ರಾಜ್ಯ ಬಜೆಟ್ ನಾಡಿನ ಸರ್ವರನ್ನೂ ತಲುಪಿದೆ ಹಾಗೂ ಕೃಷಿಕರ ಬಗ್ಗೆ ಕಾಳಜಿ ಹೊಂದಿದ ಬಜೆಟ್ – ಪಿ ಸಿ ಜಯರಾಮ

ವರದಿ : ಮಿಥುನ್ ಕರ್ಲಪ್ಪಾಡಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರು ತಮ್ಮ 14 ನೇ ಬಜೆಟ್ ಮಂಡಿಸುವ ಮೂಲಕ ದಾಖಲೆ ಮೆರೆದಿದ್ದು ಈ ಬಾರಿಯ ಬಜೆಟ್ ಸರ್ವರನ್ನು ತಲುಪುವ ಹಾಗೂ ಕೃಷಿಕರ ಬಗ್ಗೆ ಅತೀ ಹೆಚ್ಚು ಕಾಳಜಿ ಹೊಂದಿರುವ ಬಜೆಟ್ ಆಗಿದೆ. ಚುನಾವಣಾ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಯನ್ನು ಪೂರೈಸಲು ಕಾಂಗ್ರೆಸ್ ಈ ಬಾರಿ ಬಜೆಟ್ ನಲ್ಲಿ...

ವಳಲಂಬೆ ಶಾಲಾ ಮಂತ್ರಿಮಂಡಲ ರಚನೆ : ಮುಖ್ಯಮಂತ್ರಿಯಾಗಿ ವಿಜಿತ್ ಎಂ ಜಿ – ಉಪಮುಖ್ಯಮಂತ್ರಿಯಾಗಿ ತಸ್ವಿತ್ ವೈ

ವಳಲಂಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2023-24 ನೇ ಸಾಲಿನ ಶಾಲಾ ಮಂತ್ರಿಮಂಡಲವು ಚುನಾವಣೆ ಮೂಲಕ ಇತ್ತೀಚೆಗೆ ರಚನೆಯಾಯಿತು.ಮುಖ್ಯಮಂತ್ರಿಯಾಗಿ ವಿಜಿತ್ ಎಂ ಜಿ, ಉಪಮುಖ್ಯಮಂತ್ರಿಯಾಗಿ ತಸ್ವಿತ್ ವೈ, ಗೃಹ ಮಂತ್ರಿಯಾಗಿ ಯಜ್ಙೇಶ್ ಎನ್ ಎಸ್ ಮತ್ತು ಉಪಮಂತ್ರಿಯಾಗಿ ಹರ್ಷಿತ್ ಪಿ , ಶಿಕ್ಷಣಮಂತ್ರಿಯಾಗಿ ತನ್ವಿ ಪಿ ಉಪಮಂತ್ರಿಯಾಗಿ ಹೃತಿಕ್ ಎನ್ ಡಿ , ಹಣಕಾಸು ಮಂತ್ರಿಯಾಗಿ...
Ad Widget

ಎಸ್.ಎಸ್.ಪಿ.ಯು ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ : ಮಕ್ಕಳು ಜ್ಞಾನ ವೃದ್ದಿಗೆ ಔಷಧೀಯ ಗುಣವುಳ್ಳ ಬ್ರಾಹ್ಮಿ ಎಲೆಯ ರಸ ಉತ್ತಮ – ಶಿವರಾಮ ರೈ

ಸುಬ್ರಹ್ಮಣ್ಯ: ಮಕ್ಕಳ ಜ್ಞಾನ ವೃದ್ದಿಗೆ ಆಯುರ್ವೇದಿಕ್ ಮತ್ತು ಔಷಧೀಯ ಗುಣಗಳುಳ್ಳ ಬ್ರಾಹ್ಮಿ ಎಲೆಯ ರಸ ಉತ್ತಮ.ಇದನ್ನು ನಾವೇ ತಯಾರಿಸಿ ಕುಡಿಸಬೇಕು.ಇದರಿಂದ ಮಕ್ಕಳ ಜ್ಞಾನ ವೃದ್ಧಿಯಾಗುತ್ತದೆ.ಅಲ್ಲದೆ ದೇಸಿ ದನದ ಹಳೆಯ ತುಪ್ಪವನ್ನು ಮಕ್ಕಳಿಗೆ ಕೊಡಬಹುದು. ಒಂದೆಲಗ ರಸ ಕೂಡಾ ಜ್ಞಾನವೃದ್ದಿಗೆ ಪೂರಕ.ಇವೆಲ್ಲವೂ ನಮ್ಮ ಹಿರಿಯ ಅನುಸರಿಸಿಕೊಂಡು ಬಂದ ಆಚರಣೆಗಳಾಗಿವೆ ಇವುಗಳನ್ನು ನಾವುಗಳು ಪಾಲಿಸುವುದು ಅತ್ಯಗತ್ಯ. ಪೋಷಕರು ಮಕ್ಕಳ...

ಸುಳ್ಯ ಬ್ಲಾಕ್ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ, ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ದಿನೇಶ್ ಅಂಬೆಕಲ್ಲು ಆಯ್ಕೆ

ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಹಲವರ ಉಚ್ಚಾಟನೆ ನೋಟಿಸ್ ಪ್ರಕ್ರಿಯೆಗಳು ನಡೆದು ನಂತರ ತಮ್ಮ ಸಮಿತಿಯನ್ನು ಬರ್ಕಸ್ ಗೊಳಿಸಿ ಇದೀಗ ಸುಳ್ಯ ಬ್ಲಾಕ್ ಕಾಂಗ್ರೆಸ್ ತನ್ನ ಪದಾಧಿಕಾರಿಗಳ ಪಟ್ಟಿಯನ್ನು ಇಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ್ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಗೊಳಿಸಿದರು. ಪ್ರಧಾನ ಕಾರ್ಯದರ್ಶಿಗಳಾಗಿ ಪಿ ಎಸ್ ಗಂಗಾಧರ ,...

ಎನ್ನೆಂಸಿಯ ಕಾಲೇಜು ವಾರ್ತಾಪತ್ರ “ವಿದ್ಯಾಚೇತನ” ದ ಅನಾವರಣ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಾರ್ತಾಪತ್ರ “ವಿದ್ಯಾಚೇತನ”ದ ಅನಾವರಣ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ವಾರ್ತಾಪತ್ರವನ್ನು ಅನಾವರಣಗೊಳಿಸಿ ಮಾತನಾಡಿ, ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳ ದಾಖಲೆಯ ದೃಷ್ಟಿಯಲ್ಲಿ ವಾರ್ತಾಪತ್ರ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿ ಇದು ಹೊರಬರಲು ಶ್ರಮಿಸಿದ ಸಂಪಾದಕ ಮಂಡಳಿಯನ್ನು ಶ್ಲಾಘಿಸಿದರು. ವಾರ್ತಾಪತ್ರದ ಕಾರ್ಯನಿರ್ವಾಹಕ ಸಂಪಾದಕಿ ಡಾ. ಅನುರಾಧಾ...

ಕೂರ್ನಡ್ಕ ವ್ಯಕ್ತಿ ನೀರಲ್ಲಿ ನಾಪತ್ತೆ – ಪತ್ತೆ ಹಚ್ಚಲು ಹರಸಾಹಸ ಪಡುತ್ತಿರುವ ವಿಪತ್ತು ನಿರ್ವಹಣಾ ತಂಡ

ಜು.6 ರಂದು ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ನಾರಾಯಣನ್ ಎಂಬ ವ್ಯಕ್ತಿ ಪಾಲದಿಂದ ಬಿದ್ದು ನಾಪತ್ತೆಯಾದ ಪ್ರಕರಣದಲ್ಲಿ ಸುಳ್ಯ ಪ್ರಕೃತಿ ವಿಕೋಪ ತಂಡದಿಂದ ನಿರಂತರ 43 ಗಂಟೆಗಳ ಕಾರ್ಯಚರಣೆ ನಡೆಸುತ್ತಿದ್ದು, ಜತೆಗೆ ಕುಟುಂಬ ಸದಸ್ಯರು ಬಂದು ಹುಡುಕಿದರೂ ಪತ್ತೆಯಾಗದೇ ತಮ್ಮ ಊರಿಗೆ ಮತ್ತೆ ಮರಳಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ಎಸ್ ಡಿ ಆರ್ ಫ್ ,...

ಪೈಕ : ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಗುರುತಿನ ಚೀಟಿ ಕೊಡುಗೆ

ಗುತ್ತಿಗಾರು ಗ್ರಾಮದ ಸ.ಕಿ.ಪ್ರಾ.ಶಾಲೆ.ಪೈಕ ಶಾಲೆಯ ಮಕ್ಕಳಿಗೆ ಮಣಿಯಾನ ಪುರುಷೋತ್ತಮ ರವರು  ಸಮವಸ್ತ್ರವನ್ನು ಹಾಗೂ ದಯಾನಂದ ಕನ್ನಡ್ಕ ಪೈಕ ಇವರು ಗುರುತಿನ ಚೀಟಿ ನೀಡಿ ಪ್ರೋತ್ಸಾಹ ನೀಡಿರುತ್ತಾರೆ.

ಅಪಘಾತ ಆರೋಪಿ ಚಾಲಕ ದೋಷಮುಕ್ತಿ

ಅಪಘಾತ ಆರೋಪಿಯನ್ನು ದೋಷಮುಕ್ತಿಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. 2015 ರ ಮಾರ್ಚ್ 23 ರಂದು ಲಾರಿ ಚಾಲಕ ರಿಯಾಜ್ ತನ್ನ ಲಾರಿಯಲ್ಲಿ ಜಲ್ಲಿ ತುಂಬಿಸಿಕೊಂಡು ಸಂಪಾಜೆ ಗ್ರಾಮದ ಪೆರುಂಗೋಡಿ ಎಂಬಲ್ಲಿಗೆ ತಲುಪುವಾಗ ಏರು ರಸ್ತೆ ಯಲ್ಲಿ ಲಾರಿ ಮುಂದಕ್ಕೆ ಚಲಾಯಿಸಲಾಗದೆ ಇದ್ದ ಸಂದರ್ಭದಲ್ಲಿ ಆರೋಪಿ ಚಲಾಯಿಸುತ್ತಿದ್ದ ಕಾಂಕ್ರೀಟ್ ಮೆಷಿನ್ ಗಾಡಿಯ ಸಹಾಯದಿಂದ ಹಗ್ಗದ ಮೂಲಕ ಲಾರಿಯನ್ನು...

ಎನ್ನೆಂಸಿಯ ಕಾಲೇಜು ವಾರ್ತಾಪತ್ರ “ವಿದ್ಯಾಚೇತನ” ದ ಅನಾವರಣ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಾರ್ತಾಪತ್ರ “ವಿದ್ಯಾಚೇತನ”ದ ಅನಾವರಣ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ವಾರ್ತಾಪತ್ರವನ್ನು ಅನಾವರಣಗೊಳಿಸಿ ಮಾತನಾಡಿ, ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳ ದಾಖಲೆಯ ದೃಷ್ಟಿಯಲ್ಲಿ ವಾರ್ತಾಪತ್ರ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿ ಇದು ಹೊರಬರಲು ಶ್ರಮಿಸಿದ ಸಂಪಾದಕ ಮಂಡಳಿಯನ್ನು ಶ್ಲಾಘಿಸಿದರು. ವಾರ್ತಾಪತ್ರದ ಕಾರ್ಯನಿರ್ವಾಹಕ ಸಂಪಾದಕಿ ಡಾ. ಅನುರಾಧಾ...

ವಿನೋಬನಗರ : ರಾಷ್ಟ್ರೋತ್ಥನ ಶಿಶುಮಂದಿರ ಪೋಷಕ ಸಮಿತಿ ರಚನೆ

ಜಾಲ್ಸೂರು ಗ್ರಾಮದ ವಿನೋಬನಗರ ರಾಷ್ಟ್ರೋತ್ಥಾನ ಶಿಶುಮಂದಿರದ 2023-24 ನೇ ಸಾಲಿನ ಪೋಷಕ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು.ಪೋಷಕ ಸಮಿತಿಯ ನೂತನ ಅಧ್ಯಕ್ಷರಾಗಿ ಯಶ್ವಿತ್ ಕಾಳಮ್ಮನೆ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶ್ರೀಮತಿ ಸ್ವಾತಿ ಭಂಡಾರಿ, ಕಾರ್ಯದರ್ಶಿಯಾಗಿ ಶಿಶುಮಂದಿರದ ಮಾತಾಜಿ ಶ್ರೀಮತಿ ಬೇಬಿ ನಾಗೇಶ ರಾವ್,ಕೋಶಾಧಿಕಾರಿಯಾಗಿ ಸುಜ್ಯೋತಿ ಆಳಂಕಲ್ಯರನ್ನುಆಯ್ಕೆ ಮಾಡಲಾಯಿತು.ಸಂಚಾಲಕರಾಗಿ ಸುಧಾಕರ ಕಾಮತ್, ಗೌರವ ಸಲಹೆಗಾರರಾಗಿ ನ.ಸೀತಾರಾಮ, ಸದಸ್ಯರುಗಳಾಗಿ...
Loading posts...

All posts loaded

No more posts

error: Content is protected !!