4 ಅಥವಾ 5ನೇ ತರಗತಿಯಲ್ಲಿ ಓದುತ್ತಿರುವ...

ಕಲ್ಲಡ್ಕದ ಯುವಕ ಗೂನಡ್ಕದಲ್ಲಿ ಆತ್ಮಹತ್ಯೆ

ಕಲ್ಲಡ್ಕದ ಯುವಕನೋರ್ವ ಗೂನಡ್ಕದ ಕೊಠಡಿಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿ ತಿಲಕರಾಜ್ (29) ಎಂದು ಗುರುತಿಸಲಾಗಿದೆ.ತಿಲಕರಾಜ್ ಅವರು ಮಾ.20 ರಂದು ಸಂಜೆ ಕಲ್ಲಡ್ಕದಿಂದ ಮಡಿಕೇರಿಗೆ ತೆರಳುವುದಾಗಿ ಹೇಳಿ ತಮ್ಮ ಕಾರಿನಲ್ಲಿ ಮನೆಯಿಂದ ಹೊರಟಿದ್ದರು. ಮಾರ್ಗಮಧ್ಯೆ ಗೂನಡ್ಕದಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ತಂಗಿದ್ದರು. ಮಾ.21...

ಇನ್ಸ್ಪೈರ್ ಅವಾರ್ಡ್‌ಗೆ ಕೋಲ್ಚಾರು ಶಾಲೆಯ 4 ವಿದ್ಯಾರ್ಥಿಗಳು ಆಯ್ಕೆ

ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಕೋಲ್ಚಾರು ಇಲ್ಲಿಯ ವಿದ್ಯಾರ್ಥಿಗಳು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆಯೋಜಿಸುವ ಪ್ರತಿಷ್ಠಿತ INSPIRE Awards – MANAK ಯೋಜನೆಗೆ ಆಯ್ಕೆಯಾಗಿರುತ್ತಾರೆ.ಈ ಯೋಜನೆಯಡಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಗಳಾದ ಚಿಂತನ್ ಕೆ.ಎಸ್, ತೃಪ್ತಿ ಕೆ.ವಿ, ಯೋಗರಾಜ ಫಕ್ಕಿರೇಶ ಮಾದರ ಹಾಗೂ...
Loading posts...

All posts loaded

No more posts

error: Content is protected !!