Ad Widget

ಆಲ್‌ ಇಂಡಿಯಾ ತಲ್‌ ಸೈನಿಕ್‌ ಕ್ಯಾಂಪ್‌ನಲ್ಲಿ ಸಾಧನೆಗೈದ ಪೆರಾಜೆಯ ಶ್ರಾವ್ಯ ಅಡ್ಕ

ಮಡಿಕೇರಿ : ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಆಲ್‌ ಇಂಡಿಯಾ ತಲ್‌ ಸೈನಿಕ್‌ ಕ್ಯಾಂಪ್‌ನಲ್ಲಿ ಪೆರಾಜೆಯ ಶ್ರಾವ್ಯ ಎನ್ ಅಡ್ಕ ಸಾಧನೆಗೈದಿದ್ದಾರೆ. ಆ. ೩ರಿಂದ ೧೩ ರವರೆಗೆ ನಡೆದ ಕ್ಯಾಂಪ್‌ನಲ್ಲಿ ಕರ್ನಾಟಕ ಗೋವಾ ಡೈರೆಕ್ಟರೇಟ್‌ನಿಂದ ಆಯ್ಕೆಯಾಗಿದ್ದು, ಟೀಮ್ ಕ್ಯಾಪ್ಟನ್‌ ಆಗಿ ಇಡೀ ತಂಡವನ್ನು ಮುನ್ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ.ಈಕೆ ಸುಳ್ಯ ಸಂತ ಜೋಸೆಫರ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು, ಪ್ರಸ್ತುತ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದಾಳೆ.
ಈಕೆ ಪೆರಾಜೆ ಗ್ರಾಮದ ಅಡ್ಕ ನಂದಕುಮಾರ್‌ ಎ.ಆರ್ ಹಾಗೂ‌ ಶಿಕ್ಷಕಿ ರೇಖಾ ಯು ಎಸ್‌ ದಂಪತಿ ಪುತ್ರಿ. ರಾಜ್ಯ ಮಟ್ಟದ ಇಂಟರ್‌ ಗ್ರೂಪ್‌ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶ್ರಾವ್ಯ ಟೀಮ್‌ ಕ್ಯಾಪ್ಟ್ ನ್‌ ಆಗಿಯೂ ಕರ್ನಾಟಕ-ಗೋವಾ ಡೈರೆಕ್ಟರ್‌ಗೆ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾಳೆ. ಎನ್‌ಸಿಸಿಯೊಂದಿಗೆ ಕ್ರೀಡೆ, ಸಾಹಿತ್ಯ, ಕಲಿಕೆಯಲ್ಲಿಯೂ ಈಕೆ ಪ್ರತಿಭಾನ್ವಿತೆಯಾಗಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!