
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಇದರ ವತಿಯಿಂದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಇದರ ಸುಳ್ಯ ತಾಲೂಕಿನ ಸೋಣಂಗೇರಿ ವಲಯದ ಕಳಂಜ ಗ್ರಾಮದ ಬ್ರಹ್ಮಶ್ರೀ ವಿಕಾಸ ವಾಹಿನಿ ಸ್ವ ಸಹಾಯ ಸಂಘದ ಸದಸ್ಯರಾದ ಅಶೋಕ ರವರು ಮೃತಪಟ್ಟಿದ್ದು,ಇವರ ಜೀವ ಭದ್ರತಾ ವಿಮಾ ಮೊತ್ತ ರೂ 95,000 ದ ಚೆಕ್ ನ್ನು,ಅವರ ಪತ್ನಿ ಕುಸುಮಾವತಿ ಯವರಿಗೆ ಸುಳ್ಯ ಓಡಿಯೂರು ಶ್ರೀ ವಿವಿದ್ದೋದೇಶ ಸೌಹಾರ್ಧ ಸಹಕಾರಿಯ ಸುಳ್ಯ ಶಾಖಾ ವ್ಯವಸ್ಥಾಪಕರಾದ ಶ್ರೀ ಸಂತೋಷ್ ಕುಮಾರ್ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಓಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ತಾಲೂಕು ಮೇಲ್ವಿಚಾರಕಾರದ ಶ್ರಿಮತಿ ಗೀತಾ ಮತ್ತು ಸೋಣಂಗೇರಿ ವಲಯ ಸಂಯೋಜಕರಾದ ಶ್ರೀಮತಿ ಸರಿತಾ, ಕಳಂಜ ಗ್ರಾಮದ ಸೇವಾದೀಕ್ಷಿತೆ ಯಶೋಧಾ ಉಪಸ್ಥಿತರಿದ್ದರು.
