Ad Widget

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನಿಂದ ಪುಸ್ತಕ ವಿತರಣೆ

            

. . . . . . . . .

  ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಬ್ರಮಣ್ಯ ಇಲ್ಲಿಯ  225 ವಿದ್ಯಾರ್ಥಿಗಳಿಗೆ ಗುರುವಾರ  ಪುಸ್ತಕ ವಿತರಣೆ ಮಾಡಲಾಯಿತು.              

. . . . . . .

ಪುಸ್ತಕಗಳ ಪ್ರಯೋಜಕರಾದ ಡಾ.ಶಿವಕುಮಾರ್ ಹೊಸಳ್ಳಿಕೆ ಮಾತನಾಡುತ್ತಾ ನಮ್ಮ ತಂದೆ ರುಕ್ಮಯಗೌಡರು ಇದೇ  ಶಾಲೆಯ ವಿದ್ಯಾರ್ಥಿಯಾಗಿ ಹಲವಾರು ವರ್ಷಗಳಿಂದ ಶಿಕ್ಷಕರಾಗಿ ದುಡಿದವರು. ಇಂದು ಅವರ ಸಹೋದ್ಯೋಗಿ ನಿವೃತ್ತ ಮುಖ್ಯೋಪಾಧ್ಯಾಯ ಪುಂಗಗೌಡರು ವೇದಿಕೆಯಲ್ಲಿರುವುದು ಸಂತಸ ತಂದಿದೆ . ಕಳೆದ 16 ವರ್ಷಗಳಿಂದ ತಂದೆಯವರ ಸವಿ ನೆನಪಿಗೋಸ್ಕರ ವಿದ್ಯಾರ್ಥಿ ಗಳು ಕಲಿಕಾ ಸಾಮಗ್ರಿಗಳನ್ನು  ಸದ್ಬಳಕೆ ಮಾಡಿಕೊಂಡು ಅವರ ಮುಂದಿನ ಭವಿಷ್ಯದ ವಿದ್ಯಾಭ್ಯಾಸ ಉಜ್ಜಲವಾಗಬೇಕು ಎನ್ನುವ ದೃಷ್ಟಿಯಿಂದ ಈ ಕೊಡುಗೆಗಳನ್ನು ಮಾಡುತ್ತಾ ಬಂದಿದ್ದೇನೆ ಎಂದರು.         

ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಪಳಂಗಾಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಪುಂಗವ ಗೌಡ  ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಪ್ರೊ. ರಂಗಯ್ಯ ಶೆಟ್ಟಿಗಾರ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಯಂತ ,ಶಾಲಾ ಮುಖ್ಯೋಪಾಧ್ಯಾಯ ಮಾಧವ ಗೌಡ ಮೂಕಮಲೆ, ಉಪಸ್ಥಿತರಿದ್ದರು. ಸಭೆಯಲ್ಲಿ ಲಯನ್ಸ್ ಕಬ್ಬಿನ ಸದಸ್ಯರುಗಳಾದ ಮೋಹನ್ದಾಸ್ ರೈ, ಅಶೋಕ್ ಕುಮಾರ್, ಶಾಲಾ ಶಿಕ್ಷಕ ವರ್ಗ ದವರು, ಪೋಷಕರು, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.                   

  ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಗೈದರು. ಪ್ರೊ . ರಂಗಯ್ಯ ಶೆಟ್ಟಿಗಾರ್ ಸ್ವಾಗತಿಸಿದರು. ಡಾ. ಶಿವಕುಮಾರ್ ಹೊಸಳ್ಳಿಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕಿ ವಿಮಲಾ ರಂಗಯ್ಯ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯದರ್ಶಿ ಸತೀಶ ಕೂಜುಗೋಡು ವಂದಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಹಿರಿಯರಾದ ಪುಂಗವ ಗೌಡ ಅವರನ್ನು ಗೌರವಿಸಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading