Ad Widget

ಕಾಪು-ಪೆರುವೋಡಿ ರಸ್ತೆ ಕಾಮಗಾರಿ ಕಳಪೆ – ಕಿತ್ತು ಹೋಗಿರುವ ಮರುಡಾಮರೀಕರಣ


ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕಾಪು ಎಂಬಲ್ಲಿಂದ ಪೆರುವೋಡಿ ಶ್ರೀ ವಿಷ್ಣು ಮೂರ್ತಿದೇವಸ್ಥಾನಕ್ಕೆ ಹೋಗುವ ರಸ್ತೆಗೆ ಡಾಮರೀಕರಣ ಮಾಡಲಾಗಿದ್ದು, ಕಾಮಗಾರಿ ತೀರಾ ಕಳಪೆಯಾಗಿದೆ. ಸರಿಯಾದ ಗುಣಮಟ್ಟ ಕಾಪಾಡದೆ, ಅಧಿಕಾರಿಗಳು, ಗುತ್ತಿಗೆದಾರರು ಅನುದಾನ ದುರುಪಯೋಗ ನಡೆಸಿದ್ದಾರೆ.


ಸುಮಾರು 17 ಲಕ್ಷ ರೂಪಾಯಿಯ ಅನುದಾನದಲ್ಲಿ ಈ ರಸ್ತೆಯ ಡಾಮರೀಕರಣ ಮಾಡಲಾಗಿದ್ದು, ಕಾಮಗಾರಿ ಮುಗಿದ ಹದಿನೇಳೇ ದಿನದಲ್ಲಿ ಕಾಮಗಾರಿ ಕರ್ಮಕಾಂಡ ಬಯಲಾಗಿದೆ.ಹೊಸ ಡಾಮರು ಎದ್ದುಹೋಗಿದ್ದು ಹಳೆ ರಸ್ತೆಯ ಅವಶೇಷಗಳು ಅಲ್ಲಲ್ಲಿ
ಕಾಣಿಸಿ ಕೊಳ್ಳುತ್ತಿದೆ. ಸಂಬಂಧ ಪಟ್ಟ ಇಲಾಖೆ ಮತ್ತು ಗುತ್ತಿಗೆದಾರರ ವಿರುದ್ದ ಜನ ಅಕ್ರೋಶಗೊಂಡಿದ್ದು, ಇಲಾಖೆ ಅಧಿಕಾರಿಗಳು ತಕ್ಷಣ ಈ ಕುರಿತು ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಈ ಕಳಪೆ ಕಾಮಗಾರಿಯ ವಿರುದ್ಧ ಹೋರಾಟ ಮಾಡಲು ಗಾಮಸ್ಥರು ಸಿದ್ದತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!