- Monday
- August 10th, 2026
ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಡಿ.16 ರಿಂದ ಧನುಪೂಜೆ ಪ್ರಾರಂಭವಾಗಲಿದ್ದು, ಡಿ.16 ಮಂಗಳವಾರದಿಂದ ಜ.14 ಗುರುವಾರದ ತನಕ ಪ್ರತೀದಿನ ಪ್ರಾತಃಕಾಲ 5:30ಕ್ಕೆ ಧನುಪೂಜೆ ನಡೆಯಲಿದೆ. ಜ.14 ರಂದು ಮಕರ ಸಂಕ್ರಮಣ ಪ್ರಾತಃಕಾಲ 4:00 ಗಂಟೆಯಿಂದ ಉದ್ಯಾಪನ ಧನುಪೂಜೆ ಮತ್ತು ಧನುಪೂಜೆ ಸಮಾಪ್ತಿ ನಡೆದು ಮದ್ಯಾಹ್ನ ವನಶಾಸ್ತವೇಶ್ವರನ ವಾರ್ಷಿಕ ಪೂಜೆ ಹಾಗೂ ವನಭೋಜನ ಕಾರ್ಯಕ್ರಮ...
ಸುಬ್ರಹ್ಮಣ್ಯ ಡಿಸೆಂಬರ್ 10: ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕಿನ ಸುಬ್ರಹ್ಮಣ್ಯ ಹಾಗೂ ಐನೆಕಿದು ಗ್ರಾಮ ಸಮಿತಿ ವತಿಯಿಂದ ಹೊಸಮಠದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಬುಧವಾರ ಶ್ರಮದಾನ ನಡೆಯಿತು.ಕಡಬ ಒಕ್ಕಲಿಗ ಗೌಡ ಸಂಘದ ನಿರ್ದೇಶಕ ಚಂದ್ರಶೇಖರ ಕೋಡಿಬೈಲು ಹಾಗೂ ಹರೀಶ್ ಬರಮಾಡಿಕೊಂಡರು. ಸುಬ್ರಹ್ಮಣ್ಯ ಒಕ್ಕಲಿಗ ಗೌಡ ಗ್ರಾಮ ಸಮಿತಿ ಅಧ್ಯಕ್ಷ...
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಕುಕ್ಕುಜಡ್ಕ ಇದರ ಆಶ್ರಯದಲ್ಲಿ ಡಿ.30ರಂದು ಡಾ. ಪೈಲೂರು ಗೋಪಾಲಕೃಷ್ಣ ವೇದಿಕೆ, ಅಬಸಮ ಸಭಾಂಗಣ, ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕ ಇಲ್ಲಿ ನಡೆಯಲಿರುವ 28ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಡಿ.11ರಂದು ಕುಕ್ಕುಜಡ್ಕ...
ಸುಳ್ಯ ತಾಲೂಕು ಮುರುಳ್ಯ ಗ್ರಾಮದಲ್ಲಿ ಡಿ.ಸಿ ಮನ್ನ ಭೂಮಿಯನ್ನು ಒತ್ತುವರಿ ಮಾಡಿರುವ ಕುರಿತು ದ.ಸಂ.ಸ ಜಿಲ್ಲಾ ಸಮಿತಿ ಸದಸ್ಯ ವಿಶ್ವನಾಥ ಅಲೆಕ್ಕಾಡಿಯವರು ಸುಳ್ಯ ತಹಸೀಲ್ದಾರರಿಗೆ ನೀಡಿರುವ ಮನವಿ ಅರ್ಜಿಯನ್ನು ಪರಿಗಣಿಸಿ ಡಿ.9ರಂದು ಸರ್ವೆ ಕಾರ್ಯ ನಡೆಸಲಾಯಿತು. ಈ ಸರ್ವೆಯಲ್ಲಿ ತಾಲೂಕು ಸರ್ವೆಯರಾದ ಜಗದೇಶ, ಸಹಾಯಕ ಪಂಜ ಹೋಬಳಿ ನಿರೀಕ್ಷಕರಾದ ರಂಜನ್ ಕಲ್ಕುದಿ, ಗ್ರಾಮ ಕರಣಿಕರಾದ ಶ್ರೀಮತಿ...
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ನಾಳೆ(ಡಿ.12) ಬೆಳಿಗ್ಗೆ 10:30ಕ್ಕೆ ಸುಬ್ರಹ್ಮಣ್ಯದ ಸೊಸೈಟಿಯ ಹತ್ತಿರ “ಬೆಳೆ ವಿಮೆ ವಂಚಿತ ಕೃಷಿಕರ ಸಮಾಲೋಚನಾ ಸಭೆ”ಯು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, “ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕೃಷಿಕರು ಕಳೆದ ಸಾಲಿನಲ್ಲಿ ದಾಖಲಾಗಿರುವ ವಿಪರೀತ ಮಳೆ ಹಾಗೂ...
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಯವರ ಕಛೇರಿ ಸುಳ್ಯ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿ.05 ಮತ್ತು 06ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಸಮಾರೋಪ ಸಮಾರಂಭ ಡಿ.6ರಂದು ಸಂಜೆ...
ಗುತ್ತಿಗಾರು ಶ್ರೀ ಕೃಷ್ಣ ಭಜನಾ ಮಂದಿರದ ಆವರಣದಲ್ಲಿ ಇಂಪಾರ್ಟೆಂಟ್ ಫುಟ್ಬಾಲ್ ಕ್ಲಬ್ ಗುತ್ತಿಗಾರು ವತಿಯಿಂದ ಯುವಜನ ಸಂಯುಕ್ತ ಮಂಡಳಿಯ ಪಂಚಸಪ್ತತಿ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷ ಮುಳಿಯ ಸಾತ್ವಿಕ್, ಉಪಾಧ್ಯಕ್ಷ ಕೌಶಿಕ್ ಶ್ಯಾಮ ಮತ್ತು ಶ್ರೀಶರಣ್ ಮೊಗ್ರ, ಪ್ರಧಾನ ಕಾರ್ಯದರ್ಶಿ ಅಶ್ಲೇಶ್, ಖಜಾಂಚಿ ಕಿರಣ ವಳಲಂಬೆ, ನಿರ್ದೇಶಕರಾದ ಅಮಿತ್ ನಾಯಕ್, ಚರಣ್...
ನವದೆಹಲಿ : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುರ್ತಾಗಿ "ಪಾಯಿಂಟ್ ಆಫ್ ಕಾಲ್ (PoC)" ಸ್ಥಾನ-ಮಾನ ನೀಡುವ ಅಗತ್ಯತೆಯನ್ನು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಇಂದು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಲೋಕಸಭೆಯಲ್ಲಿ ನಿಯಮ 377ರಡಿಯಲ್ಲಿ ಈ ವಿಷಯದ ಬಗ್ಗೆ ಧ್ವನಿಯೆತ್ತಿರುವ ಸಂಸದ ಕ್ಯಾಪ್ಟನ್ ಚೌಟ ಅವರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರಾವಳಿ...
ಬೆಂಗಳೂರಿನ ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ತನ್ನ 25ನೇ ವರ್ಷದ ರಜತ ಮಹೋತ್ಸವ ಅಂಗವಾಗಿ ವಿವಿಧ ಕ್ಷೇತ್ರದ ಗಣ್ಯರಿಗೆ ನೀಡುವ ರಾಜ್ಯ ಮಟ್ಟದ ಕರ್ನಾಟಕ ಜ್ಯೋತಿ ಪುರಸ್ಕಾರಕ್ಕೆ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಜ್ಞಾನವಿಕಾಸ ಶಾಲಾ ಸಭಾಭವನದಲ್ಲಿ ಡಿ.21ರಂದು...
ಸುಳ್ಯದ ವಿಶ್ವಾಸ್ ಹೋಟೆಲ್ ನಲ್ಲಿ ಕೆಲಸ ಮಾಡುತ್ರಿದ್ದ ಆಲೆಟ್ಟಿ ಗ್ರಾಮದ ರಂಗತ್ತಮಲೆ ನಿವಾಸಿ ತಲೆಪಲ್ಲ ರಾಜೀವ ನಾಯ್ಕ್ ಅವರ ಪುತ್ರ ಶ್ರೀರಾಮ ಎಂಬವರು ಇದೀಗ ತೀರಾ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗಾಗಿ ಸಹೃದಯಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ತಾನು ಬಡತನದಲ್ಲಿದ್ದರೂ ಇತರರಿಗೆ ಸಮಸ್ಯೆಗಳು ಬಂದಾಗ ತನ್ನಿಂದಾದಷ್ಟು ಸಹಾಯ ಮಾಡುವ ಗುಣ ಶ್ರೀರಾಮನವರದ್ದು, ಆದರೆ ಈಗ ಅವರೇ ತನ್ನ...
Loading posts...
All posts loaded
No more posts
