ದ್ವಾದಶ ರಾಶಿಗಳ ದಿನಭವಿಷ್ಯ – ದಿನಾಂಕ : 02-09-2026 ಬುಧವಾರ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

01)🐏ಮೇಷರಾಶಿ : ನಿಮ್ಮ ಹಿತಶತ್ರುಗಳು ನಿಮ್ಮನ್ನು ಪೀಡಿಸುವಂತಹಸಾಧ್ಯತೆಗಳು ಹೇರಳವಾಗಿದೆ ಆದರೆ ಅವರು ಪೀಡಿಸುತ್ತಾರೆ ಎಂಬ ಕಾರಣದಿಂದ ಇದ್ದ ಜವಾಬ್ದಾರಿ ಸ್ಥಾನದಿಂದ ಕೆಳಗಿಳಿಯುವುದು ತರವಲ್ಲ. ಉದ್ಯೋಗದಲ್ಲಿರುವ ಜನರು ಅಧಿಕಾರಿಗಳ ಮಾತುಗಳನ್ನು ಎಚ್ಚರಿಕೆಯಿಂದ ಆಲಿಸಬೇಕು ಮತ್ತು ಅರ್ಥಮಾಡಿಕೊಳ್ಳಬೇಕು… ಗಮನಿಸಿ:-ಇಂದುಯಾರಿಗೂ ಸಾಲ ಕೊಡಬೇಡಿ… ಪರಿಹಾರ:-ನಿಮ್ಮಕುಲದೇವರ ಪ್ರಾರ್ಥನೆ ಮಾಡಿ.

. . . . . . . . .

02)🐂ವೃಷಭರಾಶಿ : ಇಂದು ನಿಮ್ಮ ಜವಾಬ್ದಾರಿಯ ಪಾಲು ದೊಡ್ಡದೇ ಇದೆ. ಬಳಲಿಕೆ ತೋರಿಬರುವುದು. ಆಸ್ತಿ ಸಂಬಂಧಿತ ವಿವಾದದಲ್ಲಿ ನೀವು ನಿಮ್ಮ ತಂದೆಯ ಸಲಹೆಯನ್ನು ಪಡೆಯಬೇಕು. ನಿಮ್ಮ ಮನಸ್ಸಿಗೆ ಒಪ್ಪದ ಕೆಲಸಗಳ ಬಗ್ಗೆ ಚಿಂತಿಸುವುದು ತರವಲ್ಲ ಮತ್ತು ನಿಮಗೆ ಸಂಬಂಧಪಡದ ವಿಷಯಗಳಲ್ಲಿ ಮೂಗು ತೂರಿಸದಿರಿ… ಗಮನಿಸಿ : ನಿಮ್ಮ ಕೆಲಸದಲ್ಲಿ ನೀವು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು… ಪರಿಹಾರ : ನಿಮ್ಮ ಮನೆ ದೇವರನ್ನು ಪ್ರಾರ್ಥಿಸಿ.

. . . . . . .

03)👥ಮಿಥುನರಾಶಿ : ಇಂದುನೀವು ಮಾಡುವ ಕೆಲಸವು ಮಂದಗತಿಯಲ್ಲಿ ಸಾಗುವುದು. ನೀವು ಆಲಸ್ಯವನ್ನು ತೊರೆದು ಕಾರ್ಯಪ್ರವೃತ್ತರಾದಲ್ಲಿ ಒಳಿತಾಗುವುದು. ಇದು ನಿಮ್ಮ ಸಾಮರ್ಥ್ಯವನ್ನು ತೋರಿಸಲು ನಿಮಗೆ ಅವಕಾಶವಿದೆ. ಕುಟುಂಬದಲ್ಲಿನ ಸೌಹಾರ್ದತೆಯನ್ನು ಉಳಿಸಿಕೊಳ್ಳಿ. ನಿಮ್ಮ ನಡವಳಿಕೆಯಿಂದ ಸಹೋದ್ಯೋಗಿಗಳಿಗೆ ಮನಸ್ತಾಪ ಬರುವುದು… ಗಮನಿಸಿ : ಇಂದು ನೀವುಜಾಗ್ರತೆಯಿಂದ ಮಾತು ಮತ್ತು ಕೆಲಸಗಳನ್ನು ಮಾಡಿ… ಪರಿಹಾರ : ಶ್ರೀ ಆಂಜನೇಯ ಸ್ತೋತ್ರ ಪಠಿಸಿ.

04)🦀ಕಟಕ ರಾಶಿ : ಕೆಲಸ ಕಾರ್ಯಗಳ ವಿಚಾರದಲ್ಲಿ ಟೀಕೆ ಟಿಪ್ಪಣಿಗಳು ಬರುವುದು. ನೀವು ಈ ಹಿಂದೆ ತಾಳಿದ ತಪ್ಪು ನಿರ್ಧಾರಗಳು ನಿಮ್ಮನ್ನು ಭಾದಿಸುತ್ತವೆ. ಹಿರಿಯರ ಮಧ್ಯಸ್ಥಿಕೆಯಲ್ಲಿ ಕೆಲವು ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳುವುದು ಒಳ್ಳೆಯದು… ಗಮನಿಸಿ : ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಹೆಸರು ಗಳಿಸಲು ಸಾಧ್ಯವಾಗುತ್ತದೆ… ಪರಿಹಾರ : ಈ ದಿನ ದೇವಸ್ತಾನಕ್ಕೆ ತುಳಸಿಯನ್ನು ನೀಡಿ.

05)🦁ಸಿಂಹ ರಾಶಿ : ಇಂದು ನಿಮಗೆ ಮಧ್ಯಮ ಫಲಪ್ರದವಾಗಲಿದೆ. ನೀವು ಸ್ನೇಹಿತರೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು, ಆದರೆ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಜಾಗರೂಕರಾಗಿರಬೇಕು, ನಿಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು… ಗಮನಿಸಿ : ಇಂದು ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು… ಪರಿಹಾರ : ಶ್ರೀಮಹಾಲಕ್ಷ್ಮಿಯನ್ನು ಪೂಜಿಸಿ, ಒಳಿತಾಗುವುದು.

06)👩‍🦳ಕನ್ಯಾ ರಾಶಿ : ಇಂದು ನಿಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಲು ಹಿರಿಯರೊಬ್ಬರ ಸಹಾಯ ಮತ್ತು ಸಹಕಾರ ದೊರೆಯುವುದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಹಣಕಾಸಿನ ವಿಷಯದಲ್ಲಿ ತೊಂದರೆಯನ್ನು ಎದುರಿಸುವಿರಿ. ವಾಹನ ಚಲಾಯಿಸುವಾಗ ಜಾಗ್ರತೆಯಿಂದ ಇರಿ, ಸಾಲದ ವಿಚಾರವಾಗಿ ಯಾರಿಗೂ ಸಹಾಯ ಮಾಡಬೇಡಿ… ಗಮನಿಸಿ : ಜನರು ಸಮಸ್ಯೆಗಳೊಂದಿಗೆ ನಿಮ್ಮ ಬಳಿಗೆ ಬಂದರೆ ಅವರನ್ನು ನಿರ್ಲಕ್ಷಿಸಿ… ಪರಿಹಾರ : ಅನಾಥರಿಗೆ ಅನ್ನದಾನ ಮಾಡಿ.

07)⚖️ತುಲಾ ರಾಶಿ : ಇಂದು ದೂರದ ಪ್ರವಾಸ ಮಾಡುವ ತಯಾರಿ ನಡೆಸುವಿರಿ, ವ್ಯಪಾರದಲ್ಲಿ ಲಾಭ ಬರುವ ಸಾಧ್ಯತೆ ಇದೆ, ನೂತನ ವಾಹನ ಖರೀದಿಸಲು ಒಳ್ಳೆಯ ಸಮಯ, ಆರೋಗ್ಯ ಸದೃಢವಾಗಿರುತ್ತದೆ. ವಿದೇಶ ಪ್ರವಾಸದ ಕೆಲಸಗಳನ್ನು ಪೂರ್ಣಗೊಳಿಸುವಿರಿ, ನಿಮ್ಮ ವಸ್ತುಗಳನ್ನು ನೀವು ಕಾಳಜಿ ವಹಿಸದಿದ್ದರೆ, ಅವು ಕಳೆದುಹೋಗುವ ಅಥವಾ ಕಳ್ಳತನವಾಗುವಸಾಧ್ಯತೆಯಿದೆ… ಗಮನಿಸಿ : ನಿಮ್ಮಸಹೋದರರು ಸಹಾಯ ಮಾಡುವರು… ಪರಿಹಾರ : ಈ ದಿನ ದನ ಕರುಗಳಿಗೆ ಆಹಾರ ನೀಡಿ, ಶುಭಫಲ ಲಭಿಸುವುದು.

08)🦂ವೃಶ್ಚಿಕ ರಾಶಿ : ನಿಮ್ಮ ಪ್ರತಿಯೊಂದು ಚಲನ-ವಲನವನ್ನು ಕುತೂಹಲದಿಂದ ವೀಕ್ಷಿಸುವ ಜನರಿರುತ್ತಾರೆ. ಹಾಗಾಗಿ ಮಹತ್ತರ ಕೆಲಸಗಳ ಸಾಧ್ಯಸಾಧ್ಯತೆಯ ಬಗ್ಗೆ ಇತರರೊಡನೆ ಚರ್ಚಿಸದಿರಿ. ಬಂಗಾರ ಬೆಳ್ಳಿ ಖರೀದಿಸಲು ಈದಿನ ಉತ್ತಮವಾಗಿರಲಿದೆ, ಸಹಾಯಕ್ಕಾಗಿ ಬಂದವರಿಗೆ ಮನ ನೋಯಿಸದಿರಿ. ಧಾರ್ಮಿಕ ಭಾವನೆಗಳಿಂದಾಗಿ, ನೀವುಯಾತ್ರಾ ಸ್ಥಳಕ್ಕೆ ಪ್ರಯಾಣಿಸುತ್ತೀರಿ… ಗಮನಿಸಿ : ಕುಟುಂಬದೊಡನೆ ಸಮಯ ಕಳೆಯಿರಿ… ಪರಿಹಾರ : ಕಾಳಿಕಾದೇವಿಯ ದರ್ಶನ ಮಾಡಿ.

09)🏹ಧನುಸ್ಸುರಾಶಿ : ನಿಮ್ಮ ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಬರಬಹುದು. ಹಣದ ಕೊರತೆಯಿಂದ ನಿಮ್ಮ ಆರ್ಥಿಕ ಸ್ಥಿತಿಯೂ ಕುಂಠಿತವಾಗಬಹುದು. ವ್ಯಾಪಾರ ಮಾಡುವ ಜನರು ನಿರೀಕ್ಷೆಗಿಂತ ಹೆಚ್ಚಿನ ಹಣವನ್ನು ಗಳಿಸುವಿರಿ. ಜೊತೆಗೆ ತೊಂದರೆಗಳನ್ನು ಎದಿರಿಸುವಿರಿ… ಗಮನಿಸಿ : ಅನೇಕ ರೀತಿಯ ಬದಲಾವಣೆಗಳ ಕುರಿತು ನೀವು ಮರು ಚಿಂತನೆ ಮಾಡಬೇಕಾಗಿದೆ… ಪರಿಹಾರ : ತಾಯಿ ಚಾಮುಂಡೇಶ್ವರಿಯನ್ನು ನೆನೆಯಿರಿ.

10)🐊ಮಕರ ರಾಶಿ : ಈ ದಿನನಿಮಗೆ ಸಂತಸದ ದಿನವಾಗಲಿದೆ. ನಿಮ್ಮ ಹಳೆಯ ಕೆಲಸವನ್ನು ಪೂರ್ತಿ ಮಾಡಿ ಮುಗಿಸುವಿರಿ, ನಿಮ್ಮ ಆಸೆ ಈಡೇರುತ್ತದೆ. ವ್ಯವಹಾರದಲ್ಲಿ ತೊಂದರೆ ಆಗಬಹುದು. ಪಾಲುದಾರಿಕೆ ವ್ಯವಹಾರ ಮಾಡುವುದು ಬೇಡ, ಹೆಚ್ಚಿನ ಪ್ರಯಾಣವು ಕಿರಿಕಿರಿಯನ್ನು ಉಂಟುಮಾಡಬಹುದು. ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಿ… ಗಮನಿಸಿ : ನೀವು ಈ ದಿನ ಹೆಚ್ಚುವರಿ ಹಣವನ್ನು ಗಳಿಸಬಹುದು… ಪರಿಹಾರ : ಈ ದಿನ ನಿಮಗೆ ಚಾಮುಂಡೇಶ್ವರಿಯ ಆಶೀರ್ವಾದ ನಿಮ್ಮ ಮೇಲಿದೆ.

11)⚱️ಕುಂಭ ರಾಶಿ : ಆದಾಯದ ದೃಷ್ಟಿಯಿಂದ ಈ ದಿನನಿಮಗೆ ಉತ್ತಮವಾಗಲಿದೆ. ನಿಮ್ಮ ಹಣಕ್ಕೆ ಸಂಬಂಧಿಸಿದ ವ್ಯವಹಾರಗಳು ಸುಗಮವಾಗಿ ನಡೆಯಲಿವೆ, ನೀವು ಕೆಲಸದ ಸ್ಥಳದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ. ನೀವು ಕೆಲವು ಅರೆಕಾಲಿಕ ಕೆಲಸವನ್ನು ಮಾಡಲು ನೀವು ಸ್ನೇಹಿತರಿಂದ ಸಲಹೆ ಪಡೆಯಬಹುದು… ಗಮನಿಸಿ : ನಿಮ್ಮ ಸಂಗಾತಿಯ ಅನಾರೋಗ್ಯದ ಕಾರಣ ನಿಮ್ಮ ಹಣವನ್ನು ಖರ್ಚು ಮಾಡಬಹುದು… ಪರಿಹಾರ : ನಿಮ್ಮಮನೆದೇವರ ಸ್ಮರಣೆ ಮಾಡಿ.

12)🐋ಮೀನ ರಾಶಿ : ಇಂದು ನಿಮಗೆ ಸಂತೋಷವಾಗಿರಲಿದೆ. ನಿಮ್ಮ ಖರ್ಚುಗಳು ಹೆಚ್ಚಾಗಲಿವೆ.ಏಕಕಾಲದಲ್ಲಿ ಹಲವು ಕೆಲಸಗಳನ್ನು ಕೈಯಲ್ಲಿಟ್ಟುಕೊಂಡು ತೊಂದರೆ ಅನುಭವಿಸುವಿರಿ. ನಿಮ್ಮಕುಟುಂಬದಸದಸ್ಯರೊಂದಿಗೆ ವಿವಾದ ಮಾಡಿಕೊಳ್ಳುವಿರಿ. ಕೆಲಸದ ಸ್ಥಳದಲ್ಲಿ ಕೆಲವು ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಾರೆ… ಗಮನಿಸಿ : ಕುಟುಂಬದ ಮಹಿಳಾ ಸದಸ್ಯರ ಆರೋಗ್ಯವು ಕಳವಳಕ್ಕೆ ಕಾರಣವಾಗಬಹುದು… ಪರಿಹಾರ : ಗ್ರಾಮ ದೇವತೆಗೆ ಪೂಜೆ ಮಾಡಿಸಿ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading