ಕಡಬ : ವಿದ್ಯುತ್ ಶಾಕ್ , ಪವರ್ ಮ್ಯಾನ್ ಮೃತ್ಯು

ವಿದ್ಯುತ್ ಕಂಬವೇರಿ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಒಬ್ಬರು ಗಂಭೀರ ಗಾಯಗೊಂಡು, ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಎಂಬಲ್ಲಿ ನಡೆದಿದೆ. ಮೃತಪಟ್ಟ ಲೈನ್ ಮ್ಯಾನ್ ಅನ್ನು ಬಾಗಲಕೋಟೆ ಜಿಲ್ಲೆಯ ದ್ಯಾಮಣ್ಣ ದೊಡ್ಮನಿ ಎಂದು ಗುರುತಿಸಲಾಗಿದೆ. ತಲೆಕ್ಕಿ ಬಳಿ ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುತ್ತಿದ್ದ ವೇಳೆ ಹಠಾತ್...

ಕವನ : ಜೀವನದ ಸಂತೆಯಲ್ಲಿ ಕನಸುಗಳ ಮಾರಾಟ…

ಜೀವನದಲ್ಲಿ ಗೆಲ್ಲಬೇಕೆಂಬ ಕನಸು ಕಂಡವರೆಷ್ಟೋ, ಜೀವನದ ಅನಿವಾರ್ಯತೆಗಳಿಗಾಗಿ ತಮ್ಮ ಕನಸುಗಳನ್ನು ಬಚ್ಚಿಟ್ಟು ಮುನ್ನಡೆದವರೆಷ್ಟೋ…ಕನಸುಗಳ ಹೊತ್ತು ಅಲೆದಾಡಿದವರೆಷ್ಟೋ, ಅವಕಾಶಕ್ಕಾಗಿ ಕೈಚಾಚಿದವರೆಷ್ಟೋ…ನಮ್ಮಿಂದ ಸಾಧನೆ ಮಾಡಲು ಸಾಧ್ಯವೇ ಎಂದು ಭಯಪಟ್ಟು ಕುಳಿತವರೆಷ್ಟೋ, ನಮ್ಮಿಂದಾಗದು ಎಂದು ಕನಸುಗಳ ಮರೆತು ಹೊರನಡೆದವರೆಷ್ಟೋ…ಕಷ್ಟಗಳ ಕೋಟೆಯಲ್ಲಿ ಕನಸುಗಳ ಬಿಟ್ಟವರೆಷ್ಟೋ, ನೋವಿನ ನರಕದಲ್ಲಿ ಕನಸುಗಳ ಮರೆತವರೆಷ್ಟೋ…ಕನಸುಗಳ ಬಚ್ಚಿಟ್ಟು, ಭಯಪಟ್ಟು, ಮರೆತ ಮಾತ್ರಕ್ಕೆ ಕನಸುಗಳು ಕರಗುವುದಿಲ್ಲ, ಆದರೆ ನನಸಾಗದೇ...
Ad Widget

ಸುಳ್ಯ: ಕ್ಯಾನ್ಸರ್ ಪೀಡಿತರಿಗಾಗಿ 11 ವರ್ಷದ ಬಾಲಕನಿಂದ ಕೇಶದಾನ

ಹನ್ನೊಂದು ವರ್ಷದ ಬಾಲಕನೊಬ್ಬ ಮೂರು ವರ್ಷಗಳಿಂದ ಬೆಳೆಸಿದ ತನ್ನ ತಲೆಕೂದಲನ್ನು ಕ್ಯಾನ್ಸರ್‌ ಪೀಡಿತರಿಗೆ ದಾನ ಮಾಡುವ ಮೂಲಕ ಮಾದರಿಯಾಗಿದ್ದಾನೆ. ಕಾಸರಗೋಡು ಹಾಗೂ ಸುಳ್ಯ‌ತಾಲೂಕಿನ ಗಡಿಭಾಗ ಅಡೂರು ಗ್ರಾಮದ ಮಣಿಯೂರಿನ ನವೀನ್‌ ರಾವ್‌ ಸಿಂಧ್ಯಾ ಹಾಗೂ ಭವಾನಿ ದಂಪತಿಯ 11 ವರ್ಷ ಪ್ರಾಯದ ಪುತ್ರ ರತೀಶ್‌ ಸಿ. ಕೇಶದಾನ ಮಾಡಿರುವ ಬಾಲಕ. ಈತ ಮುಳ್ಳೇರಿಯಾದ ವಿದ್ಯಾಶ್ರೀ ಶಿಕ್ಷಣ...

ಸುಳ್ಯ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ತಾಲೂಕನ್ನು ಮಾದರಿ ಕ್ಷೇತ್ರವನ್ನಾಗಿಸಲು ಅಧಿಕಾರಿಗಳೂ ಸಹಕರಿಸಿಬೇಕು _ಶಾಸಕಿ ಭಾಗೀರಥಿ ಮುರುಳ್ಯ

ಸರಕಾರದ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳ ಜವಬ್ದಾರಿ ಹೆಚ್ಚಿನದ್ದು. ಅಧಿಕಾರಿಗಳು ಜನರನ್ನು ಯಾವುದೇ ಕಾರಣಕ್ಕೂ ಸತಾಯಿಸದೇ ಅವರಿಗೆ ಸೂಕ್ತ ಸಲಹೆಗಳನ್ನು ನೀಡಿ ಅವರ ಕೆಲಸಗಳನ್ನು ಮಾಡಿಕೊಡಬೇಕು. ಸುಳ್ಯವನ್ನು ಮಾದರಿ ಕ್ಷೇತ್ರವನ್ನಾಗಿಸುವ ನನ್ನ ಕನಸಿಗೆ ಅಧಿಕಾರಿಗಳು ಸಹಕರಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದರು. ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು...

ದ.ಕ.ಜಿಲ್ಲಾ ಪ್ರಭಾರ ಎಸ್.ಪಿ.ಯಾಗಿ ಸಿ.ಬಿ. ರಿಷ್ಯಂತ್

ದಾವಣಗೆರೆ ಜಿಲ್ಲೆ ಎಸ್.ಪಿ ಆಗಿ ಇದೀಗ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಡಿ.ಜಿ ಕಚೇರಿಯಲ್ಲಿದ್ದ ಸಿ.ಬಿ ರಿಷ್ಯಂತ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರ ಎಸ್.ಪಿ.ಯಾಗಿ ನೇಮಿಸಲಾಗಿದೆ.ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ಎಸ್.ಪಿ. ವಿಕ್ರಮ್ ಅಮ್ಟೆ ಅವರು ರಜೆಯಲ್ಲಿರುವ ಕಾರಣ ರಿಷ್ಯಂತ್ ಅವರು ಪ್ರಭಾರವಾಗಿ ಕರ್ತವ್ಯ ಮಾಡಲು ಸರಕಾರ ಅದೇಶ ಹೊರಡಿಸಿದೆ. ಸಿ.ಬಿ ರಿಷ್ಯಂತ್ 2013 ಬ್ಯಾಚ್...

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ನೇಮಕಾತಿ ಪ್ರಾರಂಭ

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF) ನೇಮಕಾತಿ _2023 ಪ್ರಾರಂಭಗೊಂಡಿದ್ದು, ಆನ್’ಲೈನ್ (ವೆಬ್’ಸೈಟ್ ಮೂಲಕ) ಅಪ್ಲೈ ಮಾಡಬಹುದು. Link: https://www.jobsplus.in/KMFJOBSAPPLY ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 219 ಒಟ್ಟು ಹುದ್ದೆಗಳಿದ್ದು, 10ನೇ ತರಗತಿ, 12ನೇ ತರಗತಿ, ಐ.ಟಿ.ಐ., ಡಿಪ್ಲೊಮಾ ಅಥವಾ ಯಾವುದೇ ಡಿಗ್ರಿ ಪಾಸ್ ಆಗಿರಬೇಕು. 21,400 ರಿಂದ...

ಜೂ.15ರವರೆಗೆ ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಉಚಿತ / ರಿಯಾಯಿತಿ ದರದಲ್ಲಿ ಪ್ರಯಾಣ

ರಾಜ್ಯಾದ್ಯಂತ ವಿದ್ಯಾರ್ಥಿಗಳು ಶಾಲಾ – ಕಾಲೇಜುಗಳಿಗೆ ದಾಖಲಾತಿ ಮಾಡಿಕೊಂಡು ಪಾಸ್‌ ವಿತರಣೆ ಮಾಡುವವರೆಗೂ ಅಂದರೆ ಜೂನ್‌ 15ರವರೆಗೆ ಹಿಂದಿನ ವರ್ಷದ ಬಸ್‌ಪಾಸ್‌ಗಳು ಹಾಗೂ ಶಾಲೆ- ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದ ಶುಲ್ಕ ಪಾವತಿ ರಶೀದಿಯನ್ನು ತೋರಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಪ್ರಯಾಣ ಮಾಡಬಹುದು ಎಂದು ಕೆಎಸ್‌ಆರ್‌ಟಿಸಿ...

ಮ್ಯಾರಥಾನ್‌ನಲ್ಲಿ ವಿದ್ಯಾ ಹರೀಶ ಬಂಗಾರಕೋಡಿಗೆ ಬಹುಮಾನ

ಮೈಸೂರಿನಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ಸ್‌ನ ಎರಡು ಕಿ.ಮೀ. ಮ್ಯಾರಥನ್‌ನಲ್ಲಿ ವಿದ್ಯಾ ಹರೀಶ ಬಂಗಾರಕೋಡಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕ ನಗದು ಹಾಗೂ ಪ್ರಶಸ್ತಿ ಬಹುಮಾನಗಳನ್ನು ಪಡೆದಿದ್ದಾರೆ. ಇವರು ಬಂಗಾರಕೋಡಿ ಹರೀಶರವರ ಪತ್ನಿ ಹಾಗೂ ರಂಗತ್ತಮಲೆ ಕೂಸಪ್ಪ ಗೌಡ ಹಾಗೂ ಆರ್.ಕೆ ಸಣ್ಣಮ್ಮನವರ ಪುತ್ರಿ.

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಮೇ.31ರಂದು ಹಮ್ಮಿಕೊಳ್ಳಲಾಯಿತು. ಶಾಲಾ ಸಂಚಾಲಕರಾದ ಶ್ರೀ ಪಿ ಜಿ ಎಸ್ ಎನ್. ಪ್ರಸಾದ್, ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ಉಪ ಕಾರ್ಯದರ್ಶಿಯವರಾದ ಭಾರತಿ ಶಂಕರ್ ಆದಾಳ,ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದು...

ಜೂ.3: ಸುಳ್ಯದಲ್ಲಿ ದಿ.ಉಮೇಶ್ ವಾಗ್ಲೆ ಮತ್ತು ದಿ.ವೈಕುಂಠ ಪ್ರಭು ಸ್ಮರಣಾರ್ಥ ಬೃಹತ್ ಉಚಿತ ವೈದ್ಯಕೀಯ ಶಿಬಿರ

ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು,ಸುಳ್ಯ ಭಾಲಾವಲಿಕಾರ್ ರಾಜಾಪುರ ಸಾರಸ್ವತ ಸಮಾಜ, ಯುವ ಸಮಾಜ, ದುರ್ಗಾಪರಮೇಶ್ವರಿ ಭಜನಾ ಮಂಡಳಿ,ಮಹಿಳಾ ಮಂಡಳಿ,ದುರ್ಗಾಪರಮೇಶ್ವರಿ ಚಾರಿಟೇಬಲ್ ಟ್ರಸ್ಟ್ ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ಅತ್ತಾವರ ಕೆ.ಎಂ.ಸಿ.ಆಸ್ಪತ್ರೆಯ ಸಹಯೋಗದಲ್ಲಿ ಜೂ.3 ರಂದು ದಿ.ಆರ್.ಉಮೇಶ್ ವಾಗ್ಲೆ ಮತ್ತು ದಿ. ವೈಕುಂಠ ಪ್ರಭು ಎ. ರವರ ಸ್ಮರಣಾರ್ಥ ಬೃಹತ್ ಉಚಿತ ವೈದ್ಯಕೀಯ ಶಿಬಿರವು ಸುಳ್ಯದ...
Loading posts...

All posts loaded

No more posts

error: Content is protected !!