- Monday
- June 8th, 2026
ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಗಾಂಧಿನಗರ ಶಾಖೆಯ ಲಾಕ್ ಡೌನ್ ಹಾಗೂ ರಂಝಾನ್ ತಿಂಗಳಲ್ಲಿ ನಡೆಸಿದ ಸಾಂತ್ವನ ಕಾರ್ಯಾಚರಣೆಗಳ ವರದಿ ಮಂಡನೆ ಹಾಗೂ ಸಹಾಯ ಸಹಕಾರ ನೆರವುಗಳನ್ನು ನೀಡಿದ ದಾನಿಗಳಿಗೆ ಹಾಗೂ ಅಗಲಿದ ನಾಯಕರು, ಕಾರ್ಯಕರ್ತರಿಗೆ ಪ್ರಾರ್ಥನಾ ಸಂಗಮ ಜರಗಿತು. ವಿವಿಧ ಕಾರ್ಯಾಚರಣೆಗಳಿಗಾಗಿ ಸಿದ್ದೀಖ್ ಕಟ್ಟೆಕಾರ್ ಅವರು ದಾನಿಗಳಿಂದ 60000 ಸಂಗ್ರಹಿಸಿ.ಎಸ್ಸೆಸ್ಸೆಫ್...
ಕೊರೋಣವೈರಸ್ ಮಹಾಮಾರಿಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಂಬಿಡದೆ ಕಾಡುತ್ತಿದ್ದು ಇಂದು ಬೆಳ್ತಂಗಡಿ ತಾಲೂಕಿನ ಅರಂಬೋಡಿ ಗ್ರಾಮದ 29ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಯುವತಿಯು ಮುಂಬೈಯಿಂದ ಬೆಳ್ತಂಗಡಿಗೆ ಬಂದಿರುವುದಾಗಿ ತಿಳಿದು ಬಂದಿದೆ.ಇದರೊಂದಿಗೆ ರಾಜ್ಯದಲ್ಲಿ ಇಂದಿನ ಸೋಂಕಿತರ ಸಂಖ್ಯೆ 105 ದಾಖಲಾಗಿರುತ್ತದೆ. ಇದರೊಂದಿಗೆ ಜಿಲ್ಲೆಯಲ್ಲಿ ಇದೀಗ ಸೋಂಕಿತರ ಸಂಖ್ಯೆ 62ಕ್ಕೆ ಏರಿದೆ.
ತೆಕ್ಕಿಲ್ ಗ್ರಾಮೀಣಾಭಿರುದ್ಧಿ ಪ್ರತಿಷ್ಠಾನ (ರಿ )ಅರಂತೋಡು ಇದರ ವತಿಯಿಂದ ರಂಜಾನ್ ತಿಂಗಳಲ್ಲಿ ನಡೆಸುವ 15ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟವನ್ನು ಕೊರೋನಾ ಕೋವಿಡ್ 19ರ ಮುನ್ನೆಚೆರಿಕಾ ಕ್ರಮವಾಗಿ ಯಾವುದೇ ಸಭೆ ಸಮಾರಂಭ ವನ್ನು ನಡೆಸದೆ ಅತ್ಯಂತ ಸರಳವಾಗಿ ಆಚರಿಸಿ ಆಸು ಪಾಸಿನ ಸುಮಾರು 125 ಮಂದಿಗೆ ಇಫ್ತಾರ್ ಕಿಟ್ ಅನ್ನು ಮನೆ ಮನೆಗೆ ತಲುಪಿಸಲಾಯಿತು.ಈ ಸಂಧರ್ಭದಲ್ಲಿ...
ವಳಲಂಬೆ ಪೈಕ ಕುಂಬಾರಕೇರಿ ಭಾಗಕ್ಕೆ ವಿದ್ಯುತ್ ಸಂಪರ್ಕಗೊಳ್ಳುವ ಹೆಚ್ ಟಿ ಲೈನ್ ಗೆ ತಾಗಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಇಲಾಖೆ ಹಾಗೂ ಊರವರ ಸಹಕಾರದಿಂದ ಮೇ ೨೨ ರಂದು ನಡೆಯಿತು. ಲೋಕೇಶ್ ಡಿ.ಆರ್ ನೇತೃತ್ವದಲ್ಲಿ ನಡೆದ ಶ್ರಮದಾನದಲ್ಲಿ ಮೆಸ್ಕಾಂ ಸಿಬ್ಬಂದಿ ಗಳು ಭಾಗವಹಿಸಿದರು.
ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾದ ದೇಶದ ಜನತೆಗೆ ಆರ್ ಬಿ ಐ ಇಂದು ಸಿಹಿ ಸುದ್ದಿ ನೀಡಿದೆ. ಸಾಲದ ಮೇಲಿನ ಬಡ್ಡಿದರ ಇಳಿಕೆ, ಇ ಎಮ್ ಐ ಪಾವತಿಯ ಅವಧಿಯನ್ನು ಮತ್ತೆ ಮೂರು ತಿಂಗಳಿಗೆ ವಿಸ್ತರಣೆ ಮಾಡುವುದಾಗಿ ಘೋಷಿಸಿದೆ. ಆರ್ ಬಿ ಐ ಮುಖ್ಯಸ್ಥ ಮೇ. ೨೨ ರಂದು ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಘೋಷಿಸಿದ್ದಾರೆ....
ಅಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರಕಾರ ಘೋಷಿಸಿರುವ ಪರಿಹಾರ ಧನವನ್ನು ಶೀಘ್ರವಾಗಿ ವಿತರಣೆ ಮಾಡಬೇಕೆಂದು ಒತ್ತಾಯಿಸಿ ತಾಲೂಕು ದಂಡಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು SDTU ಸುಳ್ಯ ತಾಲೂಕು ಅಧ್ಯಕ್ಷರಾದ ಫೈಝಲ್ ಬೆಳ್ಳಾರೆ, ಕಾರ್ಯದರ್ಶಿ ಕಬೀರ್ ಮಡಿಕೇರಿ, ಜಿಲ್ಲಾ ಖಜಾಂಚಿ ಹಮೀದ್ ಬಿಳಿಯರು, SDPI ಕಾರ್ಯದರ್ಶಿಗಳಾದ ಮುಸ್ತಫ. ಎಂ. ಕೆ SDAU ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ರಹ್ಮಾನ್...
ಬೆಂಗಳೂರು: ಲಾಕ್ ಡೌನ್ ಕಾರಣದಿಂದ ರಾಜ್ಯದ ದೇವಾಲಯಗಳಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಭಕ್ತರು ಸ್ವಲ್ಪಮಟ್ಟಿನ ಸಂಕಷ್ಟಕ್ಕೆ ಒಳಗಾಗಿದ್ದರು. ಆದರೆ ಇದನ್ನು ಪರಿಹರಿಸುವ ಸಲುವಾಗಿ ಧಾರ್ಮಿಕ ದತ್ತಿ ಇಲಾಖೆ ಕೆಲವು ದೇವಸ್ಥಾನಗಳಲ್ಲಿ ಆನ್ ಲೈನ್ ಪೂಜೆಗೆ ಭಕ್ತರಿಗೆ ಅವಕಾಶ ನೀಡಿದೆ. ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು,...
ಅಪಘಾತಕ್ಕೊಳಗಾಗಿ ಸುಳ್ಯ ಸರಕಾರಿ ಆಸ್ಪತ್ರೆ ಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ನಾರಾಯಣ ಪೂಜಾರಿ ಪದವು ಇವರನ್ನು ಗರುಡ ಯುವಕ ಮಂಡಲದ ಸದಸ್ಯರು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಊರವರಿಂದ ಸಂಗ್ರಹಿಸಿದ ಹಣವನ್ನು ಮೇ. 20 ರಂದು ನೀಡಿದರು. ಹಾಗೂ ಇನ್ನೋರ್ವ ಬಾಲಕೃಷ್ಣ ಪೂಜಾರಿ ಕುಳ್ಳಾಜೆ ಇವರು ಕೂಡ ಅಪಘಾತದಿಂದ ಕಾಲು ಮುರಿತಕ್ಕೊಳಗಾಗಿ ಸುಮಾರು ಒಂದು ತಿಂಗಳಿನಿಂದ...
ಆಧುನಿಕ ಭಾರತದ ಮಹಾನ್ ಕನಸು ಹೊತ್ತಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ದುರಂತ ಸಾವನ್ನಪ್ಪಿ ಇವತ್ತಿಗೆ 29 ವರ್ಷ ಗತಿಸಿದೆ. 1991, ಮೇ 21ರಂದು ಚೆನ್ನೈ ಹೊರವಲಯದ ಶ್ರೀಪೆರಂಬುದರೂರ್ ಬಳಿ ಉಗ್ರಗಾಮಿಗಳು ಆತ್ಮಾಹುತಿ ದಾಳಿ ನಡೆಸಿ ರಾಜೀವ್ ಗಾಂಧಿ ಅವರ ಹತ್ಯೆಗೈದಿದ್ದರು. ಈ ಪ್ರಯುಕ್ತ ಇಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕೆ. ಪಿ. ಸಿ....
ಕಲ್ಲುಗುಂಡಿ ಅತಿಥಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿ ಬಾರಿನಲ್ಲಿ ಮದ್ಯ ಸೇವಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ತಪಾಸಣೆಗೆ ತೆರಳಿದ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿಯವರು ಬಾರಿನ ಮ್ಯಾನೇಜರ್ ನ ಮೇಲೆ ದೌರ್ಜನ್ಯ ಮಾಡಿದ್ದಾರೆಂದ ಆರೋಪಿಸಿ ಬಾರಿನ ಮಾಲಕ ಸುಧೀರ್ ಶೆಟ್ಟಿ ನೆಟ್ಟಣ ಅವರು ಡಿವೈಎಸ್ಪಿ...
Loading posts...
All posts loaded
No more posts
