Ad Widget

ಆಲೆಟ್ಟಿ ದೇವಸ್ಥಾನದಲ್ಲಿ ನೂರೆಂಟು ಬಿಲ್ವಪತ್ರೆ ಗಿಡ ನೆಡುವ ಕಾರ್ಯಕ್ರಮ

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಕಣ್ವ ವೃಕ್ಷ ಸಂವರ್ಧನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೂರ ಎಂಟು (108) ಬಿಲ್ವಪತ್ರೆ ಗಿಡಗಳನ್ನು ಪೂಜಾಕೈಂಕರ್ಯ ನೆರವೇರಿಸಿ ನೆಡಲಾಯಿತು.
ಇದೇ ಸಂದರ್ಭ ಟ್ರಸ್ಟ್ ನ ಅಧ್ಯಕ್ಷರಾದ ಪುರುಷೋತ್ತಮ ಕಿರ್ಲಾಯ, ಕಾರ್ಯದರ್ಶಿ ಪ್ರದೀಪ್ ರೈ ಪನ್ನೆ, ಡಾ.ಯಶೋಧ ರಾಮಚಂದ್ರ, ಅಡ್ಯಡ್ಕ ಕರುಣಾಕರ ಮತ್ತಿತರ ಸದಸ್ಯರು, ದೇವಸ್ಥಾನ ಮೊಕೇಸ್ತರು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕುಡೇಕಲ್ಲು ಪುಷ್ಪಾವತಿ, ಗ್ರಾ.ಪಂ ಸದಸ್ಯರು, ಸೇವಾ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಕೋಲ್ಚಾರ್, ಮಾಜಿ ಮೊಕೇಸ್ತರಾದ ಎನ್.ಎ ರಾಮಚಂದ್ರ, ಪ್ರಸನ್ನ ಬಡ್ಡಡ್ಕ, ಅಶೋಕ ಪ್ರಭು ಮತ್ತಿತರರು ಹಾಜರಿದ್ದರು.

ಪುರೋಹಿತರಾದ ಪ್ರವೀಣ್ ಭಟ್ ಶಾಸ್ತ್ರೋಕ್ತವಾಗಿ ವಿಧಿವಿಧಾನಗಳನ್ನು ನೆರವೇರಿಸಿ ಪೂಜಾ ಸಂಕಲ್ಪ ನೆರವೇರಿಸಿದರು.
ನಂತರ ದೇವಸ್ಥಾನ ಸುತ್ತಲೂ 108 ಬಿಲ್ವ ಪತ್ರೆ ಗಿಡಗಳನ್ನು ನೆಡಲಾಯಿತು‌.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!