Ad Widget

ಪವಿತ್ರ ಹಜ್ಜ್ ಯಾತ್ರೆಗೆ ಬೀಳ್ಕೊಡುಗೆ ಸಮಾರಂಭ.

ಈ ವರ್ಷದ ಪವಿತ್ರ ಹಜ್ಜ್ ಯಾತ್ರೆಗೆ ತೆರಳುತ್ತಿರುವ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸ ಇದರ ಮಾಜಿ ಸದರ್ ಉಸ್ತಾದ್ ಕೆ.ಕೆ. ಅಲಿ ಮುಸ್ಲಿಯಾರ್ ಪಟ್ಟಾಂಬಿ ಮತ್ತು ಸುಳ್ಯದ ಉದ್ಯಮಿ ನಾಸಿರ್ ಕಟ್ಟೆಕ್ಕಾರ್ಸ್ ಇವರನ್ನು ಮದರಸ ಸಭಾಂಗಣದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಕೆ.ಎಂ.ಮುಸ್ತಫಾ ವಹಿಸಿದ್ದರು, ಗಾಂಧಿನಗರ ಖತೀಬರಾದ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ಸಮಾರಂಭವನ್ನು ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಜಮಾಅತ್ ಸಮಿತಿ ಮಾಜಿ ಅಧ್ಯಕ್ಷ ಆದಂ ಹಾಜಿ ಕಮ್ಮಾಡಿ ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕೆ. ಎಸ್. ಉಮ್ಮರ್,ಶರೀಫ್ ಕಂಠಿ ರಿಯಾಜ್ ಕಟ್ಟೆಕ್ಕಾರ್ಸ್ ಜಮಾಅತ್ ಪದಾಧಿಕಾರಿಗಳಾದ ಮಹಮ್ಮದ್ ಹಾಜಿ ಕೆ.ಎಂ. ಎಸ್ ಕೆ.ಬಿ.ಅಬ್ದುಲ್ ಮಜೀದ್, ಮುಹಿಯದ್ದೀನ್ ಫ್ಯಾನ್ಸಿ, ನಿರ್ದೇಶಕರುಗಳಾದ ಜಿ.ಎಂ.ಇಬ್ರಾಹಿಂ, ಹಮೀದ್ ಬೀಜಕೊಚ್ಚಿ, ಹಾಜಿ ಎಸ್.ಎ.ಹಮೀದ್ ಬಿಳಿಯಾರ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಶುಕೂರ್ ಹಾಜಿ ಕಾರ್ಯದರ್ಶಿ ಬಿ.ಎಂ.ಹನೀಫ್ ಕೋಶಾಧಿಕಾರಿ ಎಸ್.ಪಿ. ಅಬೂಬಕ್ಕರ್,
ಎಲಿಮಲೆ ಜುಮ್ಮಾ ಮಸೀದಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ,ಜಿಲ್ಲಾ ವಕ್ಫ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ಮೊಗರ್ಪಣೆ, ಸುನ್ನಿ ಸಂಯಕ್ತ ಜಮಾಅತ್ ಅಧ್ಯಕ್ಷ ಸಮದ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!