ಸುಳ್ಯ ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ ನಲ್ಲಿ ಬೆಳಗ್ಗೆ ನೂರಾರು ಭಕ್ತಾಧಿಗಳು ಸಂಗಮಿಸಿ ಈದ್ ನಮಾಜ್ ಮಾಡಿದರು
ಶ್ರದ್ದೆ ಮತ್ತು ಭಕ್ತಿಯಿಂದ ಅರಫಾ ಬೆಟ್ಟದಲ್ಲಿ ಹಜ್ ಕರ್ಮಕ್ಕಾಗಿ ಪಾಲ್ಗೊಂಡ ಸರ್ವರನ್ನು ಗೌರವಿಸಿ ಹಜ್ ವಿಷಯದಲ್ಲಿ ಖತೀಬರಾದ
ಸಖಾಫಿ ಪ್ರವಚನ ನೀಡಿರುವ ಶಾಂತಿ ಯ ಸಂದೇಶ ನೀಡಿದರು ಹಿಂಸೆ ಯಿಂದ ಮಾನವೀಯತೆ ನಶಿಸುತ್ತದೆ ಯುವಕರು ದೇಶದ ಅಭಿವೃದ್ಧಿ ಯ ಹರಿಕಾರ ರಾಗಬೇಕು ಎಂದರು
ಕುತುಬಾ ಪಾರಾಯಣ, ಪರಸ್ಪರ ಆಲಿಂಗನ ಶುಭಾಶಯ ವಿನಿಮಯ ಬಂಧು ಮಿತ್ರಾದಿಗಳ ಭೇಟಿಯೊಂದಿಗೆ ಹಬ್ಬ ಆಚರಿಸಲಾಯಿತು.
ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆಎಂಎಸ್ ಮಹಮ್ಮದ್, ಉಪಾಧ್ಯಕ್ಷ ಬೀಜಕೊಚ್ಚಿ, ನಗರ ಪಂಚಾಯತ್ ಸದಸ್ಯರುಗಳಾದ ಕೆ. ಎಸ್. ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಸಿದ್ದೀಕ್ ಕೊಕ್ಕೋ ಮೊದಲಾದವರು ಭಾಗವಸಿದ್ದರು
