- Monday
- June 8th, 2026
ಹರಿಯಾಣ ರಾಜ್ಯದ ಕರ್ನಾಲ್ ಜಿಲ್ಲೆಯ ಮಧುಬನದಲ್ಲಿ ನಡೆದ 2026-27ನೇ ಸಾಲಿನ ಆಲ್ ಇಂಡಿಯಾ ಪೊಲೀಸ್ ಗೇಮ್ಸ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಸುಳ್ಯದ ಯುವಕ ಗಮನಾರ್ಹ ಸಾಧನೆ ಮಾಡಿ ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದ್ದಾರೆ. 88 ಕೆ. ಜಿ ವಿಭಾಗದಲ್ಲಿ ಕರ್ನಾಟಕ ಪೊಲೀಸ್ ತಂಡವನ್ನು ಪ್ರತಿನಿಧಿಸಿದ ಸುಳ್ಯದ ಸುಚಿನ್ ಕುಮಾರ್ ಕಂಚಿನ ಪದಕ ಗೆದ್ದು...
ಸುಳ್ಯ ತಾಲೂಕಿನ ಗುತ್ತಿಗಾರಿನ ಕಾಂಪ್ಲೆಕ್ಸ್ ನ ಬಾಡಿಗೆ ಕೊಠಡಿಯೊಂದರಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಇದೀಗ ವರದಿಯಾಗಿದ್ದು, ಗುತ್ತಿಗಾರು ಕೆಳಗಿನ ಪೇಟೆಯ ಕರುವಾಜೆ ಕಾಂಪ್ಲೆಕ್ಸ್ ನ ಮೇಲ್ಬಾಗದಲ್ಲಿರುವ ಬಾಡಿಗೆ ರೂಂ ಟ್ಯಾಪಿಂಗ್ ಕಾರ್ಮಿಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಎರಡು ದಿನಗಳ ಹಿಂದೆಯೇ ಮೃತಪಟ್ಟಿರಬೇಕು ಎಂದು ಅಂದಾಜಿಸಲಾಗಿದ್ದು, ಕಾಂಪ್ಲೆಕ್ಸ್...
ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಿಂದ ಪಂಜ ಬಾಲಾಜಿ ಮಾರ್ಟ್ ನಲ್ಲಿ ನೋಟ್ ಬುಕ್ ಹಾಗೂ ಸ್ಟೇಷನರಿ ವಸ್ತುಗಳ ಮೇಲೆ 10 ರಿಂದ 25% ವರೆಗೆ ಡಿಸ್ಕೌಂಟ್ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.
(ಫೋಟೋ : ಪ್ರಕೃತಿ ಗುತ್ತಿಗಾರು) ಗುತ್ತಿಗಾರಿನ ರಾಘವೇಂದ್ರ ಕಾಂಪ್ಲೆಕ್ಸ್ ನಲ್ಲಿ ಎಸ್.ಆರ್.ಬಿ. ಕೆಫೆ ಇಂದು ಶುಭಾರಂಭಗೊಂಡಿತು. ಹಿರಿಯ ವೈದ್ಯರಾದ ಡಾ. ಚಂದ್ರಶೇಖರ ಕಿರಿಭಾಗ ಅವರು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಎಸ್. ಆರ್.ಬಿ. ಕೆಫೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮುಳಿಯ ತಿಮ್ಮಪ್ಪಯ್ಯ, ಬಿ.ಕೆ.ಬೆಳ್ಯಪ್ಪ ಗೌಡ, ಮುಳಿಯ ಕೇಶವ ಭಟ್, ಭರತ್ ಮುಂಡೋಡಿ, ಮಿತ್ರದೇವ ಮಡಪ್ಪಾಡಿ,...
“ಪುತ್ತೂರು - ಬಾಳುಗೋಡು ಮಾರ್ಗದಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್(KA 57 F 0964)ನಲ್ಲಿ ಸವಣೂರಿನಿಂದ ಪಂಜವರೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಪೂರ್ಣ ನಿಂತುಕೊಂಡೇ ಪ್ರಯಾಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದಾಗ ಬಸ್ ಒಳಗೆ ನೀರು ಸೋರಿಕೆಯಾಗುತ್ತಿದ್ದು, ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ಪ್ರತಿದಿನ ಸಂಕಷ್ಟದಲ್ಲೇ ಶಾಲೆ ಹಾಗೂ ಕಾಲೇಜುಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ....
ದಿನಾಂಕ : 28 ಮೇ 2026ವಾರ : ಗುರುವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 28) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 415 ರಿಂದ...
ದಿನಾಂಕ : 28-05-2026 ಗುರುವಾರ*01,ಮೇಷ ರಾಶಿ*,ಇಂದು ತೊಡಕುಗಳಿಂದ ಕೂಡಿದ ದಿನವಾಗಿರಲಿದೆ. ಯಾರೋ ಹೇಳಿದ ವಿಷಯದ ಬಗ್ಗೆ ನಿಮಗೆ ಬೇಸರವಾಗುತ್ತದೆ. ನಿಮ್ಮ ನೆರೆಹೊರೆ ಯವರೊಂದಿಗೆ ವಿವಾದಗಳಿಂದ, ದೂರವಿರುವುದು, ಉತ್ತಮ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ದೀರ್ಘಾವಧಿ ಸಾಲ ಮನ್ನಾ ಆಗಲಿದೆ,ಗಮನಿಸಿ:-ದೂರ ಪ್ರಯಾಣದ ಸೂಚನೆಗಳಿವೆ, ಪರಿಹಾರ:-ಶ್ರೀಮಹಾಲಕ್ಷ್ಮಿಯನ್ನು ಪೂಜಿಸಿ, *02,ವೃಷಭ ರಾಶಿ*,ಇಂದು ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಸಹೋದ್ಯೋಗಿಗಳಿಂದ ನೀವು ಸಹಾಯವನ್ನು ತೆಗೆದುಕೊಳ್ಳಬೇಕಾಗಬಹುದು,...
33/11 ಕೆ.ವಿ ಮಾಡಾವು-ಬೆಳ್ಳಾರೆ ಮತ್ತು 33/11 ಕೆ.ವಿ ಮಾಡಾವು-ಗುತ್ತಿಗಾರು ಹಾಗೂ ಸುಬ್ರಹ್ಮಣ್ಯ ವಿದ್ಯುತ್ ಮಾರ್ಗಗಳಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಮೇ.29 ಶುಕ್ರವಾರದಂದು ಪೂರ್ವಾಹ್ನ 9:30 ರಿಂದ ಸಾಯಂಕಾಲ 5:30 ರವರೆಗೆ 33/11 ಕೆ.ವಿ ಬೆಳ್ಳಾರೆ, 33/11 ಕೆ.ವಿ ಗುತ್ತಿಗಾರು ಮತ್ತು 33/11 ಕೆ.ವಿ ಸುಬ್ರಹ್ಮಣ್ಯ ವಿದ್ಯುತ್ ಉಪಕೇಂದ್ರದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11 ಕೆ.ವಿ...
ಸುಳ್ಯದ ಸಿನಿಪ್ರಿಯರಿಗೆ ಹಲವಾರು ವರ್ಷಗಳ ಕಾಲ ರಸದೌತಣವನ್ಬು ನೀಡಿದ್ದ ಸಂತೋಷ್ ಥಿಯೇಟರ್ ನೂತನ ಆಡಳಿತದಲ್ಲಿ ಸಿನೆಮಾ ಮಂದಿರದಲ್ಲಿ ಹೊಸ ಅಧ್ಯಾಯಗಳನ್ನು ಆರಂಭಿಸುವ ಸಲುವಾಗಿ ಭಾರತ್ ಸಿನೆಮಸ್ ಎಂಬ ನವನಾಮದಲ್ಲಿ ನವ ವಿನ್ಯಾಸಗಳಿಗೆ ತೆರೆದುಕೊಂಡಿದೆ. ಇದೀಗ ನಿರಂತರ ಸಿನೆಮಾಗಳ ಪ್ರದರ್ಶನ ಆರಂಭಗೊಂಡಿದ್ದು, ಜನರು ತಂಡೋಪತಂಡವಾಗಿ ಬಂದು ಸಿನೆಮಗಳನ್ನು ವೀಕ್ಷಿಸುತ್ತಿದ್ದಾರೆ. ಪ್ರತೀ ದಿನ ಮಧ್ಯಾಹ್ನ 1:15 ರಿಂದ 4:15...
ಮೇ.26 ಮಂಗಳವಾರದಂದೇ ಕೇರಳಕ್ಕೆ ಮುಂಗಾರು ಮಾರುತ ಪ್ರವೇಶಿಸಲಿದೆ ಎಂದು ಕಾದಿದ್ದ ಜನರಿಗೆ ಇದೀಗ ನಿರಾಶೆಯಾಗಿದೆ. ಈ ಬಾರಿ ವಾಡಿಕೆಗಿಂತ ಮುಂಚಿತವಾಗಿಯೇ ನೈಋತ್ಯ ಮಾರುತಗಳು ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಸಮುದ್ರದ ತಾಪಮಾನ, ಗಾಳಿಯ ವೇಗ, ಮೋಡಗಳ ದಿಕ್ಕು ಬದಲಾವಣೆ, ವಾತಾವರಣದ ಏರುಪೇರುಗಳಿಂದಾಗಿ ಮುಂಗಾರು ಮಾರುತಗಳು ನಿಗದಿತ ಸಮಯಕ್ಕೆ ತಲುಪಿಲ್ಲ ಎಂದು...
Loading posts...
All posts loaded
No more posts
