- Saturday
- April 19th, 2025

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜೊತೆ ವಿಡಿಯೋ ಕಾನ್ಫರೆನ್ಸ್ ಮೇ. ೨೩ ರಂದು ನಡೆಯಿತು . ಸುಳ್ಯ ಬ್ಲಾಕ್ ಕಾಂಗ್ರೆಸ್ ಪರವಾಗಿ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆಯವರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

ಅರಂಬೂರು ಬಳಿ ಟಿವಿಎಸ್ ಅಪಾಚಿ ಬೈಕ್ ಸ್ಕಿಡ್ ಆಗಿ ಸವಾರರಿಬ್ಬರು ಜಖಂಗೊಂಡ ಘಟನೆ ಇಂದು ಸಂಜೆ ನಡೆದಿದೆ. ಗಾಯಗೊಂಡ ಅರುಣ, ಕಿರಣ ಇಬ್ಬರು ಸಹೋದರರಾಗಿದ್ದು ಪೆರಾಜೆ ಪದ್ಮಯ್ಯ ಅವರ ಪುತ್ರರು. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಪೈಂಟಿಂಗ್ ಕೆಲಸ ಮಾಡುತ್ತಿದ್ದ ಇವರು ಸುಳ್ಯಕ್ಕೆ ಸಾಮಾಗ್ರಿ ಖರೀದಿಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ.

ಕೇಂದ್ರ ಸರಕಾರದ ಆಯುಷ್ ಇಲಾಖೆಯಿಂದ ಪ್ರಮಾಣೀಕೃತ ಕೊರೊನಾ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿ ಆಯುಷ್ ಕ್ವಾಥ್ ಶನಿವಾರ ಮಂಗಳೂರಿನಲ್ಲಿ ಜನರ ಬಳಕೆಗೆ ಬಿಡುಗಡೆಗೊಳಿಸಲಾಗಿದೆ.ಮಂಗಳೂರಿನ ಕೊಡಿಯಾಲ್ ಬೈಲ್ ಸಮೀಪದ ಅಟಲ್ ಸೇವಾ ಕೇಂದ್ರದಲ್ಲಿ ಸಂಸದರೂ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರು ಆಯುಷ್ ಕ್ವಾಥ್ ಬಿಡುಗಡೆಗೊಳಿಸಿ ಮಾತನಾಡಿದರು. ಕೇಂದ್ರ...

ಅಕ್ರಮ ಸಕ್ರಮ ಜಮೀನಿನ ಮಾರಾಟಕ್ಕೆ ಇದ್ದ ನಿಷೇಧವನ್ನು ತೆರವು ಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಈ ಮೂಲಕ ಹಲವರು ತಮ್ಮ ಜಮೀನನ್ನು ಮಾರಾಟ ಮಾಡುವಲ್ಲಿ ಎದುರಿಸುತ್ತಿದ್ದ ಸಮಸ್ಯೆ ದೂರವಾಗಿದೆ
ಪೆರುವಾಜೆ ಗ್ರಾಮದ ಮಣಿಕ್ಕಾರ ಎಂಬಲ್ಲಿ ವೃದ್ದರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ.23 ರಂದು ನಡೆದಿದೆ.ಮಣಿಕ್ಕಾರ ಕೋಡಿಯಡ್ಕ ನಿವಾಸಿ ಶಬರಿನಾಥನ್ (70) ಎಂಬವರು ಮನೆಯ ಸಮೀಪದ ಗೇರು ಮರಕ್ಕೆ ಲುಂಗಿಯಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದುಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಬ್ಬರ್ ಟ್ಯಾಪಿಂಗ್ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದ ಇವರು ಮಾನಸಿಕ ಖಿನ್ನತೆಗೆ ಒಳಪಟ್ಟು...

ಮೇ ೨೩ : ಕರ್ನಾಟಕ ರಾಜ್ಯದಲ್ಲಿ ಇಂದು ಒಟ್ಟು ೧೯೬ ಸೋಂಕಿತರು ಪತ್ತೆಯಾಗಿದ್ದು ಆತಂಕ ಹೆಚ್ಚಾಗಿದೆ. ಕರಾವಳಿ ಪ್ರದೇಶದಲ್ಲಿ ಮುಂದುವರೆದ ಕೊರೊನ ಅಟ್ಟಹಾಸದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದು ಕೊರೊನ ಪ್ರಕರಣ ದೃಢವಾಗಿ ದಕ್ಷಿಣದಲ್ಲಿ ಎರಡು ಉಡುಪಿಯಲ್ಲಿ ಐದು ಪ್ರಕರಣ ದಾಖಲಾಗಿದೆ.ಉಸಿರಾಟದ ಸಮಸ್ಯೆ ಇದ್ದ ಬೆಳ್ತಂಗಡಿ ಶಿರ್ಲಾಲು ಮೂಲದ 41 ವರ್ಷದ ಮಹಿಳೆ ಮತ್ತು...

ದೇವಸ್ಥಾನದ ಪೂಜೆಯನ್ನು ಆನ್ ಲೈನ್ ಮೂಲಕ ಅವಕಾಶ ಕಲ್ಪಿಸುವ ಕೆಲಸ ಖಂಡಿತವಾಗಿಯೂ ಸರಿಯಲ್ಲ ಮತ್ತು ನಮ್ಮ ತುಳುನಾಡಿನ ಸಂಸ್ಕೃತಿಗಳಿಗೆ ಧಕ್ಕೆ ತರುವ ವಿಷಯ. ಎಲ್ಲಾ ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇದೆ ಹೊರತು ಪೋಟೋ ತೆಗೆಯುವ ಮತ್ತು ವಿಡಿಯೋ ಮಾಡುವ ಅವಕಾಶವನ್ನು ನಿರ್ಬಂಧಿಸಲಾಗಿದೆ ಆದರೆ ಈಗ ದೇವರ ಪೂಜೆಯನ್ನು ವೀಡಿಯೋ ಮೂಲಕ ಆನ್ ಲೈನ್...

ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಚಟುವಟಿಕೆಗಳನ್ನ ನಡೆೆೆೆಸಲು 3 ಲಕ್ಷ ದ ವರೆಗೆ ಸಾಲ ನೀಡಲು ಆದೇಶ ಸರಕಾರ ಆದೇಶ ಮಾಡಿದೆ. ಈ ಸಾಲ ನೀಡಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ . ಹೆಚ್ಚಿನ ವಿವರಗಳಿಗೆ ತಮ್ಮ ತಮ್ಮ ಸಹಕಾರಿ ಸಂಘಗಳಲ್ಲಿ ವಿಚಾರಿಸಬಹುದಾಗಿದೆ.

ಜಯನಗರ ದಲ್ಲಿ ಹಲವು ವರ್ಷಗಳಿಂದ ಕಾರ್ಯಚರಿಸುತ್ತಿರುವ ಕಾಮತ್ ಸ್ಟೋರ್ ನವೀಕೃತಗೊಂಡ ಇಂದು ಶುಭಾರಂಭಗೊಂಡಿತು. ವಿಶಾಲವಾದ ಮಳಿಗೆ ಹಾಗೂ ಆಹಾರ ಸಾಮಾಗ್ರಿಗಳ ಹೆಚ್ಚಿನ ಶೇಖರಣೆ, ನಮ್ಮ ಗ್ರಾಹಕರ ಬೇಡಿಕೆ ಯಾಗಿತ್ತು.ಈ ನಿಟ್ಟಿನಲ್ಲಿ ಗ್ರಾಹಕರ ಸೌಲಭ್ಯಕ್ಕಾಗಿ , ಅನುಕೂಲವಾಗಿ ಉತ್ತಮ ಸೇವೆಯನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ , ಗ್ರಾಹಕರು ಎಂದಿನಂತೆ ಸಹಕರಿಸುವಂತೆ ಸಂಸ್ಥೆಯ ಮಾಲಕರು ತಿಳಿಸಿರುತ್ತಾರೆ.

ಮೆಸ್ಕಾಂ ಇಲಾಖೆಯಿಂದ ಮೇ 23 ಶನಿವಾರದಂದು ಸುಳ್ಯ ಹಾಗೂ ಪುತ್ತೂರು ಭಾಗಗಳಲ್ಲಿ ವಿದ್ಯುತ್ ಲೈನ್ ಗಳಲ್ಲಿ ಕೆಲಸಕಾರ್ಯಗಳು ನಡೆಯುವ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ ಉಂಟಾಗುವ ಸಂಭವವಿತ್ತು. ಈ ಮಾಹಿತಿಯನ್ನು ಆಧರಿಸಿ ಮುಸಲ್ಮಾನ ಬಾಂಧವರ ಪವಿತ್ರ ರಂಜಾನ್ ಹಬ್ಬದ ಒಂದು ದಿನ ಮೊದಲು ಈ ರೀತಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾದಲ್ಲಿ ಹಲವಾರು ಸಮಸ್ಯೆಗಳು ಮುಸಲ್ಮಾನ...

All posts loaded
No more posts