Ad Widget

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ 2024-25 ನೇ ಸಾಲಿನ ಪ್ರಥಮ ವರ್ಷದ ಬಿ.ಇ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪುನಷ್ಚೇತನ ಕಾರ್ಯಕ್ರಮ

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವು ಕೆ.ವಿ.ಜಿ. ಸಮುದಾಯ ಭವನ, ಅಮರಶ್ರೀಭಾಗ್‌ನಲ್ಲಿ ಸೆ.11ರಂದು ನಡೆಯಿತು. ವಿದ್ಯಾರ್ಥಿನಿಯರಾದ ತೃಶಾಲಿ ಹಾಗೂ ಪೂಜ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಡಾ. ಶ್ರೀಧರ್ ಕೆ. ಸ್ವಾಗತಿಸಿ ಕಾಲೇಜಿನ ಬಗ್ಗೆ ಪರಿಚಯಿಸಿ, ವಿದ್ಯಾರ್ಥಿ ಪ್ರವೇಶ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಶ್ರೀಯುತ ಮೌರ್ಯ ಆರ್. ಪ್ರಸಾದ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮತ್ತು ಸ೦ಸ್ಥೆಯ ಬಗ್ಗೆ ಕಿರು ಪರಿಚಯ ನೀಡಿದರು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉತ್ತಮ ತ೦ತ್ರಜ್ಞರಾಗುವ೦ತೆ ಸೂಚಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ ಡಾ. ಕೆ.ಇ ಪ್ರಕಾಶ್, ಪ್ರಾ೦ಶುಪಾಲರು ಮತ್ತು ನಿರ್ದೇಶಕರು, SDIT,, ಮ೦ಗಳೂರು ಇವರನ್ನು ಸ೦ಸ್ಥೆಯ ವತಿಯಿ೦ದ ಸನ್ಮಾನಿಸಲಾಯಿತು. ಟ್ರೈನಿಂಗ್ & ಪ್ಲೇಸ್‌ಮೆ೦ಟ್ ಆಫೀಸರ್ ಪ್ರೊ. ಪ್ರಶಾ೦ತ್ ಕೆ.ಅತಿಥಿಯನ್ನು ಪರಿಚಯಿಸಿ ಶ್ರೀಯುತರ ಸನ್ಮಾನ ಪತ್ರವನ್ನು ವಾಚಿಸಿದರು. ಕಠಿಣ ಪರಿಶ್ರಮದೊ೦ದಿಗೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಹಾಗೂ ತ೦ತ್ರಜ್ಞಾನವನ್ನು ಅರಿತು ಅವಕಾಶಗಳನ್ನು ಪಡೆದುಕೊಳ್ಳುವ೦ತೆ ಮುಖ್ಯ ಅತಿಥಿಯವರು ಸಲಹೆಯನ್ನು ನೀಡಿದರು. ಈ ಸ೦ದರ್ಭದಲ್ಲಿವಿದ್ಯಾರ್ಥಿ ಪ್ರವೇಶ ಕಾರ್ಯಕ್ರಮದಕೈಪಿಡಿಯನ್ನು ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು/ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗಮುಖ್ಯಸ್ಥರು ಡಾ. ಉಜ್ವಲ್ ಯು.ಜೆ.ಯವರು ಬಿಡುಗಡೆಗೊಳಿಸಿದರು. ಕಾಲೇಜಿನ ಘಟಿಕೋತ್ಸವದ ವರದಿಯನ್ನು ಒಳಗೊ೦ಡ ಕೈಪಿಡಿಯನ್ನು ಡಾ. ಕೆ.ಇ. ಪ್ರಕಾಶ್‌ರವರು ಬಿಡುಗಡೆಗೊಳಿಸಿದರು. ಕಾಲೇಜಿನ ನವೀಕರಿಸಿದ ವೆಬ್‌ಸೈಟ್ kvgengg.comನ್ನು ಶ್ರೀಯುತ ಮೌರ್ಯ ಆರ್. ಪ್ರಸಾದ್‌ರವರು ಬಿಡುಗಡೆಗೊಳಿಸಿದರು. ಪೋಷಕರಾದ ಶ್ರೀ ಎ. ಕೆ. ಮೋಹನ್ ಹಾಗು ಸುಬ್ರಹ್ಮಣ್ಯ ಕೆ. ಇವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ. ಯವರು ವಿದ್ಯಾರ್ಥಿಗಳಿಗೆ ಸ್ವಾಗತವನ್ನು ಬಯಸುತ್ತಾ ಕಾಲೇಜಿನ ವಿವಿಧ ವೈಷಿಷ್ಟ÷್ಯತೆ ಬಗ್ಗೆ ವಿವರಿಸುತ್ತಾ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಉತ್ತಮ ಸಂಸ್ಕಾರ, ಸಮಯ ಮತ್ತು ಶ್ರದ್ಧೆಯಿಂದ ಶಿಸ್ತನ್ನು ಅಳವಡಿಸಿಕೊಂಡು ಮುಂದಿನ ನಾಲ್ಕು ವರ್ಷಗಳ ವಿದ್ಯಾರ್ಥಿಜೀವನ ಉತ್ತಮವಾಗಿ ಇರಲಿ ಎಂದು ಹೇಳಿ ಹೊಸ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು/ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ.ಯವರು ಮಾತನಾಡಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ಕಾಲೇಜಿನ ಶೈಕ್ಷಣಿಕ ಪದ್ಧತಿಯಲ್ಲೂ ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ಪ್ರಾಯೋಗಿಕ ವಿಷಯಗಳಿಗೆ ಹಾಗೂ ಉದ್ಯೋಗ ತರಬೇತಿಗಳನ್ನು ನೀಡುತ್ತಿದ್ದು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡು ಉತ್ತಮ ರೀತಿಯ ಉದ್ಯೋಗ ಪಡೆದು ಕಾಲೇಜಿಗೆ ಉತ್ತಮ ಹೆಸರು ತರಬೇಕೆಂದು ಹೇಳಿ ಶುಭಹಾರೈಸಿದರು. ಕಾರ್ಯಕ್ರಮದ ಸ೦ಯೋಜಕಿ ಹಾಗೂ ಡೀನ್-ಅಕಾಡೆಮಿಕ್ ಡಾ. ಪ್ರಜ್ಞ ಯ೦.ಆರ್. ವ೦ದನಾರ್ಪಣೆಗೈದರು. ಸಾರ್ವಜನಿಕ ಸ೦ಪರ್ಕಾಧಿಕಾರಿ ಪ್ರೊ. ಶೃತಿ ಪಿ.ಜೆ. ಹಾಗೂ ಪ್ರಾಧ್ಯಾಪಕಿಯಾದ ಪೊ.್ರ ನಸೀಮ ಸಿ. ಎ. ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!