ಐತಪ್ಪ ಕಾಟೂರು ಬಿಳಿಯಾರು ನಿಧನ

ಅರಂತೋಡು ಗ್ರಾಮದ ಬಿಳಿಯಾರು ಕಾಟೂರು ಐತಪ್ಪ ಗೌಡರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರರಾದ ಜನಾರ್ದನ ಕಾಟೂರು, ಗೋಪಾಲಕೃಷ್ಣ ಕಾಟೂರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಶಿಕ್ಷಣಾಧಿಕಾರಿಗಳ ಕಚೇರಿಯ ಅಧೀಕ್ಷಕರಾಗಿ ಶಿವಪ್ರಸಾದ್ ಜಿ.ಎಸ್.ಉಬರಡ್ಕ

ಸುಳ್ಯ ತಾಲೂಕು ಪಂಚಾಯತ್ ನ ಅಕ್ಷರ ದಾಸೋಹ ಕಚೇರಿಯ ಪ್ರಥಮ ದರ್ಜೆ ಸಹಾಯಕರಾಗಿದ್ದ ಶಿವಪ್ರಸಾದ್ ಜಿ.ಎಸ್. ಉಬರಡ್ಕ ರಿಗೆ ಮುಂಭಡ್ತಿ ದೊರೆತಿದ್ದು , ಅವರು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕರಾಗಿ ನೇಮಕಗೊಂಡು , ಕರ್ತವ್ಯಕ್ಕೆ ಹಾಜರಾಗಿದ್ದಾರೆ.
Ad Widget

ಸುಳ್ಯ ಎ.ಪಿ.ಎಂ.ಸಿ ಅವಿರೋಧ ಆಯ್ಕೆ : ಅಧ್ಯಕ್ಷರಾಗಿ ವಿನಯಕುಮಾರ್ ಮುಳುಗಾಡು – ಉಪಾಧ್ಯಕ್ಷರಾಗಿ ನವೀನ್ ಸಾರಕೆರೆ

ಸುಳ್ಯ ಎಪಿಎಂಸಿ ಅಧ್ಯಕ್ಷರಾಗಿ ವಿನಯಕುಮಾರ್ ಮುಳುಗಾಡು ಹಾಗೂ ಉಪಾಧ್ಯಕ್ಷರಾಗಿ ನವೀನ್ ಸಾರಕರೆ ಅವಿರೋಧ ಆಯ್ಕೆ ಯಾಗಿದ್ದಾರೆ. ತಹಶೀಲ್ದಾರ್ ಅನಂತ ಶಂಕರ, ಪ್ರಭಾರ ಉಪತಹಶೀಲ್ದಾರ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. Vinay mulugadu Navin sarakere ಯುವ ನ್ಯಾಯವಾದಿಯಾಗಿರುವ ವಿನಯ ಮುಳುಗಾಡು ಮಡಪ್ಪಾಡಿ ಗ್ರಾ.ಪಂ.ಮಾಜಿ ಸದಸ್ಯರಾಗಿ, ಹಾಗೂ ಪಕ್ಷದಲ್ಲಿ ಯುವಮೋರ್ಚಾ ಮಾಜಿ ಅಧ್ಯಕ್ಷರಾಗಿ, ಪ್ರಸ್ತುತ ಗುತ್ತಿಗಾರು ಶಕ್ತಿ ಕೇಂದ್ರದ...

ಕ್ಯಾಂಪ್ಕೋ ಇಂದಿನ ದರ

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(07.10.2020 ಬುಧವಾರ) ಅಡಿಕೆ ಧಾರಣೆಹೊಸ ಅಡಿಕೆ 225 - 275ಹಳೆ ಅಡಿಕೆ 300 - 360ಡಬಲ್ ಚೋಲ್ 300 - 400 ಹೊಸ ಫಠೋರ 175 - 225ಹಳೆ ಫಠೋರ 220 - 305 ಹೊಸ ಉಳ್ಳಿಗಡ್ಡೆ 110 - 175ಹಳೆ ಉಳ್ಳಿಗಡ್ಡೆ 150 - 230 ಹೊಸ ಕರಿಗೋಟು...

ಅ 10. ಗಾಂಧಿನಗರ ಪ್ಲಾಸ್ಮ ದಾನಿಗಳ ರಕ್ತದ ಮಾದರಿ ಸಂಗ್ರಹ ಶಿಬಿರ

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಫ್ರೆಂಡ್ಸ್ ಸರ್ಕಲ್ ಗಾಂಧಿನಗರ ಇದರ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 10ರಂದು ಸುಳ್ಯದ ಗಾಂಧಿನಗರ ಆನ್ಸರ್ ಕಾಂಪ್ಲೆಕ್ಸ್ ನಲ್ಲಿ ಮಂಗಳೂರು ಕೆಎಸ್ ಹೆಗಡೆ ಮೆಡಿಕಲ್ ಅಕಾಡೆಮಿ ಇವರ ಸಹಭಾಗಿತ್ವದಲ್ಲಿ ಪ್ಲಾಸ್ಮ ದಾನಿಗಳ ರಕ್ತದ ಮಾದರಿ ಸಂಗ್ರಹ ಶಿಬಿರ ನಡೆಯಲಿದೆ ಎಂದು ಸಂಘಟಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಶಿಬಿರ ಬೆಳಿಗ್ಗೆ...

ಎಸ್.ಜೆ.ಎಂ. ಸುಳ್ಯ ರೇಂಜ್ ಕಾನ್ಫರೆನ್ಸ್ ಹಾಗೂ ಬೇಕಲ್ ಉಸ್ತಾದ್ ಅನುಸ್ಮರಣೆ

ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಸುಳ್ಯ ರೇಂಜ್ 250 ಇದರ ವತಿಯಿಂದ ರೇಂಜ್ ಕಾನ್ಪರೇನ್ಸ್ ಹಾಗೂ ಬೇಕಲ್ ಉಸ್ತಾದ್ ರವರ ಅನುಸ್ಮರಣಾ ಕಾರ್ಯಕ್ರಮ ಅಕ್ಟೋಬರ್ 06 ರಂದು ಗಾಂಧಿನಗರ ಮದ್ರಸ ಸಭಾಂಗಣ ನಡೆಯಿತುSJM ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪುಂಡೂರು ದುವಾ ನೇರವೆರಿಸಿದರು.ಅಧ್ಯಕ್ಷತೆ ಸುಳ್ಯ ರೇಂಜ್ ಸಮಿತಿ ಅಧ್ಯಕ್ಷ ಅಲ್ ಹಾಜ್ ಅಬ್ದುಲ್ ಲತೀಫ್...

ಅತೀಕುರ್ ರಹ್ಮಾನ್ ಬಿಡುಗಡೆಗೆ ಒತ್ತಾಯಿಸಿ ಸುಳ್ಯದಲ್ಲಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಹಾಗೂ ಸಂತ್ರಸ್ತೆಯ ಮನೆಗೆ ಭೇಟಿನೀಡುವ ವೇಳೆ ಬಂಧನಕ್ಕೊಳಗಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕೋಶಾಧಿಕಾರಿ ಯ ಬಿಡುಗಡೆಗೆ ಆಗ್ರಹಿಸಿ ಸುಳ್ಯ ಏರಿಯಾ ವತಿಯಿಂದ ಪ್ರತಿಭಟನೆಯು ಸುಳ್ಯ ಬಸ್ಸು ನಿಲ್ದಾಣದ ಬಳಿ ನಡೆಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಅನ್ಸಾರ್ ಬೆಳ್ಳಾರೆ,...

ಹತ್ರಾಸ್ ನಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿದ ಸುಳ್ಯ ಎಎಪಿ ಸಹ ಸಂಚಾಲಕ ರಶೀದ್ ಜಟ್ಟಿಪಳ್ಳ

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಅಮಾನವೀಯ ಅತ್ಯಾಚಾರ ಘಟನೆಯನ್ನು ಖಂಡಿಸಿ ಸಂತ್ರಸ್ತೆ ಪರ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಅಮ್ ಅದ್ಮಿ ಪಕ್ಷದ ರಾಜ್ಯ ಸಭಾ ಸಂಸದರಾದ ಸಂಜಯ್ ಸಿಂಗ್‌, ದೆಹಲಿ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ರಾಖೀ ಬಿರ್ಲಾ, ಶಾಸಕರಾದ ಅಜಯ್ ದತ್ತಾ, ಉತ್ತರ ಪ್ರದೇಶ ರಾಜ್ಯ ಘಟಕದ ಉಪಾಧ್ಯಕ್ಷರಾದ ಪೈಸಲ್ ಲಾಲ್ಜಿ, ಇವರು ಸಂತ್ರಸ್ತೆಯ...

ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ ಪಡೆದ ಚೆಂಬು ಪ್ರೌಢಶಾಲೆಯ ಹಿಂದಿ ಶಿಕ್ಷಕಿ ಕಾಮಾಕ್ಷಿಯವರ ಜೊತೆ ರೇಡಿಯೋ ಸಂದರ್ಶನ (ಅ.7) ನಾಳೆ ಪ್ರಸಾರ

ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ (ರಿ.), ದಿಂದ ಹಿಂದಿ ಶಿಕ್ಷಕ ರತ್ನ 2020 ಪ್ರಶಸ್ತಿ ಪಡೆದ ಕೊಡಗು ಜಿಲ್ಲೆಯ ಚೆಂಬು ಪ್ರೌಢಶಾಲೆಯ ಹಿಂದಿ ಶಿಕ್ಷಕಿ ಶ್ರೀಮತಿ ಕಾಮಾಕ್ಷಿಯವರ ಜೊತೆ ರೇಡಿಯೋ ಸಂದರ್ಶನ ಅಕ್ಟೋಬರ್ 7 ರಂದು ಮಧ್ಯಾಹ್ನ 12.30 ಕ್ಕೆ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಗಲಿದೆ. ಈ ಕಾರ್ಯಕ್ರಮ ರಾಜ್ಯದ ಎಲ್ಲಾ ಬಾನುಲಿ...

ರಸಗೊಬ್ಬರ ಖಾತೆಗೆ ಎರಡನೇ ರ್‍ಯಾಂಕ್ : ನೀತಿ ಆಯೋಗ ನಡೆಸಿದ್ದ ಸಮೀಕ್ಷೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಉತ್ತಮ ಆಡಳಿತ ನಿರ್ವಹಣೆಗೆ ಸಿಕ್ಕಿತು ಗೌರವ

ನೀತಿ ಆಯೋಗ ಪ್ರಕಟಿಸಿದ ದತ್ತಾಂಶ ಸಿದ್ಧತ ಸಮೀಕ್ಷೆಯಲ್ಲಿ ಗುಣಮಟ್ಟದ ಆಡಳಿತ ನಿರ್ವಹಣೆಗಾಗಿ ರಸಗೊಬ್ಬರ ಇಲಾಖೆಗೆ 2 ನೇ ರ್‍ಯಾಂಕ್ ಲಭಿಸಿದೆ. ಒಟ್ಟು 16 ಆರ್ಥಿಕ ಇಲಾಖೆಗಳ ನಡುವೆ ರಸಗೊಬ್ಬರ ಇಲಾಖೆ 2 ನೇ ಸ್ಥಾನ ಪಡೆದು ಈ ಸಾಧನೆ ಮಾಡಿದೆ. ಹಾಗೂ ಕೇಂದ್ರದ ಎಲ್ಲ 65 ಸಚಿವಾಲಯಗಳ ನಡುವೆ ಈ ಇಲಾಖೆ 3 ನೇ ರ್‍ಯಾಂಕ್...
Loading posts...

All posts loaded

No more posts

error: Content is protected !!