
ಸುಬ್ರಹ್ಮಣ್ಯ ಜೂನ್ 3: ಕರ್ನಾಟಕ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶ್ರೀಮತಿ ತುಳಸಿ ಮದ್ದಿನೇನಿ ಮಂಗಳವಾರ ಸುಬ್ರಮಣ್ಯದ ಬಿ ಸಿ ಎಂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವರು.
ಮಂಗಳವಾರ ಬೆಳಿಗ್ಗೆ ಬೆಂಗಳೂರಿಂದ ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ತುಳಸಿ ಮದ್ದಿನೇನಿ ಅವರು ನೇರವಾಗಿ ಕುಕ್ಕೆ ಸುಬ್ರಹ್ಮಣ್ಯ ಕಾಶಿ ಕಟ್ಟೆ ಬಳಿ ಇರುವ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳನ್ನು ಪರಿಶೀಲಿಸಿ ಬೆಳಗ್ಗೆ ಉಪಹಾರ ಸೇವಿಸಿದರು ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ ಅವರು ಗುಣಮಟ್ಟದ ಆಹಾರ ಬಗ್ಗೆ ನೀರಿನ ವ್ಯವಸ್ಥೆ ವಿಶ್ರಾಂತಿ ಕೊಠಡಿ ಕಂಪ್ಯೂಟರ್ ಕೊಠಡಿ ಅಡುಗೆ ಕೋಣೆ ಓದುವ ಕೋಣೆ ಶೌಚಾಲಯ ಇತ್ಯಾದಿಗಳನ್ನ ವೀಕ್ಷಿಸಿ, ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿನಿ ವಸತಿ ನಿಲಯದ ಸುಶ್ಮಿತಾ, ಮೌನ, ಸಾಕ್ಷಿ, ಮೌಲ್ಯ ,ಹಾಗೂ ಜೀವಿತ ವಿವರಗಳನ್ನು ನೀಡಿದರು. ಹೊಸ ಕಟ್ಟಡ ನಿರ್ಮಾಣದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದವರು ಕೇವಲ 100 ವಿದ್ಯಾರ್ಥಿಗಳಿಗೆ ಇರುವ ವಸತಿ ನಿಲಯವನ್ನು 250 ವಿದ್ಯಾರ್ಥಿಯರ ವಾಸ್ತವ್ಯಕ್ಕೆ ಅನುಕೂಲ ಆಗುವಂತೆ ಪ್ಲಾನ್ ಅಂಡ್ ಎಸ್ಟಿಮೇಶನ್ ಮಾಡಿ ಕಳುಹಿಸುವಂತೆ ತಾಲೂಕು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ತದನಂತರ ಅಲ್ಲಿಂದ ವಾಲ್ಮೀಕಿ ಆಶ್ರಮ ಶಾಲೆಗೆ ತೆರಳಿ ಅಲ್ಲಿಯ ಹೊಸ ಕಟ್ಟಡ ವೀಕ್ಷಿಸಿ, ಜುಲೈ ತಿಂಗಳೊಳಗೆ ಶೀಘ್ರ ತೆರೆಯುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಸಹಾಯಕ ಆಯುಕ್ತ ಷ್ಟೆಲ್ಲ ವರ್ಗೀಸ್ ,ತಹಶೀಲ್ದಾರ್ ಪ್ರಭಾಕರ ಕಜೋರೆ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೋಪಾಲ್, ಹಾಗೂ ಶ್ರೀಕಾಂತ್, ಸಹಾಯಕ ಇಂಜಿನಿಯರ್ ಪ್ರಮೋದ್, ಹಿಂದುಳಿದ ಬಿಸಿಎಂ ಪುತ್ತೂರು ಅಧಿಕಾರಿ ಗಂಗಯ ನಾಯಕ್ ,ಬಿ ಸಿ ಎಂ ಸುಳ್ಯ ಅಧಿಕಾರಿ ಗೀತಾ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಬಂಡಾರಿ, ವಲಯ ಅರಣ್ಯಾಧಿಕಾರಿ ವಿಮಲ್ ಬಾಬು, ಕಡಬ ಕಂದಾಯ ಅಧಿಕಾರಿ ಪೃಥ್ವಿರಾಜ್, ಸುಬ್ರಮಣ್ಯ ಗ್ರಾಮಾಧಿಕಾರಿ ರವಿಚಂದ್ರ, ಸುಬ್ರಹ್ಮಣ್ಯ ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ, ವೈದ್ಯಾಧಿಕಾರಿ ಡಾಕ್ಟರ್ ತ್ರಿಮೂರ್ತಿ, ಬಿಸಿಎಂ ಜಿಲ್ಲಾ ಹಾಗೂ ತಾಲೂಕ ಅಧಿಕಾರಿಗಳು ,ಸುಬ್ರಹ್ಮಣ್ಯ ಬಿ ಸಿ ಎಂ ಹಾಸ್ಟೆಲ್ ವಾರ್ಡನ್ ಹಾಗೂ ಸಿಬ್ಬಂದಿ ವರ್ಗದವರು ವಾಲ್ಮೀಕಿ ಆಶ್ರಮ ಶಾಲೆಯ ವಾರ್ಡನ್ ಮುಂತಾದವರು ಈ ಸಂದರ್ಭದಲ್ಲಿ ಉಪಸಿತರಿದ್ದರು.
