Ad Widget

ದೇವ ಬೂತ್ ನ ಬಿಜೆಪಿ ಕಾರ್ಯಕರ್ತರ ಸಭೆ – ನೂತನ ಅಧ್ಯಕ್ಷ ರಾಗಿ ಲಕ್ಷ್ಮೀಶ ಅಡ್ಡನಪಾರೆ – ಕಾರ್ಯದರ್ಶಿ ಮುಕುಂದ ಹಿರಿಯಡ್ಕ

ದೇವಚಳ್ಳ ಗ್ರಾಮದ ದೇವ ಬೂತ್ ನ ಬಿಜೆಪಿ ಕಾರ್ಯಕರ್ತರ ಸಭೆ ಆ.03 ರಂದು ಶಿವಪ್ರಕಾಶ್ ಅಡ್ಡನಪಾರೆ ಮನೆಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಬೂತ್ ಅಧ್ಯಕ್ಷ ಯೋಗೀಶ್ ದೇವ ವಹಿಸಿದ್ದರು. ಸಭೆಯಲ್ಲಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ವಿಜಯಕುಮಾರ್ ಚಾರ್ಮಾತ, ಶಕ್ತಿ ಕೇಂದ್ರದ ಪ್ರಮುಖರಾದ ದಿವಾಕರ ಮುಂಡೋಡಿ, ಹಿಂದುಳಿದ ಮೋರ್ಚಾದ ಉಪಾಧ್ಯಕ್ಷರಾದ ರಾಕೇಶ್ ಮೆಟ್ಟಿನಡ್ಕ, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಪಡ್ಪು, ನಾಲ್ಕೂರು ಗ್ರಾಮದ ಪ್ರಮುಖರಾದ ಚಂದ್ರಶೇಖರ ಬಾಳುಗೋಡು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಲಕ್ಷ್ಮೀಶ ಅಡ್ಡನಪಾರೆ, ಕಾರ್ಯದರ್ಶಿಯಾಗಿ ಮುಕುಂದ ಹಿರಿಯಡ್ಕ, ಬೂತ್ ಲೆವೆಲ್ ಏಜೆಂಟ್ ಆಗಿ ತೀರ್ಥೆಶ್ ಪಾರೆಪ್ಪಾಡಿ, ಬೂತ್ ಲೆವೆಲ್ ಏಜೆಂಟ್ 2 ಆಗಿ ಶಿವಪ್ರಕಾಶ್ ಕಡಪಳ ಅಡ್ಡನಪಾರೆ, ಮಹಿಳಾ ಸದಸ್ಯರಾಗಿ ತಾರಾ ರವೀಂದ್ರ ಅಡ್ಡನಪಾರೆ, ಎಸ್.ಸಿ. ಘಟಕದಿಂದ ಬಾಬು ದೇವ ಕಾಲನಿ, ಎಸ್.ಟಿ. ಘಟಕದಿಂದ ಸದಾಶಿವ ಕುಂಬಾರಕೇರಿ, ಸದಸ್ಯರರಾಗಿ ಚಂದ್ರಶೇಖರ ಮುಂಡೋಡಿ, ಜಯರಾಮ ಕಾನಾವು, ರಾಮಚಂದ್ರ ಅಚ್ರಪ್ಪಾಡಿ, ಚೇತನ್ ಪಡ್ಪು, ಪ್ರಶಾಂತ್ ದೇವ, ಕಿಶೋರ್ ಕುಮಾರ್ ಅಂಬೆಕಲ್ಲು  ಆಯ್ಕೆಯಾದರು.

ವಸಂತ ಬೊಳ್ಳಾಜೆ, ರವೀಂದ್ರ ಕಾನಾವು,  ಪ್ರದೀಪ್ ಕುತ್ಯಾಳ, ಜಯರಾಮ ಅಡ್ಡನಪಾರೆ, ಕುಮಾರ ಅಡ್ಡನಪಾರೆ, ಪ್ರಶಿತಾ ಕಡಪಳ ಮತ್ತಿತರರು ಸಭೆಗೆ ಆಗಮಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!