Ad Widget

ಸುಬ್ರಹ್ಮಣ್ಯದಲ್ಲಿ ನ್ಯೂ ಶ್ರೀ ಸ್ಕಂದ ಮೆಡಿಕಲ್ಸ್ ಉದ್ಘಾಟನೆ

ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿಯ ವೆಂಕಟೇಶ್ವರ ಕಾಂಪ್ಲೆಕ್ಸ್‌ ನಲ್ಲಿ ಸೆ.16 ರಂದು ನ್ಯೂಶ್ರೀ ಸ್ಕಂದ ಮೆಡಿಕಲ್ಸ್ ಶುಭಾರಂಭಗೊಂಡಿದೆ. ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ ದೀಪ ಪ್ರಜ್ವಲಿಸಿ ಮೆಡಿಕಲ್‌ ಉದ್ಘಾಟಿಸಿದರು.

ಈ ಸಂದರ್ಭ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಕುಮಾರಸ್ವಾಮಿ ವಿದ್ಯಾಲಯದ ಗಣೇಶ್ ಪ್ರಸಾದ್, ಡಾ| ಶಿವಕುಮಾರ್ ಹೊಸಳಿಕೆ, ಡಾ. ವಿಕ್ರಮ್ ಶೆಟ್ಟಿ, ಡಾ. ಚರಣ್ ಶೆಟ್ಟಿ, ಡಾ.ವೆಂಕಟ ಚಲಪತಿ,ಯಜೇಶ್ ಆಚಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಗೌಡ ಕಿರಿಭಾಗ, ವಸಂತ ಕುಮಾ‌ರ್ ಕಿರಿಭಾಗ, ಜಯಪ್ರಕಾಶ್ ಕೂಜುಗೋಡು ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಹರೀಶ್ ಇಂಜಾಡಿ, ಶಿವಪ್ರಸಾದ್‌ ನಡುತೋಟ, ವಿಶ್ವನಾಥ ನಡುತೋಟ, ಗುರುಪ್ರಸಾದ್ ಪಂಜ, ದಿನೇಶ್ ಎಣ್ಣೆಮಜಲು, ಪ್ರೋಜ್ ಬೋಟ್ ಕೆಫೆ ಮಾಲಕ ನಿತಿನ್ ಕುಕ್ಕೆ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ನಮ್ಮ “ನ್ಯೂಶ್ರೀ ಸ್ಕಂದ ಮೆಡಿಕಲ್ಸ್” ನಲ್ಲಿ ಎಲ್ಲಾ ವಿಧದ ಚೌಷದಿಗಳು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸೇವೆಗೆಗಳು ದೊರೆಯಲಿದ್ದು ಸಾರ್ವಜನಿಕರು ಪ್ರೋತ್ಸಾಹಿಸುವಂತೆ ಮೆಡಿಕಲ್ ನ ಮಾಲಕ ಸನತ್ ಕಿರಿಭಾಗ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!