
ಸುಳ್ಯದ ಟಿ ಎ ಪಿ ಸಿ ಎಂ ಎಸ್ ಲಿ. ನ ನೂತನ ಗೋದಾಮು ಕಟ್ಟಡಕ್ಕೆ ಭೂಮಿ ಪೂಜೆಯನ್ನು ಜೂ.02 ರಂದು ನೆರವೇರಿಸಲಾಯಿತು. ಸೂಡ ಅಧ್ಯಕ್ಷ ಮುಸ್ತಾಫಾ ಸುಳ್ಯ ದೀಪ ಬೆಳಗಿಸಿ ಶುಭಹಾರೈಸಿದರು. ಟಿಎಪಿಸಿಎಂಎಸ್ ನ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಉಪಾಧ್ಯಕ್ಷ ಪಿ.ಎಸ್.ಗಂಗಾಧರ್, ಸೋಮಶೇಖರ ಕೊಯಿಂಗಾಜೆ, ಸಂಶುದ್ದೀನ್ ಎಸ್., ರಾಜೀವಿ ರೈ, ಸುರೇಶ್ ಅಮೈ, ಶ್ರೀಮತಿ ಚಂಚಲಾ ಸನತ್, ಚಂದ್ರಶೇಖರ ನಾಯ್ಕ್ , ಭುವನೇಂದ್ರ ದಾಸ್ ಉಬರಡ್ಕ, ಇಂಜಿನಿಯರ್ ಪ್ರಸಾದ್ ಎಂ.ಎಸ್.,ಶ್ರೀಮತಿ ಪ್ರಸನ್ನ ನಿತ್ಯಾನಂದ, ಶ್ರೀಮತಿ ಸೌಮ್ಯ ಮಾಧವ ನಿಡ್ಯಮಲೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಸ್ವಾಗತಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯರಾಮ ದೇರಪ್ಪಜ್ಜನಮನೆ ವಂದಿಸಿದರು.
