Ad Widget

ಸುಳ್ಯ : ತಾಲೂಕು ಕಬಡ್ಡಿ ಅಸೋಸಿಯೇಶನ್ ವಾರ್ಷಿಕ ಮಹಾಸಭೆ – ಅಧ್ಯಕ್ಷರಾಗಿ ಬಿ.ಕೆ.ಮಾಧವ ಪುನರಾಯ್ಕೆ, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಪಂಜದಬೈಲು , ಕೋಶಾಧಿಕಾರಿಯಾಗಿ ಕೊರಗಪ್ಪ ಬೆಳ್ಳಾರೆ

ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಶನ್ ಇದರ ಮಹಾಸಭೆಯು ಅಧ್ಯಕ್ಷರಾದ ಮಾಧವ ಬಿಕೆ ಇವರ ಅಧ್ಯಕ್ಷತೆಯಲ್ಲಿ ನವೆಂಬರ್ 9 ರಂದು ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ನಡೆಯಿತು.

. . . . . . . . .

. . . . . . .

2023-2024 ನೇ ವಾರ್ಷಿಕ ವರದಿಯನ್ನು ಹಾಗೂ ವಾರ್ಷಿಕ ಲೆಕ್ಕಪತ್ರವನ್ನು ಕಾರ್ಯದರ್ಶಿ ಕೆ ಟಿ.ವಿಶ್ವನಾಥ ಸಭೆಗೆ ಮಂಡಿಸಿದರು. ಸದ್ರಿ ಸಭೆಯು ವರದಿ ಮತ್ತು ಲೆಕ್ಕಪತ್ರವನ್ನು ಅಂಗೀಕರಿಸಿತು. ಬಳಿಕ, ಗತ ವರ್ಷದ ಕಾರ್ಯಕ್ರಮದ ಅವಲೋಕನ ನಡೆಸಲಾಯಿತು.
2024-2025 ರ ಸಾಲಿಗೆ ಯೋಜಿಸಿದ ನೂತನ ಕಾರ್ಯಕ್ರಮವನ್ನು ಅಂಗೀಕರಿಸಲಾಯಿತು. ನಂತರ ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆಯು ಅವಿರೋಧವಾಗಿ ನಡೆಯಿತು. ಅಧ್ಯಕ್ಷರಾಗಿ ಬಿ.ಕೆ.ಮಾಧವ ಪುನರಾಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಪಂಜದಬೈಲು , ಕೋಶಾಧಿಕಾರಿಯಾಗಿ ಕೊರಗಪ್ಪ ಬೆಳ್ಳಾರೆ, ಉಪಾಧ್ಯಕ್ಷರುಗಳಾಗಿ ಶರತ್ ಅಡ್ಕಾರ್, ಹರಿಪ್ರಕಾಶ್ ಅಡ್ಕಾರ್, ಬಶೀರ್ ಅಹ್ಮದ್ ಪೈಚಾರ್, ಜತೆ ಕಾರ್ಯದರ್ಶಿ ನಾಸಿರ್ ಶಾಂತಿನಗರ, ಮಿಥುನ್ ಹೇಮಳ , ಗೌರವ ಸಲಹೆಗಾರರಾಗಿ ನಿತ್ಯಾನಂದ ಮುಂಡೋಡಿ, ಜಯಪ್ರಕಾಶ್ ರೈ, ಕೆ.ಟಿ.ವಿಶ್ವನಾಥ, ಹರೀಶ್ ರೈ ಉಬರಡ್ಕ , ದೊಡ್ಡಣ್ಣ ಬರೆಮೇಲು, ಎ.ಸಿ.ವಸಂತ ನಿರ್ದೇಶಕರುಗಳಾಗಿ ವೀರನಾಥ ಬೆಳ್ಳಾರೆ, ರಮೇಶ್ ಕರಂಗಲಡ್ಕ, ಗಣೇಶ್ ಮರ್ಕಂಜ, ತೀರ್ಥವರ್ಣ ಬಳ್ಳಡ್ಕ , ಜಯರಾಮ ಅರಂತೋಡು, ನಿತಿನ್ ಮಜಿಕೋಡಿ, ಮಾಯಿಲಪ್ಪ ಕೊಂಬೆಟ್ಟು, ರಂಗನಾಥ ನಾಗಪಟ್ಟಣ, ಮಂಜುನಾಥ ಪಡ್ಪಿನಂಗಡಿ, ಪ್ರವೀಣ ಸೋಣಂಗೇರಿ, ವಿಶ್ವನಾಥ ಕೆ.ವಿ.ಜಿ ಸುಳ್ಯ, ಇವರುಗಳನ್ನು ಸದಸ್ಯರುಗಳ ಸೂಚನೆ ಮತ್ತು ಅನುಮೋದನೆಯೊಂದಿಗೆ ಆಯ್ಕೆ ಮಾಡಲಾಯಿತು, ಮಾಧವ ಬಿ.ಕೆ ಸ್ವಾಗತಿಸಿ, ಉಮೇಶ್ ಪಂಜದ ಬೈಲು ವಂದಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading