Ad Widget

ನವಚೇತನ ಯುವಕ ಮಂಡಲ ವತಿಯಿಂದ ಬೊಳುಬೈಲು ಶಾಲೆಯಲ್ಲಿ ಗಿಡ ನಾಟಿ

ಜಾಲ್ಸೂರು ಗ್ರಾಮದ ಬೊಳುಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನವಚೇತನ ಯುವಕ ಮಂಡಲ ವತಿಯಿಂದ 100 ಅಡಿಕೆ ಗಿಡ ನಾಟಿ ಮಾಡುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಶಾಲಾ ನಿವೃತ್ತ ಶಿಕ್ಷಕಿ ಶ್ರೀಮತಿ ಕೋಮಲರವರು ಗಿಡ ನಾಟಿ ಮಾಡುವ ಮೂಲಕ ಚಾಲನೆ ನೀಡಿದರು. ಗಿಡ ನಾಟಿ ಆದ ಬಳಿಕ ಹನಿ ನೀರಾವರಿ ಪದ್ಧತಿಯಲ್ಲಿ ಪೈಪ್ ಲೈನ್ ಅಳವಡಿಕೆ ಮಾಡಿ ನೀಡಲಾಗುವುದು ಎಂದು ಯುವಕ ಮಂಡಲದ ಅಧ್ಯಕ್ಷರು ಸುಧೀರ್ ನೆಕ್ರಾಜೆ ತಿಳಿಸಿದರು. ಈ ಸಂದರ್ಭ ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ. ಎಂ. ಬಾಬು ಸಾಥ್ ನೀಡಿ ಶುಭ ಹಾರೈಸಿದರು. ಎಸ್. ಡಿ. ಎಂ. ಸಿ ಅಧ್ಯಕ್ಷರು ಬಾಲಸುಬ್ರಹ್ಮಣ್ಯ, ಮುಖ್ಯೋಪಾಧ್ಯಯಿನಿ ರಾಧಮ್ಮ, ಗ್ರಾಮ ಪಂಚಾಯತ್ ಸದಸ್ಯೆ ಗೀತಾ ಚಂದ್ರಹಾಸ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೆ.ಪಿ ಭುವನೇದ್ರ ಬೊಳುಬೈಲು, ಎಸ್.ಡಿ.ಎಂ.ಸಿ. ಉಪಾಧ್ಯಕ್ಷರು,ಸದಸ್ಯರು ಮತ್ತು ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!