Ad Widget

ಸುಳ್ಯ : ರಥಬೀದಿಯಲ್ಲಿ ಮೂರು ದಿನಗಳಿಂದ ಕೊಳೆಯುತ್ತಿರುವ ಕಸದ ರಾಶಿ – ಸ್ಥಳೀಯರ ಆಕ್ರೋಶದ ಬಳಿಕ ತೆರವು – ಕಸ ಎಸೆಯದಂತೆ ಕ್ರಮಕ್ಕೆ ಒತ್ತಾಯ

ಸುಳ್ಯದ ರಥಬೀದಿಯಲ್ಲಿ ಮೂರು ದಿನಗಳಿಂದ ಕಸದ ರಾಶಿ ಬಿದ್ದಿದ್ದು ಸ್ಥಳೀಯ ವರ್ತಕರು, ನಾಗರಿಕರ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಇಂದು ತೆರವುಗೊಳಿದ್ದಾರೆ. ದೇವಸ್ಥಾನ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ಪ್ರಮುಖ ರಸ್ತೆಯಾಗಿದ್ದು ಕಸವನ್ನು ರಸ್ತೆಯಲ್ಲಿ ಎಸೆದು ಹೋಗುತ್ತಿದ್ದು ಬೀದಿ ನಾಯಿಗಳು ಅವುಗಳನ್ನು ಚೆಲ್ಲಾಡಿರುತ್ತದೆ. ಇನ್ಬಾದರೂ ರಸ್ತೆಯಲ್ಲಿ ಎಸೆಯದೇ ಕಸ ಸಾಗಾಟದ ವಾಹನ ಬರುವಾಗ ಹಾಕುವಂತೆ ಸೂಚನ ಫಲಕ...

ಗುತ್ತಿಗಾರು ಸ.ಪ.ಪೂ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ

ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಸುಬ್ರಹ್ಮಣ್ಯ ಉಪವಿಭಾಗ, ಪಂಜ ವಲಯ ಅರಣ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ಗುತ್ತಿಗಾರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಾಂಕೇತಿಕವಾಗಿ ಗಿಡ ನೆಡುವ ಮುಖಾಂತರ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಜೂ.09 ರಂದು ಆಚರಿಸಲಾಯಿತು.ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಚೆನ್ನಮ್ಮ, ಪ್ರೌಢಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಗೋಪಾಲ್, ಕೇನ್ಯ ಗಸ್ತು...
Ad Widget

ಪೈಚಾರು : ಬಸ್ ಗೆ ಬೈಕ್ ಡಿಕ್ಕಿ – ಸವಾರನ ಕಾಲು ಜಖಂ

ಪೈಚಾರು ಸಮೀಪದ ಆರ್ತಾಜೆ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಗೆ ದ್ವಿಚಕ್ರ ವಾಹನ ಡಿಕ್ಕಿಯಾದ ಘಟನೆ ನಡೆದಿದ್ದು ಸವಾರನ ಕಾಲು ಜಖಂಗೊಂಡಿದೆ.ಗಾಯಗೊಂಡ ಸವಾರ ಕಲ್ಲುಗುಂಡಿ ನಿವಾಸಿ ಡಾ. ಸಮಂತ್ ಎಂದು ತಿಳಿದು ಬಂದಿದ್ದು ಸ್ಥಳೀಯರು ಅವರನ್ನು ಕೂಡಲೇ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಲಕ ಅಪಘಾತ ತಪ್ಪಿಸುವ ಭರದಲ್ಲಿ ಬಸ್ ಸಮೀಪದ ಬರೆಗೆ...

ನಾಳೆ ( ಜೂ.10) ಸುಳ್ಯದ ವಿವಿಧೆಡೆ ವಿದ್ಯುತ್ ವ್ಯತ್ಯಯ

33/11ಕೆ.ವಿ. ಬೆಳ್ಳಾರೆ, ಗುತ್ತಿಗಾರು ಮತ್ತು, ಸುಳ್ಯ ವಿದ್ಯುತ್ ಮಾರ್ಗಗಳಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ. 10 ಮಂಗಳವಾರದಂದು 33/11ಕೆ.ವಿ ಬೆಳ್ಳಾರೆ ವಿದ್ಯುತ್ ಉಪಕೇಂದ್ರದಲ್ಲಿ ಪೂರ್ವಾಹ್ನ 9.30 ರಿಂದ ಸಾಯಂಕಾಲ 6.00 ಗಂಟೆಯವರೆಗೆ ಹಾಗೂ 33/11ಕೆ.ವಿ ಕಾವು ಮತ್ತು 33/11ಕೆ.ವಿ ಸುಳ್ಯ ವಿದ್ಯುತ್ ಉಪಕೇಂದ್ರದಲ್ಲಿ ಪೂರ್ವಾಹ್ನ 9.30 ರಿಂದ ಸಾಯಂಕಾಲ 2.30 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು....

ಯುವ ಲೇಖಕ ಅನಿಂದಿತ್ ಕೊಚ್ಚಿ ಅವರ ಸಂಶೋಧನಾ ವರದಿ ಸಲ್ಲಿಕೆ – ಮಾರ್ಗದರ್ಶಕರಿಗೆ ಸನ್ಮಾನ

ದೆಹಲಿಯ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫೋಟೋಗ್ರಫಿ’ (ಐಐಪಿ) ಯಲ್ಲಿ ತಮ್ಮ ಉನ್ನತ ವ್ಯಾಸಂಗ ಮಾಡುತ್ತಿರುವ ಸುಳ್ಯದ ಯುವ ಲೇಖಕ ಅನಿಂದಿತ್ ಅವರು, ಮೇಜರ್ ಪ್ರಾಜೆಕ್ಟ್ ರೂಪದಲ್ಲಿ ‘Unveiling Tulunad’s Bellare: Tracing India’s Earliest Freedom Movement (1837) and the Path to Heritage Conservation’ ಶೀರ್ಷಿಕೆಯಡಿಯಲ್ಲಿ ಸಂಶೋಧನಾ ವರದಿಯನ್ನು ಸಿದ್ಧಗೊಳಿಸಿ ಸಲ್ಲಿಸಿದ್ದಾರೆ. ಐಐಪಿ ಸಂಸ್ಥೆಯ...

ಸುಬ್ರಹ್ಮಣ್ಯ : ಸೀನಿಯರ್ ಚೇಂಬರ್ ಹಾಗೂ ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ಕುಮಾರಧಾರ ಪರಿಸರ ಸ್ವಚ್ಛತಾ ಅಭಿಯಾನ

ಸುಬ್ರಹ್ಮಣ್ಯ ಜೂನ್ 8 : ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಿಜನ್ ಹಾಗೂ ಡಾl ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ರವಿವಾರ ಕುಮಾರಧಾರ ಪರಿಸರ ಹಾಗೂ ಕುಲ್ಕುಂದದವರೆಗಿನ ರಸ್ತೆ ಬದಿಗಳಲ್ಲಿ ಶೇಖರಣೆಗೊಂಡಿದ್ದ ಕಸ ಕಡ್ಡಿಗಳು, ಪ್ಲಾಸ್ಟಿಕ್ ಬಾಟಲುಗಳು, ಪ್ಲಾಸ್ಟಿಕ್ ಚೀಲಗಳು ಹಾಗೂ ಎಲ್ಲೆಂದರಲ್ಲಿ ಬಿಸಾಡಿದ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಚೀಲಗಳಲ್ಲಿ...

ಹರಿಹರ ಪಳ್ಳತ್ತಡ್ಕದಲ್ಲಿ ಕಾಡಾನೆ ದಾಳಿ ; ಮನೆ ಹಾಗೂ ತೋಟಕ್ಕೆ ಹಾನಿ

ಹರಿಹರ ಪಳ್ಳತ್ತಡ್ಕ ಗ್ರಾಮದ ಭೀಮಗುಳಿ ಪುಟ್ಟಣ್ಣ ಗೌಡ ರವರ ಮನೆ ಹಾಗೂ ತೋಟಕ್ಕೆ ಜೂ.07 ರಂದು ರಾತ್ರಿ ಕಾಡಾನೆ ದಾಳಿ ನಡೆಸಿದ್ದು, ಅಪಾರ ಹಾನಿ ಸಂಭವಿಸಿದೆ.ರಾತ್ರಿ 12 ಗಂಟೆ ಸುಮಾರಿಗೆ ತೋಟಕ್ಕೆ ಬಂದ ಆನೆ ಸುಮಾರು ಅಡಿಕೆ ಮರಗಳನ್ನು ಹಾಳುಗೆಡವಿ ಬಾಳೆ ಗಿಡಗಳನ್ನು ಪುಡಿ ಮಾಡಿದ್ದು, ಆನೆ ದಾಳಿಗೆ ಮನೆಯ ಹಿಂಭಾಗದ ಅಡಿಕೆ ಮರವೊಂದು ಮನೆಯ...

ಜಿಲ್ಲೆಯಲ್ಲೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ನವೋದಯ ಶಾಲೆಗೆ ಆಯ್ಕೆ ಮಾಡಿದ ಜ್ಞಾನದೀಪ ಸಂಸ್ಥೆಯಲ್ಲಿ ನವೋದಯ ತರಗತಿಗಳು ಆರಂಭ

ನವೋದಯ ಮತ್ತು ಮೊರಾರ್ಜಿ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬೆಳ್ಳಾರೆ ಮತ್ತು ಸುಳ್ಯದ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ತರಗತಿಗಳು ಆರಂಭಗೊಂಡಿದೆ. ಪ್ರಸ್ತುತ ಐದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾನಸಿಕ ಸಾಮರ್ಥ್ಯ, ಗಣಿತ ಮತ್ತು ಭಾಷಾ ವಿಷಯಗಳಿಗೆ ಸಂಬಂಧಿಸಿದ ತರಗತಿಗಳನ್ನು ಆರಂಭಿಸಲಾಗಿದೆ. ಈಗಾಗಲೇ ಜ್ಞಾನದೀಪ ಸಂಸ್ಥೆಯಲ್ಲಿ ತರಬೇತಿ ಪಡೆದ ಒಟ್ಟು 203 ವಿದ್ಯಾರ್ಥಿಗಳು ನವೋದಯ ಶಾಲೆಗೆ...

ಗಾಂಧಿನಗರ ಜುಮ್ಮಾ ಮಸ್ಜಿದ್ ನಲ್ಲಿ ಸಡಗರ ಸಂಭ್ರಮ ದ ಬಕ್ರೀದ್ ಆಚರಣೆ – ಶಾಂತಿಗಾಗಿ ವಿಶೇಷ ಪ್ರಾರ್ಥನೆ

ಸುಳ್ಯ ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ ನಲ್ಲಿ ಮುಸ್ಲಿಂ ಬಾಂಧವರು ಪವಿತ್ರ ಹಜ್ ಕರ್ಮದ ಪ್ರತೀಕವಾಗಿ ತ್ಯಾಗ, ಸಮರ್ಪಣೆ ಯ ಪ್ರತೀಕವಾದ ಈದುಲ್ಅಝ್ಹಾ ( ಬಕ್ರೀದ್ ) ಹಬ್ಬದ ಆಚರಣೆ ನಡೆಯಿತು. ಜೂ. 07 ರಂದು ಬೆಳಗ್ಗೆ ನೂರಾರು ಭಕ್ತಾಧಿಗಳು ಸಂಗಮಿಸಿ ಈದ್ ನಮಾಜ್ ಮಾಡಿದರುಶ್ರದ್ದೆ ಮತ್ತು ಭಕ್ತಿಯಿಂದ ಅರಫಾ ಬೆಟ್ಟದಲ್ಲಿ ಹಜ್ ಕರ್ಮಕ್ಕಾಗಿ ಪಾಲ್ಗೊಂಡ...

ಅಡ್ತಲೆ : ನಿವೃತ್ತರಿಗೆ ಹಾಗೂ ಶೈಕ್ಷಣಿಕ ಸಾಧಕರಿಗೆ ಸನ್ಮಾನ ಹಾಗೂ ಉಚಿತ ಹಣ್ಣಿನ ಗಿಡಗಳ ವಿತರಣೆ ಕಾರ್ಯಕ್ರಮ

ಶಾಲಾಭಿವೃದ್ಧಿ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿ ಸಂಘ,ಸ್ಪಂದನ ಗೆಳೆಯರ ಬಳಗ (ರಿ)ಅಡ್ತಲೆ ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ಇವುಗಳ ಜಂಟಿ ಆಶ್ರಯದಲ್ಲಿ ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯ ನಿವೃತ್ತ ಉಪನ್ಯಾಸಕರಾದ ಶ್ರೀ ಭವಾನಿ ಶಂಕರ ಅಡ್ತಲೆ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ರ್ಯಂಕ್ ಪಡೆದ ಕು.ಮಹಿಕಾ ಉಳುವಾರು ಇವರಿಗೆ ಸನ್ಮಾನ ಹಾಗೂ...
Loading posts...

All posts loaded

No more posts

error: Content is protected !!