Ad Widget

ಕುಮಾರಸ್ವಾಮಿ ವಿದ್ಯಾಲಯದಲ್ಲಿ ನೂತನವಾಗಿ ಪ್ರಾರಂಭಗೊಂಡ ರಂಗಪ್ರೇರಣ ನಾಟಕ ತಂಡ – ನಾಣಿ ನಾರಾಯಣ ಎಂಬ ನಾಟಕ ಪ್ರಥಮ ಪ್ರದರ್ಶನ

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನೂತನವಾಗಿ ಪ್ರಾರಂಭಗೊಂಡ ರಂಗಪ್ರೇರಣ ನಾಟಕ ತಂಡದ ಹೊಸ ನಾಟಕ ನಾಣಿ ನಾರಾಯಣ ದ ಪ್ರಥಮ ಪ್ರದರ್ಶನ ಇಂದು ನಡೆಯಿತು. ಈ ನಾಟಕದ ಪ್ರದೇಶದ ಉದ್ಘಾಟನೆಯನ್ನು ಶ್ರೀ ಸುಬ್ರಹ್ಮಣ್ಯ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ನೆರವೇರಿಸಿದರು. ಈ ನಾಟಕದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದರು. ಈ ನಾಟಕದ ರಂಗ ರೂಪ ಶ್ರೀ ವಿಧೇಯನ್, ಸಾಹಿತ್ಯ ಸುರೇಶ್ ಬಾಳಿಲ, ಸಂಗೀತ ಶ್ರೀ ದಿವಾಕರ್ ಕಟೀಲು ಹಾಗೂ ಗೌತಮ್ ಬಿರುವ, ನಿರ್ದೇಶನ ಶ್ರೀ ವಿದ್ದು ಉಚ್ಚಿಲ. ಈ ನಾಟಕ ಪ್ರದರ್ಶನದ ಪ್ರದರ್ಶನದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಗಣೇಶ್ ಪ್ರಸಾದ್, ಸಂಚಾಲಕ ಚಂದ್ರಶೇಖರ್ ನಾಯರ್, ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನ ಹಾಗೂ ರಂಗಪ್ರೇರಣ ನಾಟಕ ತಂಡದ ಸಂಯೋಜಕರಾದ ಶ್ರೀ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು. ನಾಟಕದ ವೀಕ್ಷಣೆಯನ್ನು ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಮಾಡಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!