
ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಸುಬ್ರಹ್ಮಣ್ಯ ಉಪವಿಭಾಗ, ಪಂಜ ವಲಯ ಅರಣ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ಗುತ್ತಿಗಾರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಾಂಕೇತಿಕವಾಗಿ ಗಿಡ ನೆಡುವ ಮುಖಾಂತರ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಜೂ.09 ರಂದು ಆಚರಿಸಲಾಯಿತು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಚೆನ್ನಮ್ಮ, ಪ್ರೌಢಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಗೋಪಾಲ್, ಕೇನ್ಯ ಗಸ್ತು ಅರಣ್ಯ ಪಾಲಕರಾದ ಧನಂಜಯ.ಕೆ, ಬಳ್ಪ ಗಸ್ತು ಅರಣ್ಯ ಪಾಲಕರಾದ ಭರಮಪ್ಪ ಬೆಳಗಲ್ಲ, ಗುತ್ತಿಗಾರು ಗಸ್ತು ಅರಣ್ಯ ಪಾಲಕರಾದ ಧರ್ಣಪ್ಪ.ಕೆ.ಎ, ಬಳ್ಪ ಶಾಖಾ ಅರಣ್ಯ ವೀಕ್ಷಕರಾದ ಗಣೇಶ್ ಹೆಗ್ಡೆ, ಅರಣ್ಯ ವೀಕ್ಷಕರಾದ ಗಣೇಶ್ ಹಾಗೂ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ಸಹ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)
