Ad Widget

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ಎಸ್‌.ಡಿಎಂ.ಸಿ ಗೆ “ರಾಜ್ಯಮಟ್ಟದ ಉತ್ತಮ ಎಸ್‌.ಡಿ.ಎಂ.ಸಿ ಪ್ರಶಸ್ತಿ”

ಕನ್ನಡ ಶಾಲೆ ಉಳಿಸಿ ಬೆಳೆಸಿ ಸಂಘಟನೆ(ರಿ.) ಕರ್ನಾಟಕ ಇವರು ಕೊಡಮಾಡುವ “ಉತ್ತಮ ಎಸ್‌.ಡಿ.ಎಂ‌.ಸಿ ರಾಜ್ಯ ಪ್ರಶಸ್ತಿ”ಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌.ಡಿ.ಎಂ.ಸಿ) ಪಡೆದುಕೊಂಡಿದೆ. ಫೆ.11ರಂದು ಮಂಗಳೂರಿನ ಪುರಭವನದಲ್ಲಿ ನಡೆದಂತಹ "ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ"ದ ರಾಜ್ಯ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಎಸ್‌.ಡಿ.ಎಂ‌.ಸಿ ಕಾರ್ಯಾಧ್ಯಕ್ಷರಾದ ಹರ್ಷ ಭಟ್...

ಕೋಟೆ ಫೌಂಡೇಶನ್ ವತಿಯಿಂದ ಕೆ.ಪಿ.ಎಸ್ ಬೆಳ್ಳಾರೆ ಪ್ರಾಥಮಿಕ ವಿಭಾಗಕ್ಕೆ ಸ್ಮಾರ್ಟ್ ಕ್ಲಾಸ್ ಕೊಡುಗೆ

ಕರ್ನಾಟಕ ಪಬ್ಲಿಕ್ ಸ್ಕೂಲ್, ಬೆಳ್ಳಾರೆ ಇದರ ಪ್ರಾಥಮಿಕ ವಿಭಾಗಕ್ಕೆ ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ ಕ್ಲಿಯೋ ಸಾಫ್ಟ್ವೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇವರು ಪ್ರಾಯೋಜಿಸಿರುವ ಸ್ಮಾರ್ಟ್ ಕ್ಲಾಸನ್ನು ಇಂದು ಉದ್ಘಾಟಿಸಲಾಯಿತು. ಕೆ.ಪಿ.ಎ.ಸ್ ಬೆಳ್ಳಾರೆ ಇದರ ಎಸ್.ಡಿ.ಎಂ.ಸಿಯ ಕಾರ್ಯಾಧ್ಯಕ್ಷರಾದ ಹರ್ಷ ಜೋಗಿಬೆಟ್ಟು ಇವರು ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಿ ಮಾತನಾಡುತ್ತ, “ಕೋಟೆ ಫೌಂಡೇಶನ್ ಸಂಸ್ಥೆಯು...
Ad Widget

ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರ ಅಧ್ಯಯನ ಪ್ರವಾಸ

ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವತಿಯಿಂದ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರಿಗೆ ಒಂದು ದಿನದ ಅಧ್ಯಯನ ಪ್ರವಾಸ ನಡೆಯಿತು. ಅಧ್ಯಯನ ಪ್ರವಾಸದಲ್ಲಿ ವಿದ್ಯಾರ್ಥಿ ಶಿಕ್ಷಕಿಯರು ಕಲ್ಲಡ್ಕ ಮ್ಯೂಸಿಯಂಗೆ ಭೇಟಿ ನೀಡಿ ಅಲ್ಲಿನ ಪಾರಂಪರಿಕ ವಸ್ತು ಸಂಗ್ರಹಾಲಯ ಸೇರಿದಂತೆ ರಾಜರ ಕಾಲದಲ್ಲಿ ಉಪಯೋಗಿಸುತ್ತಿದ್ದ ಅಪರೂಪದ ನಾಣ್ಯಗಳು, ದೇಶ,ವಿದೇಶದ ಹಲವು ಬಗೆಯ ಕರೆನ್ಸಿ ನೋಟುಗಳು, ಹಳೆಯ ಹಾಗೂ...

ಬಾಕಿಲ – ಪೈಕ ಕಾಂಕ್ರೀಟ್ ರಸ್ತೆ ಉದ್ಘಾಟನೆ ನೆರವೇರಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಶಾಸಕರ ವಿಶೇಷ ಅನುದಾನದಿಂದ ಮಂಜೂರಾದ 20 ಲಕ್ಷ ರೂ. ಗಳ ಬಾಕಿಲ - ಪೈಕ ಕಾಂಕ್ರೀಟ್ ರಸ್ತೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ಫೆ.17 ರಂದು ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ವೆಂಕಟ್ ವಳಲಂಬೆ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಮೂಕಮಲೆ, ಸದಸ್ಯರಾದ ಜಗದೀಶ್ ಬಾಕಿಲ, ಹಿರಿಯರಾದ...

ಗುತ್ತಿಗಾರು :- ಮಕ್ಕಳ ಶಾಲಾ ಶಿಬಿರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಇದರ ವತಿಯಿಂದ ಗುತ್ತಿಗಾರು ವಲಯದ ಗುತ್ತಿಗಾರು ಪಿ.ಯಂ ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ದಿನದ ಶಾಲಾ ಶಿಬಿರವನ್ನು ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪಿ.ಎ.ಸಿ.ಎಸ್ ಬ್ಯಾಂಕ್ ನ ಅಧ್ಯಕ್ಷರಾದ ಜಯಪ್ರಕಾಶ್ ಮೊಗ್ರ ರವರು ಬಣ್ಣದ ಪೇಪರ್...

ದೇವಚಳ್ಳ : ಕೃಷಿಕರಿಗೆ ಏಣಿ ವಿತರಣೆ – ಸೌಲಭ್ಯ ಪಡೆದ 110 ಜನ ಫಲಾನುಭವಿಗಳು

ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿ., ಕೇಂದ್ರ ವಿಟ್ಲ ಇವರ ವತಿಯಿಂದ ದೇವಚಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿಕರಿಗೆ ಏಣಿಗಳ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ದೇವಚಳ್ಳ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಅಧಿಕಾರಾವಧಿಯ ಕೊನೆಯ ದಿನವಾದ ಫೆ.17 ರಂದು ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಭಾರತ ಕೃಷಿ ಅಭಿವೃದ್ಧಿ...

ಜಟ್ಟಿಪ್ಪಳ್ಳ : ಬೆಂಕಿಗೆ ಆಹುತಿಯಾದ ಗ್ಯಾರೇಜ್

ಸುಳ್ಯದ ಜಟ್ಟಿಪ್ಪಳ್ಳದಲ್ಲಿರುವ ಧೂಮವತಿ ಇಂಡಸ್ಟ್ರೀಸ್ ಮತ್ತು ಪ್ರವೀಣ್ ಗ್ಯಾರೇಜ್ ಬೆಂಕಿಗೆ ಆಹುತಿಯಾದ ಘಟನೆ ಕಳೆದ ರಾತ್ರಿ ನಡೆದಿದೆ. ರಾತ್ರಿ 12 ರ ವೇಳೆಗೆ ಬೆಂಕಿ ಧೂಮವತಿ ಇಂಡಸ್ಟ್ರೀಸ್ ನಲ್ಲಿ ಬೆಂಕಿ ಕಾಣಿಸಿಕೊಂಡು, ಬಳಿಕ ಸಮೀಪದಲ್ಲಿರುವ ಪ್ರವೀಣ್ ಗ್ಯಾರೇಜ್ ಗೂ ಆವರಿಸಿದೆ. ಸ್ಥಳೀಯರಿಗೆ ವಿಷಯ ತಿಳಿದು ಆಗ್ನಿಶಾಮಕ ದಳದ ಸಹಾಯದಿಂದ ಬೆಂಕಿ ನಂದಿಸಲಾಗಿದೆ.

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:18/02/2026 ಬುಧವಾರ*01,🐏ಮೇಷ ರಾಶಿ🐏*🌻, ಇಂದು ಶುಭ ಸಮಯವಾಗಲಿದೆ. ನೀವು ಆಕರ್ಷಣೆಯ ಕೇಂದ್ರಬಿಂದುವಾಗಿ ಉಳಿಯುತ್ತೀರಿ. ಪ್ರೇಮ ಸಂಬಂಧಗಳಲ್ಲಿ ಮಾಧುರ್ಯ ಇರುತ್ತದೆ. ಹೊಸ ವಾಹನ ಖರೀದಿಸುತ್ತೀರಿ. ನಿರುದ್ಯೋಗಿಗಳ ಬಹುದಿನಗಳ ಕನಸು ಈಡೇರಲಿದೆ. ವ್ಯಾಪಾರಗಳು, ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತವೆ. ಕೈಗೊಂಡಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಆತ್ಮೀಯರಿಂದ ಶುಭಸುದ್ದಿದೊರೆಯುತ್ತದೆ,ಗಮನಿಸಿ:-ಉದ್ಯೋಗದಲ್ಲಿ ಅಧಿಕಾರಿಗಳೊಂದಿಗಿನ ಚರ್ಚೆಗಳು ಯಶಸ್ವಿಯಾಗುತ್ತವೆ,ಪರಿಹಾರ:-ಈ ದಿನ ಶಿವಾಲಯಕ್ಕೆ ದೀಪದ ಎಣ್ಣೆ ಕೊಡಿ,*02,🐂ವೃಷಭ ರಾಶಿ🐂*🌻,ಇಂದು ಕೆಲಸದ ಸವಾಲುಗಳನ್ನು...

ಪರ್ಲೆಡಿ – ಅಂಬೆಕಲ್ಲು ಕಾಂಕ್ರೀಟ್ ರಸ್ತೆ ಉದ್ಘಾಟನೆ

ದೇವಚಳ್ಳ ಗ್ರಾಮದ ಪರ್ಲೆಡಿ - ಅಂಬೇಕಲ್ಲು ಕಾಂಕ್ರೀಟ್ ರಸ್ತೆಯ ಉದ್ಘಾಟನೆ ಫೆ.17 ರಂದು ರಸ್ತೆಯ ಫಲಾನುಭವಿ ಹಾಗೂ ಹಿರಿಯರಾದ ಬಾಲಪ್ಪ ನಾಯ್ಕರವರು ಟೇಪ್ ಎಳೆಯುವ ಮೂಲಕ ನೆರವೇರಿಸಿದರು.  ಪದ್ಮನಾಭ ಗೌಡ ಅಂಬೆಕಲ್ಲುರವರು ದೀಪ ಬೆಳಗಿ, ನಾರಾಯಣ ನಾಯ್ಕ ಪರ್ಲೆಡಿ ತೆಂಗಿನಕಾಯಿ ಒಡೆದರು.  ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿ ರಸ್ತೆ ನಿರ್ಮಾಣ...

ಗುತ್ತಿಗಾರು : ಆಸರೆ ಇಲೆಕ್ಟ್ರಾನಿಕ್ಸ್ ನ ಅದೃಷ್ಟ ಗ್ರಾಹಕರ ಆಯ್ಕೆ ಮತ್ತು ಬಹುಮಾನ ವಿತರಣೆ

ಆಸರೆ ಇಲೆಕ್ಟ್ರಾನಿಕ್ಸ್ ನಲ್ಲಿ ಅದೃಷ್ಟ ಗ್ರಾಹಕರ ಆಯ್ಕೆ ಮಾಡಿ ಬಹುಮಾನ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿತ್ತು.‌ ನಿವೃತ್ತ ಎ.ಎಸ್.ಐ ಸುಬ್ಬಣ್ಣ ಮಣಿಯಾನ ಮನೆ ಇವರು ಅದೃಷ್ಟ ಗ್ರಾಹಕರ ಆಯ್ಕೆ ನಡೆಸಿಕೊಟ್ಟರು. ಅದೃಷ್ಟ ಗ್ರಾಹಕರಾಗಿ ಆಯ್ಜೆಯಾದ ಶ್ರೀಮತಿ ದನ್ಯಾಮಿಥುನ್ ಪೇರಾಲು, ಜಾಕೆ ನವೀನ್ ಮತ್ತು ಮನೆಯವರು, ಶ್ರೀಮತಿ‌ ಮತ್ತು ಶ್ರೀ ಶೈಲೇಶ್ ಅಂಬೆಕಲ್ಲು, ಚಿನ್ನಮ್ಮ ಬಾಕಿಲ ಇವರಿಗೆ ಸಂಸ್ಥೆಯ...
Loading posts...

All posts loaded

No more posts

error: Content is protected !!