Ad Widget

ಅಬ್ದುಲ್ ಲತೀಫ್ ಹತ್ಯೆಗೈದ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಗೃಹ ಸಚಿವರಿಗೆ ಮನವಿ

ಜೂನ್ 5 ರಂದು ಮುಲ್ಕಿಯಲ್ಲಿ ಇತ್ತಂಡಗಳ ಘರ್ಷಣೆಯಲ್ಲಿ ಹತ್ಯೆಗೊಳಗಾದ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಕುಕ್ಕಟ್ಟೆ ನಿವಾಸಿ ಅಬ್ದುಲ್ ಲತೀಫ್ ಅವರನ್ನು ಹಾಡುಹಗಲೇ ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ ದುಷ್ಕರ್ಮಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮುರುಳ್ಯ ಗ್ರಾಮದ ಯೂತ್ ಫ್ರೆಂಡ್ಸ್ ಹಾಗೂ ಸ್ಥಳೀಯ ನಾಗರಿಕರು ಕರ್ನಾಟಕ ರಾಜ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ...

ಗುತ್ತಿಗಾರು ರಿಕ್ಷಾ ನಿಲ್ದಾಣ ರಚನೆಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅನುದಾನ

ಗುತ್ತಿಗಾರು ಪೇಟೆಯ ರಿಕ್ಷಾ ನಿಲ್ದಾಣಕ್ಕೆ ವಿಧಾನ ಪರಿಷತ್ ಸದಸ್ಯರು ಹಾಗೂ ಉಸ್ತುವಾರಿ ಸಚಿವರಾದ ಕೋಟಾ ಶ್ರೀ ನಿವಾಸ ಪೂಜಾರಿಯವರ ಅನುದಾನದಲ್ಲಿ ಶೀಟಿನ ಛಾವಣಿ ನಿರ್ಮಾಣದ ಕಾಮಗಾರಿ ಭರದಿಂದ ನಡೆಯುತ್ತಿದೆ
Ad Widget

ಅಪಾಯದ ಸ್ಥಿತಿಯಲ್ಲಿರುವ ಎಚ್ ಟಿ ಲೈನ್ – ಭಯದಿಂದ ವಾಸಿಸುತ್ತಿರುವ ಪೆರಾಜೆ ನಿವಾಸಿಗಳು

ಸುಳ್ಯದಿಂದ ಪೆರಾಜೆ ಗ್ರಾಮದ ಅರಮನೆಪಾರೆ ಮೂಲಕ ಬಿಳಿಯಾರಿಗೆ ಹಾದು ಹೋಗುತ್ತಿರುವ ವಿದ್ಯುತ್ ಎಚ್ ಟಿ ಲೈನ್ ಸ್ಥಳೀಯ ಜನತೆಯಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಕಳೆದ 2 ವರ್ಷಗಳ ಹಿಂದೆ ಈ ವಿದ್ಯುತ್ ತಂತಿಯನ್ನು ಅಳವಡಿಸಲಾಗಿದ್ದು ತಂತಿಯು ಹಾದು ಹೋಗುವ ಸ್ಥಳದಲ್ಲಿ ಅರಮನೆಪಾರೆಯ 15 ಕ್ಕೂ ಹೆಚ್ಚು ಕುಟುಂಬಗಳು ಭಯದಲ್ಲಿದ್ದಾರೆ. ಈ ಪರಿಸರದಲ್ಲಿ ಕಳೆದ 40 ವರ್ಷಗಳಿಂದ...

ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​​ ಆತ್ಮಹತ್ಯೆ

ಮುಂಬೈ(ಜೂ.14): ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್(34) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ ಇಂದು ಬೆಳಗ್ಗೆ ನೇಣಿಗೆ ಶರಣಾದ ಸ್ಥಿತಿಯಲ್ಲಿ ಸುಶಾಂತ್ ಪತ್ತೆಯಾಗಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೇ ಅವರ ಮಾಜಿ ಮ್ಯಾನೇಜರ್ ಸಾಲಿಯಾನ್ ಸೂಸೈಡ್ ಮಾಡಿಕೊಂಡಿದ್ದರು ಎಂಬುವುದು ಉಲ್ಲೇಖನೀಯ. ಕಾಯ್ ಪೋ ಚೆ ಸಿನಿಮಾ ಮೂಲಕ ಬಾಲಿವುಡ್‌ಗೆ...

ಐವರ್ನಾಡು : ಹೋಮ್ ಪ್ರಾಡಕ್ಟ್ *ಸ್ವರ್ಗ* ಬಿಡುಗಡೆ

ಐವರ್ನಾಡಿನ ಶ್ರೀ ಕ್ಷೇತ್ರ ಬರೆಮೇಲಿನಲ್ಲಿ ಬೂಸ್ಟಮ್ ಹೋಮ್ ಇಂಡಸ್ಟ್ರೀಸ್ ಸಂಸ್ಥೆಯ ಯ ನೂತನ ಉತ್ಪನ್ನ ,"ಸ್ವರ್ಗ" ವನ್ನು ಶ್ರೀ ಮೋನಪ್ಪ ಗೌಡ ಪಾಲ್ತಾಡಿ ಮಾರುಕಟ್ಟೆಗೆಬಿಡುಗಡೆ ಗೊಳಿಸಿದರು, ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ರಾದ ಗೋಪಾಲಕೃಷ್ಣ ಪೈಲಾಜೆ, ಕಾರ್ಯದರ್ಶಿ ಜಯರಾಂ ಪಿಂಡಿಬನ, ಖಜಾಂಚಿ ಪ್ರಮೋದ್ ಮಲ್ಲಾರ, ಸದಸ್ಯರಾದ ಸನತ್ ಬರೆಮೇಲು, ಮತ್ತು ಬರೆಮೇಲು...

ಜೂನ್ 27 ರವರೆಗೆ ಅನುಮತಿ ಪಡೆದ ತುರ್ತು ಪ್ರಕರಣಗಳಿಗೆ ಮಾತ್ರ ಸುಳ್ಯ ನ್ಯಾಯಾಲಯದಲ್ಲಿ ಅವಕಾಶ – ವಕೀಲರ ಸಂಘ

ಕೊವಿಡ್ 19 ಹಿನ್ನೆಲೆಯಲ್ಲಿ ಮುಂದಿನ 15 ದಿನಗಳ ತನಕ ಅಂದರೆ ಜೂನ್ 27 ರ ತನಕ ಈ ಹಿಂದಿನಂತೆ ಅತೀ ಅಗತ್ಯದ ಪ್ರಕರಣಗಳನ್ನು ನಡೆಸುವಂತೆ ಮತ್ತು ಒಂದು ದಿನದಲ್ಲಿ ಕೇವಲ 20 ಪ್ರಕರಣಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಲಾಗಿದೆ .ಆದರಂತೆ ಪೂರ್ವಾನುಮತಿಯಿಲ್ಲದೆ ವಕೀಲರ , ಕೋರ್ಟು ನೌಕರರ ಹೊರತು ಬೇರೆ ಯಾರಿಗೂ ಕೂಡ ಪ್ರವೇಶ ಇರುವುದಿಲ್ಲ .ಒಳಪ್ರವೇಶ ಮಾಡುವ...

ಕನಕಮಜಲು ಬಳಿ ಬೈಕ್ ಮತ್ತು ಕಾರು ಅಪಘಾತ

ಕನಕಮಜಲು ಬಳಿ ಇಂಡಿಕಾಕಾರು ಮತ್ತು ಬೈಕ್ ಪರಸ್ಪರ ಡಿಕ್ಕಿಯಾಗಿ ಬೈಕ್ ಸವಾರ ತೀವ್ರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಸುಳ್ಯ ಕಡೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರು ಪುತ್ತೂರು ಕಡೆಯಿಂದ ಕನಕಮಜಲು ಬರುತ್ತಿದ್ದ ಬೈಕ್ ಇದಾಗಿದ್ದು ಸ್ಥಳೀಯರು ಬೈಕು ಸವಾರರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೈಕ್ ಸವಾರ ಸ್ಥಳೀಯ ಕನಕಮಜಲು ನಿವಾಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ .

*ಕೊರೊನಾ ಇಂದಿನ ಫಲಿತಾಂಶ* ದ.ಕ.- 30, ಉಡುಪಿ- 14, ಕರ್ನಾಟಕ-308

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 30 ಕೊರೊನಾ ಪಾಟಿಸಿವ್ ವರದಿಯಾಗಿದೆ. ಇವರಲ್ಲಿ 25 ಮಂದಿ ಗಲ್ಫ್ ನಿಂದ ಬಂದವರಾಗಿದ್ದರೆ, ಉಳಿದ ಐವರು ಮಹಾರಾಷ್ಟ್ರದಿಂದ ಬಂದವರು. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 271ಕ್ಕೇರಿದೆ. ಉಡುಪಿ ಜಿಲ್ಲೆಯಲ್ಲಿ ಇಂದು 14 ಪ್ರಕರಣಗಳು ವರದಿಯಾಗಿವೆ. ಇವರಲ್ಲಿ ಎಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1005 ಕ್ಕೇರಿದೆ. ಕರ್ನಾಟಕ...

ನೂತನ ಪ್ರಾಂಶುಪಾಲರಾಗಿ ಲೀಲಾಧರ್ ಡಿ.ವಿ.ಅಧಿಕಾರ ಸ್ವೀಕಾರ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಆಶ್ರಯದಲ್ಲಿರುವ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನೂತನ ಪ್ರಾಂಶುಪಾಲರಾಗಿ ಕಾಲೇಜಿನಲ್ಲಿ ಆಡಳಿತಾಧಿಕಾರಿಯಾಗಿದ್ದ ಡಾ. ಲೀಲಾಧರ್ ಡಿ.ವಿ ಯವರನ್ನು ಆಡಳಿತ ಮಂಡಳಿ ನೇಮಕಮಾಡಿದ್ದು, ಅಧಿಕಾರ ವಹಿಸಿಕೊಂಡರು. ಪ್ರಾಂಶುಪಾಲ ಪ್ರೊ. ಎನ್.ಎಸ್.ಶೆಟ್ಟರ್‌ರವರ ನಿವೃತ್ತಿಯಿಂದ ತೆರವಾದ ಪ್ರಾಂಶುಪಾಲ ಹುದ್ದೆಗೆ ಡಾ.ಲೀಲಾಧರ್ ಡಿ.ವಿ.ಯವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರವರು ನೇಮಕಗೊಳಿಸಿದ್ದರು....

ಬೆಳ್ಳಾರೆ ಝಖರಿಯ್ಯಾ ಜುಮಾ ಮಸ್ಜಿದ್ ನಲ್ಲಿ ಸಾಮೂಹಿಕ ಪ್ರಾರ್ಥನೆ

ಲಾಕ್ ಡೌನ್ ಪ್ರಯುಕ್ತ ನಿಲ್ಲಿಸಿದ್ದ ಸಾಮೂಹಿಕ ಪ್ರಾರ್ಥನೆ ಪುನರಾರಂಭಿಸಲು ಸರ್ಕಾರ ನಿರ್ಬಂಧಗಳನ್ನು ತೆರವು ಗೊಳಿಸಿ ಆಜ್ಞೆ ಹೊರಡಿಸಿದ ಹಿನ್ನೆಲೆಯಲ್ಲಿ ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷ ಬಹು. ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ಹಾಗೂ ಇಂಡಿಯನ್ ಗ್ರಾಂಡ್ ಮುಫ್ತಿ ಎ.ಪಿ.ಉಸ್ತಾದರ ಮಾರ್ಗದರ್ಶನ ಹಾಗೂ ಉಭಯ ಜಿಲ್ಲೆಗಳ ಖಾಝಿಗಳ ಸೂಚನೆ ಮತ್ತು ಸರಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು...
Loading posts...

All posts loaded

No more posts

error: Content is protected !!