- Thursday
- September 3rd, 2026
ಶಿಕ್ಷಣ ನೀತಿಯ ಕುರಿತ ವಿಚಾರವನ್ನು ರಾಜಕಾರಣಿಗಳ ಪ್ರತಿಷ್ಠೆಗೆ ಬಿಡದೆ, ಶಿಕ್ಷಕರು ಮೌನ ಮುರಿದು ಮಾತನಾಡಬೇಕು. ಶಿಕ್ಷಕರೊಳಗೆ ಚರ್ಚೆ ನಡೆಯಬೇಕು” ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸೆ.5 ರಂದು ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ವೇದಿಕೆಯಲ್ಲಿ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ...
ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಹಾಗೂ ಅರಣ್ಯದ ಗಡಿಭಾಗಗಳಲ್ಲಿ ಹಲವು ದಶಕಗಳಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರಿಗೆ ಜಂಟಿ ಸರ್ವೇಯನ್ನು ಮಾಡಿಸಿ ಅಕ್ರಮ ಸಕ್ರಮ ಹಾಗೂ 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಲು ಸೆ.07 ರಂದು ಬೆಳಿಗ್ಗೆ 11:00 ಗಂಟೆಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಮಲೆನಾಡು ಜನಹಿತ...
ಅಸೌಖ್ಯದಿಂದ ಶಾಲಾ ಬಾಲಕನೋರ್ವ ಮೃತಪಟ್ಟ ಘಟನೆ ತಾಲೂಕಿನ ದೇವಚಳ್ಳ ಗ್ರಾಮದಿಂದ ಸೆ.5 ರಂದು ವರದಿಯಾಗಿದೆ.ದೇವಚಳ್ಳ ಗ್ರಾಮದ ತಳೂರು ನಿವಾಸಿ ಚಂದ್ರಶೇಖರ ಎಂಬವರ ಪುತ್ರ ಸ ಹಿ ಪ್ರಾ ಶಾಲೆ ದೇವಚಳ್ಳ ಶಾಲೆಯಲ್ಲಿ ೧ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿಲಾಸ್ ಟಿ. ಮೃತಪಟ್ಟ ಬಾಲಕ. ತೀವ್ರ ಹೊಟ್ಟೆನೋವು ಇದೆಯೆಂದು ಹೇಳಿದ ಬಾಲಕನನ್ನು ಸುಳ್ಯಕ್ಕೆ ಕರೆತಂದು ಹೆಚ್ಚಿನ...
ವಿಶ್ವ ಹಿಂದೂ ಪರಿಷತ್ - ಭಜರಂಗದಳ ಸುಳ್ಯ ಪ್ರಖಂಡ ಮತ್ತು ಶ್ರೀ ಕೃಷ್ಣ ಭಜಾನ ಮಂದಿರ ಮೇನಾಲ ಇದರ ಆಶ್ರಯದಲ್ಲಿ ಶ್ರಿ ಕೃಷ್ಣ ಜನ್ಮಾಷ್ಠಮಿ ಆಚರಣೆ ಪ್ರಯುಕ್ತ ತಾಲೂಕು ಮಟ್ಟದ ಮುಕ್ತ ಪುರುಷರ ವಾಲಿಬಾಲ್ ಪಂದ್ಯಾಟ ಮತ್ತು ಮಹಿಳೆಯರ ತ್ರೋಬಾಲ್ ಪಂದ್ಯಾಟ ಹಾಗೂ ಸ್ಥಳೀಯ ಮಹಿಳೆಯರಿಗೆ, ಪುರುಷರಿಗೆ, ಬಾಲಕರಿಗೆ, ಬಾಲಕಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ಸೆ.6ರಂದು...
ಕರ್ನಾಟಕ ಸರಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ , ಶಿಕ್ಷಣ ಪೌಂಡೇಶನ್ ಮತ್ತು ಡೆಲ್ ಟೆಕ್ನಲಾಜಿ ಇದರ ಸಹಾಭಾಗಿತ್ವದಲ್ಲಿ ಜಂಟಿಯಾಗಿ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ನಡೆಯುತ್ತಿರುವ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ದಡಿ ಆಯ್ಕೆಯಾದ ಸುಳ್ಯ ತಾಲೂಕಿನ ಎಂಟು ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಗಳಿಗೆ ಲ್ಯಾಪ್ಟಾಪ್/ ಮೋನಿಟರ್ ಕೊಡುಗೆ ಯಾಗಿ...
ವಿದ್ಯುತ್ ಕಂಬಕ್ಕೆ ಪಿಕಪ್ ವಾಹನ ಗುದ್ದಿ ಕಂಬ ಮುರಿದು ಪಿಕಪ್ ಮೇಲೆ ಬಿದ್ದು, ಕೆಲಕಾಲ ರಸ್ತೆಸಂಚಾರ ಅಸ್ತವ್ಯಸ್ತಗೊಂಡ ಘಟನೆ ಜಾಲ್ಸೂರು ಗ್ರಾಮದ ಕದಿಕಡ್ಕದಲ್ಲಿ ಸೆ.5ರಂದು ಬೆಳಿಗ್ಗೆ ಸಂಭವಿಸಿದೆ. ಪುತ್ತೂರಿನಿಂದ ತರಕಾರಿ ಹೇರಿಕೊಂಡು ಬರುತ್ತಿದ್ದ ಪಿಕಪ್ ಕದಿಕಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು, ವಿದ್ಯುತ್ ಕಂಬ ಮುರಿದು ಪಿಕಪ್ ವಾಹನದ...
ಜಿಲ್ಲಾ ಶಿಕ್ಷಕರ ದಿನಾಚರಣೆ ವಿಧ್ಯುಕ್ತವಾಗಿ ದೀಪ ಬೆಳಗುವ ಮೂಲಕ ಉದ್ಘಾಟನೆಯನ್ನು ಸುಳ್ಯ ಶಾಸಕಿ ಕು. ಭಾಗಿರಥೀ ಮುರುಳ್ಯ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.ವೇದಿಕೆಯಲ್ಲಿ ಅಥಿತಿಗಳಾಗಿ ದಿಕ್ಸೂಚಿ ಭಾಷಣವನ್ನು ಮಾಡಲಿರುವ ವಿಶ್ವನಾಥ ಬದಿಕಾನ , ಮೋಹನ್ ರಾಮ್ ಸುಳ್ಳಿ , ಸಿಪ್ರಿಯನ್ ಮೊಂತೆರೋ , ರಾಜಣ್ಣ , ಮಂಜುನಾಥ್ , ಸೇರಿದಂತೆ ಜಿಲ್ಲಾ ಶಿಕ್ಷಕರ ಸಂಘ ಮತ್ತು...
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಹಾಗೂ ಗ್ರಾಮ ಪಂಚಾಯತ್ ಅಜ್ಜಾವರಇವುಗಳ ಸಹಯೋಗದಲ್ಲಿನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರವು ಅಜ್ಜಾವರ ಅಡ್ಪಂಗಾಯ ಶಾಲಾಬಳಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಕಲ್ತಡ್ಕ ಇವರು ಕಿಟ್ ಗಳನ್ನು ವೈಧ್ಯಾಧಿಕಾರಿಗಳಾದ ಡಾ.ನಿತಿನ್ ಪ್ರಭು ಇವರಿಗೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ...
✍️ ಕಿಶನ್ ಎಂ. ಪವಿತ್ರ ನಿಲಯ ಪೆರುವಾಜೆ ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರಹ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಲ್ಲರಿಗೂ ಮುಂಜಾನೆಯ ಶುಭೋದಯ ಹಾಗೆ ನನಗೆ ವಿದ್ಯೆಯನ್ನು ಕಲಿಸಿದ ಗುರು ಹಾಗೂ ಮಾತೆಯರಿಗೂ ಶಿಕ್ಷಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಒಬ್ಬ ವಿದ್ಯಾರ್ಥಿ ಉತ್ತಮವಾಗಿ ಬೆಳೆದರು, ಕೆಟ್ಟ ದಾರಿಯಲ್ಲಿ ನಡೆದರು...
ಆಮ್ ಆದ್ಮಿ ಪಾರ್ಟಿಯ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಗಿದ್ದು ದ.ಕ. ಜಿಲ್ಲಾ ಅಧ್ಯಕ್ಷರಾಗಿ ಸುಳ್ಯ ತಾಲೂಕಿನ ಪಂಜದವರಾದಡಾ.ವಿಶುಕುಮಾರ್ ನೇಮಕಗೊಂಡಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಖಲಂದರ್ ಎಲಿಮಲೆ ನೇಮಕಗೊಂಡಿದ್ದಾರೆ. ಸುಳ್ಯ ಗುತ್ತಿಗಾರಿನವರಾದವೇಣುಗೋಪಾಲ ಪುಚ್ಚಪ್ಪಾಡಿ ರಾಜ್ಯ ಜಂಟಿಕಾರ್ಯದರ್ಶಿಯಾಗಿದ್ದಾರೆ. ಜಿಲ್ಲಾ ಸಮಿತಿಗಳ ಅವಧಿ ಮುಗಿದ ಹಿನ್ನಲೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಸುಳ್ಯದವರಾದಅಶೋಕ್ ಎಡಮಲೆ ದ.ಕ.ಜಿಲ್ಲಾಧ್ಯಕ್ಷರಾಗಿದ್ದರು.ನೂತನ ಅಧ್ಯಕ್ಷ...
Loading posts...
All posts loaded
No more posts
